ಪತ್ತೇದಾರಿ ಕಾದಂಬರಿ: ಆರು ತಿಂಗಳ ಹಿಂದೆಯೂ ಇದೇ ರೀತಿ ಕೊಲೆ!
ನಾನು ತಲೆ ತಗ್ಗಿಸಿ ಯೋಚಿಸತೊಡಗಿದೆ. ಈ ಮೊಬೈಲ್ ಇರೋದ್ರಿಂದ ಪೊಲೀಸರ ಕೆಲಸ ಎಷ್ಟು ಸಲೀಸಾಗಿದೆ ಎಂದುಕೊಂಡೆ. ಎಷ್ಟೋ ಕೇಸುಗಳನ್ನು ಬರೀ ಮೊಬೈಲ್ ಕರೆಗಳ ಮೂಲಕ ಅಥವಾ ಅವು ಇರುವ ಜಾಗಗಳ ಮೂಲಕಾನೇ ಬಗೆ ಹರಿಸಿದ್ದಾರೆ. ಕಳ್ಳರು ಅಥವಾ ಕೊಲೆಗಡುಕರು ಮೊಬೈಲ್ ಇಟ್ಟುಕೊಂಡರೂ ತೊಂದ್ರೆ, ಇಟ್ಟು ಕೊಳ್ಳದಿದ್ರೂ ತೊಂದರೆ.
ಇಟ್ಟುಕೊಳ್ಳದಿದ್ರೆ ಯಾಕೆ ಇಟ್ಟುಕೊಂಡಿಲ್ಲ ಎಂಬ ಅನುಮಾನ ಮೂಡುವುದು ತುಂಬಾ ಸಹಜ. ಬರೀ ಮೊಬೈಲ್ ಕರೆಗಳ ಮೂಲಕವೇ ಇಬ್ಬರ ನಡುವಿನ ಸಂಬಂಧ ಎಂತಹದ್ದು ಎಂದು ಹೇಳಿಬಿಡಬಹುದು. ಆದರೆ ಈ ಹುಡುಗಿ ನಿಜವಾಗಲೂ ಜಾಣೆ. ಆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಗೋಜಿಗೇ ಹೋಗಿಲ್ಲ. ಕೇಸು ಗೋವಿಂದಾ ಎನಿಸಿತು.

"ಹೋಟೆಲ್ಲು, ಮತ್ತೆ ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾ ನೋಡಿದ್ರಾ?" ನಾನು ಕೇಳಿದೆ.
"ನೋಡಿದೀವಿ ಸರ್. ಅವ್ಳು ರಾತ್ರಿ ಹನ್ನೆರಡು ಗಂಟೆಗೆ ಹೋಟೆಲ್ಲಿನಿಂದ ಹೊರಗೆ ಹೋಗಿರೋದು ಕಂಡಿದೆ. ಆದ್ರೆ ಅದರಲ್ಲೂ ಅವ್ಳು ಫುಲ್ ಓವರ್ ಹಾಕಿಕೊಂಡು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದಾಳೆ. ನಾನು ಗೇಟಿನ ಬಳಿಯಿದ್ದ ಸೆಕ್ಯುರಿಟಿಗೆ ಕೇಳ್ದಾಗ, ಯಾವುದೋ ಟಾಕ್ಸಿ ಹತ್ತಿ ಬೆಂಗಳೂರಿನ ಕಡೆಗೆ ಹೋದ್ಳು ಅಂತಾ ಹೇಳ್ದ. ಅವ್ನು ಟಾಕ್ಸಿ ನಂಬರ್ ನೋಡಿರಲಿಲ್ಲ. ಆದ್ರೂ ನಾನ್ ಬಿಡಲಿಲ್ಲ ಸರ್", ಎಂದ ಹಲ್ಲು ಕಿರಿಯುತ್ತಾ.
"ಏನ್ ಮಾಡಿದ್ರಿ?"
"ಎಲ್ಲಾ ಟಾಕ್ಸಿ ಕಂಪನಿಗಳಿಗೆ ಈ ವಿಷ್ಯ ತಿಳಿಸಿ ಅವಳನ್ನಾ ಯಾರು ಅಲ್ಲಿಂದ ಪಿಕ್ ಅಪ್ ಮಾಡಿರೋದು ಅಂತಾ ಪತ್ತೆ ಹಚ್ದೆ."
ನನಗ್ಯಾಕೋ ಒಳಗೊಳಗೇ ನಗು ಬಂತು. ಪೊಲೀಸರು ಯಾವತ್ತೂ ಹೀಗೇ. ತಲೆ ಉಪಯೋಗಿಸಿ ಸುಳಿವುಗಳನ್ನು ಹುಡುಕುವ ಬದಲು ರೂಢಿಯಲ್ಲಿರುವ ವಿಧಾನಗಳನ್ನೇ ಬಳಸುತ್ತಾರೆ. "ನೀವು ಟಿ.ವಿ.ನಲ್ಲಿ ಬರೋ ಸಿ.ಐ.ಡಿ. ಧಾರಾವಾಹಿ ನೋಡ್ತೀರಾ?" ನಾನು ಕೇಳಿದೆ.
"ಹೌದು ಸರ್. ಯಾಕೆ?" ಅಂದ.
"ಅದರಲ್ಲೂ ಹೀಗೇ... ಅವ್ರು ಫೊಟೋ ಹಿಡ್ಕೊಂಡು ನೀವ್ ನೋಡಿದಿರಾ, ನೀವ್ ನೋಡಿದಿರಾ ಅಂತಾ ಬೀದಿ ಬೀದಿ ಅಲೀತಾರೆ", ಎಂದು ನಕ್ಕೆ.
ಅವನೂ ನಕ್ಕ. ಅವನಿಗೇನೂ ಅವಮಾನವಾದಂತೆ ಕಾಣಲಿಲ್ಲ.
"ಆ ಟಾಕ್ಸಿಯವ್ನು ಅವಳನ್ನಾ ಮೆಜೆಸ್ಟಿಕ್ ಹತ್ರ ಬಿಟ್ನಂತೆ. ಅವ್ನೂ ಅವಳ ಮುಖ ನೋಡಿಲ್ಲ. ಆ ಟಾಕ್ಸಿ ಬುಕ್ ಮಾಡೋದಕ್ಕೆ ಬಳಸಿರೋ ನಂಬರ್ರೂ ಕದ್ದಿರೋದೆ".
"ಅಲ್ಲಿಗೆ ಕತೆ ಮುಗೀತು", ನಾನು ಮಂಗಳ ಹಾಡಿದೆ. "ಈಗ ನನ್ನಿಂದ ಏನ್ ಆಗ್ಬೇಕು ಹೇಳಿ", ಎಂದೆ.
"ಏನಾದ್ರೂ ಕ್ಲೂ ಹುಡುಕಿ ಕೊಡಿ ಸರ್", ಎಂದು ಬೇಡಿದ.
ನಾನು ಒಂದರ್ಧ ನಿಮಿಷ ತಲೆ ಕೆರೆದುಕೊಂಡೆ. ಏನೂ ಹೊಳೆಯಲಿಲ್ಲ. "ಏನೂ ಹೊಳೀತಾ ಇಲ್ವಲ್ರಿ.." ಎಂದೆ.
"ಸರ್. ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಇದೆ. ಹೇಳ್ಲಾ?" ಎಂದ.
"ಇನ್ನೂ ಇದ್ಯಾ?"
"ಹೌದು ಸರ್...", ಎನ್ನುತ್ತಾ ಜಗತ್ತಿನ ಅತಿ ದೊಡ್ಡ ರಹಸ್ಯ ಹೇಳುವಂತೆ ಮುಖ ಮಾಡಿ, "ಥೇಟ್ ಇದೇ ರೀತಿಯ ಕೊಲೆ ಆರು ತಿಂಗಳ ಹಿಂದೆ ತುಮಕೂರು ರೋಡ್ ನಲ್ಲಿರೋ ಹೋಟೆಲ್ ನಲ್ಲಿ ನಡೆದಿತ್ತು ಸರ್. ಅಲ್ಲೂ ಅಷ್ಟೇ... ಕದ್ದಿರೋ ಸಿಮ್ ಗಳನ್ನೇ ಉಪಯೋಗಿಸಿದ್ದು".
ನಾನು ಹೌಹಾರಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications