178864kannada short storyಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg178864kannada short storyಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpg178864kannada short storyಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg178864kannada short storyನಂಬಕೂಡದ ಸತ್ಯಕಥೆ/literature/short-story/2009/0321-satyakathe-short-story-by-narayana-murthy.htmlರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು 35411http://kannada.oneindia.com/img/2009/03/21-narayana-murthy-hosabale1.jpg178864kannada short storyಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg127217recessionಪಬ್ ಬಾರ್‌ಗಳ ಕಿಕ್ ಇಳಿಸಿದ ಆರ್ಥಿಕ ಹಿಂಜರಿತ/news/2009/01/05/bar-crisis-in-bengaluru.htmlಬೆಂಗಳೂರು, ಜ. 5 : ಮುಗ್ಗರಿಸಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಕೆಲಸ ಕಳೆದುಕೊಳ್ಳುವಿಕೆ, ಸಂಬಳದಲ್ಲಿ ಕಡಿತ, ಕಂಪನಿಗಳ ಮುಚ್ಚುವಿಕೆಯಂಥ ಪ್ರತ್ಯಕ್ಷ ದುಷ್ಪರಿಣಾಮ ಉಂಟಾಗಿದ್ದರೆ ಪರೋಕ್ಷವಾಗಿ ಕುಡಿತದಿಂದ ಸರ್ವನಾಶವಾಗುತ್ತಿದ್ದ ಕುಟಂಬಗಳಿಗೆ ಮಾನಸಿಕ ನೆಮ್ಮದಿಯನ್ನು ತಂದಿದೆ.ಆರ್ಥಿಕ ಸಂಕಷ್ಟದಿಂದಾಗಿ ಕುಡುಕರು ಎಚ್ಚೆತ್ತಿರುವುದರಿಂದ ಬೆಂಗಳೂರಿನ ಬಾರ್ ಮತ್ತು ಪಬ್ ಮಾಲಿಕರು ಬಾಯಿಬಡಿದುಕೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣ ಶೇ.40ಕ್ಕೂ ಹೆಚ್ಚು 33894http://kannada.oneindia.com/img/2009/01/05-liquor.jpg127217recessionಸುದ್ದಿಗೋಷ್ಠಿಗಳಲ್ಲಿ ಒಣಹವೆಗೆ ಕ್ಷಣಗಣನೆ/movies/headlines/2009/01/13-count-down-for-dry-eve-parties-began-kfcc.htmlಕನ್ನಡ ಚಲನಚಿತ್ರಗಳಿಗೆ ಸಂಬಂಧಿಸಿದ ಪತ್ರಿಕಾಗೋಷ್ಠಿ, ಆಡಿಯೋ ಕ್ಯಾಸೆಟ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಸಂಜೆ ಹೊತ್ತು ಇಟ್ಟುಕೊಳ್ಳಬಾರದು ಎಂಬ ವಾಣಿಜ್ಯ ಮಂಡಳಿಯ ಆದೇಶ ಜಾರಿಯಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 1 ನೇ ತೇದಿಯಿಂದಲೇ ಜಾರಿಗೆ ಬರಬೇಕಾಗಿದ್ದ ಈ ಆದೇಶ ಕಾರಣಾಂತರಗಳಿಂದ 15ನೇ ತಾರೀಖಿಗೆ ಮುಂದೂಡಲಾಗಿತ್ತು. ವಾಣಿಜ್ಯ ಮಂಡಳಿ ಮತ್ತೆ ಮನಸ್ಸು ಬದಲಾಯಿಸದಿದ್ದರೆ, ಇದೇ ಗುರುವಾರ ಉತ್ತರಾಯಣ ಪುಣ್ಯಕಾಲದ ಆರಂಭದಿಂದ 34046http://kannada.oneindia.com/img/2009/01/13-kcn-chandrashekar2.jpg127217recessionನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg127217recessionರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು/movies/studio/2009/02/19-rockline-venkatesh-starts-two-new-films.htmlಸದ್ದಿಲ್ಲದಂತೆ ರಾಕ್ ಲೈನ್ ವೆಂಕಟೇಶ್ ರ ಎರಡು ಹೊಸ ಚಿತ್ರಗಳು ವಾರದ ಹಿಂದೆಯೇ ಸೆಟ್ಟೇರಿವೆ. ರಾಕ್ ಲೈನ್ ರ ಎರಡು ಚಿತ್ರಗಳ ನಾಯಕರಾಗಿ ವಿಜಯ್ ಮತ್ತು ದಿಗಂತ್ ನಟಿಸುತ್ತಿದ್ದಾರೆ. ಈ ಚಿತ್ರಗಳ ನಾಯಕಿ ಪಾತ್ರಕ್ಕೆ ಹುಡುಕಾಟ ಆರಂಭವಾಗಿದೆ. ಮಾಧ್ಯಮದವರ ಹಂಗ್ಯಾಕೆ ಎಂದು ರಾಕ್ ಲೈನ್ ವೆಂಕಟೇಶ್ ಒಂಚೂರು ಸುಳಿವು ಕೊಡದೆ ಈ ಎರಡು ಚಿತ್ರಗಳ 34752http://kannada.oneindia.com/img/2009/02/19-rockline-venkatesh1.jpg127217recessionಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ/lifestyle/automobiles/2009/0224-toyota-small-car-plant-in-bengaluru.htmlಯಾವುದೇ ಮಾತುಕತೆ ನಡೆಯುತ್ತಿರಲಿ, ಅದು ಕೊನೆಗೆ ಆರ್ಥಿಕ ಬಿಕ್ಕಟ್ಟಿನೆಡೆಗೇ ಬಂದು ನಿಲ್ಲುತ್ತದೆ. ಇದು ಆಟೋಮೊಬೈಲ್ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಷಾರಾಮಿ ಅನ್ನುವ ಮಾತು ನೇಪಥ್ಯಕ್ಕೆ ಸರಿದಿದ್ದು ಎಲ್ಲ ಕಾರು ತಯಾರಿಕಾ ಕಂಪನಿಗಳು ಸಣ್ಣ ಕಾರುಗಳ ತಯಾರಿಕೆಯತ್ತ ಗಮನ ಹರಿಸಿವೆ. ಆರ್ಥಿಕ ಸಂಕಷ್ಟ ಕಾರಿನ ಇಗ್ನೀಷನ್ ಕೀ ಶುರು ಮಾಡುವ ಮೊದಲೇ ಇಂಜಿನ್ನಿಗೆ ಬಿಸಿ ಮುಟ್ಟಿಸಿದೆ.ಟೊಯೋಟಾ ಕಂಪನಿ ಕೂಡ ಇದಕ್ಕೆ 34833http://kannada.oneindia.com/img/2009/02/24-toyota-small-car1.jpgnews"> ಆತಂಕ | Aatanka | Kannada short story | Recession | Economic slowdown | ಸಣ್ಣಕಥೆ | ಆತಂಕ - Kannada Oneindia

