155736electionಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg155736electionಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!/nri/article/2009/0114-akka-splits-dissidents-announce-new-umbrella.htmlಬೆಂಗಳೂರು, ಜ. 14 : ಕಳೆದ ಕೆಲವು ತಿಂಗಳಿನಿಂದ ಆಂತರಿಕ ಬಿಕ್ಕಟ್ಟು ಮತ್ತು ತೀವ್ರತಮ ಭಿನ್ನಾಭಿಪ್ರಾಯಗಳ ಕುಲುಮೆಯಲ್ಲಿ ಬೇಯುತ್ತಿದ್ದ ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) ಇಂದು ಒಡೆದು ಎರಡು ಹೋಳಾಗಿದೆ. ಸಂಸ್ಥೆಯು ಜನ್ಮತಾಳಿದಾಗಿನಿಂದ ಅಕ್ಕ ಚಟುವಟಿಕೆಗಳೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದ ಹಲವರು ಹಿರಿಯ ಕಾರ್ಯಕರ್ತರು ತಮ್ಮ ಸದ್ಯತ್ವಕ್ಕೆ ರಾಜೀನಾಮೆ ನೀಡುವುದರೊಂದಿಗೆ ಸಂಸ್ಥೆಯಲ್ಲಿದ್ದ ತಳಮಳ ಭುಗಿಲೆದ್ದಿದೆ.ಅಮೆರಿಕಾದ 34064http://kannada.oneindia.com/img/2009/01/14-suresh-krishnamurthy1.jpg155736electionಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ/nri/article/2009/0119-akka-president-ramesh-gowda-refutes-charges.htmlಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.ಮಾನ್ಯರೆ,ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:ಕೆಲವೊಂದು 34141http://kannada.oneindia.com/img/2009/01/19-ramesh-gowda2.jpg155736electionರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ/nri/article/2009/0122-ravi-dankanikote-new-president-of-akka.htmlಬೆಲ್ ವ್ಯೂ,(ವಾಷಿಂಗ್ಟನ್ ಡಿಸಿ),ಜ. 22 : ಕಾವೇರಿ ಕನ್ನಡ ಸಂಘದ ಸದಸ್ಯ ಮತ್ತು ಅಕ್ಕ ಆಡಳಿತ ಮಂಡಳಿಯ ನಿರ್ದೇಶಕ ರವಿ ಡಂಕಣಿಕೋಟೆ ಅವರು ಅಕ್ಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬರಾಕ್ ಒಬಾಮ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಗೊಂಡ ಮಂಗಳವಾರದ ಮುಹೂರ್ತದಲ್ಲೇ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಗುಂಪಿಗೂ ಹೊಸ ಅಧ್ಯಕ್ಷರ ನೇಮಕವಾಗಿರುವುದು ಕಾಕತಾಳೀಯವಾಗಿದೆ.ಕಾರ್ಯಕಾರಿ 34222http://kannada.oneindia.com/img/2009/01/22-ravi-dankanikote1e.jpg155736electionರಮೇಶ್ ಗೌಡರಿಗೆ ಸುರೇಶ್ ರಾಮಚಂದ್ರ ಪತ್ರ/nri/article/2009/0124-suresh-ramachandra-rejoinder-to-ramesh-gowda.htmlಪ್ರಿಯ ರಮೇಶ್,ತಮ್ಮ ಪತ್ರ ಓದಿದೆ. ನನ್ನ ಹೆಸರು ನೀವು ಪ್ರಸ್ತಾಪಿಸಿರುವುದರಿಂದ ಈ ಸ್ವಷ್ಟೀಕರಣ ನೀಡಬಯಸುತ್ತೇನೆ. ನಾನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಸ್ವಯ೦ ಘೋಷಿತ ಅಭ್ಯರ್ಥಿಯಾಗಿರಲಿಲ್ಲ. ಶಿಕಾಗೊ ಸಮ್ಮೇಳನದ ಸಮಯದಲ್ಲಿ ಕೆಲವು ನಿರ್ದೇಶಕರು ನಾನು ಸ್ವರ್ಧಿಸುತ್ತೇನೆಯೆ? ಎ೦ದು ಕೇಳಿದಾಗ, ನನ್ನ ನಿರ್ದೇಶಕ ಅವಧಿ ಸದ್ಯದಲ್ಲೆ ಮುಗಿಯುವುದರಿ೦ದ ಈ ಬಗ್ಗೆ ಇನ್ನು ಸ್ಪಷ್ಟವಾಗಿ ಚಿ೦ತಿಸಿಲ್ಲ ಎ೦ದು ಹೇಳಿದ್ದೆ. ನ೦ತರ ನಾನು 34271http://kannada.oneindia.com/img/2009/01/24-suresh1e.jpg33279poetryಮತ್ತೆ ಮರೆಯಾಗುತ್ತೇನೆಂದು/literature/poem/2008/1223-daily-new-and-old-mahesh-hegade.htmlದಾಟಿ ಹೋಗುತ್ತೇನೆಅಂಗಳದ ಮುಂದೆಹೆಜ್ಜೆಗಳ ಜೊತೆಯಾಗಿನೆನಪುಗಳ ನಡಿಗೆನೆರಳುಗಳ ಹಂಗಿಲ್ಲ ಬೆಳಕಿನ್ನೂ ಹುಟ್ಟಿರದೆಕಡುಗಪ್ಪು ಹಾದಿಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆಸುಮ್ಮನಿರಲೇಳಿನಾನೂ ಮೌನಿಯಾಗುತ್ತೇನೆ.ಮಾತುಗಳ ಮಳೆಯಿಲ್ಲ ಮತ್ತೆ ಹುಟ್ಟುವ ಸೂರ್ಯಕಿಟಕಿಯೊಳಗಿಂದ ತಲುಪಿಮೈಮುರಿದು ಎಚ್ಚೆತ್ತುನೀ ಕಣ್ತೆರೆಯುವಷ್ಟರಲ್ಲಿನಾ ಕಾಲಿಯಾಗುತ್ತೇನೆಕಣ್ಣುಗಳ ಮಿಲನವಿಲ್ಲ ಕತ್ತಲು ಬೆಳಕೆರಡೂಬರುವ ಹೋಗುವನಿತ್ಯದ ಹೊಂದಾಣಿಕೆಗೆಮನಸೋತುಮಾತು ಕೊಟ್ಟಿದ್ದೇನೆನೀವು ಸಂಧಿಸುವ ಸಮಯಕ್ಕೆಸರಿಯಾಗಿ ಹಾಜರಿರುತ್ತೇನೆಂದು ಮತ್ತೆ ಮರೆಯಾಗುತ್ತೇನೆಂದು..ಚಿತ್ರ ಕೃಪೆ ; ನೆರಳು ಬೆಳಕು33660http://kannada.oneindia.com/img/2008/12/23-sun-shadow1.jpg33279poetryಬಾಗಿಲನು ತೆರೆದು ಸೇವೆಯನು ಕೊಡೊ/literature/articles/2008/1223-poetry-and-criticism-not-our-cup-of-tea.htmlಕನ್ನಡದಲ್ಲಿ ಕವನಗಳನ್ನು ಬರೆಯುವವರು ಹೆಚ್ಚು. ಓದುವವರು ಕಡಿಮೆ. ಅಲ್ಪಾಹಾರದ ನಂತರ ಏಕಾಗ್ರತೆಯಿಂದ ಕವನ ಓದಿ ಅದರ ರಸ ಹೀರಿಕೊಳ್ಳುವವರ ಸಂಖ್ಯೆ ಬಹಳೇ ಕಡಿಮೆ ಎನಬಹುದು. ಆದರೂ ಕೂಡ ಹಠಬಿಡದ ಆಂಟುಲೆಯಂತೆ ಕನ್ನಡದ ಮಾಧ್ಯಮಗಳು ಕಾಯಾ ವಾಚಾ ಮನಸಾ ಕವನಗಳನ್ನು ಅಚ್ಚು ಮಾಡುತ್ತಲೇ ಬರುತ್ತಿರುವುದು ಮಾನ್ಯ ಕವನ ಕರ್ತಾರರಿಗೆ ಗೊತ್ತಿರದ ಸಂಗತಿಯೇನಲ್ಲ. ಕವನದ ಗಂಧಗಾಳಿ ಗೊತ್ತಿಲ್ಲದಿದ್ದರೂ ಕವನಗಳನ್ನು ಪ್ರಕಟಿಸುತ್ತಲೇ 33667http://kannada.oneindia.com/img/2008/12/23-kanakadasa1.jpg33279poetryಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg33279poetryಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg33279poetryನಮ್ಮ ನಾಡು/literature/poem/2009/0826-my-land-my-people-lakshmi-rangaswamy.htmlಪಚ್ಚೆಯ ಹಸುರಿನ ಸೀರೆಯುಟ್ಟುನಾನಾ ನದಿಗಳಿಗೆ ಜಾಗಕೊಟ್ಟುಜಲಪಾತಗಳ ಧುಮುಕಬಿಟ್ಟುದಿನಮಣಿ ಇಡುವನು ಮೂಡಣದಿ ಬೊಟ್ಟುಸುತ್ತಲೂ ಹರಿದ್ವರ್ಣದ ಕಾಡುಗಳುಪಡೆದಿದೆ ಆಶ್ರಯವ ನಾನಾ ಪ್ರಾಣಿಗಳುತೇಗ ಶ್ರೀಗಂಧ ಮರಗಳ ಸಾಲುಮಾಡಿವೆ ಕನ್ನಡತಿಯ ಎಲ್ಲದರಲು ಮೇಲುಸಾಂಸ್ಕೃತಿಕ ಕಲೆಗಳ ತವರೂರುಇಲ್ಲಿ ಕವಿಗಳದೆ ಕಾರುಬಾರುತಾಯಿ ಮಡಿಲ ತುಂಬಿದೆ ಏಳು ಜ್ಞಾನಪೀಠಶಾಸ್ತ್ರೀಯ ಸ್ಥಾನಮಾನದ ಗೌರವ ಪಟ್ಟವಿಜಯ ಕನಕ ಪುರಂದರದಾಸರುಸಾವಿರ ದೀಪಗಳರಮನೆಯ ಅರಸರುಗಣ್ಯಾತಿಗಣ್ಯ ವ್ಯಕ್ತಿಗಳನೇಕರುಕರ್ನಾಟಕವೇ ನಮ್ಮೆಲ್ಲರ ತವರುಉಳಿಸಿಬೆಳೆಸುವಾ ಬನ್ನಿ ಕರುನಾಡನುಬನ್ನಿ ಹಾಡುವಾ 38834http://kannada.oneindia.com/img/2009/08/26-lakshmi-rangaswamy1.jpg233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpgnews"> ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ | Elections | DV Gundappa | DVG | Kannada poems - ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ - Kannada Oneindia

ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ

Poetic rendering on elections by DVG
ಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.

* ಎಚ್. ಆನಂದರಾಮ ಶಾಸ್ತ್ರೀ

ಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. ದಿನೇದಿನೇ ಕೊಳಕು ಹೆಚ್ಚಾಗುತ್ತಿದೆ ಅಷ್ಟೆ. ಅಂದು ಡಿವಿಜಿ ಬರೆದ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆಂಬುದನ್ನು ಕೆಲ ಉದಾಹರಣೆಗಳ ಮೂಲಕ ನೋಡೋಣ.

ಚುನಾವಣೆಯೆಂದರೆ ಇಂದು ಜಾತ್ರೆ-ಗದ್ದಲ-ಪರಿಷೆ ತಾನೆ? 'ವರಣ ಪ್ರಸ್ತ' (ಅರ್ಥಾತ್, '(ಜನಪ್ರತಿನಿಧಿಗಳನ್ನು) ಆರಿಸುವ ಶುಭ ಸಮಾರಂಭ') ಎಂಬ ಪದ್ಯದಲ್ಲಿ ಡಿವಿಜಿ ಹೇಳುತ್ತಾರೆ:

ಆ ಏನ್ಹೇಳಲಿ! ನಾಡಿಗೆ ನಾಡೇ
ಜಾತ್ರೆ ಗೊಂದ್ಲವಾಯ್ತು,
ಮಗುವೇ, ಜಾತ್ರೆ ಗೊಂದ್ಲವಾಯ್ತು.
ಆವೂರೀವೂರ್‍ಯಾವೂರ್ ನೋಡಲಿ
ಪ್ರಸ್ತದ ಹುಯಿಲಾಯ್ತು,
ಮಗುವೇ, ಪ್ರಸ್ತದ ಹುಯಿಲಾಯ್ತು.

ಶಿಕ್ಷಣವಂತರು ಲಕ್ಷಣವತಿಯರು
ಲಕ್ಷಮಂದಿ ಪರಿಷೇ,
ಮಗುವೇ, ಲಕ್ಷಾಂತರ ಪರಿಷೇ.
ಅಕ್ಷರವರಿಯದ ಕುಕ್ಷಿಯ ಮರೆಯದ
ಅಕ್ಷಯಜನ ಪರಿಷೇ,
ಮಗುವೇ, ಸಾಕ್ಷಾತ್ ಜನ ಪರಿಷೇ.

ಪುಢಾರಿಗಳ ಪೊಳ್ಳು ಆಶ್ವಾಸನೆ ಮತ್ತು ಕಪಟ ನಾಟಕಗಳು ಇಂದು ಜನಜನಿತವಷ್ಟೆ. ಡಿವಿಜಿ ಅವರ ಈ ಪದ್ಯಭಾಗ ನೋಡಿ:

ದೇಶೋದ್ಧಾರಕ ಮೋಸನಿವಾರಕ
ವೇಷದ ನಾಟಕವೋ,
ಮಗುವೇ, ವೇಷದ ನಾಟಕವೋ.
ಆಶಾದಾಯಕ ಘೋಷಣಕಾರಕ
ಹಾಸ್ಯವಿಕಾರಕವೋ,
ಮಗುವೇ, ಹಾಸ್ಯವಿಕಾರಕವೋ.

ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಚುನಾವಣಾ ಪ್ರಚಾರದ ಬಗೆಯನ್ನು 'ಜನಜನವರಿಗೆ' ಎಂಬ ಪದ್ಯದಲ್ಲಿ ಡಿವಿಜಿ ಈ ರೀತಿ ಬಣ್ಣಿಸುತ್ತಾರೆ:

ದೇಶಸ್ವತಂತ್ರಕ್ಕೆ ಮೀಶೆಬಿಟ್ಟವ ನಾನು;
ಕೊಡಿರೆನಗೆ ಮತವ,
ಹಿಡಿಯಿರಿದೊ ಹಿತವ;
ಇಂತೆಂದು ಬಂದನಾ ಘನ ಕಾಂಗ್ರೆಸಿಗನು.

ರಷ್ಯ ಕಲ್ಪಕವೃಕ್ಷ ಕೃಷಿಯ ಬಲ್ಲವ ನಾನು;
ಇತ್ತ ತಾ ಮತವ,
ಎತ್ತಿಕೋ ಹಿತವ;
ಇಂತೆಂದು ಬಂದನಾ ಕಮ್ಯುನಿಸ್ಟವನು.

'ಅಂಗೈಯ ವೈಕುಂಠ' ಎಂಬುದು ಇನ್ನೊಂದು ಪದ್ಯ. ಈ ಪದ್ಯ ಒಂದು ಕಥೆಯಾಗಿ ಸಾಗುತ್ತದೆ. ಪೊಳ್ಳು ಆಶ್ವಾಸನೆಗಳನ್ನು ನೀಡಿ ಆಯ್ಕೆಯಾದ ಅಭ್ಯರ್ಥಿಯು 'ಹೆಮ್ಮಂತ್ರಿ'ಯಾಗಿ ಮೆರೆಯುತ್ತಾನೆ, ಆದರೆ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ. 'ರೋಸಿದ್ದ ಜನವೆಲ್ಲ ಕಡೆಗೂರ ಚೌಕದಲಿ' ನೆರೆದು, ಔತಣದ ನೆಪದಲ್ಲಿ ಆ ಮಂತ್ರಿಯನ್ನು ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಮಂತ್ರಿ ಉತ್ತರಿಸುತ್ತಾನೆ:

ವೇಷ ತೊಟ್ಟೆನು ನಿಮ್ಮ ಮನಮೆಚ್ಚಿಗಾಗಿ,
ಭಾಷೆ ಕೊಟ್ಟೆನು ನಿಮ್ಮ ವರಪತ್ರಕಾಗಿ.
ಈ ಸಾರಿ ನೀಮೆನ್ನನಾರಿಸಿರಿ, ನಾನು
ಮೂಸಲದ ಋಣಬಡ್ಡಿಯೆಲ್ಲ ತೀರಿಪೆನು.

ಮುಗ್ಧ ಮತದಾರರು ಅವನನ್ನು ಮತ್ತೆ ನಂಬುತ್ತಾರೆ!
'ದೂರ್‍ವುದೇಕವನ ನಾಮ್? ಅವನ ಮನಸೊಳಿತು;
ಪೂರ್ವಕರ್ಮವು ನಮ್ಮದದರ ಫಲವಿನಿತು.'

ಹೀಗೆಂದುಕೊಂಡು ಜನರು ಮತ್ತೆ ಮುಂದಿನ ಚುನಾವಣೆಯಲ್ಲೂ ಆತನನ್ನೇ ಆಯ್ಕೆಮಾಡುತ್ತಾರೆ! ಆತನದೋ, ಮತ್ತೆ ಅದೇ ಚಾಳಿ! ಜನರು ಪಾಠ ಕಲಿಯಲಿಲ್ಲವೆಂಬ ಬೇಸರವನ್ನು ಕವಿ ಈ ರೀತಿ ವ್ಯಕ್ತಪಡಿಸುತ್ತಾರೆ:

ಕಲಿಯಿತೇಂ ಜನತೆಯಂಗೈಯ ವೈಕುಂಠದಿಂ
ರಾಜ್ಯಪಾಠವನು?
ತಿಳಿಯಿತೇಂ ಕಂಡ ಮುಂಗೈಯ ಕೈಲಾಸದಿಂ
ಭೋಜ್ಯದೂಟವನು?
ಮರೆವು ಕವಿಯಿತು ಜನವ ನಿಶಿನಿದ್ದೆಯೊಡನೆ;
ಕರಗಿತಾ ಕಹಿನೆನಪು ಬಿಸಿಮುದ್ದೆಯೊಡನೆ.

ಡಿವಿಜಿ ಅವರ ಈ ಮಾತು ಇಂದಿಗೂ ಪ್ರಸ್ತುತವಲ್ಲವೆ? 'ಪಬ್ಲಿಕ್ ಮೆಮೊರಿ ಈಸ್ ಷಾರ್ಟ್' ತಾನೆ? ಅದರ ದುರುಪಯೋಗವನ್ನೇ ಅಲ್ಲವೆ ನಮ್ಮ ಪುಢಾರಿಗಳು ಮಾಡಿಕೊಳ್ಳುತ್ತಿರುವುದು? ಇಂಥ ಪುಢಾರಿಯನ್ನು 'ಜನನಾಯಕ' ಎಂಬ ಪದ್ಯದಲ್ಲಿ ಡಿವಿಜಿ ಅವರು ಸಖತ್ತಾಗಿ ಬೆಂಡೆತ್ತಿದ್ದಾರೆ. ಆ ಪದ್ಯ ಈ ರೀತಿ ಆರಂಭವಾಗುತ್ತದೆ:

ಎಲ್ಲಿಂದ ಬಂದೆಯೋ ಜನನಾಯಕಾ-ಎಂಥ
ಒಳ್ಳೆಯದ ತಂದೆಯೋ ಜನನಾಯಕ.
ಬೆಲ್ಲವನು ಕಿವಿಗೀವ ಜನನಾಯಕಾ ನೀನು
ಸುಳ್ಳಾಡದಿರು ಸಾಕು-ಜನನಾಯಕಾ.

