ಮನೆಯಲ್ಲೇ ರುಚಿರುಚಿಯಾದ ಪನ್ನೀರ್ ತವಾ ಫ್ರೈ ತಯಾರಿಸುವುದು ಹೇಗೆ..?
ಪ್ರತಿನಿತ್ಯ ಸಂಜೆ ವೇಳೆ ಏನಾದರು ತಿಂಡಿ ತಿನ್ನುವುದು ಹಲವರಿಗೆ ಅಭ್ಯಾಸವಾಗಿರುತ್ತದೆ. ನೀವೇ ಸ್ನ್ಯಾಕ್ಸ್ ತಿನ್ನುವುದನ್ನು ಮರೆತರೂ ಹೊಟ್ಟೆ ಮಾತ್ರ ಸಮಯಕ್ಕೆ ಸರಿಯಾಗಿ ಚುರುಗುಡಲು ಪ್ರಾರಂಭಿಸುತ್ತದೆ. ನಾಲಿಗೆ ರುಚಿ ರುಚಿಯಾದ ತಿಂಡಿಯನ್ನು ಸವಿಯಲು ಸಿದ್ಧವಾಗಿರುತ್ತದೆ.
ಹೀಗಾಗಿ ನಿಮ್ಮ ಆ ಕ್ಷಣದ ಸ್ನ್ಯಾಕ್ಸ್ ಬಯಕೆ ಈಡೇರಿಸಿಕೊಳ್ಳಲು ಸಂಜೆಯ ವೇಳೆ ತಿಂಡಿಗಳನ್ನು ಮನೆಯಲ್ಲೇ ತಯಾರಿಸಿ ತಿನ್ನಿ. ಮನೆಯಲ್ಲೇ ಮಾಡಬಹುದಾದ ರುಚಿಕರವಾದ ಪನ್ನೀರ್ ತವಾ ಫ್ರೈ ವಿವರ ಇಲ್ಲಿದೆ.

ಪನ್ನೀರ್ ತವಾ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು
ಪನ್ನೀರ್-200 ಗ್ರಾಂ
ಕಡ್ಲೆ ಹಿಟ್ಟು-2 ಚಮಚ
ಎಣ್ಣೆ-1 ಚಮಚ
ಕೆಂಪು ಮೆಣಸಿನ ಪುಡಿ-1.5 ಚಮಚ
ಕೊತ್ತಂಬರಿ ಪುಡಿ-1 ಚಮಚ
ಜೀರಿಗೆ ಪುಡಿ-1/2 ಚಮಚ
ಗರಂ ಮಸಾಲಾ-1/2 ಚಮಚ
ಚಾಟ್ ಮಸಾಲಾ-1/4 ಚಮಚ
ಅರಿಶಿನ ಪುಡಿ-ದೊಡ್ಡ ಚಿಟಿಕೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ
ದಪ್ಪ ಮೊಸರು-2 ಚಮಚ
ಕಸೂರಿ ಮೇಥಿ-1 ಚಮಚ
ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ಹಸಿರು ಚಟ್ನಿಗೆ ಬೇಕಾಗುವ ಸಾಮಾಗ್ರಿಗಳು
ಪುದೀನ ಎಲೆಗಳು
ಕೊತ್ತಂಬರಿ ಸೊಪ್ಪು
ಹಸಿರು ಮೆಣಸಿನಕಾಯಿಗಳು-1-2
ಶುಂಠಿ
ದಪ್ಪ ಮೊಸರು-2 ಚಮಚ
ಜೀರಿಗೆ ಪುಡಿ-1/4 ಚಮಚ
ಚಾಟ್ ಮಸಾಲಾ ಪುಡಿ-1/4 ಚಮಚ
ರುಚಿಗೆ ತಕ್ಕಂತೆ ಉಪ್ಪು
ರುಚಿಗೆ ತಕ್ಕಂತೆ ಸಕ್ಕರೆ

ಪನ್ನೀರ್ ತವಾ ಫ್ರೈ ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಕಡ್ಲೆ ಹಿಟ್ಟು ತೆಗೆದುಕೊಳ್ಳಿ ಬಿಸಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ಚಾಟ್ ಮಸಾಲಾ ಮುಂತಾದ ಮಸಾಲೆಗಳನ್ನು ಸೇರಿಸಿ. ಬಳಿಕ ಅರಿಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೊಸರು ಮತ್ತು ಕಸೂರಿ ಮೇಥಿ ಸೇರಿಸಿ. ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪನ್ನೀರ್ ಪೀಸ್ಗಳನ್ನು ಸೇರಿಸಿ ಚೆನ್ನಾಗಿ ಕಲಿಸಿ ಅರ್ಧ ಗಂಟೆಗಳ ಕಾಲ ಬಿಡಿ. ಮೂವತ್ತು ನಿಮಿಷ ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಪನ್ನೀರ್ ತುಂಡುಗಳನ್ನು ಹಾಕಿ ಎರಡೂ ಕಡೆಗಳಲ್ಲಿ ಚೆನ್ನಾಗಿ ಬೇಯಿಸಿಕೊಂಡರೆ ಪನ್ನೀರ್ ತವಾ ಫ್ರೈ ಸಿದ್ಧವಾಗುತ್ತದೆ.
ಹಸಿರು ಚಟ್ನಿ ಮಾಡುವ ವಿಧಾನ
ಚಟ್ನಿಗಾಗಿ ಮೊದಲು ಮಿಕ್ಸಿ ಜಾರ್ನಲ್ಲಿ ಪುದೀನ ಎಲೆಗಳು, ಕೊತ್ತಂಬರಿ ಸೊಪ್ಪು, ಮೊಸರು, ಹಸಿರು ಮೆಣಸಿನಕಾಯಿ ಮತ್ತು ಶುಂಠಿಯನ್ನು ತೆಗೆದುಕೊಳ್ಳಿ. ಬಳಿಕ ಜೀರಿಗೆ ಪುಡಿ, ಚಾಟ್ ಮಸಾಲಾ, ಉಪ್ಪು ಮತ್ತು ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಂಡರೆ ಚಟ್ನಿ ಸಿದ್ಧವಾಗುತ್ತದೆ. ಈ ಹಸಿರು ಚಟ್ನಿ ಜೊತೆಗೆ ಪನ್ನೀರ್ ತವಾ ಫ್ರೈ ಸವಿದರೆ ವಾವ್ ಎನಿಸುತ್ತದೆ.
-
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್ -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications