ರಾಹುಲ್ ಬಾಯಲ್ಲಿ ಅನರ್ಥವಾದ ಬಸವಣ್ಣನ ವಚನ
ಬಸವಣ್ಣನ ವಚನಗಳನ್ನು ಸಾಂದರ್ಭಿಕವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ, ವಚನಗಳ ಮೇಲಿನ ತಮ್ಮ ಜ್ಞಾನವನ್ನು ಪ್ರಚುರಪಡಿಸಲು ಕೆಲ ರಾಜಕಾರಣಿಗಳು ಬಳಸುವುದು ಅಪರೂಪವೇನಲ್ಲ. ಆದರೆ, ಆ ವಚನಗಳ ಅರ್ಥವನ್ನು ಪಾಲಿಸುವಲ್ಲಿ ಯಾವತ್ತಿದ್ದರೂ ಹಿಂದೆ.
ಆದರೆ, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣ, ಆತನ ವಚನಗಳು, ಆತ ಅಂದಿನ ಕಾಲದಲ್ಲಿಯೇ ಪ್ರತಿಷ್ಠಾಪಿಸಿದ್ದ ಪ್ರಜಾಪ್ರಭುತ್ವ, ಉತ್ತರ ಕರ್ನಾಟಕದಲ್ಲಿ ರಾಜಕಾರಣಿಗಳು ಮಾಡುತ್ತಿರುವ ಭಾಷಣಗಳಲ್ಲಿ ಅವಿಭಾಜ್ಯ ಅಂಗವಾಗಿದೆ.
ಬಸವಣ್ಣನವರ ವಚನಗಳನ್ನು ಈ ರಾಜಕಾರಣಿಗಳು ನಿಜಜೀವನದಲ್ಲಿ ಎಷ್ಟು ಪಾಲಿಸುತ್ತಾರೋ, ಆ ವಚನಗಳಲ್ಲಿನ ಅರ್ಥ ಹೇಳುವವರಿಗೆ ತಿಳಿದಿದಿಯೋ ಇಲ್ಲವೋ, ಒಟ್ಟಿನಲ್ಲಿ ಬಸವಣ್ಣನ ವಚನಗಳನ್ನು ಬಳಸಿ, ಭಕ್ತಿ ಭಂಡಾರಿ ಬಸವೇಶ್ವರನನ್ನೂ ರಾಜಕಾರಣದ ಮೊಗಸಾಲೆಗೆ ಎಳೆದುತಂದಿದ್ದಾರೆ.

ಬಸವಣ್ಣನ ವಚನಗಳನ್ನು ಆಗಾಗ ನೆನಪಿಸಿಕೊಳ್ಳುವ ಉದ್ದೇಶ ಒಳ್ಳೆಯದೇ ಆದರೂ, ಕನ್ನಡ ಗೊತ್ತಿಲ್ಲದ ರಾಹುಲ್ ಗಾಂಧಿಯವರು ಅದನ್ನು ಆಡುವಾಗ ಅರ್ಥ ಕಳೆದುಕೊಂಡು, ಅನರ್ಥವಾಗಿ, ಅಧ್ವಾನವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯದ ವಸ್ತುವಾಗಿದ್ದು ಮಾತ್ರ ದುರಂತ.
ಅಂಥದೊಂದು ನಮೂನೆ ಇಲ್ಲಿದೆ ನೋಡಿ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅವರು ಮಾತನಾಡುತ್ತಿದ್ದಾಗ,
ಬಸವಣ್ಣನ
'ಇವನಾರವ, ಇವನಾರವ, ಇವನಾರವ
ಇವ ನಮ್ಮವ, ಇವ ನಮ್ಮವ, ಇವ ನಮ್ಮವ... ಎಂಬುದನ್ನು
ರಾಹುಲ್...
ಇವನರ್ವ, ಇವನರ್ವ, ಇವನರ್ವ
ಇವನಮ್ವ, ಇವನಮ್ವ, ಇವನಮ್ವ' ಎಂದು ಸ್ಪಷ್ಟವಾಗಿ ಉಚ್ಚಾರಣೆ ಮಾಡದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಈಡಾಗಿದೆ.
ಇದೇ ಬಸವಣ್ಣನವರನ್ನು ನರೇಂದ್ರ ಮೋದಿಯವರೂ ನೆನೆಸಿಕೊಂಡಿದ್ದರು. ಆದರೆ, ಅವರು ಯಾವುದೇ ವಚನವನ್ನು ನುಡಿಯಲು ಹೋಗಿರಲಿಲ್ಲ. ಆದರೆ, ಕನ್ನಡದಲ್ಲಿ ಕೆಲಬಾರಿ ಮಾತಾಡಲು ಹೋಗಿ ಆಭಾಸವಾಗಿದ್ದೂ ಇದೆ. ಈ ನಾಯಕರಿಗೆ ಕನ್ನಡ ಗೊತ್ತಿಲ್ಲದಿದ್ದರೂ, ಅವರಿವರಿಂದ ಹೇಳಿಸಿಕೊಂಡು ಕನ್ನಡ ಭಾಷೆ ಬಳಸುವ ಅಗತ್ಯವಿದೆಯೆ?
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications