ರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!
ಮಧ್ಯವರ್ತಿಗಳನ್ನು ತಡೆಯುವುದರಿಂದ ನಾವು ನಮ್ಮ ಕಾರ್ಯಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಬಹುದು. ಇದಕ್ಕೆ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು,
1. ಸ್ಥಳೀಯವಾಗಿ ಕೆಲಸ ಮಾಡುವ, ಸಂತ್ರಸ್ತರಿಗೆ ನಿಜಾವಾಗಿ ನೆರವಾಗುತ್ತಿರುವ ಸ್ವಯಂ-ಸೇವಕರು/ಸಂಘಗಳನ್ನೂ ಗುರುತಿಸುವುದು.
2. ಹಣವನ್ನು ಮೂರನೇ ವ್ಯಕ್ತಿಗಳಿಗೆ ಕೊಡುವುದನ್ನು ನಿಲ್ಲಿಸಿ ನೆರವಾಗಿ ಅವರಿಗೆ ತಲುಪುವಂತೆ ನೋಡಿಕೊಳ್ಳುವುದು.
3. ಆ ತಾಲೂಕಿನ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರ ಮುಖಾಂತರ ವ್ಯವಹಾರ ನಡೆಸುವುದು.
4. ತಾಲೂಕಿಗೆ ಒಬ್ಬರಂತೆ ನಿರ್ವಾಹಕರನ್ನು ನೇಮಿಸಿ ಅವರ ಮುಖಾಂತರವೇ ವ್ಯವಹರಿಸುವುದು.
5. ವಾರಕ್ಕೆ ಇಂತಿಷ್ಟು ಕೆಲಸ ಎಂದು ಗೊತ್ತು ಮಾಡಿ, ನಿಯತವಾಗಿ ಅದರ ಮಾಹಿತಿ ಪಡೆಯುವುದು.
6. ನಡೆಯುತ್ತಿರುವ ಕೆಲಸವನ್ನು ಗಮನದಲ್ಲಿಟ್ಟುಕೊಂಡಷ್ಟೇ ಮುಂದಿನ ಹಣವನ್ನು ರವಾನೆ ಮಾಡುವುದು.
7. ಸ್ಥಳಿಯವಾಗಿಯೇ ಕಟ್ಟಡ ನಿರ್ಮಾಣ ಸಾಮಗ್ರಿ ಹೊಂದಿಸುವುದು.
8. ತಾಲೂಕು ಕಛೇರಿಗಳ ಸಹಾಯ ಪಡೆಯುವುದು.
9. ವೈಯಕ್ತಿಕ ಸಹಾಯ ಮಾಡಲು ಇಚ್ಛಿಸುವವರನ್ನು ವಾರಕ್ಕೆ ಒಂದು ತಂಡದಂತೆ ಮಾಡಿ ಅವರನ್ನು ಅಲ್ಲಿಗೆ ಕಳುಹಿಸಿ ಅವರ ಮುಖಾಂತರ ಅಲ್ಲಿನ ಕೆಲಸ ಕಾರ್ಯಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆಯುವುದು.
ವನವಾಸಿ ಕಲ್ಯಾಣ ಸಂಘ ಮತ್ತು ಅದರ ಇತರೆ ಸಂಘಟನೆಗಳು ನಮಗೆ ಈ ಕಾರ್ಯದಲ್ಲಿ ನೆರವಾಗಬಲ್ಲವು.
ಸಂತ್ರಸ್ತರಿಗೆ ಸಹಾಯ ಮಾಡಬಯಸುವವರು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : http://northkarnataka.floods.googlepages.com/tinthini-kn
ಗ್ಯಾಲರಿ : ಪಾಳುಬಿದ್ದಿರುವ ಗುಲಬರ್ಗಾ ಜಿಲ್ಲೆಯ ತಿಂಥಿಣಿ ಗ್ರಾಮ