ಅ.27ಕ್ಕೆ ಲತಾ ಮಂಗೇಶ್ಕರ್ ಪುಸ್ತಕ ಲೋಕಾರ್ಪಣೆ

ಆನಂದರಾವ್ ವೃತ್ತದ ಬಳಿ ಇರುವ ಕೆಇಬಿ ಎಂಜಿನಿಯರ್ಸ್ ಸಂಘದ ಸಭಾಂಗಣದಲ್ಲಿ ಸಂಜೆ 6.30ಕ್ಕೆ ಖ್ಯಾತ ಹಿನ್ನೆಲೆ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಗೀತ ಗಾಯನ: ಪುಸ್ತಕ ಬಿಡುಗಡೆಗೂ ಮುನ್ನ ಖ್ಯಾತ ಗಾಯಕಿ ಶ್ರೀಮತಿ ಚಂದ್ರಿಕಾ ಗುರುರಾಜ್ ಮತ್ತು ತಂಡದವರಿಂದ ಲತಾ ಹಾಡಿರುವ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
***
'ಹಾಡು ಹಕ್ಕಿಯ ಹೃದಯಗೀತೆ'ಯ ಸುತ್ತ ಮುತ್ತ..
* ಈ ಪುಸ್ತಕವು ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ. ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ ಕುರಿತಾದ, ದಕ್ಷಿಣ ಭಾರತದ ಮೊದಲ ಪುಸ್ತಕ ಇದು.
*ಇದು ವಿಜಯಕರ್ನಾಟಕದಲ್ಲಿ 50 ವಾರ ಪ್ರಕಟವಾದ ಲೇಖನ ಮಾಲಿಕೆಯ ಸಂಗ್ರಹ. ಲೇಖನಗಳನ್ನು ಪರಿಷ್ಕರಿಸಿ, ಸಾಕಷ್ಟು ಬಿಗಿಗೊಳಿಸಿ, ಅಪ್ಡೇಟ್ ಮಾಡಿ, ಹೆಚ್ಚುವರಿ ಹಾಗೂ ಇತ್ತೀಚಿನ ಮಾಹಿತಿಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ತರಲಾಗಿದೆ.
*215ಕ್ಕೂ ಮಿಕ್ಕಿ ಪುಟಗಳುಳ್ಳ ಈ ಪುಸ್ತಕವನ್ನು ಸುಮುಖ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಮುನ್ನುಡಿಯಲ್ಲಿ ಲತಾ ಮಂಗೇಶ್ಕರ್ ಅವರ ಒಟ್ಟಾರೆ ವ್ಯಕ್ತಿತ್ವದ ಸ್ಥೂಲ ಚಿತ್ರಣವಿದೆ.
ಪುಸ್ತಕವು ಮುಖ್ಯವಾಗಿ ನಾಲ್ಕು ಭಾಗಗಳನ್ನು ಒಳಗೊಂಡಿದೆ.
1. ಜನನ-ಯೌವನ: ಲತಾ ಮಂಗೇಶ್ಕರ್ ಅವರ ಪೂರ್ವಿಕರು, ಅವರ ತಂದೆ ಹಾಗೂ ಬಾಲ್ಯ ಜೀವನದ ಬಗ್ಗೆ ವಿವರ.
2. ಸಂಘರ್ಷ-ಉತ್ಕರ್ಷ: ಲತಾ ಅವರು ನಟಿಯಾಗಿ ಚಿತ್ರರಂಗ ಸೇರಿದ್ದು, ಬಳಿಕ ಗಾಯಕಿಯಾಗಿ ನೆಲೆಯೂರಲು ನಡೆಸಿದ ಸಂಘರ್ಷ. ಜನಪ್ರಿಯ ಗಾಯಕಿಯಾಗಿದ್ದು, ಹಲವು ಸಂಗೀತ ನಿರ್ದೇಶಕರೊಟ್ಟಿಗೆ ಕಾರ್ಯ ನಿರ್ವಹಣೆ, ಕೆಲವರೊಡನೆ ವೃತ್ತಿ ಸಂಬಂಧ ಮತ್ತು ವಿರಸ, ಗಾಯಕರು ಹಕ್ಕುಗಳಿಗಾಗಿ ವಿಶೇಷವಾಗಿ ಸಂಭಾವನೆ ವಿಚಾರದಲ್ಲಿ ಹೋರಾಟ, ಲತಾ ಅನುಭವಿಸಿದ ಒತ್ತಡ-ಪ್ರಭಾವ ಮತ್ತು ಆರೋಪ-ಅಪವಾದಗಳ ಬಗ್ಗೆ ಪುಸ್ತಕದಲ್ಲಿ ಮಾಹಿತಿಗಳಿವೆ.
3. ಮನೆ-ಮನ: ಲತಾ ಅವರು ಹಲವು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆಲವು ಹಾಡುಗಳನ್ನು ಇಷ್ಟಪಟ್ಟಿದ್ದಾರೆ. ಒಂದೊಂದು ಹಾಡಿಗೂ ಒಂದೊಂದು ಕಥೆ ಇರುವುದನ್ನು ಹೇಳಿದ್ದಾರೆ. ಅದರ ವಿವರ ಜತೆಗೆ ಅವರ ಮನೆ ಬಗ್ಗೆ ಮಾಹಿತಿ..
4. ಲತಾ-ಜೀವಂತ ದಂತ ಕಥಾ: ಲತಾ ಅವರ ಕೆಲವು ವೈಯಕ್ತಿಕ ಆಸಕ್ತಿಗಳು, ಹವ್ಯಾಸಗಳು, ವ್ಯಕ್ತತ್ವ ಕುರಿತ ವಿವರಗಳಿವೆ.
5. ಲತಾ ಕುರಿತ ಈ ವಿಷಯಗಳು ಗೊತ್ತಾ? : ಲತಾ ಅವರು ಹಾಡಿರುವ ಗೀತೆಗಳು, ಯುಗಳ ಗೀತೆ, ಕೆಲವು ಸ್ವಾರಸ್ಯಕರ ಸಂಗತಿಗಳ ವಿವರಗಳು ಪುಸ್ತಕದಲ್ಲಿ ಇವೆ.
(ದಟ್ಸ್ ಕನ್ನಡ ವಾರ್ತೆ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications