ನಮಸ್ಕಾರ ಸಾರ್ ಅಂತೀನಿ
ಸಿಲಿಕಾನ್ ವ್ಯಾಲಿ ವಚನಗಳು
ತಂದೆ ನೀನು, ತಾಯಿ ನೀನು
ಬಂಧು ನೀನು, ಬಳಗ ನೀನು
ನೀನಲ್ಲದೆ ನನಗೆ ಮತ್ತಾರು ಇಲ್ಲವಯ್ಯ
ಬೆಂಗಳೂರು ಗಣಕ ಯಂತ್ರಯ್ಯ
ನೀರಿಗೆ ನೈದಿಲೆಯೇ ಶೃಂಗಾರ
ಸಮುದ್ರಕೆ ತೆರೆಯೆ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕೆ ಚಂದ್ರಮನೆ ಶೃಂಗಾರ
ನಮ್ಮ ಬೆಂಗಳೂರು ಐಟಿ ಹುಡುಗಿಯರಿಗೆ ಈ-ಮೇಯ್ಲ್ ಗಳೇ ಶೃಂಗಾರ...
ಪ್ರೊಜೆಕ್ಟ್ ಡೆಡ್ ಲೈನ್ ಎಕ್ಸ್ಟೆಂಡ್ ಮಾಡದ ಪಿಯಮ್ಮೂ
ಹಗಲೆಲ್ಲಾ ಕಾಡುವ ಕ್ಲೈಂಟೂ
ಈ-ಮೇಯ್ಲಿಗೆ ರಿಪ್ಲೈ ಮಾಡದ ಗೆಳೆಯರು ಶುದ್ಧ ವೈರಿಗಳು ಸರ್ವಜ್ಞ
ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು, ಐಟಿ ಫೀಲ್ಡು
ಎಲ್ಲರಿಗಲ್ಲ ಸರ್ವಜ್ಞ
ಈ ಮೇಯ್ಲ್ಗಳು ಸೆಂಡ್ ರಿಸೀವ್ ಮಾಡಿದರೆ ಫಲವೇನು
ಎತ್ತು ಗಾಣವನು ಹೊತ್ತು ತಾ
ನಿತ್ಯದಲ್ಲಿ ಸುತ್ತಿ ಬಂದಂತೆ ಸರ್ವಜ್ಞ
ಬೆಂಗಳೂರಿನ ಐಟಿ ಕಂಪೆನಿಯಲ್ಲಿ , ಸಾಫ್ಟ್ವೇರ್ ಇಂಜಿನಿಯರಾಗಿ ಕೆಲಸವಿರಲು
ಕುಡಿದು ತಿಂದು ಮಜಾ ಮಾಡುವಷ್ಟು ಸಂಬಳವಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ
ಕುಡಿದದ್ದು ತನಗೆ, ಕುಡಿಸಿದ್ದು ಪರರಿಗೆ
ಕುಡಿಸಿದ್ದು ಕೆಡಿಸಿತೆನಬೇಡ
ಕುಡಿದವರು, ಒಮ್ಮೆ ನಿನಗೂ ಕುಡಿಸುವರು ಸರ್ವಜ್ಞ
ಸಾಫ್ಟ್ವೇರ್ ಇಂಜಿನಿಯರ್ ಎನ್ನುವವನು ಗರ್ವದಿಂದಾದವನೆ...?
ಸರ್ವರೊಳಗೊಂದಾಗು ಪ್ರೋಗ್ರಾಂ ಕಲಿತು
ಸಾಫ್ಟ್ವೇರ್ ಪರ್ವತವೇ ಆದ ಸರ್ವಜ್ಞ
ಕೋಡಿಂಗ್ ಮಾಡಿದರೆ ಮುತ್ತಿನ ಹಾರದಂತಿರಬೇಕು
ಕೋಡಿಂಗ್ ಮಾಡಿದರೆ, ಪ್ರೊಜೆಕ್ಟ್ ಬಗ್ ಫ್ರೀ ಇರಬೇಕು
ಕೋಡಿಂಗ್ ಮಾಡಿದರೆ ಕ್ಲೈಂಟ್ ಮೆಚ್ಚಿ ಅಹುದಹುದೆನಬೇಕು
ಹೀಗೆ ಕೋಡಿಂಗ್ ಮಾಡದಿದ್ದರೆ ಮೆಚ್ಚ ನಮ್ಮ ಬಾಗಲಕೋಟೆ ಗಣಕ ಯಂತ್ರಯ್ಯ...
ಆಡದೆಲೆ ಕೋಡಿಂಗ್ ಮಾಡುವವನು ರೂಢಿಯಾಳಗುತ್ತಮನು
ಆಡಿ ಕೋಡಿಂಗ್ ಮಾಡುವವನು ಮಧ್ಯಮನು
ಅಧಮ ತಾನಾಡಿ ಕೋಡಿಂಗ್ ಮಾಡದವನು ಸರ್ವಜ್ಞ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications