ಎಲೆಮರೆಯ ಚಿತ್ರನಿರ್ದೇಶಕ ಹರ್ಷವರ್ಧನ್ ಕುಲಕರ್ಣಿ

* ಎನ್.ಆರ್. ರಾವ್ (ಮುಂಬೈ)
ದಟ್ಸ್ ಕನ್ನಡ ಅಂಕಣಕಾರ, ಲೇಖಕ, ಕವಿ ಜೀವಿ ಕುಲಕರ್ಣಿಯವರ ಎರಡನೆಯ ಮಗ ಹರ್ಷವರ್ಧನ ಜಿ ಕುಲಕರ್ಣಿಯವರು ಕಿರುತೆರೆಯ ಚಿತ್ರಜಗದಲ್ಲಿ ಲೇಖಕ, ದಿಗ್ದರ್ಶಕ, ನಿರ್ಮಾಪಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಿದ್ದಾರೆ. ಅವರು ಬರೆದು, ದಿಗ್ದರ್ಶಿಸಿ, ನಿರ್ಮಿಸಿದ, ನೂರು ವರ್ಷ-ಹಳೆಯ ಬಾಟಲ್ನ ಕತೆಯ ಸುತ್ತು ಹೆಣೆದ 'ಲಾಸ್ಟ್ ಎಂಡ್ ಫೌಂಡ್' (Lost and Found) ಎಂಬ ಕಿರುಚಿತ್ರ ಪ್ರದರ್ಶಿತಗೊಂಡಲ್ಲೆಲ್ಲ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತ ಸಾಗಿದೆ. ಇದು ಬರಿ ಒಂದು ಬಾಟಲಿಯ ಕಥೆಯಲ್ಲ, ನಮ್ಮ ಜೀವನವನ್ನೇ ಚಿತ್ರಿಸುವ, ಪುನರಪಿ ಜನನಂ ಪುನರಪಿ ಮರಣಂ ಚಕ್ರವನ್ನು ಪ್ರತಿನಿಧಿಸುವ, ಅಪೂರ್ವ ಚಿತ್ರ. ಇಲ್ಲಿ ಒಬ್ಬ ತರುಣ ಕನ್ನಡಿಗನ ಪ್ರತಿಭೆ ಹಾಗೂ ಪರಿಶ್ರಮವನ್ನು ನಾವು ಮೆಚ್ಚಬೇಕು. ಚಿತ್ರದ ಪ್ರಾರಂಭದಲ್ಲಿರುವ ಇಂಗ್ಲಿಷ್ ಪದ್ಯವನ್ನು ಅಮೆರಿಕೆಯಲ್ಲಿರುವ ಸಾಫ್ಟ್ವೇರ್ ಎಂಜಿನಿಯರ್ ರಾಘವೇಂದ್ರ (ಜೀವಿಯವರ ಹಿರಿಯ ಮಗ) ಬರೆದಿದ್ದಾರೆ.
ಡಿಸೆಂಬರ 2008ರಲ್ಲಿ ನಡೆದ ಶ್ರೀಲಂಕಾದ ಯುಥ್ ನ್ಯೂ ವೇವ್- ಇಂಟರ್ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಇದು ಶ್ರೇಷ್ಠ ಚಿತ್ರವೆಂದು ಜ್ಯೂರಿಗಳಿಂದ ಪರಿಗಣಿತವಾಯ್ತು, (ಅಡೂರ್ ರಾಧಾಕೃಷ್ಣನ್ ಜ್ಯೂರಿ ಸಮಿತಿಯ ಅಧ್ಯಕ್ಷರಾಗಿದ್ದರು). ಅಷ್ಟೇ ಅಲ್ಲ, ಫೆಸ್ಟಿವಲ್ನಲ್ಲಿ ಅತಿಹೆಚ್ಚು ಪ್ರೇಕ್ಷಕರು ಮೆಚ್ಚಿದ ಪಾಪ್ಯುಲರ್ ಫಿಲ್ಮ್ಗೆ ಇರುವ ವಿಶೇಷ ಬಹುಮಾನವನ್ನೂ ಈ ಚಿತ್ರ ಪಡೆಯಿತು. ಶ್ರೀಲಂಕಾದ ಮಂತ್ರಿ ಪವಿತ್ರ ವನ್ನಿರಚ್ಚಿ ಬಹುಮಾನವನ್ನು ವಿತರಿಸಿದರು. ಈಗ ಬೆಂಗಳೂರಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಜನವರಿ 22ರಂದು ಈ ಚಿತ್ರ ಪ್ರದರ್ಶಿತವಾಗುತ್ತಿದೆ.
ಈ ಕಿರುಚಿತ್ರವು ಈ ಮೊದಲೆ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ (ಮುಂಬೈ, ನ್ಯೂಯಾರ್ಕ, ಗೋವಾ, ಕಲಕತ್ತಾ, ಲಂಡನ್..) ಪ್ರದರ್ಶಿತವಾಗಿದ್ದು ಎಲ್ಲೆಡೆ ಅಭೂತಪೂರ್ವ ಮೆಚ್ಚುಗೆ ಪಡೆದಿದೆ. ಮುಂಬೈಯಲ್ಲಿ ನಡೆದ ಐಡಿಪಿಎ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಚಿತ್ರಕ್ಕೆ ನಾಲ್ಕು ಸ್ವರ್ಣ ಹಾಗೂ ಒಂದು ರಜತ ಪದಕಗಳು ದೊರೆತಿವೆ.

ಇಲ್ಲಿಯವರೆಗೆ ಗಳಿಸಿದ ಮಹತ್ವದ ಪ್ರಶಸ್ತಿಗಳು:
* ವಾರಣಾ ಡಾಕ್ಯುಮೆಂಟರಿ ಚಿತ್ರಕ್ಕಾಗಿ ರಾಪಾ ಅವಾರ್ಡ್(2001)
* ಮಹರಾಷ್ಟ್ರ ಟೈಮ್ಸ್ ಟಿ.ವಿ.ಕಮರ್ಶಿಯಲ್ ಸ್ಕ್ರಿಪ್ಟ್ಗಾಗಿ ರಾಪಾ ಅವಾರ್ಡ್(2003)
* ದಿ ಚೋಜನ್ ವನ್(The Chosen One) ಟೆಲಿ ಚಿತ್ರಕ್ಕಾಗಿ ಹಿರೋ ಹೊಂಡಾ ಬೆಸ್ಟ್ ಚೈಲ್ಡ ಆರ್ಟಿಸ್ಟ್ ಅವಾರ್ಡ್(2005)
* ದಿ ಚೋಜನ್ ವನ್ ಫಿಲ್ಮಿಗಾಗಿ, ಆರರಲ್ಲಿ ನಾಲ್ಕು ಶ್ರೇಷ್ಠ ಅವಾರ್ಡ್ಗಳು(2006), ಶ್ರೇಷ್ಠ ಚಿತ್ರ, ಶ್ರೇಷ್ಠ ಚಿತ್ರಕಥೆ, ಶ್ರೇಷ್ಠ ದಿಗ್ದರ್ಶಕ, ಶ್ರೇಷ್ಠ ಛಾಯಾಗ್ರಹಣ.
* ಲಾಸ್ಟ್ ಎಂಡ್ ಫೌಂಡ್ (Lost and Found) ಕಿರು ಚಿತ್ರಕ್ಕಾಗಿ ಐಡಿಪಿಎದಿಂದ ನಾಲ್ಕು ಗೋಲ್ಡ್ ಹಾಗೂ ಒಂದು ಸಿಲ್ವರ್ ಮೆಡಲ್(2008).
ಸತ್ಯಜಿತ್ ರೇ ಅವರ ತರುವಾಯ ಅತ್ಯಧಿಕ ಸ್ವರ್ಣ ಪದಕಗಳನ್ನು ಗಳಿಸಿದ ಹೆಸರಾಂತ ಕನ್ನಡ ಚಿತ್ರ ದಿಗ್ದರ್ಶಕ ಕಾಸರವಳ್ಳಿಯವರು ಲಾಸ್ಟ್ ಎಂಡ್ ಫೌಂಡ್ ನೋಡಿ ಮೆಚ್ಚಿ ಬರೆದ ಪತ್ರದಲ್ಲಿಯ ಕೆಲವು ಸಾಲುಗಳು ಇಲ್ಲಿವೆ.
“…I saw LOST AND FOUND. Congratulations. The film is absolutely revetting. The collage style of narration gives the film a great strength, the bottle starts acquiring additional meaning as the film progresses. It represents our past which is both the strength and burden, it also suggests the colonial hegemony, and at the same time it is also used as a simple tool to represent different time and space. The way it enlivens the narrative shows that you have a good control of using the narrative very cinematically. Some of the compositions are absolutely fantastic. … Beside scripting I must also add that your cinematographer and music directors have contributed meaningfully to your film."
ನಾಲ್ಕು ಬಹುಮಾನಗಳಿಸಿದ ಪ್ರಥಮ ಟೆಲಿಚಿತ್ರ ದಿ ಚೋಸನ್ ವನ್ ನಲ್ಲಿ ಜೀವಿ ಕುಲಕರ್ಣಿಯವರು ಕೂಡ ಒಂದು ಪಾತ್ರ ಮಾಡಿದ್ದಾರೆ. ಲಾಸ್ಟ್ ಅಂಡ್ ಫೌಂಡ್ ಚಿತ್ರಕ್ಕಾಗಿ ದೊರೆತ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ತಂದೆಗೆ ಹರ್ಷವರ್ಧನ್ ಅರ್ಪಿಸಿದ್ದಾರೆ ಮತ್ತು ಅದನ್ನು ಅವರಿಗೇ ನೀಡಿದ್ದಾರೆ. ಆ ಬಹುಮಾನದ ಹಕ್ಕು ತಂದೆಯವರದೇ ಎಂದು ಹರ್ಷವರ್ಧನ್ ಹೆಮ್ಮೆಯಿಂದ ಹೇಳುತ್ತಾರೆ. ಬಾಲಿವುಡ್ ನ ಬೃಹತ್ ಸಾಗರದಲ್ಲಿ ಕಳೆದುಹೋಗದೆ ಹರ್ಷವರ್ಧನ್ ತಮ್ಮತನವನ್ನು ಕಾಯ್ದುಕೊಂಡಿದ್ದಾರೆ, ವಿಶ್ವದ ಚಿತ್ರಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications