Bachelor recipes | ಫಟಾ ಫಟ್ ಸೋಂಬೇರಿ ಚಿಕನ್ ಮಾಡುವ ವಿಧಾನ!
ಹೇಳಿಕೇಳಿ ಇವೊತ್ತು ಭಾನುವಾರ. ನಾನ್ ವೆಜ್ ಪ್ರಿಯರಿಗೆ ಇಂದು ಯಾವುದಾದರೂ ನಾನ್ವೆಜ್ ತಿನ್ನಬೇಕು ಎನಿಸಿದರೆ, ಅದರಲ್ಲೂ ಬ್ಯಾಚುಲರ್ಗಳಿಗೆ ಕಡಿಮೆ ಸಾಧನಗಳನ್ನು ಬಳಸಿ, ಅತ್ಯಂತ ಕಡಿಮೆ ಸಮಯದಲ್ಲಿ ಮಾಡುವುದಕ್ಕೆ ಸೋಂಬೇರಿ ಚಿಕನ್ ಬೆಸ್ಟ್.
ಹೆಸರೇ ಹೇಳುವಂತೆ ಈ ಚಿಕನ್ ಮಾಡುವುದಕ್ಕೆ ನೀವು ಹೆಚ್ಚು ಶ್ರಮ ವಹಿಸುವ ಅಗತ್ಯ ಇಲ್ಲ. ಕಡಿಮೆ ಅವಧಿಯಲ್ಲಿ, ಐದಾರು ಸಾಧನಗಳನ್ನು ಬಳಸಿ ನೀವು ಸೋಂಬೇರಿ ಚಿಕನ್ ಮಾಡಬಹುದು. ಇನ್ನು ಬ್ಯಾಚುಲರ್ಸ್ಗಳಿಗಂತೂ ಇದು ತುಂಬಾನೇ ಸುಲಭ. ಇಲ್ಲಿದೆ ಸೋಂಬೇರಿ ಚಿಕನ್ ಮಾಡುವ ವಿಧಾನ.

ಹೆಸರೇ ಸೋಂಬೇರಿ ಚಿಕನ್ ಅಲ್ವಾ. ಹೀಗಾಗಿ, ಇದನ್ನು ಮಾಡೋದಕ್ಕೂ ನೀವು ತುಂಬಾ ಶ್ರಮ ವಹಿಸಬೇಕಿಲ್ಲ. ಆದರೆ, ಸ್ವಲ್ಪನಾದ್ರೂ ಶ್ರಮ ವಹಿಸಲೇಬೇಕು. ಈ ಚಿಕನ್ ಬ್ಯಾಚುಲರ್ಸ್ಗಳಿಗೆ ಇಷ್ಟವಾಗದೆ ಇರುವುದಕ್ಕೆ ಕಾರಣವೇ ಇಲ್ಲ. 20ರಿಂದ 25 ನಿಮಿಷದಲ್ಲಿ ಸೋಂಬೇರಿ ಚಿಕನ್ ಮಾಡಬಹುದು.
Bachelor ಸೋಂಬೇರಿ ಚಿಕನ್ ಮಾಡಲು ಬೇಕಾದ ಸಾಧನಗಳು
ಬೇಕಾಗುವ ವಸ್ತು / ಪ್ರಮಾಣ
ಚಿಕನ್: ಅರ್ಧ ಕೆ.ಜಿ
ಈರುಳ್ಳಿ: ಎರಡರಿಂದ ಮೂರು
ಶುಂಠಿ - ಬೆಳ್ಳುಳ್ಳಿ ಪೇಸ್ಟ್: ಅರ್ಧ ಚಮಚ
ಕೊತ್ತಂಬರಿ: ಸ್ವಲ್ಪ
ಕಾರದಪುಡಿ: ಒಂದು ಚಮಚ
ದನಿಯಾಪುಡಿ: ಒಂದು ಚಮಚ
ಗರಂ ಮಸಾಲ: ಒಂದು ಚಮಚ
ಅರಿಶಿನ ಪುಡಿ: ಅರ್ಧ ಚಿಟಿಕೆ
ಕಸ್ತೂರಿ ಮೇಥಿ: ಅರ್ಧ ಚಿಟಿಕೆ
ಎಣ್ಣೆ: ಮೂರು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ಸೋಂಬೇರಿ ಚಿಕನ್ ಮಾಡುವ ವಿಧಾನ: ಸೋಂಬೇರಿ ಚಿಕನ್ ಮಾಡುವುದು ಅತ್ಯಂತ ಸುಲಭ. ಚಿಕನ್ ಅನ್ನು ಮೊದಲು ಸ್ವಚ್ಛ ಮಾಡಿಕೊಂಡು, ಕತ್ತರಿಸಿದ ಎರಡು ಮೂರು ಈರುಳ್ಳಿಯನ್ನು ಚಿಕನ್ನೊಂದಿಗೆ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕೊತ್ತಂಬರಿ, ಕಾರದಪುಡಿ, ದನಿಯಾಪುಡಿ, ಗರಂ ಮಸಾಲ, ಅರಿಶಿನ ಪುಡಿ, ಕಸ್ತೂರಿ ಮೇಥಿ, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಐದರಿಂದ ಹತ್ತು ನಿಮಿಷ ಬಿಡಬೇಕು. ಚಿಕನ್ ಬಿಸಿ ಮಾಡುವಾಗ ಮಧ್ಯ ಮಧ್ಯದಲ್ಲಿ ಚಿಕನ್ ತಳ ಹಿಡಿಯದಂತೆ ತಿರುಗಿಸಬೇಕು. ಗ್ರೇವಿ ಹೆಚ್ಚು ಬೇಕು ಅನಿಸಿದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಇದಾದ ಮೇಲೆ 20ರಿಂದ 25 ನಿಮಿಷ ಇದನ್ನು ಬಿಸಿ ಮಾಡಿದರೆ, ಸೋಂಬೇರಿ ಚಿಕನ್ ರೆಡಿ!
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications