ಧೂಳಿನಂತೆ ಬಿಟ್ಟೂ ಬಿಡದೆ ಮೇಲೆದ್ದು ಹೆಣ್ಣಾಗುತ್ತೇನೆ

ಇತಿಹಾಸದ ಹಾಳೆಗಳಿಂದ ನೀ ನನ್ನ ಕಿತ್ತೊಗೆದಿರಬಹುದು
ಕುರೂಪಗೊಂಡ ನಿನ್ನ ಕಹಿ ಸುಳ್ಳುಗಳು ಸಾಕ್ಷಿ ಹೇಳಬಹುದು
ಕಲ್ಮಶದ ಆಳದಲ್ಲಿ ನೀ ನನ್ನ ಹುದುಗಿಡಿಸಿಡಬಹುದು
ಹರಿಯದಂತೆ ಕೊಡದ ಕೈಸೆರೆಯಾಗಿಸಬಹುದು
ಆದರೂ ನಾನು ಧೂಳಿನಂತೆ ಮೇಲೇಳುವೆನು . . . .
ನನ್ನ ಮರುಹುಟ್ಟಿಗೆ ನೀ ನೋಯುವೆ
ವಿಷಣ್ಣನಾಗಿ ಮೋರೆ ಗಂಟಿಕ್ಕುವೆ
ಬಿಡದೆ ನಾ ನಿನ್ನೆಡೆಗೇ ನಡೆವೆ
ನನ್ನೊಳಗಿನ ಬತ್ತದ ಸೆಲೆಯ ಮೊಗೆವೆ
ಮತ್ತೆ ನಾನು ಧೂಳಿನಂತೆ ಮೇಲೇಳುವೆನು. . . . .
ನೀ ಬಯಸುವೆ ನಾ ಸೋತು ಸೊರಗುವುದನ್ನು
ಬಾಗಿದ ತಲೆ ನಿರ್ವಿಣ್ಣ ನೋಟವನ್ನು
ಮೇಲೇರದ ಭುಜ ಕಣ್ಣ್ರೆಪ್ಪೆಗಳನ್ನು
ನೋಡಲಾರದೆ ಹೋಗುವೆ ಆತ್ಮನೊಡನೆ ನನ್ನ ಅನುಸಂಧಾನವನ್ನು
ಅಲ್ಲಿ ನಾನು ಧೂಳಿನಂತೆ ಮೇಲೇಳುವೆನು. . . .
ಈ ಸ್ವಾಭಿಮಾನಕ್ಕೆ ನಿನ್ನ ಧಿಕ್ಕಾರವಿದ್ದೀತು
ನನ್ನಂತಃಸತ್ತ್ವಕೆ ನಿನ್ನ ಕುಹಕವಿದ್ದೀತು
ನನ್ನ ಅಸ್ತ್ತಿತ್ವಕ್ಕೆ ನಿನ್ನ ಕೊಡಲಿ ಏಟಿದ್ದೀತು
ಬಿಡದೆ ನಿನ್ನ ಗರ್ಭದಲ್ಲೇ ನನ್ನ ಚಿಗುರೆದ್ದೀತು
ತಣ್ಣಗೆ ನಾನು ಧೂಳಿನಂತೆ ಮೇಲೇಳುವೆನು. . . . .
ಚರಿತ್ರೆಯ ದುಮ್ಮಾನವನು ಮೀಂಟುವೆನು
ಭರವಸೆಯ ನಾಳೆಗೆ ಹೆಬ್ಬಾಗಿಲಾಗುವೆನು
ನೋವಿನಲ್ಲೂ ಬೀಜ ಮೊಳೆತು ಬೆಳಕಿನ ಭ್ರೂಣವಾಗುವೆನು
ಕಡಲುಬ್ಬರವನು ಲೆಕ್ಕಿಸದೆ ಹುಟ್ಟಿ ಹಸಿರಾಗುವೆನು
ಬೆಚ್ಚಗೆ ನಾನು ಧೂಳಿನಂತೆ ಮೇಲೇಳುವೆನು. . . . .
ನಾನು ಮೇಲೇಳುತ್ತೇನೆ
ಕನಸುಗಳ ಹೆಣೆಯುತ್ತೇನೆ
ಹೆಣ್ಣು ಭ್ರೂಣವಾಗುತ್ತೇನೆ
ಧೂಳಿನಂತೆ ಬಿಟ್ಟೂ ಬಿಡದೆ ಮೇಲೆದ್ದು ಹೆಣ್ಣಾಗುತ್ತೇನೆ
ಧೂಳಿನಂತೆ ಬಿಟ್ಟೂ ಬಿಡದೆ ಮೇಲೆದ್ದು ಹೆಣ್ಣಾಗುತ್ತೇನೆ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications