ಜನಪದ ಲೋಕದ ನಿಜವಾದ ಆಸ್ತಿ ಚೌಡಮ್ಮ

8ನೇ ವರ್ಷದಿಂದಲೂ ಜನಪದ ಗೀತೆಗಳ ಗಾಯನ ಕಲಿತು ಹಾಡುತ್ತಿದ್ದ ಚೌಡಮ್ಮನಿಗೆ ಅರಳು ಮರಳು ಎನ್ನುವ ವಯಸ್ಸಿನಲ್ಲಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಆದರೆ, ಜನಪದ ಸಾಹಿತ್ಯ, ಹಾಡು ಚೌಡಮ್ಮಳ ಅನಾಥಪ್ರಜ್ಞೆಯನ್ನು ಕಳೆದಿದೆ. ಚೌಡಮ್ಮಳ ಸಾಹಿತ್ಯ ಬಂಢಾರವೇ ಬದುಕಾಗಿಸಿದೆ, ಅದೇ ಬಂಡವಾಳವಾಗಿದೆ. ಇಡೀ ಬದುಕನ್ನು ಸಾರ್ಥಕಗೊಳಿಸಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಮಸಾಗರ ನಿವಾಸಿ ಹರಿಜಯ ಚೌಡಮ್ಮ ಜಾನಪದ ಅಕಾಡಮಿ ಪ್ರಶಸ್ತಿಗೆ ಆಯ್ಕೆ ಆಗುವ ಮೂಲಕ ಚಿರಪರಿಚಿತಳಾಗುತ್ತಿದ್ದಾರೆ. ಈವರೆಗೆ ಸದ್ದಿಲ್ಲದೇ ಸವೆಸಿದ ತನ್ನ ಬದುಕಿಗೆ ಹೊಸ ಕಳೆಯನ್ನು ಮುಡಿಗೇರಿಸಿಕೊಳ್ಳುತ್ತಾ ಅನೇಕರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾಳೆ. ಎಲೆಮರೆಯ ಕಾಯಿಯಂತೆ ಇದ್ದ ಚೌಡಮ್ಮನಿಗೆ ಪ್ರಶಸ್ತಿ ಬಂದಿರುವುದು ಜನರಲ್ಲೂ ಸಂತಸ ತಂದಿದೆ.
ಚೌಡಮ್ಮ ಬಾಲ್ಯದಲ್ಲಿ ಇದ್ದಾಗ ಆನೆಗುಂಡಮ್ಮ ಎನ್ನುವ ವೃದ್ಧೆ ಹಾಡುತ್ತಿದ್ದ ಜನಪದ ಸಾಹಿತ್ಯವನ್ನು ಕಲಿತು, ನಿರಂತರ ಗುನುಗುತ್ತಲೇ ತನಗೆ ಅರಿವೇ ಇಲ್ಲದಂತೆ ಕಾಳಿಂಗರಾಯನ ಪದ, ಕರಿಗೊಲ್ಲ ಕಥನ ಗೀತೆ, ಕುರುಗೋಡು ನೀಲಮ್ಮ ಕಥೆ, ಸುಲಿಹಲ್ಲಿ, ಕೆಂಚಮ್ಮ ದೇವತೆ, ಹೊನ್ನಮ್ಮನ ಕಥೆ, ಸಂಪ್ರದಾಯ ಪದಗಳು, ಸೋಬಾನೆ ಪದಗಳು, ಮದುವೆ, ಸೀಮಂತ, ತೊಟ್ಟಿಲು ಪದಗಳು, ಗೀಗೀ ಪದಗಳನ್ನು ಹಾಡುವುದನ್ನು ಕಲಿತರು.
ಈ ಕಲಿಕೆ ಚೌಡಮ್ಮ ಅವರನ್ನು ಒಂಟಿ ಮಾಡಲಿಲ್ಲ. ಆಧುನಿಕ ಜಗತ್ತಿನ ಟಿವಿ, ಸಿನಿಮಾ, ಪಾಪ್ ಗೀತೆಗಳ ನಡುವೆಯೂ ಹೊಲಗದ್ದೆಗಳಲ್ಲಿ ಸಸಿ ನೆಡುವಾಗ, ಕಳೆ ಕಿತ್ತುವಾಗ, ಋತುಮತಿ ಸಂಭ್ರಮ, ಸೋಬಾನೆ, ಗೌರಿ ಹಬ್ಬ, ಮದುವೆ ಸಂಭ್ರಮಗಳಲ್ಲಿ ತನ್ನ ಕಂಠಸಿರಿಯನ್ನು ತೋರಿದ್ದಾರೆ. ಜನಪದ ಸಾಹಿತ್ಯ ಬಂಢಾರವನ್ನು ಪ್ರಚುರಪಡಿಸಿದ್ದಾರೆ.
ಚೌಡಮ್ಮ ಹಾಡಲು ಶುರು ಮಾಡಿದರೆ ಸಂಜೆಯಾಗಿದ್ದಾಗಲೀ, ಮುಂಜಾನೆ ಸೂರ್ಯ ಬೆಳಗಾಗಿದ್ದಾಗಲೀ ಗೊತ್ತಾಗುವುದೇ ಇಲ್ಲ. ಚೌಡಮ್ಮರ ಜಾನಪದ ಕಥನ ಗೀತೆಗಳು ಖಂಡಕಾವ್ಯವಾಗಿ ಗುರುತಿಸಿಕೊಂಡಿವೆ. ಕಾರಣಕ್ಕಾಗಿಯೇ ಅಳಿಯುತ್ತಿರುವ ಈ ಸಾಹಿತ್ಯ ಹಾಗೂ ಹಾಡಿನ ಪ್ರಕಾರ ಉಳಿಯಲು ಈ ಚೌಡಮ್ಮ ದೊಡ್ಡ ಆಸ್ತಿಯಾಗಿ ಗುರುತಿಸಿಕೊಂಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications