Vishwakarma Puja 2022 : ವಿಶ್ವಕರ್ಮ ಪೂಜೆ- ಇತಿಹಾಸ, ಪೂಜೆ, ಮಂತ್ರ ಮಾಹಿತಿ
ಪುರಾಣಗಳನ್ನು ಬಲ್ಲವರಿಗೆ ವಿಶ್ವಕರ್ಮ ಹೆಸರು ಗೊತ್ತಿರಬಹುದು. ಇವರು ನಮ್ಮ ದೇವತೆಗಳಿಗೆ ವಾಸ್ತುಶಿಲ್ಪಿ. ವಿಶ್ವಕರ್ಮರನ್ನು ಸ್ವಯಂಭು ಅವತಾರ ಎನ್ನುತ್ತಾರೆ. ಈ ವಿಶ್ವದ ಎಲ್ಲಾ ಭೌತಿಕ ವಸ್ತುಗಳ ಸೃಷ್ಟಿಕರ್ತ.
ದೇವ ದೇವತೆಯರ ರಥ, ಅರಮನೆ, ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಟ್ಟವರು. ರಾವಣನ ಸ್ವರ್ಣ ಲಂಕೆ ಎಂಬ ಅದ್ಭುತ ನಗರಿಯನ್ನು ಕಟ್ಟಿದ್ದೂ ವಿಶ್ವಕರ್ಮನೇ. ಪುಷ್ಪಕ ವಿಮಾನ ತಯಾರಕರೂ ಅವರೆಯೇ. ಶ್ರೀಕೃಷ್ಣ ದ್ವಾರಕಾ ನಗರಿ, ಪಾಂಡವರ ಇಂದ್ರಪ್ರಸ್ಥ ಇವೆಲ್ಲವೂ ವಿಶ್ವಕರ್ಮರಿಂದಲೇ ರಚನೆಯಾಗಿದ್ದು ಎಂದು ಹೇಳುತ್ತವೆ ಹಿಂದೂ ಶಾಸ್ತ್ರ ಗ್ರಂಥಗಳು.
ವಾಸ್ತುಶಿಲ್ಪಿ ಎನಿಸಿದ್ದ ವಿಶ್ವಕರ್ಮನನ್ನು ಹಿಂದೂಗಳು ಭಕ್ತಿಯಿಂದ ಪೂಜಿಸುತ್ತಾರೆ. ಕನ್ಯಾ ಸಂಕ್ರಾಂತಿಯಂದು ವಿಶ್ವಕರ್ಮನನ್ನು ಪೂಜಿಸಿದರೆ ಲೌಕಿಕ ಭೋಗಗಳು ಬೇಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಕನ್ಯಾ ಸಂಕ್ರಾಂತಿ ಸಾಮಾನ್ಯವಾಗಿ ಭಾದ್ರಪದ ಮಾಸದ ಕೊನೆಯ ದಿನದಂದು ಬೀಳುತ್ತದೆ. ಇಂಗ್ಲೀಷ್ ಕ್ಯಾಲೆಂಡರ್ನಲ್ಲಿ ಇದು ಸೆಪ್ಟೆಂಬರ್ 16ರಿಂದ 18ರಲ್ಲಿ ಒಂದು ದಿನ ಇರುತ್ತದೆ. ಈ ವರ್ಷ ಸೆಪ್ಟೆಂಬರ್ 17ರಂದು ಈ ದಿನ ಇದೆ.
ಪೂಜಾ ಸಮಯ: ಸೆಪ್ಟೆಂಬರ್ 17, ಬೆಳಗ್ಗೆ 7:36ರಿಂದ ರಾತ್ರಿ 9:38ರವರೆಗೆ. ಇಲ್ಲಿ ವಿಶೇಷ ಎಂದರೆ ವಿಶ್ವಕರ್ಮ ಪೂಜೆಯ ದಿನವನ್ನು ಸೌರಮಾನ ಕ್ಯಾಲೆಂಡರ್ ಮೂಲಕ ನಿರ್ಧರಿಸಲಾಗುತ್ತದೆ. ಅದೇ, ಇತರ ಹಿಂದೂ ಹಬ್ಬಗಳ ದಿನ ಚಾಂದ್ರಮಾನ ಪಂಚಾಂಗವನ್ನು ನೋಡಿ ನಿರ್ಧರಿಸಲಾಗುತ್ತದೆ.
ಪೂಜೆ ಹೇಗೆ?: ದಸರಾ ವೇಳೆ ಆಯುಧ ಪೂಜೆಗೂ ವಿಶ್ವಕರ್ಮ ಪೂಜೆಗೂ ತುಸು ಹೋಲಿಕೆ ಇದೆ. ಆಯುಧ ಪೂಜೆಯಂದು ಮಾಡಲಾಗುವಂತೆ ವಿಶ್ವಕರ್ಮ ಪೂಜೆಯಲ್ಲೂ ಎಲ್ಲಾ ಸಲಕರಣೆಗಳನ್ನು ಸ್ವಚ್ಛಗೊಳಿಸಿ ವಿಶ್ವಕರ್ಮನ ವಿಗ್ರಹದ ಮುಂದಿಟ್ಟು ಪೂಜೆ ಮಾಡಲಾಗುತ್ತದೆ. ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ತ್ರಿಪುರಾ, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವಿಶ್ವಕರ್ಮ ಪೂಜೆ ಹೆಚ್ಚು ನಡೆಯುತ್ತದೆ.

ವಿಶ್ವಕರ್ಮ ಪೂಜಾ ಮಂತ್ರಗಳು
ಮಂತ್ರ 1:
ಓಂ ವಿಶ್ವಕರ್ಮಾಯ ನಮಃ
ಶಿಲ್ಪಕಾರಿ ನಮೋ ನಮಃ
ಮಂಗಲಕಾರಿ ನಮೋ ನಮಃ
ಚಕ್ರಧಾರಿ ನಮೋ ನಮಃ
ಮಂತ್ರ 2:
ಓಂ ಆಧಾರ ಶಕ್ತಪೆ ನಮಃ
ಓಂ ಕುಮಾಯಿ ನಮಃ
ಓಂ ಅನಂತಂ ನಮಃ
ಓಂ ಪೃಥ್ವಿಯಾಯ ನಮಃ
(ಒನ್ಇಂಡಿಯಾ ಸುದ್ದಿ)
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications