480717iiwcಕಾದಂಬರಿಕಾರ ಶ್ರೀನಿವಾಸ ವೈದ್ಯರ ಸಾಹಿತ್ಯ ಸಂಭ್ರಮ/literature/book/2009/0427-novelist-srinivas-vaidya-book-talk.html'ಹಳ್ಳ ಬಂತು ಹಳ್ಳ' ಕಾದಂಬರಿಗೆ 2008ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಗಳಿಸಿದ ಪ್ರಮುಖ ಕಾದಂಬರಿಕಾರ ಧಾರವಾಡದ ಶ್ರೀನಿವಾಸ ವೈದ್ಯ ಅವರ ಸಾಹಿತ್ಯ ಸಂಭ್ರಮ 'ಪರಿಣಿತ ವೈದ್ಯರು' ಕಾರ್ಯಕ್ರಮ ಕಾರ್ಮಿಕರ ದಿನಾಚರಣೆಯಂದು ಬೆಂಗಳೂರಿನಲ್ಲಿ ಜರುಗಲಿದೆ.ಸಣ್ಣಕಥೆ ಮತ್ತು ಹಾಸ್ಯ ಬರಹಗಳ ಮುಖಾಂತರವೇ ಜನಜನಿತರಾದ ವೈದ್ಯರ ಬರಹಗಳ ಕುರಿತ ಮಾತುಕತೆ, ಚರ್ಚೆಗಳಿಗೆ ಪುಸ್ತಕ ಬಿಡುಗಡೆಗಳಿಗೆ ಇರುವ ಕೇಂದ್ರ ಸ್ಥಾನ ಬಸವನಗುಡಿಯಲ್ಲಿರುವ 36243http://kannada.oneindia.com/img/2009/04/27-vaidya2.jpg480717iiwcಪುಸ್ತಕ ಬಿಡುಗಡೆ ನೆವದಲ್ಲಿ ಸಾಹಿತ್ಯ 'ಸಂ'ವಾದ/literature/book/2009/0504-rajalakshmi-siddu-book-release-at-iiwc.htmlಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಎಂಬ ಕಥಾ ಸಂಕಲನ ಹಾಗೂ ಸಿದ್ದು ದೇವರಮನಿ ಅವರ 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ' ಕವನ ಸಂಕಲನಗಳನ್ನು ಭಾನುವಾರ ಮೇ 3ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೊಸ ಸಾಹಿತ್ಯದ ಗೋಚಾರಫಲದ ಬಗ್ಗೆ ರಸಿಕಾ ಕೇಳೋ ತಂಡ ಹಮ್ಮಿಕೊಂಡಿದ್ದ ಚರ್ಚೆ/ಸಂವಾದ ಕಾರ್ಯಕ್ರಮ 36378http://kannada.oneindia.com/img/2009/05/04-rajalakshmi-book1.jpg480717iiwcತಲೆಬರಹ : ನೂರೆಂಟು ಮಾತು ಕೇಳಲು ಭಾನುವಾರ ಬನ್ನಿ/literature/book/2009/0625-noorentu-maatu-talebaraha-vishweshwar-bhat.htmlಬೆಂಗಳೂರು, ಜೂ. 25 : ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕ ಅವರ ಅಂಕಣ ಬರಹಗಳ ಸಂಕಲನ 'ನೂರೆಂಟು ಮಾತು 5' ಮತ್ತು ಯುವ ಪತ್ರಕರ್ತರಿಗೆ ಮಾರ್ಗದರ್ಶಿಯಂತಿರುವ 'ತಲೆಬರಹ ಪತ್ರಿಕೆ ಹಣೆಬರಹ' ಎಂಬ ಎರಡು ಪುಸ್ತಕಗಳು ಭಾನುವಾರ ಜೂನ್ 28ರಂದು ಲೋಕಾರ್ಪಣಗೊಳ್ಳಲಿವೆ.