ಹುಡುಗಿ ನಿನ್ನ ನೆನಪಲ್ಲಿ ಇಷ್ಟಿಷ್ಟೇ ಸವೆಯುತ್ತಿರುವ...
ನಿನ್ನ ಹೆಸರು ಕೂಡ ಬರೆಯಬೇಕು ಅಂತನ್ನಿಸ್ತಿಲ್ಲ. ಊರಿಗೆ ಹೊರಟ ನಿಂತು, ಬಸ್ ಟಿಕೆಟ್ ನ ಬ್ಯಾಗ್ ನೊಳಗೆ ಹಾಕಿಕೊಳ್ಳಬೇಕು ಅನ್ನೋಷ್ಟರಲ್ಲಿ ಫೋನ್ ಮಾಡಿದ ನೀನು, ಊರಿಗೆ ಬರೋದು ಬೇಡ. ನನ್ನನ್ನು ನೋಡಕ್ಕೂ ಬರಬೇಡ. ನನ್ನ ಮನೆಯವರು ಹುಡುಗನ್ನ ಗೊತ್ತು ಮಾಡಿದ್ದಾರೆ ಎಂದು ಒಂದೇ ಉಸಿರಿಗೆ ಹೇಳಿ ಫೋನಿಟ್ಟು ಬಿಟ್ಟೆ.
ಒಂದು ಕ್ಷಣಕ್ಕೆ ಈಗಲೇ ಈ ಜಗತ್ತು ಏಕೆ ಕೊನೆಯಾಗಬಾರದು ಅನ್ನಿಸಿತು ಕಣೆ. ಅಮ್ಮನಿಗೆ ಹೇಳಿ ಬಂದಿದ್ದೆ, ಈ ಸಲ ಊರಿಗೆ ಬಂದಾಗ ನಿನ್ನ ಸೊಸೆಯನ್ನು ತೋರಿಸ್ತೀನಿ. ಈಗಿರುವ ಮನೆಯನ್ನು ಕೆಡವಿ ದೊಡ್ಡದನ್ನು ಕಟ್ಟೋಣ ಅಂತ. ಆದರೆ ಇಪ್ಪತ್ತು-ಮೂವತ್ತು ಸೆಕೆಂಡ್ ಗಳ ಒಂದು ಫೋನ್ ಕಾಲ್ ನಲ್ಲಿ ಇಡೀ ಕನಸಿನ ಗೋಪುರವನ್ನೇ ಕೆಡವಿ ಬಿಟ್ಟೆಯಲ್ಲಾ!
ನಾನು ಊರಿಗೇನೋ ಬರಲಿಲ್ಲ. ಆದರೆ ಕೆಲಸಕ್ಕೆ ಹೋಗದಿರುವುದಂತೂ ಸಾಧ್ಯವಿಲ್ಲವಲ್ಲ. ಪ್ರತಿ ದಿನ ಸಮಯಕ್ಕೆ ಸರಿಯಾಗಿ ನನ್ನ ದೇಹವನ್ನು ಎಳೆದುಕೊಂಡು ಅಲ್ಲಿವರೆಗೆ ಹೋಗ್ತೀನಿ. ಮನೆಯಿಂದ ಆಫೀಸಿನವರೆಗೆ ನಡೆದುಕೊಂಡೇ ಹೋಗ್ತೀನಿ ಆದ್ದರಿಂದ ದಾರಿಯುದ್ದಕ್ಕೂ ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರು, ಕೈ ಕೈ ಹಿಡಿದು ನಗುತ್ತಿರುವ ಹೊಸ ಪ್ರೇಮಿಗಳು ಕಾಣ್ತಾರೆ.

ಈ ಪ್ರೀತಿ-ಪ್ರೇಮ ಎಲ್ಲ ಬೇಡ ಎಂದು ಹೇಳಿಬಿಡೋಣ ಅಂತ ಕಾಲು ಆ ಕಡೆ ಎಳೆಯುತ್ತೆ. ಆದರೆ ಮನಸ್ಸು ಗದರತ್ತೆ. ಎಲ್ಲರೂ ನಿಮ್ಮ ಹಾಗೇ ಇರಲ್ಲ. ಬಾಯಿ ಮುಚ್ಚಿಕೊಂಡು ನಿನ್ನ ದಾರಿ ನೋಡಿಕೋ ಅಂತ. ಅದೂ ನಿಜ ಅಂದುಕೊಂಡು ಸುಮ್ಮನಾಗ್ತೀನಿ.
ಆದರೂ ಅದ್ಯಾಕೋ ನಿನ್ನ ಮೇಲೆ ಸಿಟ್ಟೂ ಬರ್ತಿಲ್ಲ. ಅಷ್ಟೊಂದು ಪ್ರೀತಿಸಿಬಿಟ್ಟೆನಾ ಅಂತ ಈಗ ನನಗೇ ಗಾಬರಿಯಾಗುತ್ತದೆ. ಇರಲಿ ಬಿಡು, ನಿನ್ನ ಕಾಲ್ ಬರುತ್ತದೆ. ಮತ್ತೊಂದು ಸಲ ಮನಸು ಬದಲಿಸ್ತಿಯಾ ಅಂತ ಕಾಯ್ತಾ ಇರ್ತೀನಿ.
ಇಷ್ಟಿಷೇ ಸವೆಯುತ್ತಿರುವ, ಇನ್ನೂ ನಿನ್ನವನೇ
ಸ...ನಂದ
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications