ಮೇ 1 ವಿಶ್ವ ನಗೆ ದಿನದಂದು ಮನಸುಬಿಚ್ಚಿ ನಕ್ಕುಬಿಡಿ

ಅಯ್ಯೋ ಇನ್ನೂ ಸಂಬಳವೇ ಆಗಿರುವುದಿಲ್ಲ ಎಲ್ಲಿಂದ ನಗಲಿ ಎಂದು ಹಲುಬಬೇಡಿ. ಈ ನಗೆ ದಿನ ತಿಂಗಳ ಪಗಾರ ಕೈಸೇರಿದ ಮೇಲಾದರೂ ಬರಬಾರದಿತ್ತೆ ಎಂದು ಕರುಬಬೇಡಿ. ನಮಗೂ ಗೊತ್ತು, ನಿಮಗೂ ಗೊತ್ತು. ನಗಲು ಕಾರಣ ಹುಡುಕಿಕೊಂಡು ಹೋಗಬೇಕಾದ ದಿನಗಳಿವು. ಟ್ಯಾಕ್ಸು, ಇಎಮ್ಐ, ಹೆಂಡತಿಯ ಡಿಮ್ಯಾಂಡುಗಳು, ಮನೆಗೆ ಮೇಲಿಂದ ಮೇಲೆ ಬರುವ ನೆಂಟರಿಷ್ಟರನ್ನು ನೆನೆಸಿಕೊಂಡರೆ ನಗೆಯಾದರೂ ಎಲ್ಲಿಂದ ಬರಬೇಕು? ಆದರೂ, ಚಿಂತೆ ಮಾಡಬೇಡಿ, ಕಷ್ಟಗಳು ಯಾರಿಗಿರಲ್ಲ ಹೇಳಿ? ಮೇ 1ರಂದು ಸುಖಾಸುಮ್ಮನೆ ನಕ್ಕುಬಿಡಿ. ನಗುನಗುತಾ ನಲಿನಲಿ ಏನೇ ಆಗಲಿ ಎಂದು ಅಣ್ಣಾವ್ರೇ ಹಾಡಿಲ್ಲವೆ?
![]() | |
| ನಗುನಗುತಾ ನಲಿನಲಿ ಏನೇ ಆಗಲಿ ಎಂದು ಅಣ್ಣಾವ್ರೇ ಹಾಡಿಲ್ಲವೆ? | |
![]() | |
ಬೆಂಗಳೂರು ನಗೆ ಕೂಟಗಳ ಸಮ್ಮೀಳನ ವಿಶೇಷ ನಗೆ ಜಾಥಾ ಹಮ್ಮಿಕೊಂಡಿದೆ. ನಗುವಿನ ಮಹತ್ವನ್ನು ಸಾರುವುದು ಇದರ ಉದ್ದೇಶ. ಈ ಜಾಥಾ ಅಪರಾಹ್ನ 3 ಗಂಟೆಗೆ ವಿಧಾನಸೌಧದಿಂದ ಆರಂಭವಾಗಿ ಎಸ್ ಜೆಆರ್ ಸಿ ಕಾಲೇಜು, ಆನಂದ್ ರಾವ್ ವೃತ್ತ ಮೂಲಕ ಸಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ನಂತರ ಬಗೆ ಬಗೆಯ ನಗು, ಡ್ಯಾನ್ಸ್, ನಾಟಕ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ನಗುವಿನ ಮಹತ್ವ ಸಾರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಗೆ ಕೂಟ ನಿಮ್ಮನ್ನು ನಗುಮೊಗದಿಂದ ಸ್ವಾಗತಿಸಿದೆ.
"ಒಂದು ನಿಮಿಷದ ನಗೆಯು 15 ನಿಮಿಷದ ವಾಕಿಂಗ್ ಸಮ ಎಂದು ಅಧ್ಯಯನಗಳು ಹೇಳುತ್ತಿವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ ಮತ್ತು ಒತ್ತಡ ಇತ್ಯಾದಿ ತೊಂದರೆಗಳಿಂದ ಪಾರಾಗಲು ರಾಮಬಾಣ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದೇ ನಮ್ಮ ಉದ್ದೇಶ" ಎಂದು ಭಾನುವಾರದ ಕಾರ್ಯಕ್ರಮದ ಕುರಿತು ಕರ್ನಾಟಕ ಲಾಫರ್ ಕ್ಲಬ್ ಅಧ್ಯಕ್ಷರಾದ ಸದಾಶಿವ್ ಹೇಳಿದ್ದಾರೆ.
ಬೆಂಗಳೂರಿನ ಸೈಂಟ್ ಮಾರ್ಕ್ ರೋಡಿನಲ್ಲೂ ಇಂಥದ್ದೇ ಒಂದು ನಗೆ ಕಾರ್ಯಕ್ರಮ ನಾಳೆ ನಡೆಯಲಿದೆ. ಇಲ್ಲಿನ ಕೋಷಿ ಚಿಲ್ಲೌಟ್ ನಲ್ಲಿ ಯೋಗ ತರಬೇತುದಾರರೊಬ್ಬರು ವಿಶ್ವ ನಗೆ ದಿನದ ಪ್ರಯುಕ್ತ ನಗೆ ಯೋಗ ನಡೆಸಿಕೊಡಲಿದ್ದಾರೆ. ಇಲ್ಲೂ ನಿಮಗೆ ನಗುವ ಯೋಗವಿದೆ. ಹೋಗಿ ಬನ್ನಿ. ನಗರದ ಜಂಜಾಟ, ಬೋರ್ ಹೊಡೆಸುವ ಜೀವನ, ಒತ್ತಡದ ಬದುಕು, ಇಲ್ಲಿನ ಟ್ರಾಫಿಕ್ ಜಂಜಾಟ, ಬದುಕಿನ ಕಷ್ಟಗಳು ಎಲ್ಲವನ್ನು ಮರೆತು ಒಂದಿಷ್ಟು ಹೊತ್ತು ನಕ್ಕು ಬಿಡಿ. ನಾಳೆ ನಗಲು ಮಾತ್ರ ಮರೀಬೇಡಿ.
ವಿಶ್ವ ನಗೆ ದಿನ ಅಂದರೆ : 1998ರಲ್ಲಿ ಡಾ. ಮದನ್ ಕತಾರಿಯಾ ವಿಶ್ವ ನಗೆ ದಿನವನ್ನು ಆರಂಭಿಸಿದರು. ಇವರು ವಿಶ್ವಾದ್ಯಂತ ನಗೆ ಯೋಗದ ಮಹತ್ವ ಸಾರಿದ ವ್ಯಕ್ತಿ. ನಗುವಿನ ಮೂಲಕ ಜಾಗತಿಕ ಶಾಂತಿ, ಸಂಭ್ರಮ, ಸ್ನೇಹ ಹಂಚುವ ಉದ್ದೇಶದಿಂದ ನಗು ದಿನವನ್ನು ಆರಂಭಿಸಲಾಯಿತು. ಇದು ದಿನೇ ದಿನೇ ಪ್ರಖ್ಯಾತಿ ಹೊಂದಿ ಈಗ ಸುಮಾರು 65 ದೇಶಗಳಲ್ಲಿ ಸುಮಾರು 6 ಸಾವಿರ ನಗೆ ಕೂಟಗಳು ಹುಟ್ಟಿಕೊಂಡಿವೆ.
ರೋಗ-ರುಜಿನ, ನೋವು, ಸಂಕಷ್ಟ, ಖಿನ್ನತೆ, ದುಗುಡ ಯಾರಿಗಿರುವುದಿಲ್ಲ ಹೇಳಿ? ಆದರೆ, ನಗುನಗುತ್ತಾ ಜೀವನ ಸಾಗಿಸುತ್ತಿರುವವರನ್ನು ನೋಡಿಲ್ಲವೆ? ನೋವು, ಸಂಕಷ್ಟಗಳಿಗೆ ನಾನಾ ಮುಖಗಳಾದರೆ ನಗುವಿಗೆ ಮಾತ್ರ ಒಂದೇ ಮುಖ. ನೋವನ್ನು ಕ್ಷಣಮ್ಟಟಿಗಾದರೂ ಮರೆಯಾಗಿಸುವ ತಾಕತ್ತು ಇರುವುದು ನಿಷ್ಕಳಂಕ ನಗುವಿಗೆ ಮಾತ್ರ. ಈ ಜಗದಲ್ಲಿ, ಅದರಲ್ಲೂ ಭಾರತದಲ್ಲಿ ನಾವು ಒಬ್ಬಂಟಿ ಅಲ್ಲವೇ ಅಲ್ಲ. ಎಲ್ಲರೂ ಒಟ್ಟಿಗೆ ಸೇರಿ ನಕ್ಕುನಲಿಯೋಣ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ














Click it and Unblock the Notifications