ಆತಂಕ

Radhika MG, Bengaluru
ರಿಸೆಷನ್ ಎಂಬ ಭೂತ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆರ್ಥಿಕವಾಗಿ ಎಂಥ ಬಲಾಡ್ಯವಾಗಿದ್ದರೂ ಬಿಕ್ಕಟ್ಟಿನ ಛಳಕು ನಡುಕ ಹುಟ್ಟಿಸಿಬಿಡುತ್ತದೆ. ತಳ್ಳುವ ಪ್ರತಿದಿನವೂ ಸೂಜಿ ಮೊನೆಯ ಮೇಲೆ ತಪಸ್ಸು ಆಚರಿಸಿತಂಥ ಅನುಭವ. ಆ ಸುಳಿಗೆ ಸಿಕ್ಕವನ ಯೋಜನಾ ಲಹರಿಯ ದಿಕ್ಕನ್ನು ಕೂಡ ತಪ್ಪಿಸಿಬಿಡುತ್ತದೆ. ಆತ ಕೂಡ ಅಂಥದೇ ಸುಳಿಗೆ ಸಿಲುಕಿದ್ದ...

* ರಾಧಿಕಾ ಎಮ್.ಜಿ., ಬೆಂಗಳೂರು

I am not convinced with this report. ಬಯಾಪ್ಸಿ ರಿಪೀಟ್ ಮಾಡೋಣ ನಾಳೆ ಮಧ್ಯಾಹ್ನ ಬನ್ನಿ ಅಂದ್ರು ಡಾ|| ಪ್ರದೀಪ್ ಹಳದೀಪುರ್. ಮೂರು ತಿಂಗಳಿಂದ ಅಪ್ಪನಿಗೆ ಒಂದೇ ಸಮನೇ ಕೆಮ್ಮು, ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವ ಅನುಭವ, ಆಗಾಗ ಬರುವ ಜ್ವರ, ಸ್ವಲ್ಪ ತೂಕವನ್ನೂ ಕಳೆದುಕೊಂಡಿದ್ದಾನೆ. ಅನಂತ, ನಾವು ನಮ್ಮೂರಲ್ಲೇ ಇರ್ಬೇಕಿತ್ತು ಕಣೋ. ಯಾಕೋ ಈ ಬೆಂಗ್ಳೂರಿನ ಹವೆ ನಮಗೆ ಆಗಿ ಬರ್ತಾ ಇಲ್ಲ ಅಂದಿದ್ಲು ಅಮ್ಮ. ಪ್ಯಾರಸೆಟಮಾಲ್, ವಿಕ್ಸ್ ಆಕ್ಷನ್-500, ಹೈಯರ್ ಡೋಸ್ ಆಂಟಿ ಬಯಾಟಿಕ್ ಯಾವುದಕ್ಕೂ ಬಗ್ಗಿರ್ಲಿಲ್ಲ ಕೆಮ್ಮು. ಒಂದು ಎಕ್ಸ್‌ರೇಯನ್ನೂ ತೆಗೆಸಿದ್ದಾಯ್ತು ಡಾ||ಭೋಜರಾಜು ಹತ್ತಿರ. ಅವರೂ ಇನ್ನೊಂದು ಆಂಟಿ ಬಯಾಟಿಕ್ ಬರ್ಕೊಟ್ಟು ವಾರ ಬಿಟ್ಟು ಬನ್ನಿ ಅಂದ್ರು. ಕೆಫೆಟೇರಿಯದಲ್ಲಿ ಊಟ ಮಾಡುವಾಗ ಈ ಬಗ್ಗೆ ಹೇಳಿದಾಗ ಪಾರ್ವತಿ ಕೋಟ್ಟೈವೀಡು ಸಲಹೆ ಕೊಟ್ಳು. ಕೆಮ್ಮಿದ್ರೆ ಯಾಕೆ ಜನರಲ್ ಡಾಕ್ಟರ್ ಹತ್ರ ತೋರಿಸ್ತಾ ಇದ್ದೀಯ ಇ.ಎನ್.ಟಿ ಸ್ಪೆಷಲಿಸ್ಟ್ ಹತ್ರ ತೋರಿಸು ಅಂತ. ಅವಳೇ ವಿಳಾಸ ಕೊಟ್ಟಿದ್ದು ಹಳದೀಪುರ್ ಕ್ಲಿನಿಕ್‌ದು.

ಪಾರ್ವತಿ ಕೋಟ್ಟೈವೀಡು. ತಮಿಳಿನವಳಾದರೂ ಕಟ್ಟಾ ಕನ್ನಡಾಭಿಮಾನಿ. ತುಂಬಾ ಇಂಟರೆಸ್ಟಿಂಗ್ ಮತ್ತು ಇರಿಟೇಟಿಂಗ್ ಪರ್ಸನಾಲಿಟಿ. ಅವಳನ್ನು ನೋಡಿದ್ರೆ ಉಷಾ ಉತ್ತುಪ್ ಜ್ಞಾಪಕ ಬರುತ್ತೆ. ಹಾಗೇ ಢಾಳಾಗಿ ಅಲಂಕಾರ ಮಾಡ್ಕೊಂಡು ಬರ್ತಾಳೆ. ನನ್ನ ಗಂಡ ಅಮೆರಿಕಾದಿಂದ ತಂದಿದ್ದು ಅಂತ ಫಾರ್ಮಲ್ ಸೂಟ್ ತೊಟ್ಟು ತನ್ನ ಉದ್ದ ಕೂದಲನ್ನು ಹರಡಿಕೊಂಡು ಒಮ್ಮೆ ಬಂದರೆ ಇನ್ನೊಮ್ಮೆ ಗೌರಮ್ಮನ ತರಹ ಮದುವೆಗೆ ಬರೋ ಹಾಗೆ ತನ್ನ ಇರೋ ಬರೋ ಒಡವೆಗಳನ್ನೆಲ್ಲ ತೊಟ್ಕೊಂಡು ಕಂಚೀ ರೇಷ್ಮೆ ಸೀರೆಯಲ್ಲಿ ಪ್ರತ್ಯಕ್ಷ. ಇದು ಐ.ಟಿ ಕಛೇರಿನಾ ಅಥವಾ ಮದುವೆ ಮನೇನಾ ಅನ್ನಿಸಿದ್ದಿದೆ ಅನಂತನಿಗೆ. ಎಲ್ಲರ ಮನೇ ವಿಷಯಾನೂ ಅವಳಿಗೆ ಬೇಕು. ಯಾರ ಗಂಡ, ಹೆಂಡತಿ ಎಲ್ಲಿ ಕೆಲ್ಸ ಮಾಡ್ತಾರೆ, ಅವರ ದಾಂಪತ್ಯ ಚೆನ್ನಾಗಿದೆಯಾ ಇಲ್ಲವಾ, ಅತ್ತೆ, ಮಾವ ಚೆನ್ನಾಗಿ ನೋಡ್ಕೋತಾರಾ, ಅತ್ತೆ, ಮಾವನ ಜವಾಬ್ದಾರಿ ಇವರ ಮೇಲೇ ಇದೆಯಾ, ಕತ್ರೀನ ಕೈಫ್ ಸಲ್ಮಾನ್ ಆಕಸ್ಮಾತ್ ಮದ್ವೆ ಆಗಿರೋದೇ ನಿಜವಾದರೆ ಅದು ಸರೀನಾ ತಪ್ಪಾ? ಮುಂಬೈನಲ್ಲಿ ಯಾರೋ ಸತ್ತರೆ ನಾವು ತಲೆ ಕೆಡ್ಸಿಕೊಂಡು ಮಾಡೋದಾದರೂ ಏನು ಅಂತ ತನ್ನ ಅಭಿಪ್ರಾಯವನ್ನು ಮುಂದಿಡ್ತಾಳೆ. ನಾನು ಸತ್ಯಂನಲ್ಲಿಲ್ಲ ಅಲ್ಲಿರೋವ್ರ ಬಗ್ಗೆ ಯೋಚನೆ ಮಾಡುವಷ್ಟು ನನಗೆ ಟೈಮ್ ಇಲ್ಲ ಅಂತಲೂ ನಿಸ್ಸಂಕೋಚವಾಗಿ ಹೇಳ್ತಾಳೆ. ಆಫೀಸಿನ ಎಲ್ಲ ಜೋಡಿಗಳ ಹಿನ್ನೆಲೆ, ಅಂಕಿ-ಅಂಶ ಪಾರ್ವತಿಯ ನಾಲಗೆಯ ತುದಿಯಲ್ಲೇ.

ಮದುವೆಯ ಕನಸನ್ನು ಕಾಣುತ್ತಿರುವ ಹುಡುಗಿಯರಿಗೆ “ಮೊದಲನೇ ರಾತ್ರಿ"ಯಲ್ಲಿ ಅಂಥದ್ದೇನೂ ನಡೆಯೋದೇ ಇಲ್ಲ. If you are lucky to get a caring husband, it"s less painful ಅಂಥ ಹೇಳಿ ಭಯ, ಮುಜುಗರ ಒಂದೇ ಬಾರಿಗೆ ಹುಟ್ಟಿಸ್ತಾಳೆ. ಯಾವುದೇ ವಿಷಯ ಹೆಚ್ಚು ಜನಕ್ಕೆ ತಲುಪಬೇಕಿದ್ರೆ ಪಾರ್ವತಿಯ ಕಿವಿ ಮುಟ್ಟಿಸಿದರೆ ಸಾಕು ಅನ್ನುವಷ್ಟು ಖ್ಯಾತಿ ಆಕೆಯದು ಆಫೀಸಿನಲ್ಲಿ! ಥೇಟ್ ನಮ್ಮ ಕ್ರೈಮ್ ಡೈರಿಗಳ ಥರಾ! ಸಾಂತ್ವನ ಸೂಚಿಸುತ್ತ ಎದುರಲ್ಲಿರುವವರ ಸಮಸ್ಯೆ, ಒಳಗುಟ್ಟುಗಳನ್ನು ಕೇಳಿ ತಿಳಿಯುವುದು ಆಮೇಲೆ ಜಗತ್ತಿನೆದುರು ಎಲ್ಲವನ್ನೂ ಡಂಗುರ ಸಾರಿ ಸಮಸ್ಯೆ ಹೇಳಿಕೊಂಡವರು ಹಪಹಪಿಸುವಂತೆ ಮಾಡುವ ಮಂದಿಯ ಪೈಕಿ ಈಕೆ. ದೊಡ್ಡಕ್ಕನ ತರಹ ಕೂತು ಯಾರ ಸಮಸ್ಯೆಗಳಿಗೂ ಕಿವಿಯಾಗುವ ಅವಳ probing nature ಒಮ್ಮೊಮ್ಮೆ ಕಿರಿಕಿರಿಯಾಗುವಷ್ಟು ಅತಿ ಅನ್ನಿಸುತ್ತೆ. ಮನುಷ್ಯ ಸ್ವಾರ್ಥಿಯಾಗಿರಬೇಕು ಇಲ್ಲದೇ ಇದ್ದರೆ ಉದ್ಧಾರ ಆಗಲ್ಲ ಅಂದು ಘೋಷಿಸುತ್ತಾಳೆ. ಅಲ್ರೀ ಅನಂತ್‌ಕುಮಾರ್ ನೀವು ನಿಮ್ಮಕ್ಕನಿಗೆ, ಅವಳ ಮಗಳಿಗೆ ಅಂತ ನೀವು ದುಡಿದಿದ್ದೆಲ್ಲ ಕೊಡ್ತಾ ಇದ್ರೆ ನೀವು ಯಾವಾಗ್ರೀ ಬುದ್ಧಿವಂತರಾಗೋದು? ಬೆಂಗ್ಳೂರಲ್ಲಿ ಒಂದು ಅಪಾರ್ಟ್ಮೆಂಟ್ ಇಲ್ದೇ ಇದ್ರೆ ಯಾವ ಹುಡ್ಗೀನೂ ನಿಮ್ಮನ್ನ ಮದುವೆ ಆಗೋಕ್ಕೆ ಮುಂದೆ ಬರಲ್ಲ ಗೊತ್ತಾ ಅಂತ ಒಂದು ಹುಳು ಅವನ ತಲೆಗೆ ಬಿಟ್ರೆ ಸಾಕು. ಅವತ್ತಿಡೀ ಅವನಿಗೆ ಅದೇ ಚಿಂತೆ. ಅಕ್ಕನಿಗೆ ನಾನು ದುಡ್ಡು ಕೊಡೋದು ತಪ್ಪಾ, ಸರೀನಾ ಅಂತ. ಕೊನೆಗೆ ಯಾವ ನಿರ್ಧಾರವನ್ನೂ ತೊಗೊಳ್ಳೊಕ್ಕಾಗದೆ ಅಕ್ಕನ ಫೋನ್ ಬಂದರೆ ಕಟ್ ಮಾಡಿದ್ದ. ಆಮೇಲೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನ್ನಿಸಿ ಸಾರಿ ಅಕ್ಕ, ಬಿಜಿ ಇದ್ದೆ ಹೇಳು ಅಂತ ಮರು ಕರೆಯನ್ನೂ ಮಾಡಿದ್ದ.

