ನಾವಿಕ
(ಮೈಸೂರಿನ ಎಸ್.ಜಿ.ರಘುರಾಂ, ಸುಗಮ ಸಂಗೀತಾಸಕ್ತರಿಗೆ ಮತ್ತು ಸಾಹಿತ್ಯ ಪ್ರಿಯರಿಗೆ ಚೆನ್ನಾಗಿ ಗೊತ್ತು. ಅವರು ಇತ್ತೀಚೆಗಷ್ಟೇ ನಿಧನರಾದರು. ಅವರ ಸಹಧರ್ಮಿಣಿ ಎಚ್.ಆರ್. ಲೀಲಾವತಿ, ನೆನಪುಗಳ ಕೆದಕಿದ್ದಾರೆ... ಅವರೊಂದಿಗಿದ್ದ ಕ್ಷಣಗಳನ್ನು ಇಲ್ಲಿ ನೆನೆದಿದ್ದಾರೆ..)
ಬೊಗಸೆಯಲಿ ಮಲ್ಲಿಗೆಯ ಹೂ ತುಂಬಿ ತಂದವನೆ,
ಮುಂಜಾವದಲಿ ನಾವು ಗಂಗೋತ್ರಿ ಹಸಿರಿನಲಿ
ಕೈಯ್ಯಲ್ಲಿ ಕೈ ಇಟ್ಟು ಹೆಜ್ಜೆ ಹಾಕಿದ ನೆನಪು
ಕಳೆದು ಹೋಗಿವೆ ಇಂದು ಮಧುರ ಸ್ವರಗಳ ಇಂಪು ।।1।।
ಗೆಳೆತನದ ಮಾಧುರ್ಯ ಪರಿಮಳದ ಹಾದಿಯಲಿ
ನಂಟು ಹಾಕಿತು ನಮಗೆ ಜೋಡಿ ಹಕ್ಕಿಯ ಬಂಧ;
ಹೊಸ ರಾಗಭಾವಗಳು ಚಿಮ್ಮಿ ಹೊಮ್ಮುತಲಿರಲು-
ಸರಸತಿಯ ಸಿರಿಪದಕೆ ಶರಣು ಬಂದೆವು ನಾವು ।।2।।
ಹಾಡು ಹಕ್ಕಿಗಳಾಗಿ ದೂರ ತೀರದ ಯಾನ
ಹೊಸತು ಗೀತದ ಗಂಧ ಬಣ್ಣ ಬಣ್ಣದ ಕನಸು;
ಎಣೆ ಇರದ ಆನಂದ ಬೆಳಕ ಚೆಲ್ಲುವ ತವಕ-
ದಾಂಪತ್ಯ ಜೀವನಕೆ ರಾಗ ಭಾವದ ಭಾಷ್ಯ ।।3।।
ಬಾಳ ನೌಕೆಯ ಪಯಣ ಸಾಗುತಿರೆ ಸಂತಸದಿ
ಕ್ಷಣದಲ್ಲಿ ಎಲ್ಲಿಂದಲೋ ಬಂದ ಬರಸಿಡಿಲು;
ಕ್ರೂರ ವಿಧಿ ಮುನಿದಿರಲು ಬಾಳ ನೌಕೆಯೆ ಚೂರು,
ಬಾಳ , ನಡೆದೆ ಒಂಟಿಯಾಗಿಸಿ ನನ್ನ! ।।4।।
ರೆಕ್ಕೆ ಮುರಿದಿಹ ಹಕ್ಕಿ ಹಾರಲಾರೆನು ಇನ್ನು,
ಕತ್ತಲೆಯ ಕ್ರೂರಾಟ್ಟಹಾಸ ಗಹಗಹಿಸುತಿದೆ;
ಹೃದಯದಲಿ ಶೂನ್ಯತೆಯು ಕಣ್ಮುಂದೆ ಕರಿ ನೆರಳು,
ನಕ್ಷತ್ರ ಲೋಕದಲಿ ನಿನ್ನ ಸೇರುವೆನೆಂತು? ।।5।।
ಭಾವ ಸಿರಿ ತೊರೆಯರಸ ನಗೆಮೊಗದ ಚೆನ್ನಿಗನೆ,
ಬದುಕ ಬಳ್ಳಿಯ ಕಡಿದು ನೀನೇಕೆ ಅಗಲಿದೆಯಾ?
ಜೀವ ಜಾವದ ಹೂವೆ, ಯಾರು ಕರೆದರೊ ನಿನ್ನ-
ಪಯಣ ಮುಗಿಯುವ ಮುನ್ನ ನಡುದಾರಿಯಲಿ ಹೀಗೆ ।।6।।
ಗೀತ ರಾಮಾಯಣದ ಗೀತಕುಸಿರಾದವನೆ,
ಭಾವಗೀತೆಯ ದನಿಗೆ ಜೀವಕಳೆ ತಂದವನೆ,
ನಿತ್ಯನೂತನ ರಾಗ ಭಾವಗಳ ಮೆರೆದವನೆ-
ಏಕೆ ತೆರಳಿದೆ ಇಂತು, ನಡುನೀರಿನಲಿ ಬಿಟ್ಟು? ।।7।।
ಸಂಗೀತ ಸಾಹಿತ್ಯ ರಸಿಕ ರಾಜನೆ ನೀನು,
ಶಿಷ್ಯಕೋಟಿಯ ಮನದ ಮೆಚ್ಚಿಗೆಯ ಗುರು ನೀನು,
ಬಂಧು ಗೆಳೆಯರ ಕುಲಕೆ ಹಾಲ್ಜೇನ ಹೊಳೆ ನೀನು-
ದಾಂಪತ್ಯ ಜೀವನದಿ ಆದರ್ಶ ಸಖ ನೀನು ।।8।।
ಜೀವರಥ ಚಕ್ರದಲಿ ಕಳಚಿ ಬಿದ್ದಿದೆ ಒಂದು
ಚಕ್ರಕಳಚಿದ ರಥವು ಮುಂದೆ ಸಾಗದು ಇನ್ನು;
ಹೇಗೆ ನೂಕಲಿ ದಿನವ ನೀನಿರದ ಬಾಳಿನಲಿ-
ಶೂನ್ಯತೆಯ ಕಡಲಿನಲಿ ಮುಳುಗಿ ಹೋಯಿತು ಬದುಕು ।।9।।
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications