ಜೋಕ್ಸ್: ರಾಜ್ಯ ರಾಜಕೀಯವನ್ನು ಹೆಂಗೆಂಗೆ ಅಣಕವಾಡ್ತಾರೆ ನೋಡಿ..
ಅತಂತ್ರ ಫಲಿತಾಂಶದಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ಹೇಗೆ ಸುದ್ದಿಯಾಗುತ್ತಿದೆಯೋ, ಅದೇ ರೀತಿ ಸಾಮಾಜಿಕ ತಾಣಗಳಲ್ಲಿ ರಾಜಕಾರಣಿಗಳನ್ನು ಮನಬಂದಂತೆ ಅಣಕವಾಡಲಾಗುತ್ತಿದೆ. ಅದರೆ ಕೆಲವೊಂದು ಸ್ಯಾಂಪಲ್ ಗಳನ್ನು ಫಿಲ್ಟರ್ ಮಾಡಿ ಪ್ರಕಟಿಸುತ್ತಿದ್ದೇವೆ.
ಕೃಷಿ ಕುಟುಂಬದ ದಂಪತಿಗಳ ನಡುವೆ ಸಂಭಾಷಣೆ
ಹೆಂಡತಿ: ಎಷ್ಟು ಜನ ಬರ್ತಾರೆ?
ಗಂಡ: ಗೊತ್ತಿಲ್ಲ.. ಆನಂದ್ ಸಿಂಗ್ ಒಬ್ಬ ಬರ್ತಾನೆ.. ಇನ್ನೆಷ್ಟು ಜನ ಬರ್ತಾರೆ ಅನ್ನೋದು ಇನ್ನೂ ಗ್ಯಾರಂಟಿಯಾಗಿಲ್ಲ..
ಹೆಂಡತಿ: ಆನಂದ್ ಸಿಂಗ್ ಅಂತೆ.. ಆನಂದ್ ಸಿಂಗ್..ನಿಮ್ ಕರ್ಮಾ.. ನಾನು ಕೇಳಿದ್ದು.. ಗೊಬ್ರ ಹೊರೋಕೆ ಎಷ್ಟು ಜನ ಬರ್ತಾರಂತಾ...
--
ಮಮ್ಮಿ ಮಮ್ಮಿ ಆಪರೇಷನ್ ಕಮಲ ಆದ್ರೆ ಏನಾಗುತ್ತೆ?
ತೆನೆ ಹೊತ್ತ ಮಹಿಳೆಗೆ ಅಬಾರ್ಷನ್ ಆಗುತ್ತೆ ...
--
ಮೂತ್ರ ವಿಸರ್ಜನೆ ಮಾಡಲು ಲಕ್ಷುರಿ ಬಸ್ ನಿಂದ ಇಳಿದ 8 ಕಾಂಗ್ರೆಸ್ ಶಾಸಕರು ನಾಪತ್ತೆ.
ನಾಪತ್ತೆಯಾದ 8 ಶಾಸಕರನ್ನು ಕರೆತರಲು ಹೋದ ಇಬ್ಬರೂ ಶಾಸಕರು ನಾಪತ್ತೆ.

--
ಆಪರೇಷನ್ ಕಮಲ ದಯವಿಟ್ಟು ಮಾಡಬೇಡಿ
ಲೋಕಾಯುಕ್ತ ಓಪನ್ ಮಾಡಿ ಸಾಕು
ಎಲ್ಲರೂ ರೆಸಾರ್ಟ್ ಗೋಡೆ ಹಾರಿ ಬರುತ್ತಾರೆ
--
ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಒಂದು ಎಚ್ಚರಿಕೆ..
ಮೂಲೆಯಲ್ಲಿ ಕೂತಿರುವ ಶಾಸಕರತ್ತ ಒಂದು ಕಣ್ಣಿಡಿ, ಯಾವಾಗ ಬೇಕಾದ್ರೂ ಓಡಿ ಹೋಗ್ಬಹುದು..
--
ರೆಸಾರ್ಟ್ ಖರ್ಚು ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಹೇಗೆ ಹಂಚಿಕೊಳ್ತಾರೆ?
ಎಣ್ಣೆ ನಮ್ದು.. ಊಟ ನಿಮ್ದು... ಇಲ್ಲಾ ಊಟ ನಮ್ದು.. ಎಣ್ಣೆ ನಿಮ್ದು
-
ಆಗ ಅಮ್ಮ ಹೇಳ್ತಿದ್ರು...
ಯಾರು ಬಂದ್ರು ಏನು ಮಗಾ, ನಾವು ರಾಗಿ ಬೀಸೋದು ತಪ್ಪುತ್ತಾ....
ಈಗ ಮಕ್ಕಳು ಹೇಳ್ತಿದ್ದಾರೆ....
ಈ ಕರ್ಮಕ್ಕೆ ಅಷ್ಟು ದೂರದಿಂದ ನಾವು ಬಂದು ವೋಟ್ ಹಾಕ್ಬೇಕಿತ್ತಾ...












Click it and Unblock the Notifications