ಮದುವೆಯ ಮಾಧುರ್ಯ ಮತ್ತು ಕೌಟುಂಬಿಕ ಬಂಧನ

* ಪ್ರಭುಪ್ರಸಾದ್ ನಡುತೋಟ, ಶೃಂಗೇರಿ
ಆತನ ಮೌನವಾದ ಕಣ್ಣೋಟದ ಹಿಮ್ಮೇಳದಲಿ ಸಾವಿರ ಮಾತುಗಳ ಮೆರವಣಿಗೆ
ಆಕೆಯ ಕಣ್ಣಂಚಿನಲಿ ಜಾರುತಿರುವ ಹನಿಯಲಿ ನೋವು-ನಲಿವಿನ ದೀವಳಿಗೆ
ಹುಡುಕಹೋದರೆ ಪ್ರತಿ ಮಾತು-ನೋಟಗಳ ಹಿಂದಡಗಿರುವ ಅರ್ಥ
ತೆಪ್ಪದಲಿ ವಿಶಾಲವಾದ ಸಾಗರವ ದಾಟಹೋದಂತೆ ವ್ಯರ್ಥ
"ನಾತಿಚರಾಮಿ" ವಚನದೊಡನೆ ಪ್ರಕೃತಿಯ ಕೈಪಿಡಿವ ಪುರುಷ
ನಡುವೆ ಮಂಗಳಘೋಷ, ಬಂಧುಮಿತ್ರರ ಸಂತೋಷ
"ಸಮ್ರಾಜ್ಞೀ ಭವ" ಹಾರೈಕೆಯೊಡನೆ ನವಜೀವನಕೆ ಕಾಲಿರಿಸಿಹಳು ಯುವತಿ
ಅವಳಾಗಲಿ ಪತಿಯ ಒಡತಿ, ನಲುಮೆಯ ಸಂಗಾತಿ, ಜಗಮೆಚ್ಚುವ ಗರತಿ
ಸರಸ ಜನನ, ವಿರಸ ಮರಣ, ಸಮರಸವೇ ಜೀವನವೆಂಬ ಕವಿವಾಣಿಯನು
ಅರಿತು ನೆಡೆದಾಗ ಸಲೀಸಾಗಿ ದಾಟಿಬಿಡಬಹುದು ಸಂಸಾರದ ಸಂತೆಯನು
ನಗುತ, ನಗಿಸುತ, ಅವುಗಳಿಂದಲೇ ನೋವ ಮರೆಸುತ
ಬಾಳುವುದರಲ್ಲಿಯೇ ಅಡಗಿದೆ ಜೀವನನದಿಯ ಮೂಲಸ್ರೋತ
ಒಬ್ಬರನೊಬ್ಬರು ಅರಿತು ನೆಡೆದಾಗ ಮದುವೆಯು ಬಂಧನವಲ್ಲ
ಪ್ರೀತಿಯಿಂದ ಜೊತೆಜೊತೆಯಲಿ ಸಾಗಿದಾಗ ಬಾಳಹಾದಿಯೆಂದೂ ರೂಕ್ಷವಲ್ಲ
ದೈಹಿಕದಿಂದ ದೈವಿಕದೆಡೆಗಿನ ಭಾವಲೀಲೆಯ ದಿವ್ಯಪರಿವರ್ತನೆ
ಆದಾಗ ನೆಚ್ಚಿ ಪರಮಾನಂದದಲಿರಿರೆಂದು ಹರಸುವನು ಭಗವಂತನೇ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications