ಅಂತ್ಯವಿಲ್ಲದ ಗಾಯಕ ರಾಜು ಅಜರಾಮರ
ಜನಪ್ರಿಯ ಗೀತೆಗಳ ಸರದಾರ: ಎದೆ ತುಂಬಿ ಹಾಡುವೆನು...ಬೇಂದ್ರೆ ಅವರ ಆವು ಈವಿನ...ಕೋಳಿಕೇ ರಂಗ...ಪುಟ್ನಂಜಿ...ಯಾವ ಮೋಹನ ಮುರಳಿ...ಶರೀಫಜ್ಜನ ಗೀತೆಗಳು ಸೇರಿದಂತೆ ಭಾವಗೀತೆ, ಜನಪದ ಗೀತೆಯಳ ಮಾಧುರ್ಯವನ್ನು ಕನ್ನಡ ಜನತೆಗೆ ಸುಮಾರು 15 ವರ್ಷಗಳ ಕಾಲ ಉಣಬಿಡಿಸಿದರು.
ಆಲ್ ರೌಂಡರ್ ರಾಜು: ಅಪ್ಪನಂತೆ ಹಾರ್ಮೋನಿಯಂ ಹಿಡಿದು ರಾಜು ಹಾಡಲು ಕುಳಿತರೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಿದ್ದರು. ಹಾರ್ಮೋನಿಯಂ ಅಲ್ಲದೆ, ತಬಲಾ, ಗಿಟಾರ್, ಮ್ಯಾಂಡೋಲಿನ್ ಹಾಗೂ ಕೀಬೋರ್ಡ್ ನಲ್ಲೂ ನಿಷ್ಣಾತರಾಗಿದ್ದ ರಾಜು, ಆಕಾಶವಾಣಿಯಲ್ಲಿ ಏ ಗ್ರೇಡ್ ಕಲಾವಿದರಾಗಿದ್ದರು.
ದೂರದರ್ಶನ,
ಉದಯ
ಟಿವಿ,
ಜೀ
ಕನ್ನಡ,
ಈ
ಟಿವಿ
ಸೇರಿದಂತೆ
ಹಲವು
ವಾಹಿನಿಗಳಲ್ಲಿ
ಕಾರ್ಯಕ್ರಮಗಳನ್ನು
ನೀಡಿದ್ದಾರೆ.
ಸುಮಾರು
200
ಕ್ಕೂ
ಹೆಚ್ಚು
ಭಾವಗೀತೆಗಳಿಗೆ
ಸ್ವರ
ಸಮ್ಯೋಜನೆ
ಮಾಡಿದ್ದಾರೆ.
ಬೆಂಗಳೂರು
ಸುಗಮ
ಸಂಗೀತ
ಶಾಲೆ
ರೂಪಿಸಿ
ಅನೇಕಾನಕ
ಶಿಷ್ಯರನ್ನು
ನಾಡಿಗೆ
ಪರಿಚಯಿಸಿದ
ಕೀರ್ತಿ
ರಾಜುಗೆ
ಸಲ್ಲುತ್ತದೆ.
ವಿಡಿಯೋ:
ರಾಜು
ಅನಂತಸ್ವಾಮಿ
ಜನ್ಮದಿನ
ಸ್ಮರಣೆ
ಹಂಪಿ ಉತ್ಸವ, ಸಾರ್ಕ್ ಸಮ್ಮೇಳನ, ವಸಂತ ಹಬ್ಬ, ದಸರಾ ಹಬ್ಬ, ಅಂತಾರಾಷ್ಟ್ರೀಯ ವಾಣಿಜ್ಯ ಸಮಾವೇಶ ಮುಂತಾದೆಡೆ ಅಲ್ಲದೆ, ಆಸ್ಟ್ರೇಲಿಯಾ, ಅಬುದಾಬಿ, ಮಲೇಷಿಯಾ, ನ್ಯೂಜಿಲೆಂಡ್, ಸಿಂಗಪುರ, ಯುಕೆ, ಯುಎಸ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿ ಜನರ ಮನ ತಣಿಸಿದ್ದಾರೆ.
ಹಲವಾರು ಟಿವಿ, ಸಿನಿಮಾಗಳಲ್ಲೂ ರಾಜು, ಗಾಯಕರಾಗಿ, ನಟರಾಗಿ ಜನಮೆಚ್ಚುಗೆ ಗಳಿಸಿದರೂ, ಜನಪದ ಹಾಗೂ ಭಾವಗೀತೆ ಕ್ಷೇತ್ರದಲ್ಲಿ ಅವರ ಸಾಧನೆ ಅನನ್ಯ. ಅವರ ಸಂಗೀತಸುಧೆ ಜನಮನದಲ್ಲಿ ಸದಾ ಹರಿಯುತ್ತಿರಲಿ.