ವಿಶ್ವ ನಿರಾಶ್ರಿತರ ದಿನ- ಈ ವರ್ಷದ ಥೀಮ್ ಏನು? ಈವರೆಗೆ ನೆಲೆ ಕಳೆದುಕೊಂಡವರೆಷ್ಟು?
ನವದೆಹಲಿ, ಜೂನ್ 20: ಇಂದು ವಿಶ್ವ ನಿರಾಶ್ರಿತರ ದಿನ (World Refugee Day) ಆಚರಿಸಲಾಗುತ್ತಿದೆ. ಯುದ್ಧ, ರಾಜಕೀಯ ಕ್ಷೋಭೆ, ಆರ್ಥಿಕ ಬಿಕ್ಕಟ್ಟು, ಹಿಂಸಾಚಾರ ಇತ್ಯಾದಿ ಬೇರೆ ಬೇರೆ ಕಾರಣಗಳಿಂದ ದಮನಕ್ಕೊಳಪಟ್ಟು ತಂತಮ್ಮ ದೇಶಗಳನ್ನು ತೊರೆದು ಬೇರೆ ದೇಶಗಳಲ್ಲಿ ಆಶ್ರಯಕ್ಕೆ ಎಡತಾಕುತ್ತಿರುವ ಲಕ್ಷಾಂತರ ಮಂದಿ ಇದ್ದಾರೆ. ಇವರ ಬಗ್ಗೆ ಸಂವೇದನಾಶೀಲತೆಯಿಂದ ನಡೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಜೂನ್ 20ರಂದು ವಿಶ್ವ ನಿರಾಶ್ರಿತರ ದಿನವನ್ನು ಒಂದು ವೇದಿಕೆಯಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ.
ಈ ವರ್ಷ ನಿರಾಶ್ರಿತರ ದಿನಕ್ಕೆ ಬಹಳ ಮಹತ್ವ ಇದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ಯುದ್ದದಿಂದಾಗಿ ಈ ವರ್ಷ ಜಾಗತಿಕವಾಗಿ ನಿರಾಶ್ರಿತರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಲು ಕಾರಣವಾಗಿದೆ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ ರಷ್ಯಾ ಆಕ್ರಮಣದ ಬಳಿಕ ಉಕ್ರೇನ್ ದೇಶದಿಂದ ಬರೋಬ್ಬರಿ 50 ಲಕ್ಷ ಜನರು ಯೂರೋಪ್ನ ಇತರ ದೇಶಗಳಲ್ಲಿ ಆಶ್ರಯ ಕೋರಿ ಹೋಗಿದ್ದಾರೆ.
ಉಕ್ರೇನ್ ದೇಶದಲ್ಲಿ ಇರುವ ಜನಸಂಖ್ಯೆ ಕೇವಲ 4.2 ಕೋಟಿ ಮಾತ್ರ. ಅಂಥದ್ದರಲ್ಲಿ 50 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆಂದರೆ ಅದೆಷ್ಟು ಯುದ್ಧ ಸಂತ್ರಸ್ತರು ನಿರ್ಮಾಣವಾಗಿದ್ದಿರಬಹುದು. ಉಕ್ರೇನ್ ಜನಸಂಖ್ಯೆಯ ಶೇ. 10ಕ್ಕಿಂತಲೂ ಹೆಚ್ಚು ಮಂದಿ ದೇಶ ತೊರೆದು ನಿರಾಶ್ರಿತರಾಗಿದ್ದಾರೆ.

ನಿರಾಶ್ರಿತರ ದಿನ ಹುಟ್ಟಿದ್ದು ಹೇಗೆ?
1951ರಲ್ಲಿ ನಿರಾಶ್ರಿತರ ಸ್ಥಿತಿಗತಿ ಸಂಬಂಧಿತ ಸಮಾವೇಶವನ್ನು ನಡೆಸಲಾಗಿತ್ತು. ಅದರ ವಜ್ರ ಮಹೋತ್ಸವ (50ನೇ ವಾರ್ಷಿಕೋತ್ಸವ) 2001 ಜೂನ್ 20ರಂದು ನಡೆಸಲಾಯಿತು. ಆ ದಿನವನ್ನು ವಿಶ್ವ ನಿರಾಶ್ರಿತರ ದಿನವಾಗಿ ಘೋಷಣೆ ಮಾಡಲಾಯಿತು. ಆಗಿನಿಂದ ಪ್ರತೀ ವರ್ಷ ಜೂನ್ 20ರಂದು ನಿರಾಶ್ರಿತರ ದಿನವಾಗಿ ಆಚರಿಸಲಾಗುತ್ತಿದೆ.

ಈ ವರ್ಷದ ನಿರಾಶ್ರಿತರ ದಿನದ ಥೀಮ್
ವಿಶ್ವಸಂಸ್ಥೆ ನಿರಾಶ್ರಿತರ ಉನ್ನತಾಯುಕ್ತರು (UNHCR- United Nations High Commissioner for Refugees) ಪ್ರತೀ ವರ್ಷವೂ ವಿಶ್ವ ನಿರಾಶ್ರಿತರ ದಿನಕ್ಕೆ ಬೇರೆ ಬೇರೆ ಥೀಮ್ ಅಥವಾ ಪರಿಕಲ್ಪನೆಯನ್ನು ನಿಗದಿ ಮಾಡುತ್ತಾರೆ. ನಿರಾಶ್ರಿತರ ಸಮಸ್ಯೆಯ ವಿವಿಧ ಮಗ್ಗುಲುಗಳ ಮೇಲೆ ಬೆಳಕು ಚೆಲ್ಲಲು ಇಂಥದ್ದೊಂದು ನಡಾವಳಿ ಮಾಡಿಕೊಂಡು ಬರಲಾಗುತ್ತಿದೆ.
'ಸುರಕ್ಷತೆಯ ಆಯ್ಕೆಯ ಹಕ್ಕು' (Right to Seek Safety) ಎಂಬುದು ಈ ವರ್ಷದ ನಿರಾಶ್ರಿತರ ದಿನದ ಥೀಮ್ ಆಗಿ ಆಯ್ಕೆ ಮಾಡಲಾಗಿದೆ. ನಿರಾಶ್ರಿತರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸುರಕ್ಷಿತ ಸ್ಥಳ ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿರುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವಸಂಸ್ಥೆಯ ಈ ಅಂಗ ಸಂಸ್ಥೆ ಈ ವರ್ಷ ಪ್ರಯತ್ನಿಸುತ್ತಿದೆ.

ಈವರೆಗೆ ನಿರಾಶ್ರಿತರಾದವರು ಎಷ್ಟು?
ಜನರು ನಿರಾಶ್ರಿತರಾಗಲು ಯುದ್ಧ, ಬಿಕ್ಕಟ್ಟು, ಹಿಂಸಾಚಾರ ಇತ್ಯಾದಿ ಹಲವು ಕಾರಣಗಳು ಇವೆ. ಈ ರೀತಿಯಾಗಿ ಈವರೆಗೂ ವಿಶ್ವಾದ್ಯಂತ 10 ಕೋಟಿಗೂ ಹೆಚ್ಚು ಮಂದಿ ತಮ್ಮ ಮನೆಮಠಗಳನ್ನು ತೊರೆದು ಹೋಗಿದ್ದಾರಂತೆ. ಅಂದರೆ ಇಡೀ ಮಾನವಕುಲದ ಶೇ. ಒಂದರಷ್ಟು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ.
"ಉಕ್ರೇನ್ನಲ್ಲಿ ಸಂಭವಿಸುತ್ತಿರುವ ಯುದ್ಧ, ಇಥಿಯೋಪಿಯಾ, ಬುರ್ಕೀನ ಫಾಸೊ, ಮಯನ್ಮಾರ್, ನೈಜೀರಿಯಾ, ಅಫ್ಘಾನಿಸ್ತಾನ, ಕಾಂಗೋ ಮೊದಲಾದ ದೇಶಗಳಲ್ಲಿ ನೆಲಸಿರುವ ತುರ್ತುಸ್ಥಿತಿಯು ಅಲ್ಲಿನ ಅನೇಕ ಜನರನ್ನು ದೇಶ ಬಿಟ್ಟು ಹೋಗುವಂತೆ ಮಾಡಿವೆ" ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಉನ್ನತ ಆಯುಕ್ತ ಫಿಲಿಪೋ ಗ್ರಾಂಡಿ ಹೇಳಿದ್ದಾರೆ.

ನಿರಾಶ್ರಿತರ ಮಾನಸಿಕ ಸ್ಥೈರ್ಯಕ್ಕೆ ಪ್ರಶಂಸೆ
ನಿರಾಶ್ರಿತರ ಸಮಸ್ಯೆಗಳಿಗೆ ಸರಕಾರಗಳು ಸೂಕ್ತ ಪರಿಹಾರ ಕಂದುಕೊಳ್ಳಬೇಕೆಂದು ನಿರಾಶ್ರಿತರ ಉನ್ನತ ಆಯುಕ್ತ ಫಿಲಿಪೋ ಗ್ರಾಂಡಿ ಕರೆ ನೀಡಿದ್ದಾರೆ. ಹಾಗೆಯೇ, ನಿರಾಶ್ರಿತರಿಗೆ ಪರಿಹಾರ ಕಲ್ಪಿಸುವುದಕ್ಕೆ ಕಷ್ಟಸಾಧ್ಯವಾಗುವ ರೀತಿಯಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದೆ ಎಂದೂ ಗ್ರಾಂಡಿ ಆತಂಕ ವ್ಯಕ್ತಪಡಿಸಿದ್ಧಾರೆ.
"ವಿಶ್ವ ನಿರಾಶ್ರಯ ದಿನವನ್ನು ಲಕ್ಷಾಂತರ ಮಂದಿ ನಿರಾಶ್ರಿತರ ಮಾನಸಿಕ ಸ್ಥೈರ್ಯಕ್ಕೆ ಪ್ರಶಂಸೆಯಾಗಿ ಆಚರಿಸುವ ಉದ್ದೇಶ ಇದೆ. ಇವರು ನೆಲೆ ಕಳೆದುಕೊಂಡರೂ ತಮ್ಮ ಹಾಗೂ ತಮ್ಮ ಕುಟುಂಬ ಮತ್ತು ಸಮುದಾಯಗಳ ಬದುಕುಗಳನ್ನು ಬೆಳಗಿಸಲು ಅವಿರತವಾಗಿ ಪ್ರಯತ್ನಿಸುತ್ತಿರುವ ಇವರ ಉತ್ಸಾಹವನ್ನು ಪ್ರಶಂಸಿಸಲೇ ಬೇಕು" ಎಂದು ಫಿಲಿಪೋ ಗ್ರಾಂಡಿ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications