Vishwakarma Puja 2022 : ವಿಶ್ವಕರ್ಮ ಪೂಜೆ- ಇತಿಹಾಸ, ಪೂಜೆ, ಮಂತ್ರ ಮಾಹಿತಿ
ಪುರಾಣಗಳನ್ನು ಬಲ್ಲವರಿಗೆ ವಿಶ್ವಕರ್ಮ ಹೆಸರು ಗೊತ್ತಿರಬಹುದು. ಇವರು ನಮ್ಮ ದೇವತೆಗಳಿಗೆ ವಾಸ್ತುಶಿಲ್ಪಿ. ವಿಶ್ವಕರ್ಮರನ್ನು ಸ್ವಯಂಭು ಅವತಾರ ಎನ್ನುತ್ತಾರೆ. ಈ ವಿಶ್ವದ ಎಲ್ಲಾ ಭೌತಿಕ ವಸ್ತುಗಳ ಸೃಷ್ಟಿಕರ್ತ.
ದೇವ ದೇವತೆಯರ ರಥ, ಅರಮನೆ, ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಟ್ಟವರು. ರಾವಣನ ಸ್ವರ್ಣ ಲಂಕೆ ಎಂಬ ಅದ್ಭುತ ನಗರಿಯನ್ನು ಕಟ್ಟಿದ್ದೂ ವಿಶ್ವಕರ್ಮನೇ. ಪುಷ್ಪಕ ವಿಮಾನ ತಯಾರಕರೂ ಅವರೆಯೇ. ಶ್ರೀಕೃಷ್ಣ ದ್ವಾರಕಾ ನಗರಿ, ಪಾಂಡವರ ಇಂದ್ರಪ್ರಸ್ಥ ಇವೆಲ್ಲವೂ ವಿಶ್ವಕರ್ಮರಿಂದಲೇ ರಚನೆಯಾಗಿದ್ದು ಎಂದು ಹೇಳುತ್ತವೆ ಹಿಂದೂ ಶಾಸ್ತ್ರ ಗ್ರಂಥಗಳು.
ವಾಸ್ತುಶಿಲ್ಪಿ ಎನಿಸಿದ್ದ ವಿಶ್ವಕರ್ಮನನ್ನು ಹಿಂದೂಗಳು ಭಕ್ತಿಯಿಂದ ಪೂಜಿಸುತ್ತಾರೆ. ಕನ್ಯಾ ಸಂಕ್ರಾಂತಿಯಂದು ವಿಶ್ವಕರ್ಮನನ್ನು ಪೂಜಿಸಿದರೆ ಲೌಕಿಕ ಭೋಗಗಳು ಬೇಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಕನ್ಯಾ ಸಂಕ್ರಾಂತಿ ಸಾಮಾನ್ಯವಾಗಿ ಭಾದ್ರಪದ ಮಾಸದ ಕೊನೆಯ ದಿನದಂದು ಬೀಳುತ್ತದೆ. ಇಂಗ್ಲೀಷ್ ಕ್ಯಾಲೆಂಡರ್ನಲ್ಲಿ ಇದು ಸೆಪ್ಟೆಂಬರ್ 16ರಿಂದ 18ರಲ್ಲಿ ಒಂದು ದಿನ ಇರುತ್ತದೆ. ಈ ವರ್ಷ ಸೆಪ್ಟೆಂಬರ್ 17ರಂದು ಈ ದಿನ ಇದೆ.
ಪೂಜಾ ಸಮಯ: ಸೆಪ್ಟೆಂಬರ್ 17, ಬೆಳಗ್ಗೆ 7:36ರಿಂದ ರಾತ್ರಿ 9:38ರವರೆಗೆ. ಇಲ್ಲಿ ವಿಶೇಷ ಎಂದರೆ ವಿಶ್ವಕರ್ಮ ಪೂಜೆಯ ದಿನವನ್ನು ಸೌರಮಾನ ಕ್ಯಾಲೆಂಡರ್ ಮೂಲಕ ನಿರ್ಧರಿಸಲಾಗುತ್ತದೆ. ಅದೇ, ಇತರ ಹಿಂದೂ ಹಬ್ಬಗಳ ದಿನ ಚಾಂದ್ರಮಾನ ಪಂಚಾಂಗವನ್ನು ನೋಡಿ ನಿರ್ಧರಿಸಲಾಗುತ್ತದೆ.
ಪೂಜೆ ಹೇಗೆ?: ದಸರಾ ವೇಳೆ ಆಯುಧ ಪೂಜೆಗೂ ವಿಶ್ವಕರ್ಮ ಪೂಜೆಗೂ ತುಸು ಹೋಲಿಕೆ ಇದೆ. ಆಯುಧ ಪೂಜೆಯಂದು ಮಾಡಲಾಗುವಂತೆ ವಿಶ್ವಕರ್ಮ ಪೂಜೆಯಲ್ಲೂ ಎಲ್ಲಾ ಸಲಕರಣೆಗಳನ್ನು ಸ್ವಚ್ಛಗೊಳಿಸಿ ವಿಶ್ವಕರ್ಮನ ವಿಗ್ರಹದ ಮುಂದಿಟ್ಟು ಪೂಜೆ ಮಾಡಲಾಗುತ್ತದೆ. ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ತ್ರಿಪುರಾ, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವಿಶ್ವಕರ್ಮ ಪೂಜೆ ಹೆಚ್ಚು ನಡೆಯುತ್ತದೆ.

ವಿಶ್ವಕರ್ಮ ಪೂಜಾ ಮಂತ್ರಗಳು
ಮಂತ್ರ 1:
ಓಂ ವಿಶ್ವಕರ್ಮಾಯ ನಮಃ
ಶಿಲ್ಪಕಾರಿ ನಮೋ ನಮಃ
ಮಂಗಲಕಾರಿ ನಮೋ ನಮಃ
ಚಕ್ರಧಾರಿ ನಮೋ ನಮಃ
ಮಂತ್ರ 2:
ಓಂ ಆಧಾರ ಶಕ್ತಪೆ ನಮಃ
ಓಂ ಕುಮಾಯಿ ನಮಃ
ಓಂ ಅನಂತಂ ನಮಃ
ಓಂ ಪೃಥ್ವಿಯಾಯ ನಮಃ
(ಒನ್ಇಂಡಿಯಾ ಸುದ್ದಿ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications