ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಲರಿಗೂ ಬೇಕಾದವರು ನಮ್ಮೀ ಶ್ರೀನಿವಾಸಭಟ್ಟರು
ಎರಡು ಸೃಜನಶೀಲ ಮನಸ್ಸುಗಳ ಹೆಚ್ಚೂ ಕಡಿಮೆ ಒಂದೇ ಬಗೆಯ ಕಾವ್ಯಾಭಿವ್ಯಕ್ತಿ ಇಲ್ಲಿದೆ. ಮನುಸ್ಮೃತಿ, ಗೃಹಿಣೀ ಧರ್ಮಬೋಧೆ, ಹದಿಬದೆಯ ಧರ್ಮ.. ಇತ್ಯಾದಿಗಳ ನಡುವೆ, ಪುರುಷಸಿಂಹನ ಗರ್ಜನೆಯ ಕಾವಿನಲ್ಲಿ ಸ್ತ್ರೀಧ್ವನಿ ಕರಗಿದ್ದೆಲ್ಲಿ ? ಮನೆ ಮಕ್ಕಳೆಂದು ನರ ನರದ ಸಾರವನ್ನೂ ಬಸಿವ ಗೃಹಿಣಿಗೆ ದಕ್ಕಿದ್ದೇನು? ಮನೆ, ಮನೆ ಮಂದಿ ಮೂಲಕವೇ ಆಕೆಯ ಬದುಕು ಅರಳಬೇಕೇನು? ಇದರ ಹೊರತಾದ ಜಗತ್ತು ಅವಳಿಗೆ ನಿಷಿದ್ಧವೇನು?.. ಇಂಥ ಸೂಕ್ಷ್ಮ ಪ್ರಶ್ನೆಗಳ ನಾಜೂಕಾಗಿ ಎದುರಿಗಿಡುವ ಪ್ರಯತ್ನ ಇಲ್ಲಿನ ಕವಯತ್ರಿಯರದು. ಉತ್ಸಾಹಿ ಕಾವ್ಯ ಪ್ರತಿಭೆಗಳಾದ ಸುಪ್ತದೀಪ್ತಿ ಹಾಗೂ ಆಶಾ ಬಾಲಕೃಷ್ಣ ಭಟ್ ಅವರ ಕವಿತೆಗಳಿಗೆ ಸ್ವಾಗತ.
ಮುಖಪುಟ / ಸಾಹಿತ್ಯ ಸೊಗಡು
Comments
Story first published: Tuesday, April 2, 2002, 5:30 [IST]