ಜಿನ್ನಾ ಕುರಿತ ಪ್ರತಾಪ್ ಸಿಂಹ, ಜಿಬಿ ಹರೀಶ್ ಪುಸ್ತಕ

2009ರಲ್ಲಿ, “ಜಿನ್ನಾ: ಇಂಡಿಯಾ ಪಾರ್ಟಿಶನ್, ಇಂಡಿಪೆಂಡೆನ್ಸ್" ಎಂಬ ಪುಸ್ತಕ ಬರೆದಿರುವ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು, ಜಿನ್ನಾರನ್ನು ಹೊಗಳಿ ಬಿಜೆಪಿಯಿಂದಲೇ ಉಚ್ಛಾಟಿತರಾಗಿದ್ದಾರೆ. ಇಷ್ಟು ವರ್ಷ ದೇಶ ವಿಭಜನೆ ಸಲುವಾಗಿ ಭಾರತೀಯರು ಯಾವ ವ್ಯಕ್ತಿಯನ್ನು ಖಳನೆಂಬಂತೆ ಕಾಣುತ್ತಾ ಬಂದಿದ್ದರೋ ಅಂತಹ ವ್ಯಕ್ತಿಯ ಬಗ್ಗೆ ಅಖಂಡ ಭಾರತದ ಕನಸ್ಸು ಕಾಣುತ್ತಿರುವ ಬಿಜೆಪಿ ನಾಯಕರೇ ಏಕೆ ಮುಗಿಬಿದ್ದು ಹೊಗಳುತ್ತಿದ್ದಾರೆ? ಹಾಗಾದರೆ ಜಿನ್ನಾ ಯಾರು? ವಾಸ್ತವದಲ್ಲಿ ಜಿನ್ನಾ ನಿಜಕ್ಕೂ ಒಬ್ಬ ರಾಷ್ಟ್ರವಾದಿ, ಸೆಕ್ಯುಲರ್ವಾದಿಯಾಗಿದ್ದರೆ?
ಜಿನ್ನಾ ಸಮಕಾಲೀನರು ಬರೆದಿರುವ 50ಕ್ಕೂ ಹೆಚ್ಚು ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಪತ್ರಕರ್ತ ಪ್ರತಾಪ್ ಸಿಂಹ ಮತ್ತು ಡಾ. ಜಿ.ಬಿ. ಹರೀಶ್ “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೆ?" ಎಂಬ ಪುಸ್ತಕ ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಆಯಾ ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳನ್ನು ದಾಖಲಿಸಿರುವ ಈ ಪುಸ್ತಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಜಿನ್ನಾ-ಗಾಂಧಿ-ನೆಹರು ಅವರ ನಿಜಸ್ವರೂಪದ ಮೇಲೆ ಹೊರಗೆಡವುವ ಪ್ರಯತ್ನ ಮಾಡಿದೆ.
ಸೆಪ್ಟೆಂಬರ್ 24ರಂದು ಅಪರಾಹ್ನ 12.30 ಗಂಟೆಗೆ ಬೆಂಗಳೂರಿನ 'ಭಾರತೀಯ ವಿದ್ಯಾಭವನ"ದಲ್ಲಿ ಖ್ಯಾತ ಗಾಂಧೀವಾದಿ ಮತ್ತೂರು ಕೃಷ್ಣಮೂರ್ತಿಯವರು ಮೊದಲ ಪ್ರತಿ ಸ್ವೀಕರಿಸಿ ಅನೌಪಚಾರಿಕವಾಗಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಹುಬ್ಬಳ್ಳಿಯ 'ಸಾಹಿತ್ಯ ಪ್ರಕಾಶ"ನ ಜಿನ್ನಾ ಕೃತಿಯನ್ನು ಹೊರತರುತ್ತಿದೆ.
(ದಟ್ಸ್ ಕನ್ನಡವಾರ್ತೆ)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications