ಈ ಯುಗಾದಿಗೆ ನನ್ನ ಸಾವಿರದ ಒಂದು ಕನಸು

ಈ ವರ್ಷವಾದರೂ ನಾನು ಬದಲಾಗಬೇಕು. ಗುರುತ್ವಾಕರ್ಷಣೆ ಕಳೆದುಕೊಂಡ ಉಪಗ್ರಹದಂತೆ ಅಂಕೆತಪ್ಪಿ ಸುತ್ತುವ ಮನಸ್ಥಿತಿಗೆ ಲಗಾಮು ಹಾಕಬೇಕು. ಒಂದೆತ್ತರ ಹಾರಿದ ಚಿಟ್ಟೆಯೊಂದು ಆಕಾಶವೇ ತನ್ನದೆಂಬಂತೆ ವರ್ತಿಸುವ ಆಹಂ ಕಿತ್ತೆಸಯಬೇಕು. ಮುಖವಾಡ ಕಳಚಿಕೊಳ್ಳಬೇಕು.
ನೆಟ್ಟುಲೋಕದಲ್ಲಿ ದಿಕ್ಕೆಟ್ಟುಕುಳಿತುಕೊಳ್ಳದೇ ಕನಿಷ್ಠ ಎಂಟುಗಂಟೆಯಾದರೂ ಅನ್ನಕೊಡುವ ಕಂಪನಿಗಾಗಿ ಹಠಮಾರಿಯಾಗಿ ದುಡಿಯಬೇಕು. ಪ್ರತಿದಿನ ಹೊಸತು ಹೊಸತು ಕಲಿಯಬೇಕು. ಬದುಕಿಗಿಷ್ಟು ಸಾಲದು, ಇನ್ನಷ್ಟು ಬೇಕು ಎನ್ನುವ ಹಸಿವು ಹೆಚ್ಚಿಸಿಕೊಳ್ಳಬೇಕು. ಮುಖ್ಯವಾಗಿ ಮೌನದ ಕಪ್ಪೆಚಿಪ್ಪಿನಿಂದ ಹೊರಬರಬೇಕು.
ಈ ವರ್ಷಕ್ಕೆ ಈ ಮೊಬೈಲ್ ಸಾಕು. ತ್ರಿಜಿ, ಆಂಡ್ರಾಯ್ಡ್ ಬೇಡ. ಆದಷ್ಟು ಬೇಗ ಒಂದು ಲ್ಯಾಪಿ, ಡಿಜಿಟಲ್ ಕ್ಯಾಮರಾ ಖರೀದಿಸ್ಬೇಕು. ಈ ವರ್ಷ ಬೈಕು ಬೇಡ. ಮರೆತುಬಿಟ್ಟಿದ್ದಾನೆ ಪಾಪಿ, ಎನ್ನುತ್ತಿರುವ ಸ್ನೇಹಿತ, ಸ್ನೇಹಿತೆಯರಿಗೆ ಕರೆಮಾಡಿ ಹ್ಯಾಪಿಯಾಗಿ ಈ ಯುಗಾದಿಯಿಂದ ಮಾತನಾಡಬೇಕು.
ಎರಡು ತಿಂಗಳಿಗೊಮ್ಮೆಯಾದರೂ ಊರಿಗೆ ಹೋಗಬೇಕು. ಅಪ್ಪಅಮ್ಮನ ಜೊತೆ ಹೆಚ್ಚು ಸಮಯ ಕಳೆಯಬೇಕು. ಅಲ್ಲಿ ತೆಂಗು ಹತ್ತಿ ಒಂದೇ ಸರ್ತಿ ನಾಲ್ಕು ಎಳೆನೀರಾದರೂ ಕುಡಿಯಬೇಕು. ಪೋಲಿ ಸ್ನೇಹಿತರೊಂದಿಗೆ ಕಾಡುಮೇಡು ಸುತ್ತಬೇಕು. ಹಳೆಯ ನೆನಪುಗಳನ್ನು ಕೆದಕಬೇಕು.
ಜಂಜಡಗಳಿಂದ ಮುಕ್ತವಾದ ಕನಸುಕಂಗಳ ಆ ದಿನಗಳಿಗೆ ಮತ್ತೆ ತೆರಳಬೇಕು. ಹಸಿದ ಹುಲಿಯಂತೆ ಸಿಕ್ಕಸಿಕ್ಕದೆಲ್ಲವನ್ನೂ ಓದುವ ಆರಂಭದ ದಿನಗಳಿಗೆ ತೆರೆದುಕೊಳ್ಳಬೇಕು. ಓದಿಮರೆತ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಬೆಟ್ಟದ ಜೀವ, ದಾಟು, ದ್ವೀಪ, ಚಿದಂಬರ ರಹಸ್ಯ, ಕರ್ವಾಲೊ, ಅಲೆಮಾರಿಯ ಅಂಡಮಾನ್ ಮತ್ತೆ ಓದಬೇಕು. ಚೇತನ್ ಭಗತ್ ಬರೆದದ್ದು ಓದಲು ಬಾಕಿಯಿದೆಯೇ ಹುಡುಕಬೇಕು.
ಈ ಎಲ್ಲಾ ನೆಪಗಳಾಚೆ ಸದ್ದಿಲ್ಲದೇ ಹೃದಯ ಪ್ರವೇಶಿಸಿ ಹೃದಯ ಕವಾಟ ಹಿಸುಕುವ ಅವಳ ನೆನಪು ಬಾರದಂತೆ ನಾನು ಬ್ಯುಸಿಯಾಗಬೇಕು ಎನ್ನುವುದೇ ನನ್ನ ಸಾವಿರದ ಒಂದನೆಯ ಕನಸು! ನನಗೆ ಆಲ್ ದಿ ಬೆಸ್ಟ್ ಹೇಳಿರಿ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications