ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 3)
(ಕಥೆಯ ಮುಂದಿನ ಭಾಗ) ಕಾಲೇಜು ವಾತಾವರಣದಲ್ಲಿ ಆಶಾವಾದದ ಗಾಳಿ ಬೀಸುತ್ತಿದೆ. ಎಲ್ಲೆಲ್ಲೂ ವಿದ್ಯಾರ್ಥಿಗಳ ನಗು ಮುಖಗಳು! ಬಿಇ ಪದವಿಯ ಕೊನೆಯ ಪರೀಕ್ಷೆ ಮುಗಿದಿರುವ ಸಲುವಾಗಿ ಹುಡುಗ-ಹುಡುಗಿಯರೆಲ್ಲಾ ಸಂಭ್ರಮದಿಂದ ಹೋಳಿ ಆಟವಾಡುತ್ತಿದ್ದಾರೆ. ಮೈತುಂಬ ಬಣ್ಣ ಮೆತ್ತಿಕೊಂಡ ಒಬ್ಬ ಹುಡುಗನನ್ನು ಕರ್ಣ ಗುಪ್ತವಾಗಿ ಹಿಂಬಾಲಿಸುತ್ತಿದ್ದಾನೆ. ಆ ಹುಡುಗ, ಹಂಸಿನಿ ಎಕ್ಸಾಮ್ ಮುಗಿಸಿ ಗೆಳತಿಯರೊಂದಿಗೆ ನಿಂತಿರುವ ಕಡೆ, ಬಣ್ಣ ಹಿಡಿದು ನಡೆಯುತ್ತಿದ್ದಾನೆ.
ಹಂಸಿನಿ ಹತ್ತಿರ ಆ ಹುಡುಗ ಹೋಗುವ ಮೊದಲೇ ಕರ್ಣ ಅವನನ್ನು ತಡೆಹಿಡಿದು, ಶರ್ಟ್ ಪಟ್ಟಿ ಎಳೆದು, "ಏಯ್! ಏನ್ ಮಾಡ್ತಿದ್ಯ?" ಎಂದು ಗದರಿಸಿದ. ಹುಡುಗ, "ಅಣ್ಣಾ, ಅದು ಎಕ್ಸಾಮ್ ಮುಗಿತ್ತಲ್ಲಾ... ಅದಕ್ಕೆ ಹೋಲಿ..." ಎಂದು ತಡವರಿಸಿದ. "ಅಯ್ಯೋ ಮುಂಡೇದೆ! ನೀ ಜೂನಿಯರ್ ಅಲ್ವಾ? ನಿಂಗೇನ್ ಹೋಲಿ?" ಹುಡುಗ ಹೆದರಿಕೊಂಡು ಸುಮ್ಮನಿದ್ದ. "ಹುಡ್ಗೀರ್ ಹತ್ರ ಹೋಲಿ ಗೀಲಿ ಅಂತ ಹೋದ್ರೆ ತಲೆ ಹೋಳ್ ಮಾಡ್ಹಾಕ್ಬಿಡ್ತೀನಿ... ಬರ್ತದ್ ಬಾಯ್ಗೆ. ತೊಲ್ಗು!", ಕರ್ಣ ಸಿಡುಕಿ ಹುಡುಗನನ್ನು ಪಕ್ಕದಲ್ಲೇ ನಿಂತಿದ್ದ ಪಮ್ಮಿಯ ಕಡೆ ತಳ್ಳಿದ. ಪಮ್ಮಿ, "ಬಾ ಪುಟ್ಟಾ" ಎಂದು ಹುಡುಗನ ಕತ್ತುಪಟ್ಟಿಯನ್ನು ಹಿಡಿದು, ಕರ್ಣನ ಕಡೆ ನೋಡಿ, "ಬೆಸ್ಟ್ ಆಫ್ ಲಕ್" ಎಂಬಂತೆ ಥಂಬ್ಸ್ ಅಪ್ ಮಾಡಿದ. ಕರ್ಣ ತಲೆ ಆಡಿಸಿ ಹಂಸಿನಿಯ ಕಡೆ ತಿರುಗಿದ. ನಂತರ ಕಣ್ಣು ಮುಚ್ಚಿ, ದೇವರನ್ನು ನೆನೆಸಿಕೊಂಡು, ಪಿಜೆಗಳನ್ನು ಹೇಳಿಕೊಂಡು ಕಿಲಿಕಿಲಿ ನಗುತ್ತಿದ್ದ ಹುಡುಗಿಯರ ಗೊಂಚಲಿನ ಕಡೆ, ಧೈರ್ಯವಾಗಿ ನಡೆದ. ಅವನು ಹತ್ತಿರ ಬಂದಂತೆಯೇ ಹುಡುಗಿಯರೆಲ್ಲಾ ಸುಮ್ಮನ್ನಾದರು.
