"ಇದು ನನ್ನ ಜೀವನವಾಗಲು ಸಾಧ್ಯವಿಲ್ಲ”: 22 ವರ್ಷದ ಕಾರ್ಪೋರೇಟ್ ಉದ್ಯೋಗಿಯ ವೈರಲ್ ಪೋಸ್ಟ್
ಬೆಳಿಗ್ಗೆ 9 ಗಂಟೆಗೆ ಲಾಗಿನ್ ಆಗುವುದು, ದಿನವಿಡೀ ಟಾರ್ಗೆಟ್ , ರಿಪೋರ್ಟ್, ಮೀಟಿಂಗ್ ಅಂತ ಒದ್ದಾಡುವುದು. ಸಂಜೆ ಆಯಿತು ಎನ್ನುವಾಗಲೇ, ನಾಳೆ ಮತ್ತೆ ಇದೇ ಚಕ್ರ ತಿರುಗುತ್ತದೆ ಎಂಬ ಆತಂಕ... ಇದು ಇಂದಿನ ಲಕ್ಷಾಂತರ ಯುವ ಉದ್ಯೋಗಿಗಳ ದಿನಚರಿ. ಇತ್ತೀಚೆಗೆ 22 ವರ್ಷದ ಉದ್ಯೋಗಿಯೊಬ್ಬರು ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಒಂದು ಜಾಗತಿಕ ಚರ್ಚೆಗೆ ನಾಂದಿ ಹಾಡಿದೆ. "ಇದು ನನ್ನ ಜೀವನವಾಗಲು ಸಾಧ್ಯವಿಲ್ಲ" ಎಂಬ ನಾಲ್ಕು ಪದಗಳ ಶೀರ್ಷಿಕೆ ಈಗ ಸಾವಿರಾರು ಯುವಕರ ಮನದ ಮಾತಾಗಿದೆ.
ಗ್ರಾಹಕ ಸೇವೆ, ಆಪರೇಷನ್ಸ್ ಮತ್ತು ಸೇಲ್ಸ್ ವಿಭಾಗಗಳಲ್ಲಿ ಕೆಲಸ ಮಾಡುವ ಆರಂಭಿಕ ಹಂತದ ಉದ್ಯೋಗಿಗಳು ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ಈ ಪೋಸ್ಟ್ ಎತ್ತಿ ತೋರಿಸಿದೆ.

ಉದ್ಯೋಗಿಯೊಬ್ಬರು ಹಾಕಿರುವ ಈ ಪೋಸ್ಟ್ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿರುವುದು ಕೆಲಸದ ಏಕತಾನತೆ (Monotony). ಪ್ರತಿ ತ್ರೈಮಾಸಿಕದಲ್ಲಿ ಹೊಸ ಕೆಆರ್ಎ ಮತ್ತು ಟಾರ್ಗೆಟ್ಗಳು ಬರುತ್ತವೆ. ಎಷ್ಟೇ ಕಷ್ಟಪಟ್ಟು ಅವನ್ನು ಸಾಧಿಸಿದರೂ, ಮರುದಿನ ಯಾವುದೇ ಬದಲಾವಣೆ ಇರುವುದಿಲ್ಲ. ಪಾತ್ರವಾಗಲಿ, ವೇತನವಾಗಲಿ ಅಥವಾ ಜವಾಬ್ದಾರಿಯಾಗಲಿ ಬದಲಾಗುವುದಿಲ್ಲ. ಕೇವಲ ಕೆಲಸದ ಒತ್ತಡ ಮಾತ್ರ ಸ್ಥಿರವಾಗಿರುತ್ತದೆ.
ಗ್ಯಾಲಪ್ (Gallup) ವರದಿಯ ಪ್ರಕಾರ, ಪ್ರಪಂಚದಾದ್ಯಂತ ಕೇವಲ 21% ಉದ್ಯೋಗಿಗಳು ಮಾತ್ರ ತಮ್ಮ ಕೆಲಸದಲ್ಲಿ ಆಸಕ್ತಿ ಹೊಂದಿದ್ದಾರೆ. ಉಳಿದವರು ಕೇವಲ ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದಾರೆ ಅಥವಾ ಕೆಲಸದ ಬಗ್ಗೆ ಅಸಮಾಧಾನ ಹೊಂದಿದ್ದಾರೆ.
ಹಿಂದಿನ ಕಾಲದಲ್ಲಿ "ಈಗ ಕಷ್ಟಪಟ್ಟರೆ ಮುಂದೆ ಸುಖ ಸಿಗುತ್ತದೆ" ಎಂಬ ಮಾತನ್ನು ನಂಬಲಾಗಿತ್ತು. ಆದರೆ ಇಂದಿನ ಜೆನ್ ಜಿ (Gen Z) ಪೀಳಿಗೆಗೆ ಆ ನಂಬಿಕೆ ಇಲ್ಲವಾಗಿದೆ. ಸಮೀಕ್ಷೆಗಳ ಪ್ರಕಾರ, 40% ಕ್ಕೂ ಹೆಚ್ಚು ಯುವ ಉದ್ಯೋಗಿಗಳು ಸದಾ ಒತ್ತಡ ಅಥವಾ ಆತಂಕದಲ್ಲಿರುತ್ತಾರೆ. ಬರುವ ಸಂಬಳ ದೈನಂದಿನ ಖರ್ಚಿಗೆ ಸಾಕಾಗುತ್ತದೆಯೇ ವಿನಃ, ಉಳಿತಾಯಕ್ಕೆ ಅವಕಾಶವಿರುವುದಿಲ್ಲ. ಹೀಗಿರುವಾಗ ಭವಿಷ್ಯದ ಕನಸು ಕಾಣುವುದು ಹೇಗೆ ಎಂಬುದು ಅವರ ಪ್ರಶ್ನೆ.
ಕೆಲಸದಲ್ಲಿ ಬಡ್ತಿ ಸಿಕ್ಕರೆ ಜೀವನ ಸುಧಾರಿಸಬಹುದು ಎಂದುಕೊಂಡರೆ, ಅದೂ ಕೂಡ ಹುಸಿಯಾಗಿದೆ. ಮ್ಯಾನೇಜರ್ ಹಂತಕ್ಕೆ ಹೋದರೆ ಟಾರ್ಗೆಟ್ ಒತ್ತಡ ಇನ್ನೂ ಹೆಚ್ಚಾಗುತ್ತದೆ. ಸ್ವಂತ ಟಾರ್ಗೆಟ್ ಜೊತೆಗೆ ತಂಡದ ಟಾರ್ಗೆಟ್ ಅನ್ನೂ ಹೊರಬೇಕಾಗುತ್ತದೆ. ಹೀಗಾಗಿ, ತಮ್ಮ ಮೇಲಧಿಕಾರಿಗಳ ಪಾಡು ನೋಡಿ, ಕೆಳಹಂತದ ಉದ್ಯೋಗಿಗಳು ಬಡ್ತಿ ಪಡೆಯಲೂ ಹಿಂದೇಟು ಹಾಕುತ್ತಿದ್ದಾರೆ.
ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಇಂತಹ 'ಬರ್ನ್ಔಟ್' ಅಥವಾ ವಿಪರೀತ ಕೆಲಸದ ದಣಿವು ವೈಯಕ್ತಿಕ ವೈಫಲ್ಯವಲ್ಲ. ಇದು ದೀರ್ಘಕಾಲದ ಮತ್ತು ನಿರ್ವಹಿಸಲಾಗದ ಕೆಲಸದ ಒತ್ತಡದ ಪರಿಣಾಮವಾಗಿದೆ. 22 ವರ್ಷದ ಆ ಉದ್ಯೋಗಿ ಸುಲಭದ ಕೆಲಸ ಕೇಳುತ್ತಿಲ್ಲ, ಬದಲಾಗಿ ಅರ್ಥಪೂರ್ಣವಾದ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಕೆಲಸವನ್ನು ಬಯಸುತ್ತಿದ್ದಾರೆ.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications