ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.
ವಿಮಲ ವಚನಗಳು
- ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
ಹಾಡುವ ಸ್ವರವೆಲ್ಲಿ ಹೋಯಿತು ?
ನೋಡುವ ಕಣ್ಣೆಲ್ಲಿ ಹೋಯಿತು ?
ಬೇಡುವ ಬಾಯ್ ಎಲ್ಲಿ ಹೋಯಿತು ?
ನಲಿದಾಡುವ ಒಲವೆಲ್ಲಿ ಹೋಯಿತು ?
ಕಾಣದ ಕೇಳದ ತಿಳಿಯಲರಿಯದ ಠಾವು,
ಒಮ್ಮೆ ಇದ್ದುದು ಈಗ ಇಲ್ಲ ಎಂದರೆ ಸಾವು,
ಬೇಡದಿದ್ದರೂ ನೀನು ಕೊಟ್ಟೆಯಲ್ಲವೆ ನೋವು?
ತಳಮಳಿಸುತಿದೆ ಇಳೆಯು.
ತಿಳಿ ಹೇಳು, ತಿಳಿಸೇಳು,
ವಿಮಲೇಶ ಶ್ರೀ ಚನ್ನಬಸವೇಶ್ವರ.
6
ಹುಟ್ಟುವ
ಕಾಲ,
ಮಗುವು
ಅಳುತಿರುವಾಗ
ಜಗವು
ನಗುತಿರಬೇಕು
;
ಸಾಯುವ
ಕಾಲ,
ಜನರು
ಅಳುತಿರುವಾಗ
ಮಾನವನು
ನಗುತಿರಬೇಕು
;
ಮಗು
ಬೆಳೆದು
ಮಾನವನಾಗಿ
ಬಾಳಿದ್ದಕ್ಕೆ
ಇಷ್ಟು
ಅಂತರವಿರಬೇಕಯ್ಯ,
ವಿಮಲೇಶ
ಶ್ರೀ
ಚನ್ನಬಸವೇಶ್ವರ.
7
ಹಕ್ಕಿಗಿಂತಲು
ಮೇಲೆ
ಹಾರಿದವರುಂಟು
ಚಿಕ್ಕೆ
ಚಂದ್ರರ
ಮೆಟ್ಟಿ
ಮರಳಿದವರುಂಟು
ಕಡಲ
ಇಕ್ಕೆಲದಿಂದ
ಮಾತಾಡಿದವರುಂಟು
ರೊಕ್ಕಕ್ಕೆ
ಎಲ್ಲವನು
ಕೊಂಡವರು
ಉಂಟು
ಸಿಕ್ಕಿಲ್ಲ
ಮಾತ್ರವೀ
ವಿಜ್ಞಾನಿಗಳ
ಕೈಗೆ
ಸಾವು
ತಡೆಯುವ
ಯುಕ್ತಿ
,
ಪ್ರೇಮ,
ಭಕ್ತಿ
ಹುಡುಕಾಡುತಿಹರೆಲ್ಲ
ಮೀರಿ
ಶಕ್ತಿ
ಚನ್ನಬಸವೇಶ್ವರನು
ಕೊಡಲೆಂದೆ
ಮುಕ್ತಿ
!
8
ಹೂವಿಗೆ
ನೀರುಣಿಸಲು
ಚೆಲುವ
ಪೂಜಿಸಿದಂತೆ
ನನ್ನ
ನೋಟಕೆ
ಚೆಲುವೆ
ದೇವರಯ್ಯಾ
ಜೀವಿಯಾಬ್ಬನ
ಮನವ
ಸಂತೋಷಗೊಳಿಸಿದರೆ
ನನ್ನ
ಬಾಳಿಗೆ
ಒಲವೆ
ದೇವರಯ್ಯ
ವಿಮಲೇಶ
ಶ್ರೀ
ಚನ್ನಬಸವೇಶ್ವರ
ಮುಖಪುಟ / ಸಾಹಿತ್ಯ ಸೊಗಡು
Comments
Story first published: Tuesday, April 2, 2002, 5:30 [IST]