Police Flag Day : ಪೊಲೀಸ್ ಧ್ವಜ ದಿನಾಚರಣೆ: 135 ಪೊಲೀಸ್ ಸಿಬ್ಬಂದಿಗೆ ಸಿಎಂ ಮೆಡಲ್ ಪ್ರಶಸ್ತಿ
ಬೆಂಗಳೂರು, ಏ. 01: ಕರ್ನಾಟಕ ಪೊಲೀಸ್ ಇಲಾಖೆ ಏ. 2 ರಂದು ಆಯೋಜಿಸಿರುವ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಕೋರಮಂಗಲದಲ್ಲಿರುವ ಕೆಎಸ್ಆರ್ಪಿ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭದಲ್ಲಿ ಇಲಾಖೆಗೆ ಅಮೂಲ್ಯ ಸೇವೆ ಸಲ್ಲಿಸಿದ 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಲಾಗುತ್ತಿದೆ.
ಕೆಳ ಹಂತದ ಸಿಬ್ಬಂದಿಗೂ ಆದ್ಯತೆ:
ಪೊಲೀಸ್ ಇಲಾಖೆಗೆ ಅಮೂಲ್ಯ ಸೇವೆ ಸಲ್ಲಿಸಿದ ಕೆಳ ಹಂತದ ಸಿಬ್ಬಂದಿಗೆ ಹೆಚ್ಚು ಆದ್ಯತೆ ನೀಡಿ ಮುಖ್ಯಮಂತ್ರಿ ಪದಕ ನೀಡಲಾಗಿದೆ. ಪ್ರತಿ ವರ್ಷ ಸಿಎಂ ಪದಕ ನೀಡುವಲ್ಲಿ ಗೊಂದಲ ಉಂಟಾಗುತ್ತಿತ್ತು. ಅರ್ಹರ ಹೆಸರುಗಳೇ ಪಟ್ಟಿಯಲ್ಲಿ ಇರುತ್ತಿರಲಿಲ್ಲ. ಈ ಬಾರಿ ಪಟ್ಟಿ ದೊಡ್ಡದಾದರೂ ಅರ್ಹರ ಹೆಸರು ಜಾಸ್ತಿಯಿವೆ ಎಂದು ಮಾತು ಇಲಾಖೆಯಿಂದ ಕೇಳಿ ಬರುತ್ತಿವೆ.

ಸಿಎಂ ಮೆಡಲ್ ಪುರಸ್ಕೃತರ ಪಟ್ಟಿ:
ವೀರೇಂದ್ರ ಕುಮಾರ್ ಡಿವೈಎಸ್ಪಿ, ಸಿಐಡಿ, ರಾಘವೇಂದ್ರ ಅರ್. ನಾಯಕ್, ಡಿವೈಎಸ್ಪಿ, ಡಿಎಎಅರ್ ಉಡುಪಿ, ಚಂದ್ರಕಾಂತ್ ನಂದಾರೆಡ್ಡಿ, ಡಿವೈಎಸ್ಪಿ ಬಾಗಲಕೋಟೆ, ಆರ್. ಎನ್. ನಿಕಿಲ್ ಕುಮಾರ್, ಎಸಿಬಿ ಸಿಎಅರ್ ದಕ್ಷಿಣ, ಅರ್. ರಮೇಶ್ ಸಹಾಯಕ ಕಮಾಂಡೆಂಟ್, 3ನೇ ಪಡೆ, ಕೆಎಸ್ಆರ್ಪಿ, ಕೇದಾರ್ ನಾಥ್, ಜಿ.ಎಚ್. ಪಿಟಿಎಸ್ ತಣಿಸಂದ್ರ, ಎಚ್.ಪಿ ಶಿವಕುಮಾರ್ ಡಿವೈಎಸ್ಪಿ, ಬೆಂಗಳೂರು ಕೇಂದ್ರ ವಲಯ, ಮಲ್ಲೇಶ ದೊಡ್ಡಮನಿ, ಡಿವೈಎಸ್ಪಿ ಬಳ್ಲಾರಿ, ಎಂ.ಎನ್. ಶಶಿಧರ್, ಎಸಿಪಿ , ದೆವರಾಜ ಪೊಲೀಸ್ ಠಾಣೆ, ಮುರಳೀಧರ್, ಡಿವೈಸ್ಪಿ ಕೆಜಿಎಫ್, ಅಡಿವೆಪ್ಪ, ಶೀವಪ್ಪ, ಎಸಿಬಿ ಬೆಳಗಾವಿ, ಆರ್. ಪ್ರಕಾಶ್, ಪೊಲೀಸ್ ಇನ್ಸ್ಪೆಕ್ಟರ್, ಗೋವಿಂದಪುರ, ಬೆಂಗಳೂರು ನಗರ, ಯು. ಆರ್. ಮಂಜುನಾಥ್ ಜಯನಗರ ಪೊಲೀಸ್ ಠಾಣೆ, ನಟರಾಜ್ , ಪಿಐ ಸುದ್ದುಗುಂಟೆ ಪೊಲೀಸ್ ಠಾಣೆ, ಶಿವಕುಮಾರ್ ಮುಚ್ಚುಂಡಿ, ರಾವ್ ಗಣೇಶ್ ಜನಾರ್ಧನ್, ಸಿ. ನಾಗಪ್ಪ, ಸಿ.ಎಸ್. ಶಿವಣ್ಣ ನಾಯಕ್ ಇತರರರು.
ರೈಲ್ವೇ ಪೊಲೀಸ್ ವಿಭಾಗದಲ್ಲಿ ಇಪ್ರಾಮ್, ಸಗ್ಯರಾಜ್, ನಂದಕುಮಾರ್ ಯು, ಮಂಗಳೂರು, ಸಲೀಂ ಸಿ. ದಾಪ್, ಲೋಕಾಯುಕ್ತ , ಎಚ್. ಎಚ್. ರಾಮಚಂದ್ರೇಗೌಡ, ಪಿಐ, ಎಫ್ ಬಿಸಿ, ವಿಜಯ್ ಕುಮಾರ್ ಎನ್. ಸಿನ್ನೂರ್ ಪಿಐ, ಹೀರೇ ಬಾಗೇವಾಡಿ, ಎಸ್. ಮಂಜುನಾಥ ಸಿಪಿಐ, ಆಳಂದ, ದೌಲತ್ ಎನ್ ಕುರಿ, ಸಿಪಿಐ , ಎಂ. ಶ್ರೀನಿವಾಸ್ ರಾವ್, ಹೊಸಪೇಟೆ, ಜೆ.ಎಸ್. ತಿಪ್ಪೇಸ್ವಾಮಿ ಚಳ್ಳಕೆರೆ, ರವೀಂದ್ರ ಎಸ್. ಕೊವಳ್ಳಿ, ಬಿ.ಸಿ . ರಾಜಶೇಖರಯ್ಯ, ಪಿಎಸ್ಐ ಅನ್ನಪೂಣೇಶ್ವರಿ ನಗರ, ನಿಂಗರಾಜ್ ಕೆ. ಹನ್ನಿನವರ್, ಪಿಎಸ್ಐ, ಬಾಬುರೆಡ್ಡಿ ಪಿಎಸ್ಐ, ಕೆಜಿಹಳ್ಳಿ, ಶ್ರೀನಿವಾಸ, ಪಿಎಸ್ಐ ಸುಬ್ರಮಣ್ಯನಗರ, ಎಚ್. ಕರಗಯ್ಯ, ಪಿಎಸ್ಐ, ಜೆಪಿನಗರ, ಸಿ.ಎನ್. ಶ್ರೀನಿವಾಸ್, ಆರ್ಎಸ್ಐ, ಆರ್. ಚಂದ್ರು, ಸಿಎಆರ್, ಪಶ್ಚಿಮ, ಯಲ್ಲಪ್ಪ ಬಿ. ಭಜಂತ್ರಿ, ಕೆಎಸ್ಆರ್ಪಿ, ಬೆಳಗಾವಿ ಮತ್ತಿತರ ಪಿಎಸ್ಐಗಳಿಗೆ ಸಿಎಂ ಪದಕ ನೀಡಲಾಗಿದೆ.
Recommended Video
ಕೆ. ಆರ್. ನಂದೀಶ್, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಬೆಂಗಳೂರು, ಪಿ. ಸಿದ್ದರಾಮಣ್ಣ, ಬಿ.ಎಸ್. ಚಂದ್ರ ಸೇಖರ್, ಜಿ. ಕೃಷ್ಣಕುಮಾರ್, ಹನುಮೇಶ್, ಎಚ್. ಸಿಸಿಬಿ, ಸೇರಿದಂತೆ ಒಟ್ಟು 135 ಮಂದಿಗೆ ಸಿಎಂ ಮುಖ್ಯಮಂತ್ರಿ ಪದಕ ನೀಡಲಾಗಿದೆ.












Click it and Unblock the Notifications