ಹೊಸ ಕಥೆಗಾರರ ಕಥಾ ಸಂಕಲನಕ್ಕೆ‘ಛಂದ’ದ ಆಹ್ವಾನ
ಬೆಂಗಳೂರು : ಪ್ರತಿ ವರ್ಷ ಒಬ್ಬ ಹೊಸ ಕತೆಗಾರನ ಕಥಾ ಸಂಕಲನವನ್ನು ಪ್ರಕಟಿಸಲು ಮುಂದಾಗಿರುವ ಛಂದ ಪುಸ್ತಕ, ಕಳೆದ ವರ್ಷದಂತೆ ಈ ವರ್ಷವೂ ಹೊಸ ಬರಹಗಾರರ ಕತೆಗಳನ್ನು ಆಹ್ವಾನಿಸಿದೆ.
ಇದುವರೆಗೂ ಒಂದೂ ಕಥಾ ಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಅವಕಾಶ. ಸುಮಾರು 10 ಪ್ರಕಟಿತ/ಅಪ್ರಕಟಿತ ಕತೆಗಳನ್ನು ಬರೆದು ಅಥವಾ ಡಿಟಿಪಿ ಮಾಡಿಸಿ ಕಳಿಸಬೇಕು. ಅಕ್ಷರಗಳು ಸ್ಫುಟವಾಗಿರುವುದು ಕಡ್ಡಾಯ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಆಯ್ಕೆಯಾದ ಒಬ್ಬರ ಸಂಕಲನವನ್ನು ಛಂದ ಪುಸ್ತಕ ಪ್ರಕಾಶಿಸಲಿದೆ. ಕತೆಗಾರರಿಗೆ 2000ರೂ ಗೌರವಧನವನ್ನೂ ನೀಡಲಾಗುವುದು. ಸುಮಾರು 100 ಪುಟಗಳ ಚೆಂದ ಮುದ್ರಣದ ಈ ಪುಸ್ತಕವನ್ನು 2006ರ ಜನವರಿ 26ರಂದು ಬೆಂಗಳೂರಿನಲ್ಲಿ ನಡೆಯವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.
ಎಲ್ಲ ವಿಷಯಗಳಲ್ಲೂ ಪ್ರಕಾಶಕರದೇ ಅಂತಿಮ ನಿರ್ಧಾರ. ಕಥಾ ಸಂಕಲನ ಕಳುಹಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 30. 2005.
ಕತೆಗಳನ್ನು ತಲುಪಿಸಬೇಕಾದ ವಿಳಾಸ :
ಛಂದ
ಪುಸ್ತಕ
C/o
ವಸುಧೇಂದ್ರ,
ಐ-004,
ಮಂತ್ರಿ
ಪ್ಯಾರಡೈಸ್,
ಬನ್ನೇರುಘಟ್ಟ
ರಸ್ತೆ,
ಬೆಂಗಳೂರು
-
76.
ಹೆಚ್ಚಿನ ವಿವರಗಳಿಗೆ : [email protected]
(ಇನ್ಫೋ ವಾರ್ತೆ)
ಪೂರಕ ಓದಿಗೆ-
‘ಛಂದ’ದಿಂದ ಮೂರು ಚೆಂದದ ಪುಸ್ತಕಗಳು!