ಅಕ್ಷರ ಜಾತ್ರೆಯ 'ಮಾಂಸ'ವಿಲ್ಲದ ಮೆನು ನೋಡಿ
ಮಡಿಕೇರಿಯಲ್ಲಿ ಜ.7ರಿಂದ ನಡೆಯಲಿರುವ ಮೂರು ದಿನಗಳ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಹಾಗೂ ಇತರರಿಗೆ ಮಾಂಸಹಾರಿ ಆಹಾರ ನೀಡದಿರಲು ಸಮ್ಮೇಳನದ ಆಹಾರ ಸಮಿತಿ ನಿರ್ಧರಿಸಿದೆ.
ಸಸ್ಯಹಾರಿಗಳಿಗೆ ಮುಜುಗರವಾಗಬಾರದೆಂಬುದು ಇದರ ಉದ್ದೇಶವಾಗಿದೆ. ಮಡಿಕೇರಿ ಸಮ್ಮೇಳನದ ಕೊನೆ ದಿನ ಅತಿಥಿಗಳಿಗೆ ಕೊಡಗಿನ ಮಾಂಸಹಾರಿ ಖಾದ್ಯದ ಸವಿ ಉಣಿಸಬೇಕು ಎಂದು ಸಮ್ಮೇಳನ ಸಮಿತಿ ನಿರ್ಧರಿಸಿತ್ತು. ಆದರೆ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರ ಮಾತ್ರ ಬಳಸಿದ್ದರಿಂದ ಸಂಪ್ರದಾಯ ಮುರಿಯಬಾರದೆಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಲಾಗಿದೆ.
ಹೌದು ಮಾಂಸಹಾರಿಗಳ ನಾಡು ಎಂದೇ ಹೆಸರಾಗಿರುವ ಕೊಡಗಿನಲ್ಲಿ ಎಲ್ಲಾ ಸಮಾರಂಭ, ಸಮ್ಮೇಳನಗಳಲ್ಲಿ ಮಾಂಸದೂಟ ಇದ್ದೇ ಇರುತ್ತೆ. ಇದುವರೆಗೆ ನಡೆದ ಬೇರೆ ಬೇರೆ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಹಂದಿ, ಕೋಳಿ, ಕುರಿ, ಮೀನಿನ ಭಕ್ಷ್ಯ ಇತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ ಸಾಹಿತ್ಯಾಸಕ್ತರಿಗೆ ಅದರ ರುಚಿ ಸಿಗುವುದಿಲ್ಲವಂತೆ.
ಹಾಗಂತ ಸಮ್ಮೇಳನದ ಊಟೋಪಚಾರ ವ್ಯವಸ್ಥೆ ಸಪ್ಪಗಾಗಿದೆ ಎಂದರ್ಥವಲ್ಲ. ಬರೊಬ್ಬರಿ 35 ತರಹದ ಖಾದ್ಯಗಳಿರುತ್ತವೆಯಂತೆ. ಅದರಲ್ಲಿ ಕೊಡಗಿನ 8 ಕ್ಕೂ ಹೆಚ್ಚು ತರಹದ ಖಾದ್ಯಗಳಿವೆ. ಬಿಸಿ ಕಾಫಿ, ಅಕ್ಕಿರೊಟ್ಟಿ-ಚಟ್ನಿ, ಕಡಬು- ಕೂಟುಕರಿ, ಪಲಾವ್- ಪಚ್ಚಡಿ, ಕ್ಯಾರೇಟ್ ಹಲ್ವಾ... ಹೀಗೆ ಬಾಯಲ್ಲಿ ನೀರೂರಿಸುವಂತಹ ಕೊಡಗಿನ ಖಾದ್ಯಗಳನ್ನು ಸವಿಯುವ ಅವಕಾಶ ಈ ಬಾರಿ ಸಾಹಿತ್ಯಾಸಕ್ತರಿಗೆ ಸಿಗಲಿದೆ.[ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್?]
ಸಮ್ಮೇಳನದ ಮೂರು ದಿನದ ಮೆನು ಪಟ್ಟಿ ತಯಾರಿಸಲಾಗಿದ್ದು, ಕೊಡಗಿನ ಸಾಂಪ್ರದಾಯಿಕ ಸಸ್ಯಹಾರಿ ಆಹಾರ ಪದ್ಧತಿಯನ್ನು ಉಣಬಡಿಸಲಾಗುತ್ತಿದೆ. ಜೊತೆಗೆ ಉತ್ತರ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಒಟ್ಟು 35 ತರಹದ ಖಾದ್ಯಗಳ ಪಟ್ಟಿ ಮಾಡಲಾಗಿದ್ದು, ಜನವರಿ 6ರಾತ್ರಿಯಿಂದ 9ರ ರಾತ್ರಿವರೆಗೆ ಊಟೋಪಚಾರ ಇರುತ್ತದೆ.

ಹುಬ್ಬಳ್ಳಿ ಶ್ರೀ ಬೈರ ಕೆಟರರ್ಸ್ ತಂಡ ಊಟೋಪಚಾರ ವ್ಯವಸ್ಥೆ ವಹಿಸಿಕೊಂಡಿದೆ. ಈಗಾಗಲೇ ಗಂಗಾವತಿ ಮತ್ತು ಬಿಜಾಪುರ ಕನ್ನಡ ಸಮ್ಮೇಳನದಲ್ಲಿ ಯಶಸ್ವಿಯಾಗಿ ಆಹಾರ ಸಿದ್ಧಪಡಿಸಿದ್ದ ಈ ತಂಡ ಈಗ ಕೊಡಗಿನಲ್ಲಿ ರಸವತ್ತಾದ ಖಾದ್ಯ ತಯಾರಿಸಲು ಸಿದ್ದಗೊಳ್ಳುತ್ತಿದೆ. ಒಟ್ಟು 600 ಮಂದಿ ಹುಬ್ಬಳ್ಳಿಯಿಂದ ಬರಲಿದ್ದು, ಅವರಲ್ಲಿ 250 ಮಂದಿ ಬಾಣಸಿಗರು. ಅಡುಗೆ ತಯಾರಿ ಮತ್ತು ಅಡುಗೆ ಪಾತ್ರೆಗಳಿಗೆ 20 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ. ಆಹಾರ ಧಾನ್ಯವನ್ನು ಸಮಿತಿಯಿಂದ ಪೂರೈಸಲಾಗುತ್ತಿದೆ
ಸಮ್ಮೇಳನ ವೇದಿಕೆಯಿಂದ ಸುಮಾರು 500 ಮೀಟರ್ ದೂರದಲ್ಲಿ, ಮಡಿಕೇರಿಯ ಜಿಲ್ಲಾ ಪೊಲೀಸ್ ಪೇರೆಡ್ ಮೈದಾನದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಹತ್ತು ಕೌಂಟರ್ ತೆರೆಯಲಾಗುತ್ತಿದ್ದು, ಬಫೆ ಶೈಲಿಯಲ್ಲಿ ಬಡಿಸಲಾಗುತ್ತದೆ. ಇದಕ್ಕಾಗಿ ಸುಮಾರು 300 ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಮಾಂಸಹಾರ ಇಲ್ಲದಿದ್ದರೂ ಭರ್ಜರಿ ಭೋಜನ ಉಣಬಡಿಸಲು ಆಹಾರ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸಮ್ಮೇಳನದ ಮೆನು: ಬಿಸಿ ಕಾಫಿ, ಅಕ್ಕಿರೊಟ್ಟಿ-ಚಟ್ನಿ, ಕಡಬು- ಕೂಟುಕರಿ, ಪಲಾವ್- ಪಚ್ಚಡಿ, ಕ್ಯಾರೇಟ್ ಹಲ್ವಾ, ಅನ್ನ, ಸಾಂಬಾರ್, ರಸಂ, ಬಿಸಿ ಬೇಳೆ ಬಾತ್, ಖಾರಾ ಬೂಂದಿ, ಶ್ಯಾವಿಗೆ, ಚಪಾತಿ, ಕುರ್ಮ, ಗೀ ರೈಸ್, ಜೋಳದ ರೊಟ್ಟಿ, ಎಣ್ಣೆಗಾಯಿ, ಅವಲಕ್ಕಿ ಒಗ್ಗರಣೆ, ಪೂರಿ, ಸಾಗು ಪ್ರಮುಖ ಖಾದ್ಯಗಳು. ಕೇಸರಿ ಬಾತ್, ಕ್ಯಾರೇಟ್ ಹಲ್ವಾ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ಜಿಲೇಬಿ ಸಿಹಿ ಖಾದ್ಯಗಳಾಗಿವೆ. ಉಳಿದಂತೆ ಮಜ್ಜಿಗೆ, ಉಪ್ಪಿನಕಾಯಿ, ಮೆಣಸು, ಪಲ್ಯ, ಕೆಂಪು ಚಟ್ನಿ ಟೇಸ್ಟ್ಗೆ ತಕ್ಕಂತೆ ಉಣಬಡಿಸಲಾಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications