ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 9ರಂದು ವಿಶ್ವೇಶ್ವರ ಭಟ್‌ರ ಪುಸ್ತಕ ಬಿಡುಗಡೆ

By Staff
|
Google Oneindia Kannada News


ರಾಜಭವನದಲ್ಲಿ ಸಮಾರಂಭ, ರವಿ ಬೆಳಗೆರೆ-ಮನು ಬಳಿಗಾರರಿಂದ ಪುಸ್ತಕ ಪರಿಚಯ

ಬೆಂಗಳೂರು : ವಿಜಯ ಕರ್ನಾಟಕ ದಿನಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಬರೆದಿರುವ ‘ರಾಷ್ಟ್ರಪತಿ ಜತೆ ಹದಿನಾಲ್ಕು ದಿನ’ ಪುಸ್ತಕ ಮೇ 9ರಂದು ಬಿಡುಗಡೆಯಾಗಲಿದೆ.

ಈ ಕುರಿತ ಸಮಾರಂಭ ರಾಜಭವನದಲ್ಲಿ ಮಧ್ಯಾಹ್ನ 12ಗಂಟೆಗೆ ನಡೆಯಲಿದ್ದು, ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಹಾಗೂ ಬೆಂಗಳೂರು ನಗರಪಾಲಿಕೆ ಉಪ ಆಯುಕ್ತ ಮನು ಬಳಿಗಾರ್‌ ಪುಸ್ತಕದ ಕುರಿತು ಮಾತನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಭಾಷಾ ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಾಲವೀರರೆಡ್ಡಿ, ಸಾಹಿತಿ ಆರ್‌.ಎನ್‌.ಜಯಗೋಪಾಲ್‌, ದಳಪತಿ ಎನ್‌.ನರಸಿಂಹಯ್ಯ, ನಾಟಕಕಾರ ಎ.ಎಸ್‌.ಮೂರ್ತಿ ಮತ್ತು ಲೇಖಕಿ ಎಚ್‌.ಎಸ್‌.ಪಾರ್ವತಿ ಅವರನ್ನು ಸನ್ಮಾನಿಸಲಾಗುವುದು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X