ಡಿವಿಜಿ ಅವರ ಕಲ್ಪನೆಯು ಎಂಥ ಅದ್ಭುತವಾದದ್ದೆಂದರೆ, ಸುಳ್ಳಾಡುವ ಜನನಾಯಕನ ಬಾಯಲ್ಲಿ ಸಿಕ್ಕಿಬಿದ್ದ ಸರಸ್ವತಿ ದೇವಿಯು ಬಿಡುಗಡೆಗಾಗಿ ಬ್ರಹ್ಮನ ಮೊರೆಹೊಗುತ್ತಾಳೆ! 'ಸರಸ್ವತಿಯ ಪ್ರಾರ್ಥನೆ' ಪದ್ಯದಲ್ಲಿ ಆ ದೇವಿಯು ಬ್ರಹ್ಮನನ್ನು ಈ ರೀತಿ ಪ್ರಾರ್ಥಿಸುತ್ತಾಳೆ:

ಬಿಡಿಸೆನ್ನ ರಾಜ್ಯಕರ ಹಿಡಿತದಿಂ ವಿಧಿಯೇ
ತೊದಲು ತುಟಿಗೆನ್ನ ಬಲಿಕೊಡಬೇಡ ಪತಿಯೇ.

ಮಾತು ನೂಲನು ಜೇಡ ಬಲೆಯಾಗಿ ನೆಯ್ದು
ವೋಟು ನೊಣಗಳ ಪಿಡಿವ ಹೂಟವನು ಹೂಡಿ
ಊಟಕ್ಕೆ ಬಾಯ್ದೆರೆವ ಮಾಟಗಾರರಿಗೆ ನಾಂ
ಚೇಟಿಯಾಗುವೆನೆ? ಈ ಕೋಟಲೆಯ ಹರಿಸೈ.

ಕವಿಯ ಕಲ್ಪನೆಯಿಲ್ಲಿ ಅನ್ಯಾದೃಶವಲ್ಲವೆ? ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಅಂದು ಬರೆದ ಪದ್ಯಗಳು ಇಂದಿಗೂ ಪ್ರಸ್ತುತ. 'ನಮ್ಮ ಫಾಲಲಿಪಿಯೋ ನೀನು-ಜನನಾಯಕಾ', ಎನ್ನುವ ಮೂಲಕ ಡಿ ವಿ ಜಿ ಅವರು, 'ಇಂಥ ಜನನಾಯಕನನ್ನು ಹೊಂದಿರುವುದು ನಮ್ಮ ಹಣೆಬರಹ', ಎಂಬ ತೀರ್ಮಾನಕ್ಕೆ ಬರುತ್ತಾರೆ! ಡಿವಿಜಿ ಅವರ ಈ ತೀರ್ಮಾನವನ್ನು ಸುಳ್ಳಾಗಿಸುವ, ಅಂದರೆ, ದುಷ್ಟ-ಭ್ರಷ್ಟ ಜನನಾಯಕರಿಗೆ ಗತಿ ಕಾಣಿಸುವ ಅವಕಾಶ ಭಾರತಾದ್ಯಂತ ನಮಗೀಗ ಒದಗಿಬಂದಿದೆ. ಮತಪತ್ರಗಳ ಮೂಲಕ ನಾವು ಆ ಕೆಲಸವನ್ನು ಮಾಡಬೇಕಾಗಿದೆ.

ಪೂರಕ ಓದಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+