ಪ್ರತಿ ಗುರುವಾರ ಪ್ರಕಟವಾಗುವ ಅಂಕಣ 'ನೂರೆಂಟು ಮಾತು' ಮೊನಚಿನಿಂದ ಕೂಡಿದ ಅಭಿಪ್ರಾಯ, ಸೊಗಸಾದ ನಿರೂಪಣೆಯಿಂದ ಓದುಗರ 37579http://kannada.oneindia.com/img/2009/06/25-vishbhat5.jpg480717iiwcಹೊಸ ಛಂದ ಪುಸ್ತಕಗಳು ಬೇಕಿದ್ದರೆ ಭಾನುವಾರ ಬನ್ನಿ/literature/book/2009/0703-three-new-books-from-chanda-book-publication.htmlಇದೇ ಭಾನುವಾರ ಜುಲೈ 5ರಂದು ಬೆಂಗಳೂರಿನ ಪುಸ್ತಕ ಪ್ರೇಮಿಗಳ ಕೈಗೆ 3 ಚೆಂದನೆಯ ಪುಸ್ತಕಗಳನ್ನು ನೀಡಲು ಛಂದ ಪುಸ್ತಕ ಪ್ರಕಾಶನ ಮತ್ತೆ ಅಣಿಯಾಗಿದೆ. ಛಂದ ಪುಸ್ತಕ ಬಿಡುಗಡೆ ಕಾರ್ಯಕ್ರಮವೆಂದರೆ ಅದೊಂದು ಹಬ್ಬ. ಹೊಸ ಪುಸ್ತಕಗಳ ಹುಡುಕಾಟದಲ್ಲಿರುವ ಎಲ್ಲ ಎಳೆಯ ಹಿರಿಯ ಗೆಳೆಯರೆಲ್ಲ ಒಂದೆಡೆ ಸೇರಿ ಉಭಯ ಕುಶಲೋಪರಿ ವಿಚಾರಿಸುತ್ತಾರೆ, ಪುಸ್ತಕ ಕೊಳ್ಳುತ್ತಾರೆ.ಪತ್ರಕರ್ತ ಸಂದೀಪ್ ನಾಯಕ, ಕಥೆಗಾರ್ತಿ ಸುಮಂಗಲಾ 37760http://kannada.oneindia.com/img/2009/07/03-chanda4.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg302032book releaseಕೈದಿಗಳ ಕಥನ, ನಾ ತುಕಾರಾಂ ಅಲ್ಲ ಕೃತಿಗಳ ಅರ್ಪಣೆ/literature/book/2009/0207-naa-tukaram-alla-naku-tanti-prakashana.htmlಬೆಂಗಳೂರು, ಫೆ.27: ನಾಕುತಂತಿ ಪ್ರಕಾಶನ ಹೊರತಂದಿರುವ ಗಣೇಶ್ ಅಮೀನಗಡ ಅವರ 'ಕೈದಿಗಳ ಕಥನ' ಮತ್ತು ಎಸ್ ಸುರೇಂದ್ರನಾಥ್ ಅವರ 'ನಾ ತುಕಾರಾಂ ಅಲ್ಲ' ಕೃತಿಗಳು ಮಾರ್ಚ್ 1ರಂದು ಬಿಡುಗಡೆಯಾಗಲಿವೆ. ಕೈದಿಗಳ ಕಥನ ಪುಸ್ತಕವನ್ನು ಡಾ.ಚಂದ್ರಶೇಖರ ಪಾಟೀಲ ಹಾಗೂ ನಾ ತುಕಾರಾಂ ಅಲ್ಲ ಕೃತಿಯನ್ನು ಡಾ.ಕೆ.ಮರುಳಸಿದ್ದಪ್ಪ ಬಿಡುಗಡೆ ಮಾಡುವರು. ಪುಸ್ತಕ ಗಳ ಕುರಿತು ಸಾಹಿತಿ ವಿವೇಕ 34912http://kannada.oneindia.com/img/2009/02/27-kaidigala-kathana1.jpg302032book releaseಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ/nri/article/2009/0312-swarnasethu-2008-book-release-by-haran.htmlಮೌನದಲಿ ಮೊಳೆಯೊಡೆದು ಬ್ರಹ್ಮಾಂಡವೇ ಹೂತುದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತುಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆಕೇಳದೆಯೆ ಗರ್ಭದಾಳದ ಗೀತೆ ಮೈಮರೆತುಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕುಸಪ್ತಸಾಗರದಾಚೆ ದ್ವೀಪವನು ಹುಡುಕಿಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿಹೃದಯಕಮಲವನೊಮ್ಮೆ ಹಿಡಿಯಬೇಕುಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿಎಚ್ಚರದ ರೇಖೆಗಳನೊತ್ತರಿಸಿಹೂವಿನಲಿ ಕೆಂಪು ಚೆಲ್ಲುವಮೊದಲೇ ತೋರುವೆಯ ಸಾಲಿಗಳನ್ನಿರಿಸಬೇಕುನಕ್ಷತ್ರಗಳ ಘಟ್ಟಣಿಗೆ ಇಳಿಸಿಹಾಲಾಹಲದ ಹಬ್ಬವಾಗುವ ಮೊದಲುಗುಂಡಿಗೆಯ ಮೆದುಹಾಸು ಕೆಡದವೊಲುಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.ಎಂದು 35175http://kannada.oneindia.com/img/2009/03/12-swarnasetu-haran1.jpg302032book releaseಏಪ್ರಿಲ್ 26ರಂದು ಮಣಿಕಾಂತ್ ಪುಸ್ತಕ ಬಿಡುಗಡೆ/literature/book/2009/0420-ar-manikanth-book-release-function.htmlಸಕ್ಕರೆಯ ಮಾತುಗಳ ಅಕ್ಕರೆಯ ಬರಹಗಾರ ದಟ್ಸ್ ಕನ್ನಡ ಅಂಕಣಕಾರ ಎಆರ್ ಮಣಿಕಾಂತ್ ಅವರು ಬರೆದಿರುವ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಎಂಬ ಪ್ರಬಂಧ ಸಂಕಲನ ಇದೇ ಭಾನುವಾರ ಏಪ್ರಿಲ್ 26ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗುತ್ತಲಿದೆ.ತಮ್ಮ ಲೇಖನಿಯ ಮುಖಾಂತರವೇ ಹೇಳಬೇಕಾದ್ದನ್ನು ಹೇಳುವ ಮತ್ತು ಮಾತನಾಡುವ ಮಣಿಕಾಂತ್ ಬರಹಗಳೆಂದರೆ ಅತ್ಯಂತ ಸುಂದರವಾಗಿ ಅಕ್ಷರಗಳೆಂಬ ಹೂವುಗಳನ್ನು ಅಷ್ಟೇ ಸುಂದರವಾಗಿ ಪೋಣಿಸಿಟ್ಟ ಹೂವಿದ್ದಂತೆ.ನಮ್ಮವರೇ 36067http://kannada.oneindia.com/img/2009/04/20-manikanth1.jpg302032book releaseಮುಂಬೈ ಕನ್ನಡಿಗ ಅಂಚನ್ ಅವರ 3 ಪುಸ್ತಕಗಳು/literature/book/2009/0421-mumbai-kannadiga-ravi-anchans-3-books.htmlಬೆಂಗಳೂರು, ಏ. 21 : ಮುಂಬೈ ಕನ್ನಡಿಗ ಅಂಕಣಕಾರ ರವಿ ರಾ. ಅಂಚನ್ ಅವರ ಪ್ರಗತಿ ಗ್ರಾಪಿಕ್ಸ್ ಮತ್ತು ಧಾತ್ರಿ ಪುಸ್ತಕ ಪ್ರಕಟಿಸಿರುವ ಅರಿವೆಂಬ ಮಾಯೆ, ಯಕ್ಷರಂಗ ಮತ್ತು ಮನೋಧರ್ಮ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ್ ಸ್ಮಾರಕ ಟ್ರಸ್ಟ್ ಆಯೋಜಿಸಿದೆ.ಏಪ್ರಿಲ್ 23ರಂದು ಗುರುವಾರ ಸಂಜೆ 6 ಗಂಟೆಗೆ ಜೆ.ಸಿ. ರಸ್ತೆ, ಕನ್ನಡ ಭವನದಲ್ಲಿರುವ 36123http://kannada.oneindia.com/img/2009/04/21-ravi-anchan-book1.jpg302032book releaseಅದೇ ದೋಸೆ ಅದೇ ಮಾಣಿ ಮತ್ತು ಅದೇ ಪ್ರಕಾಶ್ ರೈ!/column/manikanth/2009/0504-manikanth-book-release-and-prakash-rai.htmlಕಳೆದ ಭಾನುವಾರ-ಅಂದರೆ, ಏಪ್ರಿಲ್ 26ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕದ ಬಿಡುಗಡೆ ಸಮಾರಂಭ. ಅದೊಂದೇ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬರುತ್ತೇನೆ; ಅದೂ ಏನು? ಚೆನ್ನೈನಿಂದ ಹೊರಡುವ ಮೊದಲ ವಿಮಾನ ಹತ್ತಿ, ಏರ್‌ಪೋರ್ಟ್‌ನಿಂದ ಸೀದಾ ಸಮಾರಂಭ ನಡೆವ ರವೀಂದ್ರ ಕಲಾಕ್ಷೇತ್ರಕ್ಕೇ ಬರುತ್ತೇನೆ' ಅಂದಿದ್ದರು ನಟ 36376http://kannada.oneindia.com/img/2009/05/04-prakash-rai-mani1.jpgnews"> ಪುಸ್ತಕ ಬಿಡುಗಡೆ ನೆವದಲ್ಲಿ ಸಾಹಿತ್ಯ 'ಸಂ'ವಾದ | Kannada book release | Literary debate | IIWC | Kambar | Diwakar - ಪುಸ್ತಕ ಬಿಡುಗಡೆ ನೆವದಲ್ಲಿ ಸಾಹಿತ್ಯ 'ಸಂ'ವಾದ - Kannada Oneindia

ಪುಸ್ತಕ ಬಿಡುಗಡೆ ನೆವದಲ್ಲಿ ಸಾಹಿತ್ಯ 'ಸಂ'ವಾದ

Rajalakshmi, Abdul, Kambar, Diwakar, Malagi, Siddu
ಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಎಂಬ ಕಥಾ ಸಂಕಲನ ಹಾಗೂ ಸಿದ್ದು ದೇವರಮನಿ ಅವರ 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ' ಕವನ ಸಂಕಲನಗಳನ್ನು ಭಾನುವಾರ ಮೇ 3ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೊಸ ಸಾಹಿತ್ಯದ ಗೋಚಾರಫಲದ ಬಗ್ಗೆ ರಸಿಕಾ ಕೇಳೋ ತಂಡ ಹಮ್ಮಿಕೊಂಡಿದ್ದ ಚರ್ಚೆ/ಸಂವಾದ ಕಾರ್ಯಕ್ರಮ ಸಾಹಿತ್ಯಾಸಕ್ತರ ಗಮನ ಸೆಳೆಯಿತು.

ಪುಸ್ತಕ ಬಿಡುಗಡೆ:
ಬೆಂಗಳೂರಿನ ಅಭಿನವ ಪ್ರಕಾಶನದವರು ರಸಿಕಾ ಕೇಳೋ ತಂಡ ಜಂಟಿಯಾಗಿ ಆಯೋಜಿಸಿದ್ದರು. ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಪುಸ್ತಕ ಅನಾವರಣಗೊಳಿಸಿ, ಅದರಲ್ಲಿನ 'ಅವಳ ಪ್ರಶ್ನೆ' ಎಂಬ ಶಕುಂತಳೆಯ ಕಥೆ ಕುರಿತು ಮೆಚ್ಚುಗೆಯ ಮಾತನಾಡಿದರು. ಕಥೆಗಳ ನಿರೂಪಣೆ ಅನನ್ಯವಾಗಿದೆ. ಕಥಾ ವಿಸ್ತರಣೆ ಹೆಚ್ಚಿಸಬಹುದಿತ್ತು ಅನ್ನುವುದನ್ನು ಬಿಟ್ಟರೆ ಈ ಕಥಾ ಸಂಕಲನದಲ್ಲಿ ದೋಷಗಳು ಕಂಡುಬರಲಿಲ್ಲ. ಇದು ಇವರ ಮೊದಲ ಕಥಾ ಸಂಕಲನ ಎಂದು ತಿಳಿದು ಆಶ್ಚರ್ಯವಾಗುತ್ತದೆ. ತಾಜಾತನದಿಂದ ಕೂಡಿರುವ ಕಥೆಗಳು ಕಥಾ ರಚನೆಯ ಸಿದ್ಧ ಸೂತ್ರಗಳನ್ನು ಮುರಿದಿದೆ. ರಾಜಲಕ್ಷ್ಮಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಕಂಬಾರರು ಹಾರೈಸಿದರು.

ಸಿದ್ದು ದೇವರಮನಿ ಅವರ 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ' ಚೊಚ್ಚಲ ಕವನ ಸಂಕಲನವನ್ನು ಕಥೆಗಾರ ಎಸ್ ದಿವಾಕರ್ ಬಿಡುಗಡೆ ಮಾಡಿ ಮಾತಾಡಿ, ಇತ್ತೀಚಿನ ಹೊಸ ಲೇಖಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಿದ್ದು ಅವರೂ ಎದುರಿಸುತ್ತಿದ್ದಾರೆ. ಕೆಲ ಕವಿತೆಗಳಲ್ಲಿ ಯಶಸ್ವಿಯೂ ಆಗಿದ್ದಾರೆ. ಗದ್ಯಕ್ಕೆ ಹೆಚ್ಚು ಹತ್ತಿರವಾದ ಕವನಗಳನ್ನು ಕಾಣಬಹುದಾದ ಈ ದಿನಗಳಲ್ಲಿ ಅದಕ್ಕೆ ವ್ಯತಿರಿಕ್ತವಾಗಿ, ಆದರೆ ಅಷ್ಟೇ ಸಮರ್ಥವಾಗಿ ಕವನಗಳನ್ನು ಸಿದ್ದು ಅವರು ರಚಿಸಿದ್ದಾರೆ ಎಂದರು. ನಂತರ ಆಯ್ದ ಎರಡು ಕವನಗಳನ್ನು ಓದಿದರು.

SUMವಾದ
ಯುಆರ್ ಅನಂತಮೂರ್ತಿ ಹೇಳುವಂತೆ 'ಚರ್ಚೆ ಆಗಬೇಕ್ರಿ ಸಾಹಿತ್ಯದ ಬಗ್ಗೆ' ಎಂಬುದಕ್ಕೆ ಪ್ರತಿಯಾಗಿ ಸಂವಾದಕ್ಕಿಂತ ಸಣ್ಣ ಪ್ರಮಾಣದ ವಾದವಷ್ಟೆ ನೆರೆದಿದ್ದ ಸಾಹಿತ್ಯ ರಸಿಕರಿಗೆ ಸಿಕ್ಕಿತು. ಎಸ್ ದಿವಾಕರ್ ಪ್ರಾಸ್ತವಿಕವಾಗಿ ಮಾತನಾಡಿ ಹೊಸ ಸಾಹಿತ್ಯ, ಸಾಹಿತಿಗಳ ಬಗ್ಗೆ ತಮಗಿರುವ ಕೆಲವು ಕಳಕಳಿಯ ಪ್ರಶ್ನೆಗಳನ್ನು ಮುಂದಿಟ್ಟರು. ಅದರಲ್ಲಿ ರಾಜಕೀಯಮಯವಾಗುತ್ತಿರುವ ಪತ್ರಿಕೆಗಳು, ಸಾಹಿತ್ಯ ಬೆಂಬಲಿಸದಿರುವ ಪತ್ರಿಕೆಗಳು, ವಿಮರ್ಶಕರ ಅವಶ್ಯಕತೆ, ಸಣ್ಣ ಪತ್ರಿಕೆಗಳ ಸ್ಥಾನಮಾನ ಮುಂತಾದ ವಿಷಯಗಳಿದ್ದವು.

ಎಸ್ ದಿವಾಕರ್
ಹೊಸದಾಗಿ ಬರೆಯುತ್ತಿರುವ ಲೇಖರರ ಬರವಣಿಗೆಯಲ್ಲಿ ಲಯ ಕಾಣುತ್ತಿಲ್ಲ. ಸಾಹಿತ್ಯದ ಪ್ರಯೋಗಗಳು ನಡೆಯುತ್ತಿಲ್ಲ. ಒಟ್ಟಿನಲ್ಲಿ ಬರವಣಿಗೆ ಮನಸ್ಸಿನಲ್ಲಿ ಉಳಿಯುತ್ತಿಲ್ಲ. ಇನ್ನು, ಸಾಹಿತ್ಯದಲ್ಲಿ ಮೂಲಭೂತ ವಾದ ಗಟ್ಟಿಯಾಗಿ ಬೇರೂರಿರುವ ಹಿನ್ನೆಲೆಯಲ್ಲಿ ಒಬ್ಬ ಕೆಟ್ಟ ಮುಸ್ಲಿಮನನ್ನು ಒಬ್ಬ ಹಿಂದು ಲೇಖಕ ಖಂಡಿಸಲು ಸಾಧ್ಯವಾಗುತ್ತಿಲ್ಲ.

ಕೇಶವ ಮಳಗಿ
ಕನ್ನಡದಲ್ಲಿ ಈಗ ವಿಮರ್ಶಕರೇ ಇಲ್ಲ. ಸಾಹಿತ್ಯ ವಲಯದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಮಾತ್ರವಲ್ಲ, ಕೆಲವು ಲೇಖಕರು, ಮುಖ್ಯವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕರೇ ಶ್ರೇಷ್ಠ ಸಾಹಿತಿಗಳು ಎಂಬ ವ್ಯವಸ್ಥಿತ ಪ್ರಚಾರ ನಡೆಯುತ್ತಿದೆ. ಇನ್ನು, ಪ್ರಶಸ್ತಿ ಮತ್ತು ಖ್ಯಾತಿ- ಈ ಎರಡೇಸಾಹಿತ್ಯದ ಯಶಸ್ಸಿನ ಮಾನದಂಡ ಆಗಿರುವುದು ಶೋಚನೀಯ.

ಅಬ್ದುಲ್ ರಷೀದ್
ಹುಚ್ಚುತನ ಇಟ್ಟುಕೊಂಡು ಬರೆಯುತ್ತಾ ಹೋದರೆ ವಿನೂತನ ಆಲೋಚನೆತೆರೆದುಕೊಳ್ಳುತ್ತದೆ ಮತ್ತು ಹೊಸ ಲೋಕ ಅನಾವರಣಗೊಳ್ಳುತ್ತದೆ. ಆದರೆ, ಹೀಗೆ ಮೂಡುವ ಮತ್ತು ಕಾಣುವ ಅಂಶವನ್ನು ಧೈರ್ಯವಾಗಿ ಬರೆಯುತ್ತಾಹೋಗಬೇಕಷ್ಟೇ... ಧಾರ್ಮಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟಿಗೆ ಒಳಗಾಗದಿದ್ದರೆ ಪೂರ್ವಾಗ್ರಹವಿಲ್ಲದೆ, ಯಾವುದರ ಪ್ರಭಾವವಿಲ್ಲದೆ ಸರಳವಾಗಿ ಬರೆಯಬಹುದು.

ಜೋಗಿ
ಎಸ್ ದಿವಾಕರ್ ಅವರ ಮಾತಿಗೆ ಪ್ರತಿಯಾಗಿ ಹೇಳಿದ ಕನ್ನಡಪ್ರಭದ ಜೋಗಿ ಅವರು, ಸಾಹಿತ್ಯ/ಸಾಹಿತಿಯನ್ನು ಬೆಳೆಸುವ ಕೆಲಸ ಪತ್ರಕರ್ತರದ್ದಲ್ಲ. ನಮಗೆ ಯಾರಲ್ಲೂ ಬೇಧವಿಲ್ಲ. ಸಿನಿಮಾ ನಟರ ಪ್ರತಿಕಾಗೋಷ್ಠಿಯಂತೆ , ಸಾಹಿತ್ಯ ವಿಮರ್ಶೆನೂ ಪ್ರಕಟಿಸುತ್ತೇವೆ. ಆದರೆ ಯಾವುದೇ ಪ್ರಾಮುಖ್ಯತೆ ಕೊಡಬೇಕು ಯಾವುದಕ್ಕೆ ಬೇಡ ಎಂಬುದು ಪತ್ರಿಕೆ ಮಾಲೀಕರ, ಸಂಪಾದಕರ ಅವಗಾಹನೆಗೆ ಬಿಟ್ಟಿದ್ದು. ಸಾಹಿತ್ಯ ಬೆಳೆಸಬೇಕಾದವರು ಸಾಹಿತಿಗಳು ನಾವಲ್ಲ ಎಂದರು.

ವಸುಧೇಂದ್ರ
ವಿಮರ್ಶೆ ಅನ್ನೊದೇ ಆರ್ಥ ಆಗೋಲ್ಲ. ಯಾವುದೂ ಸತ್ವವಾದ ಸಾಹಿತ್ಯವೋ ಅದು ಉಳಿಯುತ್ತೆ. ಅದನ್ನು ಕಾಲವೇ ನಿರ್ಧರಿಸುತ್ತದೆ ಅದಕ್ಕೆ ಕಾಯಬೇಕು ಅಷ್ಟೇ ಎಂದು ಹೇಳಿ ಸಾಕ್ಷಿ ಪತ್ರಿಕೆಯಲ್ಲಿ ಆಗಿನ ಕಾಲಕ್ಕೆ ಮಲೆಗಳಲ್ಲಿ ಮದುಮಗಳು ಕೃತಿ ಬಗ್ಗೆ ಬಂದ ವಿಮರ್ಶೆಗಳ ಸಂಖ್ಯೆ ಹಾಗೂ ಅದಕ್ಕೆ ಪ್ರತಿಯಾಗಿ ಗತಿ ಸ್ಥಿತಿ ಎಂಬ ಕೃತಿಗೆ ಸಿಕ್ಕ ಮನ್ನಣೆ ಬಗ್ಗೆ ಉದಾಹರಣೆ ನೀಡಿದರು.

ಅಶೋಕ್ ಹೆಗಡೆ
ಸಣ್ಣ ಪತ್ರಿಕೆಗಳಿಂದ ಮಾತ್ರ ಸಾಹಿತ್ಯ ಉಳಿಯಲು ಸಾಧ್ಯ ಎಂಬ ದಿವಾಕರ್ ಅವರ ಮಾತನ್ನು ಅಲ್ಲಗೆಳೆದು, ಎಲ್ಲಾ ಪತ್ರಿಕೆಗಳಲ್ಲಿ ಒಳ್ಳೆದು, ಕೆಟ್ಟದ್ದು ಇರುತ್ತದೆ ನಾವು ಹೆಕ್ಕಿ ತೆಗೆದುಕೊಳ್ಳಬೇಕಷ್ಟೆ. ಲಂಕೇಶ್ ಪತ್ರಿಕೆ(ಹಿಂದಿನ ಕಾಲದ)ಯಲ್ಲಿ ಮುಖಪುಟದಲ್ಲಿ ರಾಜಕೀಯ ರಾರಾಜಿಸುತ್ತಿದ್ದರೂ ನಾವು ಒಳಪುಟದಲ್ಲಿರುತ್ತಿದ್ದ ಜಾಣ ಜಾಣೆ, ಮುಂತಾದವುಗಳನ್ನು ತಪ್ಪದೇ ಓದುತ್ತಿದ್ದೇವು ಎಂದರು.

ಕಾರ್ಯಕ್ರಮದ ನಿರೂಪಣೆಯನ್ನು ಭಾರತೀದೇವಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಂವಾದಕ್ಕೆ ಮುನ್ನ ಪುಸ್ತಕ ಕರ್ತೃಗಳಾದ ರಾಜಲಕ್ಷ್ಮಿ ಮತ್ತು ಸಿದ್ದು ದೇವರಮನಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+