ಕರುಣಿಸು ತಾಯೇ...
- ರಘುನಾಥ್.ಪಿ.ಜಿ., ಬೆಂಗಳೂರು
[email protected]
ನಿನ್ನೀ ಮಕ್ಕಳ ಮೇಲೆ, ಎಡಬಿಡದೇ
ಕಾಡುವೆ, ತರವೇ ನಿನಗೆ ಈ ಮುನಿಸು,
ಬಾರದೇ ನಿನಗೆ ಇನಿತೂ ಬೇಸರ !
ಕಳೆದ ಬಾರಿ ಸುನಾಮಿಯಾಗಿ ಉಕ್ಕಿ ಬಂದೆ
ನುಂಗಿದೆ ಹತ್ತಾರು ಸಹಸ್ರ ಮೀನ್ಮಕ್ಕಳ,
ಇಷ್ಟು ಬೇಗ ಮತ್ತೆ ಬೇಕಾಯಿತೇ
ಮತ್ತಾರು ಸಹಸ್ರ ಕಣ್ಮಣಿಗಳ ಜೀವ !
ನೀ ಹೆತ್ತ ಮಕ್ಕಳ ನೀನೇ ನುಂಗಲು
ಕಾದು ನಿಂತರೆ ಕಾಯುವವರು ಯಾರು
ತಾಯೇ ನಿನ್ನೀ ಮಕ್ಕಳ, ಮರೆಯದಿರು
ತಾಯೇ ಕಾಯ್ವದೇ ನಿನ್ನ ಕಾಯಕ
ಕೊಲ್ವದು ಅಲ್ಲ ಎಂಬುದ !
ನಿಜ ನಿನ್ನೀ ಮಕ್ಕಳು ಮಾಡುತಿಹರು
ಹಲವಾರು ಅನಾಚಾರಗಳ ನಿನ್ನ ಮೇಲೆ,
ಆದರೂ ಇರಲಿ ತಾಯೆ ಅವರಲಿ ಕ್ಷಮೆ,
ತೋರು ತಾಯೇ ನಿನ್ನೀ ಮಕ್ಕಳ
ಮೇಲೆ ಅಕ್ಕರೆ, ಹರಸು ತಾಯೆ ಕರುಣಿಸು
ಮತ್ತೆಂದೂ ಕಾಡದಿರು ತಾಯೇ ಕಾಡದಿರು !
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications