ನೆಮ್ಮದಿಯ ಕಾರವಾರಕ್ಕೆ ಹಣಕೋಣ ವಿದ್ಯುತ್ ಕಿಚ್ಚು
* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾ
ಕೊನೆಗೂ ಕಾರವಾರದ ಹಣಕೋಣ ಜನತೆಯ ಸಹನೆಯ ಕಟ್ಟೆ ಒಡೆದಿದೆ. ತಮ್ಮೂರನ್ನು ಉಷ್ಣವಿದ್ಯುತ್ ಸ್ಥಾವರ ಎಂಬ ಬಸ್ಮಾಸುರನಿಂದ ಉಳಿಸಿಕೊಳ್ಳಲು ಹಿಂಸಾ ಮಾರ್ಗಕ್ಕೆ ಇಳಿದಿದ್ದಾರೆ. ಮಹಿಳೆ ಪುರುಷರೆನ್ನದೆ ಎಲ್ಲರೂ ಸೇರಿ ತಮ್ಮನು ತಡೆಯಲು ಬಂದ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕುರುಡು ಕಾಂಚಾಣಕ್ಕೆ ಒಳಗಾಗಿ ನಿರ್ಲಿಪ್ತರಾಗಿದ್ದ ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಜನತೆ ಕಿಡಿ ಕಾರುತ್ತಿದ್ದಾರೆ. ಇದರ ಪರಿಣಾಮ ಹೋರಾಟಗಾರರ ಆಕ್ರೋಶಕ್ಕೆ ಎರಡು ಸರಕಾರಿ ಬಸ್ಸು ಸೇರಿದಂತೆ ಮೂರು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಪೊಲಿಷರು ಅಶ್ರುವಾಯು ಸಿಡಿಸಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿವೆ. ಇಬ್ಬರು ಪೋಲಿಷರಿಗೆ ಗಾಯಗೊಂಡಿದ್ದಾರೆ. ಇವತ್ತಕ್ಕೂ ಹೆಚ್ಚು ಮಂದಿ ಬಂಧಿಸಲ್ಪಟ್ಟಿದ್ದಾರೆ. ಇದು ಹಿಂಸಾ ಪ್ರತಿಭಟನೆಯ ಹೋರಾಟದ ಪ್ರಾರಂಭವೇ ಹೊರತು ಅಂತ್ಯವಲ್ಲ. ಹೋರಾಟಕ್ಕೆ ಸರಿಯಾದ ಸ್ಪಂದನೆ ದೊರೆಯದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಲ್ ನಂದಿಗಡ್ ಮಾದರಿಯ ಹೋರಾಟ ನಡೆಯುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ.
ಪ್ರಖ್ಯಾತ ಕವಿಗಳಾದ ರವೀಂದ್ರನಾಥ ಠಾಗೂರ್ ಅವರಿಂದ 'ಕರ್ನಾಟಕ ಕಾಶ್ಮೀರ್' ಎಂದು ಹೊಗಳಿಸಿಕೊಂಡ ಉತ್ತರಕನ್ನಡ ಜಿಲ್ಲೆ ಇಂದು ಬರಡು ಭೂಮಿಯಾಗತೊಡಗಿದೆ. ಸುರಸುಂದರಿಗೆ ತನ್ನ ಸೌಂದರ್ಯವೇ ಮುಳುವಾದಂತೆ ನನ್ನ ಜಿಲ್ಲೆಗೆ ಅದರ ಪ್ರಾಕ್ರತಿಕ ಸೌಂದರ್ಯವೇ ಮುಳುವಾಗಿ ಪರಿಣಮಿಸಿದೆ.
ಅಂದ ಹಾಗೇ ನಮ್ಮ ಜಿಲ್ಲೆಗೆ ಬರುವ ಯೋಜನೆಗಳ ಬಗ್ಗೆ ಒಂದು ಮಾತು ಚಾಲ್ತಿಯಲ್ಲಿದೆ. ಜಗತ್ತಿನೆಲ್ಲಡೆ ತಿರಸ್ಕರಿಸಲ್ಪಟ್ಟ ಯೋಜನೆಗಳು ಭಾರತಕ್ಕೆ ಬರುತ್ತವೆ. ಭಾರತದಲ್ಲಿ ಎಲ್ಲ ರಾಜ್ಯಗಳು ತಿರಸ್ಕರಿಸಿದ ಯೋಜನೆಗಳು ಕರ್ನಾಟಕಕ್ಕೆ ಬರುತ್ತವೆ. ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ತಿರಸ್ಕರಿಸಿದ ಯೋಜನೆಗಳು ಉತ್ತರಕನ್ನಡಕ್ಕೆ ಬರುತ್ತವೆ! ಸದ್ಯಕ್ಕೆ ಕಾಡುತ್ತಿರುವ ಎರಡು ಬಸ್ಮಾಸುರ ಯೋಜನೆಗಳಲ್ಲಿ ಒಂದು ತದಡಿ ಉಷ್ಣ ವಿದ್ಯುತ್ತ ಸ್ಥಾವರ. ಎರಡನೆಯದು ಕಾರವಾರದ ಹಣಕೋಣ ಬಳಿ ಸ್ಥಾಪನೆಯಾಗಲಿರುವ ಉಷ್ಣ ವಿದ್ಯುತ್ ಸ್ಥಾವರ. ಜಗತ್ತಿನೆಲ್ಲಡೆ ನಿಷೇಧಿತವಾಗುತ್ತಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಭಾರತದಲ್ಲಿ ಮಾತ್ರ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಸಿಗುತ್ತಿರುವ ಮರ್ಯಾದೆ ನೋಡಿದರೆ ಇದರಲ್ಲಿ ಕುರುಡು ಕಾಂಚಾಣದ ಮಹಿಮೆ ಅಪಾರವಾಗಿದೆ ಎನ್ನಿಸದೇ ಇರದು.
ಹಣಕೋಣ
ಊರು
ಕಾರವಾರದಿಂದ
ಕೇವಲ
18
ಕಿ.ಮೀ
ದೂರವಿದ್ದು
ಸಮುದ್ರದ
ಹಿನ್ನಿರಿನಿಂದ
ಉಂಟಾದ
ಗಜನಿ
ಭೂಮಿಯನ್ನು
ಒಳಗೊಂಡಿದೆ.
ಇಲ್ಲಿ
ಜನರ
ಮುಖ್ಯ
ಕಸುಬು
ಮೀನುಗಾರಿಕೆಯಾಗಿದೆ.
ಹಲವಾರು
ಬಗೆಯ
ಕಾಂಡ್ಲಾ
ಸಸ್ಯಗಳು
ಇಲ್ಲಿರುವುದು
ವಿಶೇಷ
ಜೀವ
ವೈವಿದ್ಯತೆಗಳ
ತಾಣವಾಗಿದೆ.
ಒಟ್ಟಿನಲ್ಲಿ
ನೈಸರ್ಗಿಕವಾಗಿ
ಸಂಪದ್ಬರಿತ
ಬೀಡಾಗಿದೆ.
ಜನರು
ಗೋವಾದ
ಅಗ್ಗದ
ಬೆಲೆಯ
ಸರಾಯಿ
ಕುಡಿದುಕೊಂಡು
ಮೀನುಗಾರಿಕೆ,
ಕೃಷಿ
ಮಾಡಿಕೊಂಡು
ಇದ್ದುದ್ದರಲ್ಲಿಯೇ
ಸಂತೃಪ್ತ
ಜೀವನ
ನಡೆಸುತ್ತಿದ್ದಾರೆ.
ಗೋಸುಂಬೆ ರಾಜಕಾರಣಿಗಳು : ಈ ವಿಷಯದಲ್ಲಿ ಮಾತ್ರ ರಾಜಕಾರಣಿಗಳು ಪಕ್ಕಾ ಗೋಸುಂಬೆ ಪಾತ್ರ ವಹಿಸಿದ್ದಾರೆ. ಚುನಾವಣೆ ಬಂದಾಗ ಹೋರಾಟಗಾರರ ಪರವಾಗಿ ಮಾತನಾಡಿ ಗೆದ್ದು ಬಂದ ನಂತರ ಕಂಪನಿ ಪರವಾಗಿ ಮಾತನಾಡಲಾಂಭಿಸಿದ್ದಾರೆ. ಇನ್ನು ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಇವರೆಲ್ಲರ ಹತ್ತಿರ ಕುರುಡು ಕಾಂಚಾಣ ಒಂದು ಸುತ್ತು ಹೊಗಿ ಬಂದಿದೆ ಎಂದು ಗುಸು ಗುಸು ಪ್ರಾರಂಭವಾಗಿದೆ. ಕಂಪನಿಯು ಸಹ ಹಲವಾರು ಆಮಿಷಗಳನ್ನು ಒಡ್ಡುವದರ ಮೂಲಕ ಸ್ಥಾವರ ವಿರೋಧಿ ಹೋರಾಟಗಾರರನ್ನು ಒಡೆಯಲು ಪ್ರಯತ್ನಿಸುತ್ತಿದೆ. ಸೋತವರು ಹೋರಾಟಗಾರರ ಪರ ಸೇರಿಕೊಂಡಿದ್ದಾರೆ.
ಲೋಕಸಭಾ ಚುನಾಣೆಯಲ್ಲಿ ಸೋತ ನಂತರ ಮಾರ್ಗರೆಟ್ ಆಳ್ವಾ ದಿಢೀರ್ ಆಗಿ ಸ್ಥಾವರ ವಿರೋಧಿ ಹೋರಾಟಗಾರರ ಬಣದಲ್ಲಿ ಕಾಣಿಸಿಕೊಂಡು ಯಾವುದೇ ಕಾರಣಕ್ಕೂ ಸ್ಥಾವರ ನಿರ್ಮಣಕ್ಕೆ ಅವಕಾಶ ಕೊಡುವುದಿಲ್ಲಾ, ಕೇಂದ್ರದ ಅನುಮತಿ ಸಿಗದಂತೆ ನೋಡಿಕೊಳ್ಳುತ್ತೇನೆ ಎಂದು ಉಗ್ರ ಭಾಷಣ ಮಾಡಿದಾಗ ಕಾರವಾರ ಜನತೆಗೆ ಮ್ಯಾಗಿ ಬಂಗಾಲದ ದೀದಿ ಮಮತಾಳಂತೆ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಇದಾದ ಕೆಲವೇ ದಿನಗಳಲ್ಲಿ ಮ್ಯಾಗಿಯನ್ನು ಬಾಯಿ ಮುಚ್ಚಿಸಿ ರಾಜ್ಯಪಾಲರನ್ನಾಗಿ ಕಳುಹಿಸಿದ್ದರು. ಗೆದ್ದ ಸಂಸದ ಉಗ್ರ ಪ್ರತಾಪಿ ಅನಂತ ಕುಮಾರ ಹೆಗೆಡೆಯವರದು ಮೌನ ವ್ರತ. ಮತ್ತೆ ಚುನಾವಣೆ ಬರಬೇಕು, ಮೌನ ವೃತ ಮುರಿಯಲು! ಇನ್ನುಳಿದಂತೆ ಇಬ್ಬರು ಸಚಿವರ ಬಗ್ಗೆ ಮಾತನಾಡದಿರುವುದು ಒಳ್ಳೆಯದು.
ಇವೆಲ್ಲವನ್ನು ಸಹನೆಯಿಂದ ಕಳೆದರಡು ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದ ಹಣಕೋಣದ ಜನತೆಯಲ್ಲಿ ಅಸಹನೆ ಮಡುವುಗಟ್ಟಿದೆ. ಇದಕ್ಕೆ ಪೂರಕಾಗಿ ಕಳೆದ ವಾರ ನಡೆದ ಹೋರಾಟಗಾರ ಬೃಹತ್ ರ್ಯಾಲಿ ಬಗ್ಗೆ ಸಚಿವರೊಬ್ಬರು ಆಡಿದ ಮಾತು ಅವರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಇತ್ತೀಚೆಗೆ ಮಾಧ್ಯಮಗಳಿಂದ ಸ್ಥಾವರ ನಿರ್ಮಣಕ್ಕೆ ಕೇಂದ್ರದಿಂದ ಅನುಮತಿ ದೊರೆತ ಬಗ್ಗೆ ಸುದ್ದಿ ತಿಳಿದು ಕುಪಿತರಾಗಿದ್ದಾರೆ. ಜುಲೈ ತಿಂಗಳ 30ರಂದು ಗ್ರಾಮ ಪಂಚಾಯತಿ ಕಂಪನಿ ನಿರ್ಮಿಸಿದ ತಾತ್ಕಾಲಿಕ ಸೆಡ್ಡುಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಆ ದಿನ ಹಾಜರಿರಬೇಕಾದ ಅಧಿಕಾರಿಗಳು ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾದರು. ಸಿಟ್ಟಿಗೆದ್ದ ಜನತೆ ತಾವೇ ತೆರವುಗೊಳಿಸಲು ಮುಂದಾದರು. ಪೊಲೀಸರು ಅಡ್ಡಿಯಾದರು. ಪರಿಣಾಮ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ನೆಮ್ಮದಿಯಿಂದಿದ್ದ ಕಾರವಾರ ಅಸಹನೆಯತ್ತ ಕುದಿಯುತ್ತಿದೆ.
ಚಿತ್ರಗಳು : ನಾಗೇಂದ್ರ