ಮೇ 1 ವಿಶ್ವ ನಗೆ ದಿನದಂದು ಮನಸುಬಿಚ್ಚಿ ನಕ್ಕುಬಿಡಿ

ಅಯ್ಯೋ ಇನ್ನೂ ಸಂಬಳವೇ ಆಗಿರುವುದಿಲ್ಲ ಎಲ್ಲಿಂದ ನಗಲಿ ಎಂದು ಹಲುಬಬೇಡಿ. ಈ ನಗೆ ದಿನ ತಿಂಗಳ ಪಗಾರ ಕೈಸೇರಿದ ಮೇಲಾದರೂ ಬರಬಾರದಿತ್ತೆ ಎಂದು ಕರುಬಬೇಡಿ. ನಮಗೂ ಗೊತ್ತು, ನಿಮಗೂ ಗೊತ್ತು. ನಗಲು ಕಾರಣ ಹುಡುಕಿಕೊಂಡು ಹೋಗಬೇಕಾದ ದಿನಗಳಿವು. ಟ್ಯಾಕ್ಸು, ಇಎಮ್ಐ, ಹೆಂಡತಿಯ ಡಿಮ್ಯಾಂಡುಗಳು, ಮನೆಗೆ ಮೇಲಿಂದ ಮೇಲೆ ಬರುವ ನೆಂಟರಿಷ್ಟರನ್ನು ನೆನೆಸಿಕೊಂಡರೆ ನಗೆಯಾದರೂ ಎಲ್ಲಿಂದ ಬರಬೇಕು? ಆದರೂ, ಚಿಂತೆ ಮಾಡಬೇಡಿ, ಕಷ್ಟಗಳು ಯಾರಿಗಿರಲ್ಲ ಹೇಳಿ? ಮೇ 1ರಂದು ಸುಖಾಸುಮ್ಮನೆ ನಕ್ಕುಬಿಡಿ. ನಗುನಗುತಾ ನಲಿನಲಿ ಏನೇ ಆಗಲಿ ಎಂದು ಅಣ್ಣಾವ್ರೇ ಹಾಡಿಲ್ಲವೆ?
![]() | |
| ನಗುನಗುತಾ ನಲಿನಲಿ ಏನೇ ಆಗಲಿ ಎಂದು ಅಣ್ಣಾವ್ರೇ ಹಾಡಿಲ್ಲವೆ? | |
![]() | |
ಬೆಂಗಳೂರು ನಗೆ ಕೂಟಗಳ ಸಮ್ಮೀಳನ ವಿಶೇಷ ನಗೆ ಜಾಥಾ ಹಮ್ಮಿಕೊಂಡಿದೆ. ನಗುವಿನ ಮಹತ್ವನ್ನು ಸಾರುವುದು ಇದರ ಉದ್ದೇಶ. ಈ ಜಾಥಾ ಅಪರಾಹ್ನ 3 ಗಂಟೆಗೆ ವಿಧಾನಸೌಧದಿಂದ ಆರಂಭವಾಗಿ ಎಸ್ ಜೆಆರ್ ಸಿ ಕಾಲೇಜು, ಆನಂದ್ ರಾವ್ ವೃತ್ತ ಮೂಲಕ ಸಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ನಂತರ ಬಗೆ ಬಗೆಯ ನಗು, ಡ್ಯಾನ್ಸ್, ನಾಟಕ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ನಗುವಿನ ಮಹತ್ವ ಸಾರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಗೆ ಕೂಟ ನಿಮ್ಮನ್ನು ನಗುಮೊಗದಿಂದ ಸ್ವಾಗತಿಸಿದೆ.
"ಒಂದು ನಿಮಿಷದ ನಗೆಯು 15 ನಿಮಿಷದ ವಾಕಿಂಗ್ ಸಮ ಎಂದು ಅಧ್ಯಯನಗಳು ಹೇಳುತ್ತಿವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ ಮತ್ತು ಒತ್ತಡ ಇತ್ಯಾದಿ ತೊಂದರೆಗಳಿಂದ ಪಾರಾಗಲು ರಾಮಬಾಣ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದೇ ನಮ್ಮ ಉದ್ದೇಶ" ಎಂದು ಭಾನುವಾರದ ಕಾರ್ಯಕ್ರಮದ ಕುರಿತು ಕರ್ನಾಟಕ ಲಾಫರ್ ಕ್ಲಬ್ ಅಧ್ಯಕ್ಷರಾದ ಸದಾಶಿವ್ ಹೇಳಿದ್ದಾರೆ.
ಬೆಂಗಳೂರಿನ ಸೈಂಟ್ ಮಾರ್ಕ್ ರೋಡಿನಲ್ಲೂ ಇಂಥದ್ದೇ ಒಂದು ನಗೆ ಕಾರ್ಯಕ್ರಮ ನಾಳೆ ನಡೆಯಲಿದೆ. ಇಲ್ಲಿನ ಕೋಷಿ ಚಿಲ್ಲೌಟ್ ನಲ್ಲಿ ಯೋಗ ತರಬೇತುದಾರರೊಬ್ಬರು ವಿಶ್ವ ನಗೆ ದಿನದ ಪ್ರಯುಕ್ತ ನಗೆ ಯೋಗ ನಡೆಸಿಕೊಡಲಿದ್ದಾರೆ. ಇಲ್ಲೂ ನಿಮಗೆ ನಗುವ ಯೋಗವಿದೆ. ಹೋಗಿ ಬನ್ನಿ. ನಗರದ ಜಂಜಾಟ, ಬೋರ್ ಹೊಡೆಸುವ ಜೀವನ, ಒತ್ತಡದ ಬದುಕು, ಇಲ್ಲಿನ ಟ್ರಾಫಿಕ್ ಜಂಜಾಟ, ಬದುಕಿನ ಕಷ್ಟಗಳು ಎಲ್ಲವನ್ನು ಮರೆತು ಒಂದಿಷ್ಟು ಹೊತ್ತು ನಕ್ಕು ಬಿಡಿ. ನಾಳೆ ನಗಲು ಮಾತ್ರ ಮರೀಬೇಡಿ.
ವಿಶ್ವ ನಗೆ ದಿನ ಅಂದರೆ : 1998ರಲ್ಲಿ ಡಾ. ಮದನ್ ಕತಾರಿಯಾ ವಿಶ್ವ ನಗೆ ದಿನವನ್ನು ಆರಂಭಿಸಿದರು. ಇವರು ವಿಶ್ವಾದ್ಯಂತ ನಗೆ ಯೋಗದ ಮಹತ್ವ ಸಾರಿದ ವ್ಯಕ್ತಿ. ನಗುವಿನ ಮೂಲಕ ಜಾಗತಿಕ ಶಾಂತಿ, ಸಂಭ್ರಮ, ಸ್ನೇಹ ಹಂಚುವ ಉದ್ದೇಶದಿಂದ ನಗು ದಿನವನ್ನು ಆರಂಭಿಸಲಾಯಿತು. ಇದು ದಿನೇ ದಿನೇ ಪ್ರಖ್ಯಾತಿ ಹೊಂದಿ ಈಗ ಸುಮಾರು 65 ದೇಶಗಳಲ್ಲಿ ಸುಮಾರು 6 ಸಾವಿರ ನಗೆ ಕೂಟಗಳು ಹುಟ್ಟಿಕೊಂಡಿವೆ.
ರೋಗ-ರುಜಿನ, ನೋವು, ಸಂಕಷ್ಟ, ಖಿನ್ನತೆ, ದುಗುಡ ಯಾರಿಗಿರುವುದಿಲ್ಲ ಹೇಳಿ? ಆದರೆ, ನಗುನಗುತ್ತಾ ಜೀವನ ಸಾಗಿಸುತ್ತಿರುವವರನ್ನು ನೋಡಿಲ್ಲವೆ? ನೋವು, ಸಂಕಷ್ಟಗಳಿಗೆ ನಾನಾ ಮುಖಗಳಾದರೆ ನಗುವಿಗೆ ಮಾತ್ರ ಒಂದೇ ಮುಖ. ನೋವನ್ನು ಕ್ಷಣಮ್ಟಟಿಗಾದರೂ ಮರೆಯಾಗಿಸುವ ತಾಕತ್ತು ಇರುವುದು ನಿಷ್ಕಳಂಕ ನಗುವಿಗೆ ಮಾತ್ರ. ಈ ಜಗದಲ್ಲಿ, ಅದರಲ್ಲೂ ಭಾರತದಲ್ಲಿ ನಾವು ಒಬ್ಬಂಟಿ ಅಲ್ಲವೇ ಅಲ್ಲ. ಎಲ್ಲರೂ ಒಟ್ಟಿಗೆ ಸೇರಿ ನಕ್ಕುನಲಿಯೋಣ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ














Click it and Unblock the Notifications