ಪೇಜಾವರ ಶ್ರೀಗಳಿಗೆ 80 ಅಂದ್ರೆ ಯಾರೂ ನಂಬಲ್ಲ

ಮೊನ್ನೆ ಭಾನುವಾರ ನನ್ನ ಸ್ನೇಹಿತರೊಬ್ಬರ ಕತ್ರಿಗುಪ್ಪೆ ಮನೆಯಲ್ಲಿ ಶ್ರೀಗಳಿಗೆ ಪಾದಪೂಜೆ ಕಾರ್ಯಕ್ರಮ ಇತ್ತು. ಪೊಲೀಸ್ ಬೆಂಗಾವಲು ವಾಹನದಲ್ಲಿ ಮಟಮಟ ಮಧ್ಯಾಹ್ನ ಬಂದಿಳಿದರು. ಕಾರಿನಿಂದ ಇಳಿಯುವವರೆಗೂ ಯಾರಿಗೋ ಫೋನು, ಏನೋ ಟಿಪ್ಪಣಿ ಮಾಡಿಕೊಳ್ಳುವುದು, ಬಿಜಿ ಬಿಜಿ ಬಿಜಿ. ಕಾರಿಳಿದು ಮೊದಲ ಅಂತಸ್ತಿನ ಮನೆಯ 16 ಮೆಟ್ಟಿಲು ಏರಿ ಬಂದರು. ಉಸ್ಸಪ್ಪಾ ಅನ್ನಲಿಲ್ಲ.
ಅದು ಶ್ರೀಕೃಷ್ಣನ ಪೂಜೆಯಾಗಲಿ ಅಥವಾ ಪಟ್ಟದದೇವರ ಪೂಜೆಯಾಗಲಿ ಅಥವಾ ರಾಮ ಜನ್ಮಭೂಮಿ ಕುರಿತ ಚರ್ಚೆಯಾಗಲೀ, ನಾನೇ ಫಸ್ಟ್ ಬರುತ್ತೇನೆ ಎನ್ನುವ ಶ್ರೀಗಳು, ನಾಡಿನ ಇತರ ಶ್ರೀಗಳಿಗಿಂತ ಸ್ವಲ್ಪ ಭಿನ್ನ. ಪಾದಪೂಜೆಯಿಂದ ಹಿಡಿದು ಪಾದಯಾತ್ರೆ ವರೆಗೆ ಎಲ್ಲದಕ್ಕೂ ಸೈ. ಹರಿಜನ ಕೇರಿಗೆ ಹೋಗಿ ಪಾದಯಾತ್ರೆ ನಡೆಸಿ ಅಸ್ಪೃಶ್ಯತೆ ನಿವಾರಣೆಗೆ ಹೋರಾಟ ನಡೆಸುವ ಶ್ರೀಗಳು, ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ಮೂಲಕ ರೈತರಿಗಾಗುವ ಅನ್ಯಾಯದ ವಿರುದ್ದವೂ ಹೋರಾಡುತ್ತಾರೆ.
ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಶ್ರೀಗಳು ಅಯೋಧ್ಯಾ ಚಳುವಳಿಯಲ್ಲೂ ಭಾಗವಹಿಸುತ್ತಾರೆ. ಅಷ್ಟೇ ಏಕೆ ತಮ್ಮದೇ ಅಷ್ಟ ಮಠದ ಪರ್ಯಾಯ ವಿವಾದ ತಾರಕಕ್ಕೇರಿದಾಗ ಉಪವಾಸ ಸತ್ಯಾಗ್ರಹ ನಡೆಸುವ ಶ್ರೀಗಳು, ಮಡೆಸ್ನಾನದ ವಿಚಾರದಲ್ಲೂ ನಾಡಿನ ಇತರ ಸ್ವಾಮೀಜಿಗಳು ಇವರ ವಿರುದ್ದ ತಿರುಗಿ ಬಿದ್ದಾಗಲೂ ತನ್ನದೇ ದಾಟಿಯಲ್ಲಿ ಸಮರ್ಥಿಸಿ ಕೊಳ್ಳುವ ಮಹಾನ್ ವಾಗ್ಮಿ. ರಾಜಕೀಯ ನಾಯಕರುಗಳು ದಾರಿತಪ್ಪಿದಾಗ ಶ್ರೀಗಳು ಹಿತವಚನ ನೀಡಿದ ಬಹಳಷ್ಟು ಉದಾಹರಣೆಗಳಿವೆ.
ಪೇಜಾವರರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶ ಸುತ್ತುತ್ತಾರೆ. ನಿತ್ಯ ನೂರಾರು, ಸಾವಿರಾರು ಮೈಲಿ ಪ್ರಯಾಣ ಮಾಡುವ ಅವರ ಉತ್ಸಾಹ ಬೆರಗಾಗಿಸುತ್ತದೆ. ಅವರ ಕಾರಿಗೆ ಒಬ್ಬರಲ್ಲ ನಾಲಕ್ಕು ಚಾಲಕರಿದ್ದಾರೆ. ಪಾದಪೂಜೆ, ಮಂತ್ರಾಕ್ಷತೆ, ಆಶೀರ್ವಚನ ನಂತರ ಶ್ರೀಗಳು ತೆರಳಿದ ಮೇಲೆ ಮನೆಯಲ್ಲಿ ಎಲ್ಲರದೂ ಒಂದೇ ಮಾತು. ಪೇಜಾವರರು ಈ ವಯಸ್ಸಿನಲ್ಲಿ ಇಷ್ಟು ಚುರುಕಾಗಿದ್ದಾರೆ, ನಾವು ಅವರನ್ನು ನೋಡಿ ಕಲಿಯಬೇಕು, ನೋಡಿ ಕಲಿಯಬೇಕು.
ಶ್ರೀಗಳೇ ಹೇಳಿದಂತೆ ಈ ವಯಸ್ಸಲ್ಲೂ ತಾವು ಇಷ್ಟು ಲವಲವಿಕೆಯಿಂದ ಇರುವುದಕ್ಕೆ ಕಾರಣ ಮತ್ತು ಪ್ರೇರಣೆ 'ತಾನು ನಂಬಿದ ದೇವರು, ಪಟ್ಟದ ದೇವರ ಪೂಜೆ'.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications