ಗುರ್ ಗಾಂವ್ ಕನ್ನಡಿಗರ ವಿನೂತನ ವರ್ಷಾಚರಣೆ

ಈ ವರ್ಷದ ಮೊದಲನೇ ದಿನವಾದ ಬೆಳಗ್ಗೆ 11 ಗಂಟೆಗೆ, ಗುರ್ ಗಾಂವ್ ನ ಸೆಕ್ಟರ್-39ನ, ಜಾರ್ಸಾ ಹಳ್ಳಿಯಲ್ಲಿರುವ ನಿರ್ಗತಿಕ, ಬಡ ಮಕ್ಕಳ ಶಾಲೆಗೆ ತೆರಳಿ ಮಕ್ಕಳಿಗೆ ನೂತನ ವರ್ಷದ ಶುಭಾಶಯಗಳನ್ನು ಹೇಳಿ, ಅವರಿಗೆ ಸಿಹಿ ಹಂಚಿದೆವು. ಬಸ್ತಿ(ಸ್ಲಂ ಪ್ರದೇಶ)ಗಳಲ್ಲಿ ವಾಸ ಮಾಡುವ ಈ ಮಕ್ಕಳಿಗೆ ಹೊಸವರ್ಷವೆಂದರೆ ಏನು ಎಂಬ ಅರಿವು ಇರುವುದಿಲ್ಲ, ನಮ್ಮ ಆಗಮನ ಮತ್ತು ಸಿಹಿತಿಂಡಿ ತಿನ್ನುವುದೆ ಇವರಿಗೆ ಹೊಸವರ್ಷದ ಹರ್ಷ.
ಈ ಮಕ್ಕಳ ವಿಧ್ಯಾಭ್ಯಾಸಕ್ಕೆ ಬೇಕಾಗುವ ಪೆನ್, ಪೆನ್ಸಿಲ್, ಇರೇಸರ್, ಶಾರ್ಪನರ್, ಕಲರ್ ಪೆನ್ಸಿಲ್ಗಳು, ಸ್ಕೆಚ್ ಪೆನ್ಗಳು, ಜಾಮಿಟ್ರಿ ಬಾಕ್ಸ್ಗಳು ಮತ್ತು ನೋಟ್ ಪುಸ್ತಕಗಳನ್ನು ಪೂರ್ತಿ ವರ್ಷಕ್ಕಾಗುವಷ್ಟು ಸಾಮಗ್ರಿಗಳನ್ನು ಹಂಚಿದೆವು. ಅವರ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿ, ಅವರಿಗೆ ಕೆಲವು ಹಿತನುಡಿಗಳನ್ನು ಹೇಳಿ, ಅವರ ಆತ್ಮಸ್ಥೈರ್ಯ ಹೆಚ್ಚಿಸುವ ವಿಷಯಗಳನ್ನು ಹೇಳಿದೆವು. ಇದರಿಂದ ಬಡ ಮಕ್ಕಳು ಬಹಳಷ್ಟು ಸಂತೋಷಗೊಂಡರು.
AID(Association of India"s Development)GURGAON, ಈ ಸ್ವಯಂಸೇವ ಸಂಸ್ಥೆಯ ವತಿಯಿಂದ ನೆಡೆಯುತ್ತಿರುವ, ಈ ನರ್ಸರಿಶಾಲೆಗೆ ಸರ್ಕಾರದಿಂದ ಯಾವುದೆ ಅನುದಾನವಿಲ್ಲ, ಆದ್ದರಿಂದ ಪ್ರತಿವರ್ಷ ನಾವುಗಳು ಇಲ್ಲಿಗೆ ಬೇಟಿ ನೀಡಿ ಮಕ್ಕಳೊಂದಿಗೆ ಬೆರೆತು ನವವರ್ಷ ಆಚರಿಸುತ್ತೇವೆ ಎಂದು ಗುರ್ ಗಾವ್ ಕನ್ನಡ ಸಂಘದ ಸದಸ್ಯ ಸತೀಶ ಬಸವಾರಾಧ್ಯ ಹೇಳಿದರು.
ಹೀರೊಹೊಂಡಾ ಮತ್ತು ಹೊಂಡಾ ಸ್ಕೂಟರ್ಸ್ ಸಂಸ್ಥೆಯ ಕನ್ನಡಿಗರಾದ ನಾಗಭೂಷಣ್, ಕೃಷ್ಣಪ್ಪ, ಚಂದ್ರಶೇಖರ್, ಗಜಾನನ ಶರ್ಮ, ಮಂಜುನಾಥ್, ಸತೀಶ ಬಸವಾರಾಧ್ಯ, ಹಾಗೂ ಶ್ರೀಮತಿ ಇಂದಿರಾಸತೀಶ್, ಲಕ್ಷ್ಮಿ ಚಂದ್ರಶೇಖರ್, ಮತ್ತು ಪುಷ್ಪ ಕೃಷ್ಣಪ್ಪನವರು ಮತ್ತು ಪುಟಾಣಿಗಳಾದ ಕುಮಾರಿ ಸ್ನೇಹ, ನವ್ಯ, ಚೇತನ, ಮೇಘನ ಮತ್ತು ಮಾಸ್ಟರ್ ತರುಣ್ ಉಪಸ್ಥಿತರಿದ್ದರು.
ನವ ವರ್ಷವೆಂದರೆ ಮಧ್ಯ ಮತ್ತು ಮದಿರೆಯ ಅಮಲಿನಲ್ಲಿ ದುಂದುವೆಚ್ಚ ಮಾಡುವ ಈ ಸಮಾಜದಲ್ಲಿ ಗುರ್ಗಾಂವ್ನ ಈ ಕನ್ನಡಿಗರು ವಿನೂತನ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ, ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ. [ಹೊಸವರ್ಷ]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications