ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗಾಂಧಿ ಉಪನಿಷತ್‌’ : ಮತ್ತೂರು ಕೃಷ್ಣಮೂರ್ತಿ ಕೊಡುಗೆ

By Staff
|
Google Oneindia Kannada News


ಗಾಂಧಿ ತತ್ವ ಹೇಳೋಕೆ ಸುಲಭ, ಅಳವಡಿಸಿಕೊಳ್ಳೋಕೆ ಕಷ್ಟ -ಎಚ್‌.ಡಿ.ಕುಮಾರಸ್ವಾಮಿ.

ಬೆಂಗಳೂರು : ಡಾ.ಮತ್ತೂರು ಕೃಷ್ಣಮೂರ್ತಿ ವಿರಚಿತ ಗಾಂಧಿ ಬಗೆಗಿನ ಕೃತಿ ಸೇರಿದಂತೆ, ಮೂರು ಪುಸ್ತಕಗಳನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಮತ್ತೂರು ಕೃಷ್ಣಮೂರ್ತಿ ಅವರ ಗಾಂಧಿ ಉಪನಿಷತ್‌ ಕೃತಿಯ 7ನೇ ಸಂಪುಟ(ಕನ್ನಡ) ಮತ್ತು 3ನೇ ಸಂಪುಟ(ಇಂಗ್ಲಿಷ್‌) ಹಾಗೂ ಯಕ್ಷಪ್ರಶ್ನೆ ಎಂಬ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಕುಮಾರಸ್ವಾಮಿ ಮಾತನಾಡಿದರು.

ಗಾಂಧಿ ತತ್ವ-ಸಿದ್ಧಾಂತ ಮತ್ತು ಆದರ್ಶಗಳು ಸಮಾಜಕ್ಕೆ ಬೇಕು. ಇವುಗಳನ್ನು ಪ್ರಸ್ತುತ ರಾಜಕೀಯ ವಲಯದಲ್ಲಿ ಅಳವಡಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಜಿ.ನಾರಾಯಣ, ಎನ್‌.ರಾಮಾನುಜ, ಅನಂತ್‌, ಎಚ್‌.ಎನ್‌.ಸುರೇಶ್‌, ಎಸ್‌.ಎನ್‌.ಚಂದ್ರಶೇಖರ್‌ ಮತ್ತಿತರರು ಹಾಜರಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X