ಮುಂಜಾವು
- ಎಚ್.ಆರ್.ಜಯಶ್ರೀ
[email protected]
ನಿದ್ರೆಗೆ ಜಾರಿದ ಲೋಕವು ಮೆಲ್ಲಗೆ
ಮಂಪರು ಕಳೆಯುತ ಅರೆಬರೆ ಎಚ್ಚರ
-ಗೊಂಡಿಹ ಸಮಯದ ಸವಿಸವಿ ನೀರವ
ಗಾನವ ಕೇಳಲು ಎದ್ದಿಹ ಜೀವಿ
ಸುತ್ತಲು ಸುಮ್ಮಗೆ ನಗುತಿಹ ಪ್ರಕೃತಿ
ಮೆತ್ತಗೆ ಬಿದ್ದಿಹ ಮಂಜಿನ ಮುಸುಕು
ಕೋಳಿಯ ಕೂಗಿನ ಜೊತೆಯಲೆ ಒಡತಿ
ಹಾಲನು ಕರೆಯಲು ನಡೆದಿಹ ಠೀವಿ
ಚುಮು-ಚುಮು ನಸುಕಲಿ ಮೂಡಿದ ಬಣ್ಣ
ಬಾನಲಿ ಕಂಡಿತು, ತೊಯ್ದಿತು ಕಣ್ಣ
ಮೆಲ್ಲಗೆ ಮೂಡಿಹ ಬಿಸಿಲಿನ ಕೋಲು
ಸಪ್ಪಳವಿಲ್ಲದ ಬೆಳಗಿನ ಹಾಡು
ಎಲೆಗಳ ನಡುವಲಿ ಮೆಲ್ಲಗೆ ಸರಸರ
ಕೇಳಿಯು ಕೇಳದ ಹೆಜ್ಜೆಯ ಚರಚರ
ಕುರಿಮರಿ ತಾಯಿಯ ಕರೆಯುವ ಮೆಲುಸ್ವರ
ಒಲೆಯಲಿ ಮರಳಿಹ ನೀರಿನ ಮರ್ಮರ
ಕೋಣೆಯ ಮೂಲೆಯ ಕಂದನ ಕುಸು-ಕುಸು
ಅಂಗಳ ತೊಯ್ದಿಹ ನೀರಿನ ರಿkು್ಹಲ್-ರಿkು್ಹಲ್
ನಸುಕಲೆ ಹೊರಟಿಹ ಮಂದಿಯ ಪಿಸು-ಪಿಸು
ಕಾದಿಹ ಹಂಚಲಿ ದೋಸೆಯ ಸುಂಯ್ ಸುಂಯ್
ನಿದ್ರೆಯ ವಶದಿಂ ಬಿಡುಗಡೆ ಹೊಂದುತ
ಸಿಹಿಸಿಹಿ ಸದ್ದಿನ ಜೊತೆಯಲೆ ಮೀಯುತ
ನಸುಕಿನ ನಿಧಾನ ಗತಿಯನು ಸವಿಯುತ
ಲೋಕವ ಎದುರಿಸೆ ತಯಾರು ಜೀವಿ
ಇಂದು:
ಬೆಳಗಿನ ಹಾಲಿನ ಹುಡುಗನ ವಾಹನ
ಕಿಂಯ್ಯನೆ ಕಿರಿಚಲು ಸಟ್ಟನೆ ಎಚ್ಚರ
ಮಂಪರುಗಾಲನು ಎಳೆಯುತ ನಿತ್ಯದ
ಕರ್ಮವ ಗಡಬಡ ಮುಗಿಸಿಹ ಜೀವಿ
ರುಬ್ಬುವ ಯಂತ್ರವು ಆಗಲೇ ಚಾಲೂ
ಪಕ್ಕದ ಮನೆಯಲು ಕುಕ್ಕರ್ ಸಿಳ್ಳೂ
ಅನ್ನವು ಬೆಂದಿರೆ, ಕಾಫಿಯು ಕುದ್ದು
ಊಟದ ಡಬ್ಬಿಯ ಢಮರುಗ ಸದ್ದು
ಪಕ್ಕದ ಕಟ್ಟಡ ಕಟ್ಟುವ ಕೆಲಸ
ಕಲ್ಲುಕುಟ್ಟಿಗರ ಕೆಲಸದ ರಭಸ
ಆಚೆಯ ಮನೆಯಲಿ ಬಗುಳಿಹ ಶ್ವಾನ
ಬೀದಿಯ ಬಸ್ಸಿನ ‘ಪಂ-ಪಂ’ ಗಾನ
ಕಿರುಚುವ ಕಂದನ ಬಯ್ಯುವ ಕೊರಳು
ಕೆಲಸದ ‘ಬಾಯಿ’ಯ ಧಡಬಡ ಸಿಡಿಲು
ಫೋನಿನ ರಿಂಗಣ, ಎದೆಯಲಿ ತಲ್ಲಣ
ಏನು ಕಾದಿದೆಯೋ ದಿನದಲಿ ಇನ್ನು ?
ತೂಗಿಹ ನಿದ್ರೆಯ ಬಲದಿಂ ಹೊಸಕುತ
ಧಡಬಡ ಗಡಿಬಿಡಿ ಸದ್ದಲೆ ಸಾಗುತ
ಬೆಳಗಿನ ದಿನಚರಿಗಡಿಯಾಳಾಗುತ
ಲೋಕವ ಎದುರಿಸೆ ತಯಾರು ಜೀವಿ
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications