'ಇವನವ್ನ' ಎಂದಿದ್ದರೆ 'ಇವ ನಮ್ಮವ' ಎನ್ನುತ್ತಿದ್ದರು!
"ಶ್ರೀದೇವಿ ಪಿಚ್ಚರ್ ನೋಡಾಕ ಹೋಗೋಣ ಬಾರಲೇ ನಿಮ್ಮೌನ, ಏನ್ ಕೆಟ್ ಆ್ಯಕ್ಟಿಂಗ್ ಮಾಡ್ಯಾಳಲೇ ಅಕಿನೌನ..." ಹೀಗೆ ಉತ್ತರ ಕರ್ನಾಟಕದಲ್ಲಿ ಯಾರಾದರೂ ಮಾತನಾಡುವುದನ್ನು ಕೇಳಿದರೆ, ಇದರಲ್ಲಿ ಯಾವುದೇ ಅನರ್ಥ ಹುಡುಕದೆ ಜಾಸ್ತಿ ತಲೆಕೆಡಿಸಿಕೊಳ್ಳಬಾರದಾಗಿ ಸವಿನಯ ವಿನಂತಿ.
ಉತ್ತರ ಕರ್ನಾಟಕದ ಮಂದ್ರಿ ಅಂದ್ರೇನೇ ಹೀಗೆ. ನೇರಾನೇರ ಮಾತು, ಬೈಗುಳಗಳಂತೂ ಹಾಸುಹೊಕ್ಕು, ಆಡಲಿಕ್ಕೂ ಚೆಂದ, ಕೇಳಲಿಕ್ಕೆ ಇನ್ನೂ ಚೆಂದ. ಇಂಥ ಮಾತುಗಳನ್ನು ಯಾರೂ ಅಲ್ಲಿ ಬೈಗುಳ ಅಂತ ತಿಳಿದುಕೊಳ್ಳುವುದೇ ಇಲ್ಲ. ಏಕೆಂದರೆ, ಇದು ಬೈಗುಳವೇ ಅಲ್ಲ, ಇದು ಸಹಜ ಸುಂದರ ಭಾಷಾ ಶೈಲಿ.
ಉರ್ದು ಮಾತಾಡುವವರಲ್ಲಿ ಇನ್ನೂ ತರಹೇವಾರಿ ಬೈಗುಳಗಳಿವೆ. ಅಂಥವನ್ನು ಅವರವರೇ ಆಡಿಕೊಂಡರೆ ಚೆನ್ನ. ಬೇಕಾದವರು ಕೇಳಿ ಆನಂದಿಸಬಹುದು, ಬೇಡವಾದವರು ಕಿವಿಮುಚ್ಚಿಕೊಂಡು ತಣ್ಣಗೆ ಕುಳಿತುಕೊಳ್ಳಬಹುದು. ಮಾತು ಮಾತಲ್ಲಿ ಬೈಗುಳಗಳು ಇರುತ್ತವಂತೆಯೂ ಅಲ್ಲ. ಬೈಗುಳಗಳು ಸಾಂದರ್ಭಿಕವಾಗಿರುತ್ತವೆ ಅಷ್ಟೆ.

ಉತ್ತರ ಕರ್ನಾಟಕದಲ್ಲಿ ಬಳಸಲಾಗುವ ವೈವಿಧ್ಯಮಯ ಬೈಗುಳಗಳ ಬಗ್ಗೆ ರಸವತ್ತಾದ ಕಥೆಗಳನ್ನು ಕೇಳಬೇಕೆಂದರೆ ಗಂಗಾವತಿ ಪ್ರಾಣೇಶ್ ಅವರ ಮಾತುಗಳನ್ನು ಕೇಳಬೇಕು. ಬೈಗುಳಗಳನ್ನು ಆಧರಿಸಿದ ಅವರ ಮಾತುಗಳನ್ನು ಆಲಿಸಿ, ಕೇಳಿದವರು ಬಿದ್ದುಬಿದ್ದು ನಗುತ್ತಾರೆಯೇ ಹೊರತು, ಯಾರೂ ಮುಖ ಗಂಟು ಹಾಕಿಕೊಳ್ಳುವುದಿಲ್ಲ.
ಹುತ್ಸೊಳೆಗಮ, ಕತ್ಸೊಳೆಮಗ, ಬದ್ಮಾಸ್ಸೊಳೆಮಗ... ಮುಂತಾದ ಬಗೆಯ 'ಹೊಗಳಿಕೆ'ಯ ಮಾತುಗಳು ಅಲ್ಲಿನ ಹಳ್ಳಿಯ ಮಾಸ್ತರುಗಳಿಂದಲೇ ಪುಂಖಾನುಪುಂಖವಾಗಿ ಬರುತ್ತಿರುತ್ತವೆ. ವಿದ್ಯಾರ್ಥಿಗಳು ಮುಂದು ದೊಡ್ಡವರಾಗಿ ಮಾಸ್ತರು ಹಾಕಿಕೊಟ್ಟ ದಾರಿಯನ್ನೇ ಶಿರಸಾವಹಿಸಿ ಪಾಲಿಸುತ್ತಾರೆ!
