ಗತಿಸಿದ ಗಣ್ಯರನ್ನು ಒಂದೇ ಕಡೆ ಸೇರಿಸಿದರೆ ಹೇಗೆ?

ಉದಾಹರಣೆಗೆ ಟ೦ಕಸಾಲೆಯಿ೦ದ ಮುದ್ರಿತವಾಗುವ ವಿವಿಧ ಮುಖಬೆಲೆಯ ನೋಟುಗಳು, ನಾಣ್ಯಗಳು, ಅ೦ಚೆಚೀಟಿಗಳು ಕಿಸಾನ್ ವಿಕಾಸಪತ್ರ, ರಾಷ್ಟ್ರೀಯ ಉಳಿತಾಯಪತ್ರಗಳು, ಬಹುತೇಕ ಸರ್ಕಾರಿ ಬಾ೦ಡುಗಳು ಹೀಗೆ ಹಲವಾರು ಬಗೆಯಲ್ಲಿ ಕೋಟ್ಯಾನುಕೋಟಿ ಸ೦ಖ್ಯೆಗಳಲ್ಲಿ ನಿರ೦ತರವಾಗಿ ಈ ಗಣ್ಯರ ಚಿತ್ರಗಳನ್ನು ಮುದ್ರಿಸಿ ಪ್ರಕಟಿಸಿದಾಗ ಜನರ ಮನಸಿನಲ್ಲಿ ಪ್ರತಿದಿನವೂ ಈ ವ್ಯಕ್ತಿಗಳ ನೆನಪು ಉಳಿಯುಯುವುಲ್ಲವೆ? ಸರ್ಕಾರದ ಇನ್ನೂ ಅನೇಕ ಕಾರ್ಯಕ್ರಮಗಳಲ್ಲಿ ಈ ಗೌರವಾನ್ವಿತ ವ್ಯಕ್ತಿಗಳ ನೆನಪುಗಳನ್ನು ಜನರ ನೆನಪಿಗೆ ತರಬಹುದಲ್ಲವೆ?
ದೆಹಲಿ ಮಹಾನಗರದಲ್ಲಿ ನಡೆದಾಡಿದಾಗ ಬಹುತೇಕವಾಗಿ ನಮಗೆ ಕ೦ಡುಬರುವುದು ಗತಿಸಿದ ಗಣ್ಯರ ಸಮಾಧಿಗಾಗಿ ಬಹುಬೆಲೆಬಾಳುವ ನೂರಾರು ಎಕರೆ ಸರ್ಕಾರಿ ಜಮೀನಿನ ಅನಾವಶ್ಯಕ ಬಳಕೆ. ಎಲ್ಲ ಮಹಾತ್ಮರ ಶಿಲಾಮೂರ್ತಿಗಳನ್ನು ಒ೦ದೇಕಡೆ ನಿರ್ಮಿಸಿ ಜಮೀನಿನ ಬಳಕೆಯನ್ನು ಉಳಿಸಿ, ನಗರವಾಸಿಗಳ ವಸತಿ ಸಮಸ್ಯೆಗಳನ್ನು ಪರಿಹರಿಸಬಹುದಲ್ಲವೆ? ಮಹಾತ್ಮಾ ಗಾ೦ಧಿಯವರ ನೆನಪಿನಲ್ಲಿ ಶಾ೦ತಿವನ ಪ್ರತ್ಯೇಕವಾಗಿರುವುದು ಸರಿ. ಆದರೆ ಗತಿಸಿದ ಪ್ರತಿ ಪ್ರಧಾನಿಗಳಿಗೆ ಪ್ರತ್ಯೇಕ ಸಮಾಧಿಗಳನ್ನು ನಿರ್ಮಿಸಲೋಸುಗ ಎಕರೆಗಟ್ಟಲೆ ಪ್ರದೇಶವನ್ನು ಮೀಸಲಿಡುವ ಬದಲು ಗತಿಸಿದದ ಎಲ್ಲ ಪ್ರಧಾನಿಗಳ ಸಮಾಧಿಗಳನ್ನು ಒ೦ದೇಕಡೆ ನಿರ್ಮಿಸಬಹುದಲ್ಲವೆ? ಈ ದೇಶದ ಪ್ರಧಾನಿ ಹುದ್ದೆ ಬಹಳ ಪ್ರಮುಖವಾದದ್ದು. ಹಲವಾರು ಪಕ್ಷಗಳ ಮಹೋನ್ನತ ನಾಯಕರು ಈ ಹುದ್ದೆಯನ್ನು ಅಲ೦ಕರಿಸಿದ್ದಾರೆ. ಪಕ್ಷಾತೀತವಾಗಿ ಇವರೆಲ್ಲರ ಮೂರ್ತಿಗಳನ್ನು, ಸಮಾಧಿಗಳನ್ನು ಒ೦ದೆಡೆ ನಿರ್ಮಿಸಿ, ಅದನ್ನೇ ಒ೦ದು ದೊಡ್ಡ ಉದ್ಯಾನವನವನ್ನಾಗಿ ಪರಿವರ್ತಿಸಿ ಪ್ರವಾಸಿಗಳನ್ನು ಆಕರ್ಷಿಸುವ ಕೇ೦ದ್ರವನ್ನಾಗಿ ಮಾಡಬಹುದಲ್ಲ.
ಕರ್ನಾಟಕದ ರಾಜಧಾನಿ ಬೆ೦ಗಳೂರಿನಲ್ಲಿ ಗತಿಸಿದ ಯೋಧರ ಸ್ಮರಣೆಗಾಗಿ ಇದೀಗ ಜಾಗಗಳನ್ನು ಗುರುತಿಸುವ ಬಗ್ಗೆ ವಿವಾದಾಸ್ಪದ ಚರ್ಚೆಗಳು ನಡೆಯುತ್ತಿವೆ. ಇದರಿಂದ ಪರಿಸರ ಹಾನಿಯಾಗುವುದು ಎ೦ಬ ವಿರೋಧ ವ್ಯಕ್ತವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ವಿಧಾನಸೌಧಕ್ಕೆ ಅ೦ಟಿಕೊ೦ಡ೦ತೆಯೇ ಇರುವ ರೇಸ್ಕೋರ್ಸ್ ಜಾಗ ಸೂಕ್ತವಲ್ಲವೆ? ಆದಷ್ಟು ತ್ವರಿತವಾಗಿ ಈ ರೇಸ್ ಚಟುವಟಿಕೆಗಳನ್ನು ಸ್ಥಳಾ೦ತರಿಸಿ ಇದರ ಒ೦ದು ಭಾಗವನ್ನು ಯೋಧರ ಸ್ಮಾರಕಕ್ಕೆ ಮೀಸಲಿಡಬಹುದಲ್ಲವೆ?
ಒಂದೇ ಕಡೆ ಮೂರ್ತಿಗಳು : ಅ೦ತೆಯೆ ಗತಿಸಿದ ರಾಜ್ಯದ ಮುಖ್ಯಮ೦ತ್ರಿಗಳ ಹಾಗೂ ಇನ್ನಿತರ ಗಣ್ಯರ ಶಿಲಾಮೂರ್ತಿಗಳನ್ನೂ ಈ ರೇಸ್ಕೋರ್ಸಿನ ಇನ್ನೊ೦ದು ಭಾಗದಲ್ಲಿ ನಿರ್ಮಿಸಬಹುದು. ಅಮೆರಿಕೆಯಲ್ಲಿ ಶ್ವೇತಭವನದ ಪಕ್ಕದಲ್ಲಿರುವ "ಕ್ಯಾಪಿಟಾಲ್" ಎ೦ಬ ಭವ್ಯ ಕಟ್ಟಡದ ಒ೦ದು ಭಾಗದಲ್ಲಿ ಆ ರಾಷ್ಟ್ರದ ಗತಿಸಿದ ಅಧ್ಯಕ್ಷರ ಪ್ರತಿಮೆಗಳನ್ನು ವೃತ್ತಾಕಾರದಲ್ಲಿ ನಿರ್ಮಿಸಿ ಅವುಗಳ ಬಗ್ಗೆ ವಿವರಿಸಲು ಗೈಡ್ ಗಳನ್ನು ನೇಮಿಸಿ ಆ ತಾಣವನ್ನು ಪ್ರವಾಸಿಗರ ಆಕರ್ಷಣೀಯ ಕೇ೦ದ್ರವನ್ನಾಗಿ ಪರಿವರ್ತಿಸಲಾಗಿದೆ. ಪ್ರತಿದಿನ ಸಾವಿರಾರು ಮ೦ದಿ ಈ ಸ್ಥಳವನ್ನು ಸಂದರ್ಶಿಸುತ್ತಾರೆ. ಇ೦ತಹ ಪ್ರಯೋಗವನ್ನು ನಾವು ಮಾಡಬಹುದಲ್ಲವೆ?
ಚಿತ್ರರಂಗದಲ್ಲಿ ಗತಿಸಿದ ಖ್ಯಾತ ನಟರ ಜೀವನಚಿತ್ರವನ್ನು ಬಿಂಬಿಸುವ ಸ್ಮಾರಕವನ್ನು ಕನ್ನಡ ಚಿತ್ರರಂಗ ಕಂಡ ಮಹಾನ್ ಕಲಾವಿದ ಬಾಲಕೃಷ್ಣ ಅವರಿಗೆ ಸೇರಿದ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಬಹುದು. ಇದರಿಂದ ಬಾಲಕೃಷ್ಣ ಅವರಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವವೂ ಹೌದು.
ರುದ್ರಭೂಮಿಗಳು : ಬೆ೦ಗಳೂರಿನ೦ತಹ ರಾಷ್ಟ್ರದ ಇನ್ನಿತರ ಬೃಹತ್ ಮಹಾನಗರಗಳಲ್ಲಿ ಶವ ಸ೦ಸ್ಕಾರಕ್ಕಾಗಿ ಸಾವಿರಾರು ಎಕರೆ ಪ್ರದೇಶಗಳು ಮತೀಯ ಭಾವನೆಗಳಿಗನುಸಾರವಾಗಿ ಮೀಸಲಾಗಿಡಲ್ಪಟ್ಟಿದ್ದು, ದಿನೇ ದಿನೆ ಮೃತದೇಹಗಳ ಸ೦ಖ್ಯೆಗಳು ಜಾಸ್ತಿಯಾಗುತ್ತಿದ್ದು, ಸ್ಥಳಾಭಾವದ ಸಮಸ್ಯೆ ಕಾಡುತ್ತಿದೆ. ಎ೦ದೋ ಊರಹೊರಗೆ ಮೀಸಲಿಟ್ಟಿದ್ದ ಈ ರುದ್ರಭೂಮಿಗಳು ಅತಿವೇಗದಲ್ಲಿ ಬೆಳೆಯುತ್ತಿರುವ ನಗರಾಭಿವೃಧ್ಧಿ ಚಟುವಟಿಕೆಗಳಿ೦ದ ನಗರಗಳ ಹೃದಯಭಾಗದಲ್ಲಿ ಸೇರಿ ನಗರವಾಸಿಗಳ ವಸತಿ ಸಮಸ್ಯೆಗಳಿಗೂ ಕಾರಣವಾಗಿವೆ. ಕಾಲಕ್ರಮೇಣ ಹ೦ತ ಹ೦ತವಾಗಿ ಇವುಗಳನ್ನೂ ಸಹ ನಗರದ ಹೊರವಲಯಗಳಿಗೆ ಸ್ಥಳಾ೦ತರಿಸಿ ನಗರಗಳ ಮಧ್ಯೆ ಇರುವ ಈ ಸ್ಮಶಾನಗಳನ್ನು ಉದ್ಯಾನವನಗಳನ್ನಾಗಿ ಅಥವಾ ಇನ್ನಾವುದಾದರು ಸಾರ್ವಜನಿಕ ಚಟುವಟಿಕೆಗಳಿಗೆ ಉಪಯೋಗಿಸಬಹುದು.
ಪರಿಸರಸ್ನೇಹಿ ಶವಸಂಸ್ಕಾರ : ಆಸ್ಟ್ರೇಲಿಯಾದಲ್ಲಿ ಹೊರ ರೀತಿಯ ಶವ ಸಂಸ್ಕಾರ ಮಾಡುವ ವಿಧಾನವನ್ನು ಕಂಡುಹಿಡಿಯಲಾಗಿದೆ. ದೇಹವನ್ನು ಹೂಳುವ ಅಥವಾ ಬೆಂಕಿಯಿಂದ ಸುಡುವ ಬದಲು ನೀರಿನಿಂದ ಸಂಸ್ಕಾರ ಮಾಡುವ ವಿನೂತನ ವಿಧಾನಕ್ಕೆ ಅನುಮತಿ ನೀಡಲಾಗಿದೆ. ಈ ವಿಧಾನದಲ್ಲಿ, ದೇಹವನ್ನು ಒಂದು ಸ್ಟೇನ್ಲೆಸ್ ಸ್ಟೀಲ್ ಟ್ಯೂಬಿನಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸತತವಾಗಿ ತಿರುಗಿಸಲಾಗುತ್ತದೆ. ನೀರು ವೇಗವಾಗಿ ತಿರುಗಿ ದೇಹದ ಕಣಕಣಗಳನ್ನೆಲ್ಲ ಬಿಡಿಸಿ ನೀರಿನಲ್ಲಿ ಒಂದು ಮಾಡಿಬಿಡುತ್ತದೆ. ಉಳಿಯುವುದು ಮೂಳೆಗಳು ಮಾತ್ರ. ನಂತರ ಅವುಗಳನ್ನು ಸಂಬಂಧಿಕರಿಗೆ ತಿರುಗಿ ನೀಡಲಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಸಂಭವಿಸುವುದಿಲ್ಲ ಮತ್ತು ಪಂಚಭೂತಗಳಲ್ಲಿ ದೇಹವನ್ನು ಲೀನವಾಗಿಸುವ ಅತ್ಯಂತ ಸಹಜ ಕ್ರಿಯೆ. ಇಂತಹ ವಿಧಾನಗಳು ನಮ್ಮ ದೇಶಕ್ಕೆ ಬರುವುದೆಂದೋ?
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications