ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದ್ಯದಲ್ಲೇ ಬಿವಿ ಕಾರಂತ ರಂಗ ಗೀತೆಗಳ ಸಿ.ಡಿ.
ಮೈಸೂರು: ರಂಗ ಕರ್ಮಿ ಬಿ. ವಿ. ಕಾರಂತರ ರಂಗ ಗೀತೆಗಳನ್ನು ಸಿ. ಡಿ. ರೂಪದಲ್ಲಿ ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ ಎಂದು ಇಲಾಖೆಯ ನಿರ್ದೇಶಕ ಸಿ. ಸೋಮಶೇಖರ್ ತಿಳಿಸಿದ್ದಾರೆ.
ರಂಗ ಭೂಮಿಯ ಅಭಿವೃದ್ಧಿಗಾಗಿ ಬಿ. ವಿ. ಕಾರಂತರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರು ರಚಿಸಿದ ರಂಗಗೀತೆಗಳನ್ನು ಸಿ. ಡಿ. ಮತ್ತು ಕ್ಯಾಸೆಟ್ಗೆ ಅಳವಡಿಸಲಾಗುವುದು. ಇದು ನಾಡಿನ ಜನತೆಗೆ ಇಲಾಖೆ ‘ಅಸೆಟ್’ ರೂಪದಲ್ಲಿ ನೀಡುವ ಬಳುವಳಿ ಎಂದು ಸೋಮಶೇಖರ್ ಹೇಳಿದರು.
ಅವರು ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕನ್ನಡ- ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಯೋಗಣ್ಣ- ಕಾರಂತ ನಮನ ನಾಟಕೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಒಟ್ಟು 11 ಸಾವಿರ ಮಂದಿ ರಂಗ ಕಲಾವಿದರು ಇದ್ದಾರೆ. ಇವರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ತಿಂಗಳಿನಿಂದ 250 ರೂಪಾಯಿಯಿಂದ 500 ರೂಪಾಯಿಗೇರಿಸಲಾಗುವುದು ಎಂದು ಸೋಮಶೇಖರ್ ಇದೇ ಸಂದರ್ಭದಲ್ಲಿ ಹೇಳಿದರು.
(ಇನ್ಫೋ ವಾರ್ತೆ)
Comments
Story first published: Tuesday, December 24, 2002, 5:30 [IST]