ಬೇಂದ್ರೆ ಮಾಸ್ತರರ ಕುರುಡು ಕಾಂಚಾಣ
ರಚನೆ:
ಅಂಬಿಕಾತನಯದತ್ತ(ದ.ರಾ.ಬೇಂದ್ರೆ)
ಕವನ
ಸಂಕಲನ:ನಾದಲೀಲೆ
ಕುರುಡು
ಕಾಂಚಾಣ
ಕುಣಿಯುತಲಿತ್ತು
ಕಾಲಿಗೆ
ಬಿದ್ದವರ
ತುಳಿಯುತಲಿತ್ತೊs
ಕುರುಡು
ಕಾಂಚಾಣ
||
ಪಲ್ಲವಿ
||
ಬಾಣಂತಿಯೆಂಬಾ
ಸಾ-
ಬಾಣದ
ಬಿಳುಪಿನಾ
ಕಾಣದ
ಕಿರುಗೆಜ್ಜೆ
ಕಾಲಾಗೆ
ಇತ್ತೋ
ಸಣ್ಣ
ಕಂದಮ್ಮಗಳ
ಕಣ್ಣೀನ
ಕವಡಿಯ
ತಣ್ಣನ್ನ
ಜೋಮಾಲೆ
ಕೊರಳೊಳಗಿತ್ತೋ;
ಬಡವರ
ಒಲವಿನ
ಬಡಬಾsನಲದಲ್ಲಿ
ಸುಡು
ಸುಡು
ಪಂಜವು
ಕೈಯೊಳಗಿತ್ತೊ;
ಕಂಬನಿ
ಕುಡಿಯುವ
ಹುಂಬ
ಬಾಯಿಲೆ
ಮೈ-
ದುಂಬಿದಂತಧೊ
ಉಧೊ
ಎನ್ನುತ್ತಲಿತ್ತೊ;
ಕೂಲಿ
ಕಂಬಳಿಯವರ
ಪಾಲಿನ
ಮೈದೊಗಲ
ಧೂಳಿಯ
ಭಂಡಾರ
ಹಣೆಯೊಳಗಿತ್ತೊ;
ಗುಡಿಯೊಳಗೆ
ಗಣಣ
ಮಾ-
ಹಡಿಯೊಳಗೆ
ತನನ
ಅಂ-
ಗಡಿಯೊಳಗ
ಝಣಣ
ನುಡಿಗೊಡುತ್ತಿತ್ತೋ;
ಹ್ಯಾಂಗಾರೆ
ಕುಣಿಕುಣಿದು
ಮಂಗಾಟ
ನಡೆದಾಗ
ಅಂಗಾತ
ಬಿತ್ತೋ,
ಹೆಗಲಿ
ಎತ್ತೋ.
ಸೂಚನೆ: ದರಾ ಬೇಂದ್ರೆ ಕಾವ್ಯಕೂಟ ಜ.31 ರಂದು ನ.ರಾ. ಕಾಲೋನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಸಂಜೆ 5:30ಕ್ಕೆ ಗೀತ ಗಾಯನ, ಕೃತಿ ಬಿಡುಗಡೆ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾರನಹಳ್ಳಿ ರಾಮಸ್ವಾಮಿ, ಮಲ್ಲೇಪುರಂ ಜಿ ವೆಂಕಟೇಶ್ ಹಾಜರಿರುತ್ತಾರೆ. ನಾದಲೀಲೆಯ ಭಾವಲೀಲೆ ಪುಸ್ತಕ ಬಿಡುಗಡೆ, ಸಾಹಿತಿ ಎಂ. ಪುಟ್ಟತಾಯಮ್ಮ ಅವರಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ.
ಬನಶಂಕರಿ 2 ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಇದೇ ದಿನ ಸಂಜೆ 5.30 ಕ್ಕೆ ಕಾವ್ಯವಾಚನ ಇರುತ್ತದೆ. ಹಿರಿಯ ಕವಿ ಎಚ್. ಎಸ್ .ವೆಂಕಟೇಶ್ ಮುರ್ತಿ ಪಾಲ್ಗೊಳ್ಳಲಿದ್ದಾರೆ.