ಭಾರತದ ಮಹಾ ಮಿದುಳು ಕಾಪಿ ಎಡಿಟರ್‌ ಪ್ರಿಯಂವದ

ನವದೆಹಲಿ : ಇಪ್ಪತ್ತೆೈದರ ಹರೆಯದ ಕೇರಳ ಮೂಲದ ಕೆ.ಇ.ಪ್ರಿಯಂವದ ಈಗ ‘ಭಾರತದ ಮಹಾ ಮಿದುಳು’ (ಮಾಸ್ಟರ್‌ ಮೈಂಡ್‌ ಆಫ್‌ ಇಂಡಿಯಾ). ಬಿಬಿಸಿ ಟಿವಿ ಚಾನೆಲ್‌ ನೋಡುಗರಿಗೆ ಈ ವಿಷಯ ಗೊತ್ತಿರಬಹುದು. ಕರೋಡ್‌ಪತಿಯ ಗುಂಗಲ್ಲೇ ಮುಳುಗಿಹೋಗಿ, ಬೇರೆ ಕ್ವಿಜ್‌ ಕಾರ್ಯಕ್ರಮಗಳ ಅರಿವೆಯೇ ಇಲ್ಲದ ಬಹುತೇಕರಿಗೆ ಇದು ಗೊತ್ತಿರಲಿಕ್ಕೇ ಇಲ್ಲ.

ಪ್ರತಿ ಸೋಮವಾರ ರಾತ್ರಿ 10 ಗಂಟೆಗೆ ‘ಮಾಸ್ಟರ್‌ ಮೈಂಡ್‌ ಆಫ್‌ ಇಂಡಿಯಾ’ ಎಂಬ ರ್ಯಾಪಿಡ್‌ ಫೈರ್‌ ಕ್ವಿಜ್‌ ಸ್ಪರ್ಧೆ ಬಿಬಿಸಿಯಲ್ಲಿ ಪ್ರಸಾರವಾಗುತ್ತದೆ. ಮೊನ್ನೆಯ ಸಂಚಿಕೆಯಲ್ಲಿ ಫೈನಲ್ಸ್‌ ಸುತ್ತು ಪ್ರಸಾರವಾಯಿತು. ಅದರಲ್ಲಿ ಗೆದ್ದದ್ದು ‘ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ’ ವೆಬ್‌ಸೈಟಿನಲ್ಲಿ ಉಪ ಸಂಪಾದಕಿಯಾಗಿರುವ ದೆಹಲಿ ವಾಸಿ ಪ್ರಿಯಂವದ ; ಇದ್ದ ನಾಲ್ವರು ಸ್ಪರ್ಧಿಗಳ ಪೈಕಿ ಕಿರಿಯಾಕೆ. ಈಕೆಯನ್ನು ಐಎಎನ್‌ಎಸ್‌ ಮಾತನಾಡಿಸಿ, ಅಪರೂಪದ ವ್ಯಕ್ತಿತ್ವವನ್ನು ನಿಮಗಾಗಿ ಕಟ್ಟಿ ಕೊಟ್ಟಿದೆ....

  • ಈಗ ನೀವು ಮಾಸ್ಟರ್‌ ಮೈಂಡ್‌. ಕೆಬಿಸಿಯಲ್ಲಿ ಭಾಗವಹಿಸುವ ಇರಾದೆ ಏನಾದರೂ ಇದೆಯಾ ?
ಖಂಡಿತ ಇಲ್ಲ. ನನಗೆ ದುಡ್ಡು ಮುಖ್ಯವಲ್ಲ. ಆ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಪ್ರಯತ್ನಿಸಿಯೂ ಇಲ್ಲ, ಪ್ರಯತ್ನಿಸೋದೂ ಇಲ್ಲ.

  • ಸ್ಪರ್ಧೆಗೆ ಹೇಗೆ ತಯಾರಾಗಿದ್ದಿರಿ?
ಅಂಥಾ ವಿಶೇಷ ತಯಾರಿ ಏನೂ ನಡೆಸಿರಲಿಲ್ಲ. ಕೆಲಸದ ನಡುವೆ ಪುರುಸೊತ್ತು ಸಿಗೋದೇ ಕಷ್ಟ. ಫೈನಲ್ಸ್‌ಗೆ ತಯಾರಾಗಲು ಅಷ್ಟೇನೂ ಹೆಚ್ಚು ಸಮಯ ಇರಲಿಲ್ಲ. ನನ್ನ ದಿನದ ಒಂದು ಗಂಟೆಯನ್ನು ಹೊಸತರ ಕಲಿಕೆಗೆ ಮುಡಿಪಾಗಿಟ್ಟಿದ್ದೇನೆ. ಬಹುಶಃ ಅದೇ ನನ್ನ ನೆರವಿಗೆ ಬಂದಿದೆ.

  • ನೀವು ಯಾವ ವಿಷಯ ಗಳಲ್ಲಿ ಎಕ್ಸ್‌ಪರ್ಟ್‌?
ಹಾಗೇನೂ ಇಲ್ಲ. ಕ್ವಿಜ್‌ನಲ್ಲಿ ಯಾವುದಾದರೂ ಒಂದು ವಿಷಯ ಆರಿಸಿಕೊಂಡು, ಅದರ ಇಂಚಿಂಚೂ ತಿಳಿದಿರಬೇಕಾಗುತ್ತದೆ. ಮೂಲ ಸುತ್ತಿನಲ್ಲಿ ‘ಕುಂಚ ಕಲೆಗಾರ ರಾಜಾ ರವಿವರ್ಮನ ಜೀವನ ಮತ್ತು ಸಾಧನೆ’ಯನ್ನು ಆರಿಸಿಕೊಂಡಿದ್ದೆ. ಸೆಮಿಫೈನಲ್ಸ್‌ಗೆ ‘ಸಲೀಂ ಅಲಿ ಸಾಧನೆ’ ಹಾಗೂ ಫೈನಲ್ಸ್‌ಗೆ ‘ನೊಬೆಲ್‌ ಪಾರಿತೋಷಕ ವಿಜೇತ ಮಹಿಳೆಯರು’ ಎಂಬ ವಿಷಯಗಳನ್ನು ಹೆಕ್ಕಿಕೊಂಡಿದ್ದೆ. ಕ್ವಿಜ್‌ಗೆ ನಾನು ಆಯ್ಕೆ ಆದಾಗ ಈ ವಿಷಯಗಳೆಲ್ಲಾ ನನಗೆ ಹಳತೇನೂ ಆಗಿರಲಿಲ್ಲ. ಕ್ವಿಜ್‌ ನೆವದಲ್ಲಾದರೂ ಒಂದಷ್ಟು ತಿಳಿಯೋ ಉದ್ದೇಶದಿಂದ ಈ ವಿಷಯಗಳನ್ನು ಆರಿಸಿಕೊಂಡೆ ಅಷ್ಟೆ.

  • ನಿಮ್ಮಲ್ಲಿನ ಯಾವ ‘ತನ’ ಗೆಲುವು ದಕ್ಕಿಸಿಕೊಟ್ಟಿತು?
ಪ್ರಶ್ನೆಗಳ ಕೇಳುವುದು ಒಂದು ಮಾತಾದರೆ, ಮಾಸ್ಟರ್‌ ಮೈಂಡ್‌ನಲ್ಲಿ ಸಿದ್ಧಾರ್ಥ ಬಸು ಅವುಗಳ ಪ್ರವಾಹ ಹರಿಸುತ್ತಾರೆ. ಸಮಯ, ನೆನಹು, ಹೆಚ್ಚು ಪಾಸ್‌ ಹೇಳದಿರುವುದು ಎಲ್ಲಾ ಇಲ್ಲಿ ಮುಖ್ಯ. ಇವೆಲ್ಲಕ್ಕೂ ಮಿಗಿಲಾಗಿ ತಾಳ್ಮೆ ಅತಿ ಮುಖ್ಯ. ಬಹುಶಃ ಈ ತಾಳ್ಮೆ ಹಾಗೂ ಸಮಯ ಪ್ರಜ್ಞೆ ನನ್ನನ್ನು ಗೆಲ್ಲಿಸಿವೆ.

  • ‘ಭಾರತದ ಮಹಾ ಮಿದುಳಿನ ’ ಜೀವನ ಇನ್ನು ಬದಲಾಗಲಿದೆಯೇ?
ಜೀವನ ಬದಲಾಗೋಕೆ ನಾನೇನು ಕೋಟಿ ಗೆದ್ದಿದ್ದೇನೆಯೇ?!!

‘ನಾವಂದುಕೊಂಡಿದ್ದು 39 ವರ್ಷದ ಅಧಿಕಾರಿ ಮನೋಜ್‌ ಕುಮಾರ್‌ ಗೆಲ್ಲುತ್ತಾರೆಂದು. ಅವರು ಫೈನಲ್ಸ್‌ ಮುಂಚಿನ ಪ್ರಶ್ನೆಗಳಿಗೆ ಚಕಚಕನೆ ಉತ್ತರ ಕೊಟ್ಟಿದ್ದರು. ಆದರೆ ಪ್ರಿಯಂವದ ಅನಿರೀಕ್ಷಿತ ಹಾಗೂ ಕಾರ್ಯಕ್ರಮದ ದಾಖಲೆ ಫಲಿತಾಂಶ(43 ಅಂಕಗಳು) ಕೊಟ್ಟರು’ ಎನ್ನುತ್ತಾರೆ ಕೆಬಿಸಿಯನ್ನೂ ನಿರ್ಮಿಸಿರುವ ಕ್ವಿಜ್‌ ಮಾಸ್ಟರ್‌ ಸಿದ್ಧಾರ್ಥ ಬಸು.

ರಾಜಸ್ಥಾನದ ಜೋಧಪುರದ ಉಮೇೖದ್‌ ಭವನ ಅರಮನೆಯಲ್ಲಿ ನಡೆದ ಈ ಸ್ಪರ್ಧೆಯ ವಿಶೇಷ ಪ್ರಶ್ನೆಗಳ ಹರಿಯುವ ವೇಗ ಮತ್ತು ಬೆಳಕಿನ ಮೋಡಿ. ಅದರಲ್ಲಿ ಮರೆಯಲಾರದ ಮಾತು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಹಿಳಾ ಪೊಲೀಸ್‌ ಅಧಿಕಾರಿ ಕಿರಣ್‌ ಬೇಡಿ ಹೇಳಿದ್ದು- ‘ ಟುಡೇ ದಿಸ್‌ ಲಿಟ್ಲ್‌ ಗರ್ಲ್‌ ಬಿಕೇಮ್‌ ಟಾಲ್‌ ಹಿಯರ್‌’.

ಅನಂತ ಸಾಧನೆಯ ಹಾದಿ ಹಿಡಿದಿರುವ ಪ್ರಿಯಂವದ ಕೊಡುವ ಉತ್ತರ ನಮಗೆ ಅಪೂರ್ಣ ಅನಿಸುತ್ತದೆ. ಅವರ ವ್ಯಕ್ತಿತ್ವವೇ ಹಾಗೆ; ಗಂಧದಂತೆ. ತೇದಷ್ಟೂ ಘಮಘಮ. ಕೆಲವರು ಏನೂ ಗೊತ್ತಿಲ್ಲದಿದ್ದರೂ ಹಣದ ಬಾಲ ಹಿಡಿದು ಹೊರಟರೆ, ಇನ್ನು ಕೆಲವರು ಆಕಾಶ ತಟ್ಟುವ ಬಯಕೆ ಕಟ್ಟಿಕೊಂಡಿರುತ್ತಾರೆ. ಪ್ರಿಯಂವದ ಈ ಎರಡನೇ ಗುಂಪಿಗೆ ಸೇರಿದವರು. ಸಾಧನೆಯ ಹಾದಿಯಲ್ಲಿ ಅವರ ನಡುಗೆಯ ವೇಗ ಇನ್ನಷ್ಟು ಹೆಚ್ಚಲಿ.

(ಐಎಎನ್‌ಎಸ್‌)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+