ಏನ್ರೀ ಇದು ಒಂದು ದೊಡ್ಡ ನಿಂಬೆ ಹಣ್ಣಿನ ಗಾತ್ರದ ಗಡ್ಡೆ ಇದೆ ಒಳಗೆ ಇಷ್ಟು ದಿವಸ ಏನು ಮಾಡ್ತಿದ್ರೀ ಅಂದ್ರು ಹಳದೀಪುರ್. ಕೆಮ್ಮಿಗೆ ಅಂತ ಅಮ್ಮ ಮನೇಲಿ ಮೆಣಸಿನ ಸಾರು, ಶುಂಠಿ ರಸ ಎಲ್ಲಾ ಕೊಡ್ತಿದ್ರು ಆದ್ರೂ ಯಾಕೋ ಹುಷಾರಾಗ್ಲಿಲ್ಲ ಸಾರ್ ಅಂದ ಅನಂತ. ಅಲ್ರೀ ನೀವು ಓದಿದೋರು ಹೀಗೆ ಮಾಡಿದರೆ ಹೇಗೆ ಅನ್ನುತ್ತಲೇ ಅನಂತನಿಗೂ ತೋರಿಸಿದರು ಅಪ್ಪನ ಗಂಟಲಲ್ಲಿ ಅಡ್ದವಾಗಿ ಕುಳಿತಿದ್ದ ಗಡ್ಡೆಯನ್ನು. ಇತ್ತೀಚೆಗೆ ಅಪ್ಪ ನುಂಗೋಕ್ಕೂ ಕಷ್ಟ ಅಂತ ಬರೀ ಗಂಜೀನೇ ಮಾಡಿಸಿಕೊಂಡು ಕುಡೀತಾ ಇದ್ದ. ಜ್ವರ ಕೂಡ ಇದ್ದಿದ್ದರಿಂದ ಹೊಟ್ಟೆಗೆ ತಂಪು ಅಂತ ಅನಂತಾನೂ ಸುಮ್ಮನೇ ಇದ್ದ. ಒಂದು ಬಯಾಪ್ಸಿ ಮಾಡ್ಸಿಬಿಡಿ ಮುಂದೆ ಏನು ಮಾಡ್ಬೇಕು ಅಂತ ಹೇಳ್ತೀನಿ ಅಂದ್ರು. ಅಪ್ಪನಿಗೇನೋ ದಿಗಿಲು. ಟೆಸ್ಟೂ ಅದೂ ಇದೂ ಅಂತ ಹೇಳಿ ಯಾವ ಕಾಯಿಲೆಯನ್ನು ಘೋಷಿಸ್ತಾರೋ ಅಂತ. ಮೊದಲನೇ ಬಯಾಪ್ಸಿಯಲ್ಲಿ ಎಲ್ಲಾ ನಾರ್ಮಲ್ ಅನ್ನೋ ರಿಪೋರ್ಟ್ ನೋಡಿ ಅಪ್ಪ, ಅಮ್ಮ ದೀರ್ಘವಾದ ಉಸಿರು ಬಿಟ್ಟರು. ಈಗ ನೋಡಿದ್ರೆ ಹಳದೀಪುರ್ ಮತ್ತೆ ಬಯಾಪ್ಸಿ ಮಾಡಿಸಿ ಅಂತಾ ಇದ್ದಾರೆ.

ಲ್ಯಾಬ್ ರಿಪೋರ್ಟ್ನಲ್ಲಿ ಏನಿದೆ ಅಂತ ಫೋನ್ ಮಾಡಿದ್ರೆ ಬಂದು ರಿಪೋರ್ಟ್ ತೊಗೊಂಡು ಹೋಗಿ ಡಾಕ್ಟರ್‌ಗೆ ತೋರಿಸಿ ಹೇಳ್ತಾರೆ ಅಂತ ಫೋನ್ ಇಟ್ಬಿಟ್ಳು ಟೆಕ್ನಿಷಿಯನ್. “Presense of human papilloma virus seen. A case of sqamous cell carcinoma" ಎಂದು ಬರೆದ ರಿಪೋರ್ಟ್ ನೋಡಿದ ಡಾ||ಹಳದೀಪುರ್, ಗಂಟಲು ಕ್ಯಾನ್ಸರ್ ಆಗಿದೆ ನಿಮ್ಮ ತಂದೆಗೆ, ಹೆಚ್ಚೆಂದರೆ ಇನ್ನು ಆರು ತಿಂಗಳು ಬದುಕಬಹುದು. ಹೆಡ್ ಅಂಡ್ ನೆಕ್ ಸ್ಪೆಷಲಿಸ್ಟ್‌ಗೆ ತೋರಿಸಿ ಅಂದ್ರು. ಡಾ||ನಂಜುಂಡಪ್ಪನವರ ಹತ್ತಿರ ಭೇಟಿ ನಂತರ ಬೆಂಗಳೂರು ಕ್ಯಾನ್ಸರ್ ಆಸ್ಪತೆಯಲ್ಲಿ ಸಿ.ಟಿ ಸ್ಕ್ಯಾನ್, ಬ್ಲಡ್ ಟೆಸ್ಟ್ ಅದೂ ಇದೂ ಎಲ್ಲಾ ಆಗಿ ಡಾ||ಶೇಖರ್ ಪಾಟೀಲ್ ಅಂದ್ರು, ಕ್ಯಾನ್ಸರ್ ೪ನೇ ಸ್ಟೇಜ್‌ನಲ್ಲಿರುವುದರಿಂದ aggressive treatment ಕೊಡಬೇಕಾಗುತ್ತೆ. ಲಕ್ಷಾಂತರ ರುಪಾಯಿ ಖರ್ಚಾಗುತ್ತೆ. ಯೋಚನೆ ಮಾಡಿ ವಾಪಸ್ ಬನ್ನಿ ಅಂತ. ಆಫೀಸಿನ ಇನ್ಷೂರೆನ್ಸ್‌ನ ರಕ್ಷಣೆ ಇರುವುದರಿಂದ ಯೋಚನೆ ಮಾಡುವಂತದ್ದೇನೂ ಇಲ್ಲ ಚಿಕಿತ್ಸೆ ಶುರು ಮಾಡಬಹುದು ಅಂದ ಅನಂತ. ಚಿಕಿತ್ಸೆ ಶುರುವಾದಮೇಲೇ ಅರ್ಥವಾಗಿದ್ದು ಪರಿಸ್ಥಿತಿಯ ಭೀಕರತೆ.

ಮೊದಲಿಂದಲೂ ಕಷ್ಟ ಜೀವಿಯಾಗಿದ್ದ ಅಪ್ಪ ಮೊದಲನೇ ಕೀಮೋ ತೆರಪಿಯ ನಂತರ ತರಕಾರಿಯಂತೆ ಮುದುಡಿ ಮಲಗಿದ್ದ. ಎರಡೂ ಮುಂಗೈಯ್ಗಳೂ ಸೂಜಿ ಚುಚ್ಚಿ ಊದಿದ್ದವು. ಬಾಯಲ್ಲಿ ಏನೂ ಸೇರ್ತಾ ಇರ್ಲಿಲ್ಲ ಬರೀ ಪೇರಂಟಲ್ ನ್ಯೂಟ್ರಿಷನ್, ಸಲೈನ್ ಈಗ. ಏಕಾಏಕಿ ತೂಕ ಕಡಿಮೆಯಾಗಿ ತಾನಾಗಿ ಎದ್ದು ಕೂರಲೂ ಆಗದ ಅಸಹಾಯಕ ಪರಿಸ್ಥಿಯಲ್ಲಿ ಅಪ್ಪನನ್ನು ನೋಡಿ ಅನಂತನ ಕಣ್ತುಂಬಿ ಬಂತು. ಅಮ್ಮನ ಜೊತೆ ಕೂತು ಬಿಕ್ಕಿ ಬಿಕ್ಕಿ ಅತ್ತಿದ್ದೂ ಇದೆ. ಚಿಕಿತ್ಸೆ ಕೊಡಿಸಿ ತಪ್ಪು ಮಾಡಿಬಿಟ್ಟೆನಾ ಅನ್ನುವ ಪಾಪ ಪ್ರಜ್ಞೆ ಕಾಡತೊಡಗಿತು. ಚಿತ್ರದುರ್ಗದ ತುಪ್ಪದ ಕೊಳವನ್ನು ಏರಲೇಬೇಕು ಅನ್ನುವ ನನ್ನ ಹಠಕ್ಕೆ ಬಾಗಿ ನನಗೆ ಬೆಂಗಾವಲಾಗಿ ನಿಂತು ಚಿತ್ರದುರ್ಗದ ಕೋಟೆಯನ್ನು ಹತ್ತಿಸಿದ ಅಪ್ಪ, ಇವತ್ತು ನಿಸ್ಸಹಾಯಕನಾಗಿ ಮಲಗಿರುವ ಇವನೇನಾ? ಅಮ್ಮ ಹೊರನಾಡಿನ ಅನ್ನಪೂರ್ಣೇಶ್ವರಿಗೆ ಹತ್ತು ಕ್ವಿಂಟಲ್ ಅಕ್ಕಿ ಸಲ್ಲಿಸುವ ಹರಕೆ ಹೊತ್ತಳು.

“ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ" ಅನ್ನುವ ನಿನಾದದೊಂದಿಗೆ ಮೊಬೈಲ್ ಕರೆಯಿತು. ಅಪ್ಪನ ಚಿಕಿತ್ಸೆ ಶುರುವಾದಾಗಲಿಂದಲೇ ಮೊಬೈಲ್ ನಿನಾದ ಬದಲಾಗಿತ್ತು “ಏನೋ ಒಂಥರಾ... “ ಅಂತ ಇದ್ದಿದ್ದು. ವೈಭವ್ ಆರೋರ ಫೋನ್ ಮಾಡಿದ್ದ. “ಹೌ ಈಸ್ ಯುವರ್ ಡ್ಯಾಡ್ ಮ್ಯಾನ್" ಅನ್ನುತ್ತಲೇ ಅನಂತನ ಉತ್ತರಕ್ಕೂ ಕಾಯದೇ, “ಟೀಮ್ ಮೀಟಿಂಗ್ ಇತ್ತು. ಪರಿಸ್ಥಿತಿಯ ಭೀಕರತೆ ನಮ್ಮನ್ನು ಮುಟ್ಟುವುದಿಲ್ಲ ಅನ್ನುವ ಕಾಲ ಮುಗಿಯಿತು. ಯಾರು, ಎಲ್ಲಿ ಬೇಕಾದರೂ ಆಗಬಹುದು ಅನ್ನುವ ಸೂಚನೆ ದೊರೆತಿದೆ ಆರ್ಗ್ ಡೈರೆಕ್ಟರ್‌ನಿಂದ" ಅಂತ ಹೇಳಿದ. ಹೃದಯ ಬಡಿತ ಪಕ್ಕದಲ್ಲಿರುವವರಿಗೂ ಕೇಳುವಷ್ಟು ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ನಾನು ಸತ್ಯಂನಲ್ಲಿಲ್ಲ, ಅಮೆರಿಕಾದಲ್ಲಿ H1-B ವೀಸಾದ ಮೇಲೆ ಮೈಕ್ರೋಸಾಫ್ಟ್‌ನಲ್ಲಿಲ್ಲ, ಸರ್ವೀಸಸ್‌ನಲ್ಲಿಲ್ಲ ಪ್ರಾಡಕ್ಟ್ ಕಂಪನಿಯಲ್ಲಿದ್ದೀನಿ ಅನ್ನುವ ಇಷ್ಟು ದಿನದ ನಿರಾಳ ಭಾವ ಕುಂದಿ ಹೋಯಿತು. ಕತ್ತಿಯ ಮೊನೆ ತನ್ನ ತಲೆಯ ಮೇಲೂ ತೂಗುತ್ತಿರುವ ಅನುಭವ ಈ ಕ್ಷಣದಲ್ಲಿ ಆಯಿತು.

ಅಕಸ್ಮಾತ್ ಕೆಲಸ ಹೋದರೆ ಅಪ್ಪನ ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ದುಡ್ಡು ಹೊಂದಿಸುವುದು ಹೇಗೆ ಅನ್ನುವ ಪ್ರಶ್ನೆ ಧುತ್ತೆಂದು ಎದುರು ನಿಂತಿತು. ಇಪ್ಪತ್ತು ಮಂದಿಯ ನಮ್ಮ ಟೀಮ್‌ನಲ್ಲಿ ಕೆಲಸ ಕಳೆದುಕೊಳ್ಳಬಲ್ಲ ಬಲಿಪಶು ಯಾರಿರಬಹುದು ಅನ್ನುವ ಲೆಕ್ಕಾಚಾರದಲ್ಲಿ ತೊಡಗಿದ. ಸಣ್ಣ ಸಣ್ಣ ದ್ವೀಪಗಳಂತಿದ್ದ ಗುಂಪುಗಳಲ್ಲಿ ಅನಂತನಿದ್ದ ಮೂರು ಮಂದಿಯ ಟೀಂನಲ್ಲೇ ಹೆಚ್ಚುವರಿ ಡೆವಲಪರ್ ಇದ್ದಿದ್ದು ಅನ್ನೋ ಸತ್ಯ ಗೋಚರವಾಯಿತು. ತಾನು ಮತ್ತು ಪಾರ್ವತಿ ಕೋಟ್ಟೈವೀಡು ಇಬ್ಬರು ಡೆವಲಪರ್‌ಗಳಿಗೆ ಆಗುವಷ್ಟು ಕೆಲಸ ಸುಮಾರು ತಿಂಗಳುಗಳಿಂದ ಇರಲೇ ಇಲ್ಲ. ಪರಿಸ್ಠಿತಿ ಚೆನ್ನಾಗಿದ್ದಾಗ ಇಬ್ಬರೂ ರಾತ್ರಿಯೆಲ್ಲಾ ಮನೆಯಿಂದಲೂ ಲಾಗಿನ್ ಆಗಿ ಕೆಲಸ ಮಾಡಿದ ದಿನಗಳಿವೆ. ಆದರೆ ಪ್ರಪಂಚದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದಂತೆಯೇ ಇವರಿಬ್ಬರ ಕೆಲಸದ ಒತ್ತಡವೂ ಕ್ಷೀಣಿಸಿತ್ತು. ದೇವರೇ ಮ್ಯಾನೇಜರ್ ಜೋಯ್‌ಜೀತ್ ಮುಖರ್ಜಿಯ ಅಂಕುಶ ನನ್ನೆಡೆಗೆ ತಿರುಗದಂತೆ ನೋಡಿಕೊಳ್ಳಪ್ಪ, ಅಪ್ಪನ ಚಿಕಿತ್ಸೆಯ ಸಲುವಾಗಿಯಾದರೂ ನನ್ನ ಈ ಕೆಲಸ ಉಳಿಸಿಕೊಡಪ್ಪ ಎಂದು ಮೂಕವಾಗಿ ಮೊರೆಯಿಟ್ಟ. ತನ್ನ ಪ್ರಾರ್ಥನೆಯಲ್ಲಿ ನಿಜಕ್ಕೂ ಸ್ವಾರ್ಥ ಇದೆಯಾ ಅಥವಾ ಅಪ್ಪನ ಆರೋಗ್ಯದ ಚಿಂತನೆಯಿದೆಯಾ ಅನ್ನೋ ಪ್ರಶ್ನೆಗೆ ಅವನ ಹತ್ತಿರ ಉತ್ತರ ಇರಲಿಲ್ಲ.

ಅಕಸ್ಮಾತ್ ದೇವರು ಪ್ರತ್ಯಕ್ಷವಾಗಿ ಪಾರ್ವತಿಯ ಬದಲು ನಿನ್ನ ಕೆಲಸ ಯಾಕೆ ಕಿತ್ತುಕೊಳ್ಳಬಾರದು ಅಂದರೆ ತಾನು ಏನು ಉತ್ತರ ಕೊಡಬೇಕು ಅನ್ನೋ dry run ನಡೆಸಿದ. ಪಾರ್ವತಿಗೆ ಕೆಲಸದ ಅವಶ್ಯಕತೆ ಇಲ್ಲ. ಅವಳೇ ಎಷ್ಟೋ ಬಾರಿ ಹೇಳಿರುವಂತೆ ಈ ಕೆಲಸ just for time pass. ಸಾಲಸೋಲಗಳ ಜಂಜಾಟವಿಲ್ಲದ ಬ್ರಿಗೇಡ್ ಗ್ರೂಪಿನ ಅಪಾರ್ಟ್‌ಮೆಂಟ್ ಹೊಂದಿರುವ ಡಿಂಕ್ (Double Income No Kid) ಫ್ಯಾಮಿಲಿಯ ಒಡತಿಗೆ ಅವಳ ಗಂಡನ ದುಡಿಮೆಯಲ್ಲಿ ಅವಳ ಜೀವನ ಸಾಗುತ್ತದೆ. ಅವಳ ಸಂಬಳ ಬರೀ ಲ್ಯಾಕ್ಮೆ ಬ್ಯೂಟಿ ಪಾರ್ಲರ್‌ನಲ್ಲಿ ಫೇಶಿಯಲ್, ವ್ಯಾಕ್ಸಿಂಗ್, ಬ್ರ್ಯಾಂಡೆಡ್ ಬಟ್ಟೆ, ಮೈಸೂರ್ ಸಿಲ್ಕ್ ಸೀರೆ, ಗಂಜಾಂ ಒಡವೆ ಇದಕ್ಕೆ ವಿನಿಯೋಗವಾದರೆ, ನನಗೆ ಸಂಬಳ ನಿತ್ಯ ಜೀವನಕ್ಕೆ ಅತ್ಯವಶ್ಯಕ. ನನ್ನ ಕೆಲಸ ಕಳೆದುಕೊಂಡರೆ ನನ್ನ ಕುಟುಂಬದ ಜೀವನ ದುಸ್ತರ. ಅವರಿವರ ವೈಯಕ್ತಿಕ ಜೀವನದ ಬಗ್ಗೆ ಸದಾ ಕುತೂಹಲಿಯಾಗಿ ಆಫೀಸಿನಲ್ಲಿ ಕೆಲಸಕ್ಕಿಂತ ಮಾತೇ ಮುಂದಿರುವ ಪಾರ್ವತಿಗಿಂತ ತಾನು ಉತ್ತಮ ನೌಕರ. ತನ್ನನ್ನು ಉಳಿಸಿಕೊಳ್ಳುವದರಲ್ಲಿ ಕಂಪನಿಗೆ ಏಳಿಗೆಯಿದೆ ಎಂದು ಮೊದಲ ಬಾರಿಗೆ ಕಂಪನಿಯ ಏಳಿಗೆಯ ಬಗ್ಗೆಯೂ ತನ್ನ ವಿಚಾರ ಲಹರಿಯನ್ನು ಹರಿಸತೊಡಗಿದ ಅನಂತ. ಕ್ಯಾನ್ಸರ್ ಆಸ್ಪತ್ರೆಯ ದಿನಕ್ಕೆ ಹತ್ತು ಸಾವಿರ ಬಾಡಿಗೆಯ ವಿ.ಐ.ಪಿ ರೂಮ್ ಜೈಪುರ್‌ನ ಮೃದುಹಾಸಿಗೆಯ ದಿವಾನದ ಮೇಲೆ ಕುಳಿತು ಕಡಿವಾಣವಿಲ್ಲದಂತೆ ಸಾಗಿದ್ದ ಯೋಚನಾ ಲಹರಿಗೆ ಬ್ರೇಕ್ ಬಿದ್ದಿದ್ದು ಮೃದುವಾಗಿ ತಟ್ಟಿದ ಬಾಗಿಲ ದನಿ ಕೇಳಿ.

ನೆನೆದವರು ಮನದಲ್ಲಿ! ಸುಂದರವಾದ ಹೂಗುಚ್ಛದೊಡನೆ ಪ್ರತ್ಯಕ್ಷಳಾದಳು ಪಾರ್ವತಿ ಕೋಟ್ಟೈವೀಡು! ಹೇಗಿದ್ದಾರೆ ಅಪ್ಪ ಈಗ? ಆಫೀಸಿನ ಬಗ್ಗೆ ಯೋಚನೆ ಮಾಡಬೇಡ ನಾನು ಎಲ್ಲಾ ಮ್ಯಾನೇಜ್ ಮಾಡ್ತೀನಿ. ನೀನು ಇನ್ನೂ ಸ್ವಲ್ಪ ದಿವಸ ರಜೆ ತೊಗೋ ಬೇಕಾದ್ರೆ. ನೀನು ಮಾಡಿದ್ದ ಕಸ್ಟಮರ್ ಫಿಕ್ಸ್‌ಗೆ ನನಗೆ ಅಪ್ರಿಸಿಯೇಶನ್ ಮೆಯ್ಲ್ ಕಳಿಸಿದ್ದ ಜೋಯ್‌ಜೀತ್. ಇಲ್ಲಪ್ಪ ಇದೆಲ್ಲ ಅನಂತನ ಮಹಿಮೆ ಅಂತ ವಾಪಸ್ ರಿಪ್ಲೈ ಮಾಡಿದ್ದೀನಿ. ಈ ಸರ್ತಿ ನಿಂಗೆ ಅವಾರ್ಡ್ ಗ್ಯಾರಂಟಿ ಅಂದ್ಲು. ಅಂಕಲ್ ನಿಮ್ಮ ಮಗ ತುಂಬಾ ಒಳ್ಳೇ ಹುಡುಗ, ಕಷ್ಟ ಪಟ್ಟು ಕೆಲ್ಸ ಮಾಡ್ತಾನೆ ಅಂತ ಹೊಗಳಿ ಅಪ್ಪನಿಗೆ ಆ ನೋವಿನಲ್ಲೂ ಮೊಗದಲ್ಲಿ ಹೆಮ್ಮೆಯ ನಗೆ ಮೂಡುವ ಹಾಗೆ ಮಾಡಿದಳು.