ಬೈಗುಳಗಳ ಬಗ್ಗೆ ಇಷ್ಟೇಕೆ ಪ್ರಸ್ತಾಪವೆಂದರೆ, ರಾಹುಲ್ ಗಾಂಧಿಯವರು ಇತ್ತೀಚೆಗೆ ಅಥಣಿಯಲ್ಲಿ ಭಾಷಣ ಮಾಡುವಾಗ, ಆಡಿದ ಬಸವಣ್ಣನವರ ವಚನ, ಒಬ್ಬೊಬ್ಬರಿಗೆ ಒಂದೊಂದು ರೀತಿ ಕೇಳಿ, ಅದನ್ನು ವಿಚಿತ್ರ ವಿಭಿನ್ನವಾಗಿ ರೂಪಕೊಡುತ್ತಾ ವ್ಯಾಖ್ಯಾನಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಈ ಮೀಮ್ಸ್ ಕೂಡ ಒಂದು.
ಪ್ರಾಣೇಶ್ ಅವರೇ ಹೇಳುವ ಹಾಗೆ, ಇವನರ್ವ, ಇವನರ್ವ, ಇವನರ್ವ ಎನ್ನುವ ಬದಲು, ಇವನವ್ನ, ಇವನವ್ನ ಎಂದಿದ್ದರೆ, ಉತ್ತರ ಕರ್ನಾಟಕದ ಜನರೇ 'ಹೇಯ್, ಇವ ನಮ್ಮವ ಇವ ನಮ್ಮವ' ಎಂದು ಅಪ್ಪಿಕೊಂಡು ಮುದ್ದಾಡುತ್ತಿದ್ದರು. ಪ್ರಾಣೇಶ್ ಅವರ ಮುಂದಿನ ಹಾಸ್ಯ ಪ್ರಸಂಗದಲ್ಲಿ ಇದು ಪ್ರಸ್ತಾಪವಾದರೂ ಅಚ್ಚರಿಯಿಲ್ಲ.
ಅಲ್ಲದೆ, ನಮ್ಮ ಕರ್ನಾಟಕದಲ್ಲಿನ ಕನ್ನಡದ ಸೊಗಸೇ ಅಂತಹುದು. ಉತ್ತರ ಕರ್ನಾಟಕದಲ್ಲಿಯೂ ವಿಜಯಪುರ, ಕಲಬುರಗಿ, ಬೀದರ, ರಾಯಚೂರು ಕಡೆ ಹೋದರೆ ಧಾರವಾಡದಂಥ ಕನ್ನಡ ಮಾತುಗಳಿಗಿಂತ ವಿಭಿನ್ನವಾಗಿರುತ್ತದೆ. ಹಾಗೆಯೆ, ಮಂಡ್ಯದ ಭಾಷೆ ಪಕ್ಕದ ಮೈಸೂರಿನ ಕನ್ನಡಕ್ಕಿಂತ ಸ್ವಾರಸ್ಯಕರವಾಗಿರುತ್ತದೆ. ಇನ್ನು ಮಂಗಳೂರು, ಶಿವಮೊಗ್ಗದ ಕಡೆಯ ಕನ್ನಡವೂ ತನ್ನದೇ ಆದ ಸೊಗಡನ್ನು ತುಂಬಿಕೊಂಡಿದೆ.
(ಇಲ್ಲಿ ಬಸವಣ್ಣನವರನ್ನು ಅಥವಾ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡುವ ದೃಷ್ಟಿಯಿಂದ ಈ ಮೀಮ್ಸ್ ಅನ್ನು ಸೃಷ್ಟಿಸಿಲ್ಲ. ಇದನ್ನು ಕೇವಲ ಮನರಂಜನಾತ್ಮಕವಾಗಿ ಮಾತ್ರ ತೆಗೆದುಕೊಳ್ಳಬೇಕಾಗಿ ವಿನಂತಿ. ಅಂದ ಹಾಗೆ, ಈ ಮೀಮ್ಸ್ ಗಳು ಸೃಷ್ಟಿಯಾಗುವುದೇ ಬಿಗಿಯಾದ ಮುಖವನ್ನು ತಿಳಿಗೊಳಿಸಲು.)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications