ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕೇಶ ಅಗಸನಕಟ್ಟೆಗೆ ‘ಛಂದ ಪುಸ್ತಕ’ ಬಹುಮಾನ

By Staff
|
Google Oneindia Kannada News


Chanda award to Lokesh Agasanakatte for the year 2006 ಬೆಂಗಳೂರು : ‘ಛಂದ ಪುಸ್ತಕ - 2006’ರ ಬಹುಮಾನವನ್ನು ಡಾ. ಲೋಕೇಶ ಅಗಸನಕಟ್ಟೆಯವರು ತಮ್ಮ ‘ಮುಂಗಾರಿನ ಪೈರು’ ಕಥಾಸಂಕಲನದ ಹಸ್ತಪ್ರತಿಗಾಗಿ ಪಡೆದುಕೊಂಡಿದ್ದಾರೆ.

ಈ ಬಹುಮಾನವು ಪುಸ್ತಕದ ಪ್ರಕಟಣೆ, ಐದು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಜನವರಿ 21ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 80 ಕತೆಗಾರರು ಭಾಗವಹಿಸಿದ್ದರು.

ಈ ಬಾರಿಯ ನಿರ್ಣಯವನ್ನು ಹಿರಿಯ ಕತೆಗಾರರಾದ ಬೊಳುವಾರು ಮಹಮದ್‌ ಕುಂಞಿ ಮಾಡಿದ್ದಾರೆ. ಕಳೆದ ಎರಡು ಸಾಲಿನಲ್ಲಿ ಈ ಬಹುಮಾನವನ್ನು ಸುನಂದಾ ಪ್ರಕಾಶ ಕಡಮೆ ಮತ್ತು ಅಲಕ ತೀರ್ಥಹಳ್ಳಿ ಪಡೆದುಕೊಂಡಿದ್ದರು ಎಂದು ಛಂದ ಪುಸ್ತಕದ ವಸುಧೇಂದ್ರ ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X