ಅಂದ ಹಾಗೆ ನೀನು ಟಿ.ಟಿ.ಕೆ ಕಾರ್ಡ್ ಉಪಯೋಗಿಸುವ ಬದಲು ಕ್ರೆಡಿಟ್ ಕಾರ್ಡ್ ಅಥವಾ ಕ್ಯಾಷ್‌ನಲ್ಲಿ ಬಿಲ್ಲು ಕಟ್ಟು. ಇನ್ಷೂರೆನ್ಸ್ ಇದೆ ಅಂದ್ರೆ ಡಬ್ಬಲ್ ಚಾರ್ಜ್ ಮಾಡ್ತಾರೆ ಆಸ್ಪತ್ರೆಗಳಲ್ಲಿ ಅಂದ್ಲು. ಅನಂತನಿಗೂ ಇದರ ಅರಿವಾಗಿತ್ತು ಏಳು ದಿನಗಳ ಆಸ್ಪತ್ರೆಯ ವಾಸ್ತವ್ಯದಲ್ಲಿ. ಇನ್ಷೂರೆನ್ಸ್‌ನವರಿಗೆ ಲಕ್ಷ ಖರ್ಚಾದರೆ ಕ್ಯಾಷ್ ಕೊಟ್ಟವರಿಗೆ ಐವತ್ತು ಅರುವತ್ತು ಸಾವಿರದಲ್ಲಿ ಮುಗಿಯುತ್ತಿತ್ತು. ಹೇಗಾದರೂ ಮಾಡಿ ಕ್ಯಾಷ್ ಕಟ್ಟಿದರೆ ಇನ್ಷೂರೆನ್ಸ್ ಇದ್ದವರು ಹೆಚ್ಚಿನ ಕವರೇಜ್ ಪಡೆಯಬಹುದಿತ್ತು. ಅವರು ಚಾಪೆ ಕೆಳಗಡೆ ತೂರಿದರೆ ನಾವು ರಂಗೋಲಿಯ ಕೆಳಗೆ ನುಸುಳಬಹುದಲ್ಲವಾ ಅಂದಳು.

ಇವಳ ಬಗ್ಗೇನಾ ನಾನು ಇಷ್ಟು ಹೊತ್ತು ಅವಳ ಕೆಲಸ ಹೋಗಲಿ ಅಂತ ಯೋಚಿಸಿದ್ದು ಎಂದು ಅನಂತನಿಗೆ ಪಾರ್ವತಿಯ ಇದಿರು ತಾನು ವಾಮನನ ಮುಂದೆ ಬಲಿ ಕುಬ್ಜನಾದ ಅನುಭವವಾಗಿ ನಾಚಿಕೆಯಾಯಿತು. ಒಂದು inside information. ನಮ್ಮ ಟೀಮ್‌ನಲ್ಲಿ ಒಬ್ಬರನ್ನು ತೆಗೀಬೇಕು ಆದರೆ ಯಾರನ್ನು ಅನ್ನೋ ದ್ವಂದ್ವ ಇತ್ತಂತೆ ಜೋಯ್‌ಜೀತ್‌ಗೆ. ಸೂಜಿ ಮೇಲೆ ತಪಸ್ಸು ಮಾಡೋದು ಅಂದ್ರೆ ಏನು ಅಂತ ನಂಗೆ ಈಗ ಅನುಭವ ಆಯ್ತು ಅಂತ ಹೇಳ್ತಾ ಇದ್ದ ಆರ್ಗ್ ಡೈರೆಕ್ಟರ್ ಪಾಲ್ ಹತ್ತಿರ. ಐ ಜಸ್ಟ್ ಹ್ಯಾಪ್ಪನ್‌ಡ್ ಟು ಓವರ್ ಹಿಯರ್! ಆದರೆ ಸಮಸ್ಯೆ ಸುಲಭವಾಗಿ ಬಗೆ ಹರಿಯಿತು. ನನ್ನ ಗಂಡನಿಗೆ ಆಸ್ಟ್ರೇಲಿಯದಲ್ಲಿ ಲಾಂಗ್ ಟರ್ಮ್ ಅಸೈನ್ಮೆಂಟ್ ಸಿಕ್ಕಿದೆ. ಕೆಲಸ ಬಿಟ್ಟು ನಾನೂ ಅವನ ಜೊತೆ ಹೋಗ್ತಾ ಇದ್ದೀನಿ. ಈ ಗಂಡಸರನ್ನ ನಂಬಕ್ಕೆ ಆಗಲ್ಲ ನೋಡು ಅಂತ ಕಣ್ಣು ಮಿಟುಕಿಸಿ ತುಂಟನಗೆಯನ್ನು ಬೀರಿದಳು.

ಕುಂಭ ದ್ರೋಣ ಮಳೆ ಹುಯ್ಯಲೆಂದೇ ಕವಿದ ಮೋಡ ತಟ್ಟನೆ ತನ್ನ ದಿಕ್ಕನ್ನು ಬದಲಾಯಿಸಿ ಬೇರೆಡೆಗೆ ಸರಿದಂತಾಗಿ ನೆನ್ನೆ ಎಫ್.ಎಮ್ ರೈನ್‌ಬೋನಲ್ಲಿ ಕೇಳಿದ “ಬೊಂಬೆಯಾಟವಯ್ಯಾ ಈ ಬ್ರಹ್ಮಾಂಡವೇ ಆ ದೇವನಾಡುವ . . ." ಗೀತೆ ನೆನಪಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+