"Hello, excuse me. I would like to speak with Hamsini please", ಎಂದ ನಯದನಿಯಲ್ಲಿ ಕರ್ಣ.

"ಓ ಓ ಓ ಓ ಓ" ಹುಡುಗೀರೆಲ್ಲಾ ಅಯ್ಯಪ್ಪ ಸ್ವಾಮಿಯ ಉತ್ಸವ ಎಂಬಂತೆ ಒಂದೇ ದನಿಯಲ್ಲಿ ಕೂಗಿದರು.
"ಹೇಳು", ಹಂಸಿನಿ ಚೇಡಿಸುವಂತೆ ಕೇಳಿದಳು. ಕರ್ಣನ ಮುಖ ನಾಚಿಕೆಯಿಂದ ಟ್ರಾಫಿಕ್ ಸಿಗ್ನಲಿನಂತೆ ಕೆಂಪಾಯಿತು. "ಇಲ್ಲಲ್ಲ ಪ್ಲೀಸ್. ಪ್ರೈವೇಟ್ ಆಗಿ" ಎಂದು ಕೀರಲು ದನಿಯಲ್ಲಿ ಹೇಳಿದ. ಅಯ್ಯಪ್ಪ ಭಕ್ತರೆಲ್ಲಾ ಮತ್ತೊಮ್ಮೆ ಆಲಾಪನೆ ಹೊರಡಿಸಿದರು.
ಇಬ್ಬರೂ ಆಟದ ಮೈದಾನದ ಹತ್ತಿರ ಇದ್ದ ಒಂದು ಕಟ್ಟೆಯ ಮೇಲೆ ಕೂತರು. ಕರ್ಣ ಮೊದಲು ಮಾತನಾಡಿದ, "ಎಕ್ಸಾಮ್ ಹೇಗ್ ಮಾಡಿದ್ರಿ?"
"ಮಾಡಿದ್ರಿ? ವಾ ಏನ್ ರೆಸ್ಪೆಕ್ಟು!" ಎಂದು ಹಂಸಿನಿ ನಕ್ಕಳು. "ಚೆನ್ನಾಗ್ ಮಾಡ್ದೆ. ನಿಂಗೆ Accenture ಅಲ್ಲಿ ಕೆಲ್ಸ ಸಿಕ್ತಂತೆ? ಕಂಗ್ರಾಟ್ಸ್!".
ಕರ್ಣ ನಾಚಿಕೊಂಡು, "ಥ್ಯಾಂಕ್ಸ್. ನೀವು ಇನ್ಫೋಸಿಸ್ ಸೇರ್ಕೊತೀರಿ ಆಲ್ವಾ?"
"ಹೂಂ, ಇಲ್ಲೇ ಮೈಸೂರಲ್ಲಿ ಟ್ರೈನಿಂಗ್ ಇದೆ. ಮತ್ತೆ ಇನ್ನೇನ್ ವಿಷ್ಯಾ? ಏನ್ ನನ್ ಜೊತೆ ಪ್ರೈವೇಟ್ ಆಗಿ ಮಾತಾಡ್ಬೇಕು ಅಂದ್ಯಲ್ಲಾ" ರೇಗಿಸುವಂತೆ ಕೇಳಿದಳು.
"ನನ್ನ ಮದ್ವೆ ಆಗ್ತೀರ?" ಕರ್ಣ ನಿರ್ಭಾವವಾಗಿ ಕೇಳಿದ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications