Bachelor recipes | ಫಟಾ ಫಟ್ ಸೋಂಬೇರಿ ಚಿಕನ್ ಮಾಡುವ ವಿಧಾನ!
ಹೇಳಿಕೇಳಿ ಇವೊತ್ತು ಭಾನುವಾರ. ನಾನ್ ವೆಜ್ ಪ್ರಿಯರಿಗೆ ಇಂದು ಯಾವುದಾದರೂ ನಾನ್ವೆಜ್ ತಿನ್ನಬೇಕು ಎನಿಸಿದರೆ, ಅದರಲ್ಲೂ ಬ್ಯಾಚುಲರ್ಗಳಿಗೆ ಕಡಿಮೆ ಸಾಧನಗಳನ್ನು ಬಳಸಿ, ಅತ್ಯಂತ ಕಡಿಮೆ ಸಮಯದಲ್ಲಿ ಮಾಡುವುದಕ್ಕೆ ಸೋಂಬೇರಿ ಚಿಕನ್ ಬೆಸ್ಟ್.
ಹೆಸರೇ ಹೇಳುವಂತೆ ಈ ಚಿಕನ್ ಮಾಡುವುದಕ್ಕೆ ನೀವು ಹೆಚ್ಚು ಶ್ರಮ ವಹಿಸುವ ಅಗತ್ಯ ಇಲ್ಲ. ಕಡಿಮೆ ಅವಧಿಯಲ್ಲಿ, ಐದಾರು ಸಾಧನಗಳನ್ನು ಬಳಸಿ ನೀವು ಸೋಂಬೇರಿ ಚಿಕನ್ ಮಾಡಬಹುದು. ಇನ್ನು ಬ್ಯಾಚುಲರ್ಸ್ಗಳಿಗಂತೂ ಇದು ತುಂಬಾನೇ ಸುಲಭ. ಇಲ್ಲಿದೆ ಸೋಂಬೇರಿ ಚಿಕನ್ ಮಾಡುವ ವಿಧಾನ.

ಹೆಸರೇ ಸೋಂಬೇರಿ ಚಿಕನ್ ಅಲ್ವಾ. ಹೀಗಾಗಿ, ಇದನ್ನು ಮಾಡೋದಕ್ಕೂ ನೀವು ತುಂಬಾ ಶ್ರಮ ವಹಿಸಬೇಕಿಲ್ಲ. ಆದರೆ, ಸ್ವಲ್ಪನಾದ್ರೂ ಶ್ರಮ ವಹಿಸಲೇಬೇಕು. ಈ ಚಿಕನ್ ಬ್ಯಾಚುಲರ್ಸ್ಗಳಿಗೆ ಇಷ್ಟವಾಗದೆ ಇರುವುದಕ್ಕೆ ಕಾರಣವೇ ಇಲ್ಲ. 20ರಿಂದ 25 ನಿಮಿಷದಲ್ಲಿ ಸೋಂಬೇರಿ ಚಿಕನ್ ಮಾಡಬಹುದು.
Bachelor ಸೋಂಬೇರಿ ಚಿಕನ್ ಮಾಡಲು ಬೇಕಾದ ಸಾಧನಗಳು
ಬೇಕಾಗುವ ವಸ್ತು / ಪ್ರಮಾಣ
ಚಿಕನ್: ಅರ್ಧ ಕೆ.ಜಿ
ಈರುಳ್ಳಿ: ಎರಡರಿಂದ ಮೂರು
ಶುಂಠಿ - ಬೆಳ್ಳುಳ್ಳಿ ಪೇಸ್ಟ್: ಅರ್ಧ ಚಮಚ
ಕೊತ್ತಂಬರಿ: ಸ್ವಲ್ಪ
ಕಾರದಪುಡಿ: ಒಂದು ಚಮಚ
ದನಿಯಾಪುಡಿ: ಒಂದು ಚಮಚ
ಗರಂ ಮಸಾಲ: ಒಂದು ಚಮಚ
ಅರಿಶಿನ ಪುಡಿ: ಅರ್ಧ ಚಿಟಿಕೆ
ಕಸ್ತೂರಿ ಮೇಥಿ: ಅರ್ಧ ಚಿಟಿಕೆ
ಎಣ್ಣೆ: ಮೂರು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ಸೋಂಬೇರಿ ಚಿಕನ್ ಮಾಡುವ ವಿಧಾನ: ಸೋಂಬೇರಿ ಚಿಕನ್ ಮಾಡುವುದು ಅತ್ಯಂತ ಸುಲಭ. ಚಿಕನ್ ಅನ್ನು ಮೊದಲು ಸ್ವಚ್ಛ ಮಾಡಿಕೊಂಡು, ಕತ್ತರಿಸಿದ ಎರಡು ಮೂರು ಈರುಳ್ಳಿಯನ್ನು ಚಿಕನ್ನೊಂದಿಗೆ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕೊತ್ತಂಬರಿ, ಕಾರದಪುಡಿ, ದನಿಯಾಪುಡಿ, ಗರಂ ಮಸಾಲ, ಅರಿಶಿನ ಪುಡಿ, ಕಸ್ತೂರಿ ಮೇಥಿ, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಐದರಿಂದ ಹತ್ತು ನಿಮಿಷ ಬಿಡಬೇಕು. ಚಿಕನ್ ಬಿಸಿ ಮಾಡುವಾಗ ಮಧ್ಯ ಮಧ್ಯದಲ್ಲಿ ಚಿಕನ್ ತಳ ಹಿಡಿಯದಂತೆ ತಿರುಗಿಸಬೇಕು. ಗ್ರೇವಿ ಹೆಚ್ಚು ಬೇಕು ಅನಿಸಿದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಇದಾದ ಮೇಲೆ 20ರಿಂದ 25 ನಿಮಿಷ ಇದನ್ನು ಬಿಸಿ ಮಾಡಿದರೆ, ಸೋಂಬೇರಿ ಚಿಕನ್ ರೆಡಿ!
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications