'ನಾನು ನಿನ್ನನ್ನು ಬಿಟ್ಟು ತಿನ್ನಲಾರೆ..'- ಆಮೆಗೆ ಚಿಂಪಾಂಜಿ ಹೇಳಿದ ಮಾತು
ನಾನು ನಿನ್ನನ್ನು ಬಿಟ್ಟು ತಿನ್ನಲಾರೆ... ಹಂಚಿಕೊಂಡು ತಿನ್ನೋಣ ಬಾರೋ ಗೆಳೆಯ.. ಹಂಚಿಕೊಂಡು ತಿನ್ನೋದರಲ್ಲಿ ಸುಖವಿದೆ.. ಹೀಗೆ ಈ ಪ್ರಾಣಿಗಳನ್ನ ನೋಡ್ತಾಯಿದ್ದರೆ ಅವುಗಳ ಮನಸ್ಸಿನ ಮಾತನ್ನು ಹೇಳಬೇಕು ಅನಿಸದೇ ಇರದು. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಮನಸ್ಸಿಗೆ ಮುದ ನೀಡಿದೆ. ಇಲ್ಲೊಂದು ಚಿಂಪಾಂಜಿ ಆಮೆಯೊಂದಿಗೆ ಹಣ್ಣನ್ನು ಹಂಚಿಕೊಂಡು ತಿನ್ನುತ್ತದೆ. ಈ ಅದ್ಭುತ ದೃಶ್ಯವನ್ನು ನೋಡಿ ನೆಟ್ಟಿಗರು ಮನಸಾರೆ ಇಷ್ಟಪಟ್ಟಿದ್ದಾರೆ. ಜೊತೆಗೆ ಈ ಪ್ರಾಣಿಗಳಲ್ಲಿನ ನಿಷ್ಕಲ್ಮಶ ಪ್ರೀತಿಗೆ ಸೆಲ್ಯೂಟ್ ಹೇಳಿದ್ದಾರೆ. ಇದನ್ನು ನೋಡಿದರೆ ನಿಜಕ್ಕೂ ಹಂಚಿಕೊಂಡು ತಿನ್ನೋದ್ರಲ್ಲಿರೋ ಖುಷಿ ಪ್ರಾಣಿಗಳಿಗೂ ಅರ್ಥ ಆದಂತೆ ಕಾಣುತ್ತದೆ.
ಪ್ರಾಣಿಗಳು ಮನುಷ್ಯರಂತೆ ಯೋಚನೆ ಮಾಡುತ್ತವೆ ಅನ್ನೋದಕ್ಕೆ ಈ ಒಂದು ವಿಡಿಯೋ ಸಾಕ್ಷಿ. ಜೊತೆಗೆ ಎಷ್ಟಿದ್ದರೂ ಸಾಕೆನದವರಿಗೆ ಇದೊಂದು ಮಾದರಿ ವಿಡಿಯೋ ಎನ್ನಬಹುದು. ಇಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಚಿಂಪಾಂಜಿ ತನ್ನಲ್ಲಿರುವ ಸೇಬು ಹಣ್ಣನ್ನು ಆಮೆಯೊಂದಿಗೆ ಹಂಚಿಕೊಂಡು ತಿಂದಿದೆ. ತಾನೊಮ್ಮೆ ತಿನ್ನುವುದು ಆಮೆಗೊಮ್ಮೆ ತಿನಿಸುವುದು. ವಿಡಿಯೋ ನೋಡೋದಕ್ಕೆ ಮುದ್ದಾಗಿದೆ. ಬೇಕಾದ್ರೆ ನೀವೂ ಒಂದು ಬಾರಿ ಈ ವಿಡಿಯೋವನ್ನು ಆನಂದಿಸಬಹುದು.

ಸಾಮಾನ್ಯವಾಗಿ ಆಹಾರ ಸಿಕ್ಕರೆ ಕೂಗಿ ಕೂಗಿ ಕರೆಯುವ ಹಕ್ಕಿ ಅಂದರೆ ಅದು ಕಾಗೆ ಮಾತ್ರ. ಆದರೆ ಪ್ರಾಣಿಗಳ ವಿಚಾರಕ್ಕೆ ಬಂದರೆ ಇದು ಬಹುತೇಕ ವಿರುದ್ಧ ದಿಕ್ಕಿನಲ್ಲಿ ಹೋಗುತ್ತದೆ. ಪ್ರಾಣಿಗಳು ಆಹಾರ ಸಿಕ್ಕರೆ ಮತ್ತೊಂದು ಪ್ರಾಣಿಯೊಂದಿಗೆ ಹಂಚಿ ತಿನ್ನುವುದು ತುಂಬಾನೇ ವಿರಳ. ಹಾಗೊಂದು ವೇಳೆ ತಿಂದರೂ ಅದು ಅದರದ್ದೇ ಆದ ಸಂಗಾತಿ ಅಥವಾ ಮಕ್ಕಳೊಂದಿಗೆ ಹಂಚಿಕೊಳ್ಳಬಹುದೇನೋ. ಆದರೆ ಬೇರೆ ಪ್ರಾಣಿಗಳೊಂದಿಗೆ ಹಂಚಿಕೊಳ್ಳುವುದರಿಲಿ ಜಗಳವಾಡಿ ಕಿತ್ತುಕೊಂಡು ತಿನ್ನುವುದೇ ಹೆಚ್ಚು. ಹೀಗಿರುವಾಗ ಈ ಚಿಂಪಾಂಜಿ ಆಮೆಯೊಂದಿಗೆ ಹಣ್ಣನ್ನು ಶಾಂತವಾಗಿ ಹಂಚಿಕೊಂಡು ತಿಂದಿದೆ. ಈ ದೃಶ್ಯ ನೋಡಿ ಜನ ಸಂತೋಷಗೊಂಡಿದ್ದಾರೆ.
Sharing is caring.. 😊 pic.twitter.com/XnFgiZHbsY
— Buitengebieden (@buitengebieden) July 17, 2022
Recommended Video
ವಿಡಿಯೋದಲ್ಲಿ ಆಮೆಗೆ ಸೇಬು ಹಣ್ಣು ತಿನಿಸುವ ಚಿಂಪಾಂಜಿಯೊಂದಿಗೆ ಮತ್ತೊಂದು ಚಿಂಪಾಂಜಿ ಇರುವುದು ಕೂಡ ವಿಡಿಯೋದಲ್ಲಿ ನೋಡಬಹುದು. ಆದರೆ ಆ ಚಿಂಪಾಂಜಿ ಆಮೆಯೊಂದಿಗೆ ತಾನೂ ಹಣ್ಣು ತಿನ್ನಲು ಪ್ರಯತ್ನಿಸುತ್ತದೆಯಾದರೂ ಆಮೆ ಹಣ್ಣು ತಿನ್ನಲು ಅಡ್ಡಪಡಿಸುವುದಿಲ್ಲ. ಯಾವುದೇ ತೊಂದರೆ ಮಾಡುವುದಿಲ್ಲ. ಹೀಗಾಗಿ ಈ ವಿಡಿಯೋ ಜನರ ಮೆಚ್ಚುಗೆ ಪಡೆದುಕೊಂಡಿದೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ'Sharing is caring' ಎಂಬ ಶಿರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications