'ನಾನು ನಿನ್ನನ್ನು ಬಿಟ್ಟು ತಿನ್ನಲಾರೆ..'- ಆಮೆಗೆ ಚಿಂಪಾಂಜಿ ಹೇಳಿದ ಮಾತು
ನಾನು ನಿನ್ನನ್ನು ಬಿಟ್ಟು ತಿನ್ನಲಾರೆ... ಹಂಚಿಕೊಂಡು ತಿನ್ನೋಣ ಬಾರೋ ಗೆಳೆಯ.. ಹಂಚಿಕೊಂಡು ತಿನ್ನೋದರಲ್ಲಿ ಸುಖವಿದೆ.. ಹೀಗೆ ಈ ಪ್ರಾಣಿಗಳನ್ನ ನೋಡ್ತಾಯಿದ್ದರೆ ಅವುಗಳ ಮನಸ್ಸಿನ ಮಾತನ್ನು ಹೇಳಬೇಕು ಅನಿಸದೇ ಇರದು. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಮನಸ್ಸಿಗೆ ಮುದ ನೀಡಿದೆ. ಇಲ್ಲೊಂದು ಚಿಂಪಾಂಜಿ ಆಮೆಯೊಂದಿಗೆ ಹಣ್ಣನ್ನು ಹಂಚಿಕೊಂಡು ತಿನ್ನುತ್ತದೆ. ಈ ಅದ್ಭುತ ದೃಶ್ಯವನ್ನು ನೋಡಿ ನೆಟ್ಟಿಗರು ಮನಸಾರೆ ಇಷ್ಟಪಟ್ಟಿದ್ದಾರೆ. ಜೊತೆಗೆ ಈ ಪ್ರಾಣಿಗಳಲ್ಲಿನ ನಿಷ್ಕಲ್ಮಶ ಪ್ರೀತಿಗೆ ಸೆಲ್ಯೂಟ್ ಹೇಳಿದ್ದಾರೆ. ಇದನ್ನು ನೋಡಿದರೆ ನಿಜಕ್ಕೂ ಹಂಚಿಕೊಂಡು ತಿನ್ನೋದ್ರಲ್ಲಿರೋ ಖುಷಿ ಪ್ರಾಣಿಗಳಿಗೂ ಅರ್ಥ ಆದಂತೆ ಕಾಣುತ್ತದೆ.
ಪ್ರಾಣಿಗಳು ಮನುಷ್ಯರಂತೆ ಯೋಚನೆ ಮಾಡುತ್ತವೆ ಅನ್ನೋದಕ್ಕೆ ಈ ಒಂದು ವಿಡಿಯೋ ಸಾಕ್ಷಿ. ಜೊತೆಗೆ ಎಷ್ಟಿದ್ದರೂ ಸಾಕೆನದವರಿಗೆ ಇದೊಂದು ಮಾದರಿ ವಿಡಿಯೋ ಎನ್ನಬಹುದು. ಇಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಚಿಂಪಾಂಜಿ ತನ್ನಲ್ಲಿರುವ ಸೇಬು ಹಣ್ಣನ್ನು ಆಮೆಯೊಂದಿಗೆ ಹಂಚಿಕೊಂಡು ತಿಂದಿದೆ. ತಾನೊಮ್ಮೆ ತಿನ್ನುವುದು ಆಮೆಗೊಮ್ಮೆ ತಿನಿಸುವುದು. ವಿಡಿಯೋ ನೋಡೋದಕ್ಕೆ ಮುದ್ದಾಗಿದೆ. ಬೇಕಾದ್ರೆ ನೀವೂ ಒಂದು ಬಾರಿ ಈ ವಿಡಿಯೋವನ್ನು ಆನಂದಿಸಬಹುದು.

ಸಾಮಾನ್ಯವಾಗಿ ಆಹಾರ ಸಿಕ್ಕರೆ ಕೂಗಿ ಕೂಗಿ ಕರೆಯುವ ಹಕ್ಕಿ ಅಂದರೆ ಅದು ಕಾಗೆ ಮಾತ್ರ. ಆದರೆ ಪ್ರಾಣಿಗಳ ವಿಚಾರಕ್ಕೆ ಬಂದರೆ ಇದು ಬಹುತೇಕ ವಿರುದ್ಧ ದಿಕ್ಕಿನಲ್ಲಿ ಹೋಗುತ್ತದೆ. ಪ್ರಾಣಿಗಳು ಆಹಾರ ಸಿಕ್ಕರೆ ಮತ್ತೊಂದು ಪ್ರಾಣಿಯೊಂದಿಗೆ ಹಂಚಿ ತಿನ್ನುವುದು ತುಂಬಾನೇ ವಿರಳ. ಹಾಗೊಂದು ವೇಳೆ ತಿಂದರೂ ಅದು ಅದರದ್ದೇ ಆದ ಸಂಗಾತಿ ಅಥವಾ ಮಕ್ಕಳೊಂದಿಗೆ ಹಂಚಿಕೊಳ್ಳಬಹುದೇನೋ. ಆದರೆ ಬೇರೆ ಪ್ರಾಣಿಗಳೊಂದಿಗೆ ಹಂಚಿಕೊಳ್ಳುವುದರಿಲಿ ಜಗಳವಾಡಿ ಕಿತ್ತುಕೊಂಡು ತಿನ್ನುವುದೇ ಹೆಚ್ಚು. ಹೀಗಿರುವಾಗ ಈ ಚಿಂಪಾಂಜಿ ಆಮೆಯೊಂದಿಗೆ ಹಣ್ಣನ್ನು ಶಾಂತವಾಗಿ ಹಂಚಿಕೊಂಡು ತಿಂದಿದೆ. ಈ ದೃಶ್ಯ ನೋಡಿ ಜನ ಸಂತೋಷಗೊಂಡಿದ್ದಾರೆ.
Sharing is caring.. 😊 pic.twitter.com/XnFgiZHbsY
— Buitengebieden (@buitengebieden) July 17, 2022
Recommended Video
ವಿಡಿಯೋದಲ್ಲಿ ಆಮೆಗೆ ಸೇಬು ಹಣ್ಣು ತಿನಿಸುವ ಚಿಂಪಾಂಜಿಯೊಂದಿಗೆ ಮತ್ತೊಂದು ಚಿಂಪಾಂಜಿ ಇರುವುದು ಕೂಡ ವಿಡಿಯೋದಲ್ಲಿ ನೋಡಬಹುದು. ಆದರೆ ಆ ಚಿಂಪಾಂಜಿ ಆಮೆಯೊಂದಿಗೆ ತಾನೂ ಹಣ್ಣು ತಿನ್ನಲು ಪ್ರಯತ್ನಿಸುತ್ತದೆಯಾದರೂ ಆಮೆ ಹಣ್ಣು ತಿನ್ನಲು ಅಡ್ಡಪಡಿಸುವುದಿಲ್ಲ. ಯಾವುದೇ ತೊಂದರೆ ಮಾಡುವುದಿಲ್ಲ. ಹೀಗಾಗಿ ಈ ವಿಡಿಯೋ ಜನರ ಮೆಚ್ಚುಗೆ ಪಡೆದುಕೊಂಡಿದೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ'Sharing is caring' ಎಂಬ ಶಿರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
-
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications