ಅಂತ್ಯವಿಲ್ಲದ ಗಾಯಕ ರಾಜು ಅಜರಾಮರ

ಜನಪ್ರಿಯ ಗೀತೆಗಳ ಸರದಾರ: ಎದೆ ತುಂಬಿ ಹಾಡುವೆನು...ಬೇಂದ್ರೆ ಅವರ ಆವು ಈವಿನ...ಕೋಳಿಕೇ ರಂಗ...ಪುಟ್ನಂಜಿ...ಯಾವ ಮೋಹನ ಮುರಳಿ...ಶರೀಫಜ್ಜನ ಗೀತೆಗಳು ಸೇರಿದಂತೆ ಭಾವಗೀತೆ, ಜನಪದ ಗೀತೆಯಳ ಮಾಧುರ್ಯವನ್ನು ಕನ್ನಡ ಜನತೆಗೆ ಸುಮಾರು 15 ವರ್ಷಗಳ ಕಾಲ ಉಣಬಿಡಿಸಿದರು.
ಆಲ್ ರೌಂಡರ್ ರಾಜು: ಅಪ್ಪನಂತೆ ಹಾರ್ಮೋನಿಯಂ ಹಿಡಿದು ರಾಜು ಹಾಡಲು ಕುಳಿತರೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಿದ್ದರು. ಹಾರ್ಮೋನಿಯಂ ಅಲ್ಲದೆ, ತಬಲಾ, ಗಿಟಾರ್, ಮ್ಯಾಂಡೋಲಿನ್ ಹಾಗೂ ಕೀಬೋರ್ಡ್ ನಲ್ಲೂ ನಿಷ್ಣಾತರಾಗಿದ್ದ ರಾಜು, ಆಕಾಶವಾಣಿಯಲ್ಲಿ ಏ ಗ್ರೇಡ್ ಕಲಾವಿದರಾಗಿದ್ದರು.
ದೂರದರ್ಶನ, ಉದಯ ಟಿವಿ, ಜೀ ಕನ್ನಡ, ಈ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಭಾವಗೀತೆಗಳಿಗೆ ಸ್ವರ ಸಮ್ಯೋಜನೆ ಮಾಡಿದ್ದಾರೆ. ಬೆಂಗಳೂರು ಸುಗಮ ಸಂಗೀತ ಶಾಲೆ ರೂಪಿಸಿ ಅನೇಕಾನಕ ಶಿಷ್ಯರನ್ನು ನಾಡಿಗೆ ಪರಿಚಯಿಸಿದ ಕೀರ್ತಿ ರಾಜುಗೆ ಸಲ್ಲುತ್ತದೆ.
ವಿಡಿಯೋ: ರಾಜು ಅನಂತಸ್ವಾಮಿ ಜನ್ಮದಿನ ಸ್ಮರಣೆ
ಹಂಪಿ ಉತ್ಸವ, ಸಾರ್ಕ್ ಸಮ್ಮೇಳನ, ವಸಂತ ಹಬ್ಬ, ದಸರಾ ಹಬ್ಬ, ಅಂತಾರಾಷ್ಟ್ರೀಯ ವಾಣಿಜ್ಯ ಸಮಾವೇಶ ಮುಂತಾದೆಡೆ ಅಲ್ಲದೆ, ಆಸ್ಟ್ರೇಲಿಯಾ, ಅಬುದಾಬಿ, ಮಲೇಷಿಯಾ, ನ್ಯೂಜಿಲೆಂಡ್, ಸಿಂಗಪುರ, ಯುಕೆ, ಯುಎಸ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿ ಜನರ ಮನ ತಣಿಸಿದ್ದಾರೆ.
ಹಲವಾರು ಟಿವಿ, ಸಿನಿಮಾಗಳಲ್ಲೂ ರಾಜು, ಗಾಯಕರಾಗಿ, ನಟರಾಗಿ ಜನಮೆಚ್ಚುಗೆ ಗಳಿಸಿದರೂ, ಜನಪದ ಹಾಗೂ ಭಾವಗೀತೆ ಕ್ಷೇತ್ರದಲ್ಲಿ ಅವರ ಸಾಧನೆ ಅನನ್ಯ. ಅವರ ಸಂಗೀತಸುಧೆ ಜನಮನದಲ್ಲಿ ಸದಾ ಹರಿಯುತ್ತಿರಲಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications