ಪಯ್ಯೋಳಿ ಎಕ್ಸ್ಪ್ರೆಸ್ ಪಿ.ಟಿ. ಉಷಾ: ಅಥ್ಲಿಟ್ ಟ್ಯ್ರಾಕ್ನಿಂದ ರಾಜ್ಯಸಭೆವರೆಗೆ ಸಾಧನೆಯ ಹಾದಿ
"ಗೋಲ್ಡನ್ ಗರ್ಲ್" ಜೊತೆಗೆ "ಪಯ್ಯೋಳಿ ಎಕ್ಸ್ಪ್ರೆಸ್" ಎಂದು ಪ್ರೀತಿಯಿಂದ ಕರೆಯಲಾಗುವ ಪಿಲಾವುಲ್ಲಕಂಡಿ ತೆಕ್ಕೇರಪರಂಬಿಲ್ ಉಷಾ ಅಥವಾ ಜನಮಾನಸದಲ್ಲಿ ಪಿ.ಟಿ. ಉಷಾ ಎಂದೇ ಚಿರಪರಿಚಿತವಾಗಿರುವ ಇವರು ಭಾರತದ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು. ಸುಮಾರು ಎರಡು ದಶಕಗಳ ಕಾಲ ರನ್ನಿಂಗ್ ಟ್ರ್ಯಾಕ್ ಆಳಿದ ಕೀರ್ತಿ ಇವರದ್ದು. ಪಿ.ಟಿ.ಉಷಾ ಸಾಧನೆ ಇಂದಿಗೂ ಸಾಧನೆ ಮಾಡ ಬಯುಸುವ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.
ಈಗ ಪಿ.ಟಿ. ಉಷಾ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ರಾಜ್ಯಸಭಾ ಸ್ಥಾನಕ್ಕೆ ಪಿ.ಟಿ.ಉಷಾ ಅವರನ್ನು ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡಿದೆ. ಸ್ವತಃ ಪ್ರಧಾನಿ ಮೋದಿ ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ನಿಮ್ಮ ಸಾಧನೆ ಹಲವರಿಗೆ ಸ್ಪೂರ್ತಿ ಎಂದು ಹೊಗಳಿದ್ದಾರೆ.
ಭಾರತೀಯ ಅಥ್ಲಿಟ್ ಇತಿಹಾಸದಲ್ಲಿ ಪಿ.ಟಿ.ಉಷಾ ಎಂದಿಗೂ ಮರೆಯಲಾಗದ ಹೆಸರು. ಭಾರತದ ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಡಿಮೆ ಇದ್ದ ಸಮಯದಲ್ಲಿ ಇವರು ಮಾಡಿದ ಸಾಧನೆ ಅಮೋಘ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಪಿ.ಟಿ. ಉಷಾ ಮುಡಿಗೆ ರಾಜ್ಯಸಭೆ ನಾಮನಿರ್ದೇಶನ ಮತ್ತೊಂದು ಗರಿಯಂತಾಗಿದೆ.

ಪಿ.ಟಿ. ಉಷಾ ಬಾಲ್ಯ ಮತ್ತು ಕ್ರೀಡಾಸಕ್ತಿ
ಪಿ.ಟಿ. ಉಷಾ ಜೂನ್ 27 1964ರಂದು ಕೇರಳದ ಕ್ಯಾಲಿಕಟ್ ಸಮೀಪದ ಪಯ್ಯೋಳಿ ಗ್ರಾಮದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಲ್ಲಿ ಬಡತನ ಮತ್ತು ಅನಾರೋಗ್ಯ ಉಷಾ ಅವರನ್ನು ಕಾಡಿತು. ಹದಿಹರೆಯದಲ್ಲಿ ಪಿ.ಟಿ. ಉಷಾ ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ತೋರಿಸಿದರು. ಕಣ್ಣೂರುನಲ್ಲಿರುವ ಕ್ರೀಡಾ ಶಾಲೆಗೆ ತೆರಳಿದರು. ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಅಲ್ಲಿ ಅಥ್ಲೆಟಿಕ್ ತರಬೇತುದಾರ O.M. ನಂಬಿಯಾರ್ ಅವರ ಮಾರ್ಗದರ್ಶನ ಪಡೆದುಕೊಂಡರು. ಪಿ.ಟಿ.ಉಷಾ 1980 ರಲ್ಲಿ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆಯಾಗಿ ಎನ್ನುವ ಹಿರಿಮೆಗೆ ಭಾಜನರಾದರು. 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಅವರು ಬೆಳ್ಳಿ ಪದಕ ಪಡೆದರು.

1985ರಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ಪಿ.ಟಿ.ಉಷಾ
ಪಿ.ಟಿ. ಉಷಾ ಅವರು 1985 ರಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಭಾರಿ ಯಶಸ್ಸು ಕಂಡರು. ಜಕಾರ್ತಾದಲ್ಲಿ ನಡೆದ ಏಷ್ಯನ್ ಕೂಟದಲ್ಲಿ 100 ಮೀಟರ್, 200 ಮೀಟರ್, 400ಮೀಟರ್, 400ಮೀಟರ್ ಹರ್ಡಲ್ಸ್ ಮತ್ತು 4x400ಮೀ ರಿಲೇಯಲ್ಲಿ ಐದು ಚಿನ್ನದ ಪದಕಗಳನ್ನು ಮತ್ತು 4x100ಮೀ ರಿಲೇಯಲ್ಲಿ ಕಂಚಿನ ಪದಕವನ್ನು ಗಳಿಸಿದರು. ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ, ಕಂಚಿನ ಪದಕ ಪಡೆಯುವಲ್ಲಿ ಸೆಕೆಂಡಿನ 1/100 ಅಂತರದಲ್ಲಿ ವಂಚಿತರಾದರು. ಇದು ಅವರ ಮತ್ತು ಅವರ ಅಭಿಮಾನಿಗಳಿಗೆ ಹೃದಯ ವಿದ್ರಾವಕ ಕ್ಷಣವಾಗಿತ್ತು.

1986ರಲ್ಲಿ ಸ್ಪ್ರಿಂಟ್ ಕ್ವೀನ್ ಎನ್ನುವ ಬಿರುದು
ಅವರು 1986 ರ ಸಿಯೋಲ್ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿ ಪದಕವನ್ನು ಗಳಿಸಿ, ಏಷಿಯಾದ "ಸ್ಪ್ರಿಂಟ್ ಕ್ವೀನ್" ಎಂಬ ಬಿರುದನ್ನು ಗಳಿಸಿದರು. 1998 ರಲ್ಲಿ ಅವರ ತಂಡವು 4x100 ಮೀ ರಿಲೇಯಲ್ಲಿ 44.43 ಸೆಕೆಂಡ್ಗಳಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿತ್ತು, ಇದು 2017 ರವರೆಗೂ ದಾಖಲೆಯಾಗಿ ಉಳಿದಿತ್ತು.
ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಶಿಪ್ಗಳಲ್ಲಿ ಒಟ್ಟು 30 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು 13 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 1979 ರಲ್ಲಿ ಪ್ರಾರಂಭವಾದ ಪ್ರಯಾಣವು ಈ ಭಾರತೀಯ ಹುಡುಗಿಯನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿತು, ಅವರನ್ನು ಜೀವಂತ ದಂತಕಥೆಯನ್ನಾಗಿ ಮಾಡಿತು.

ಅಥ್ಲಿಟ್ಗಳಿಗೆ ತರಬೇತಿ ನೀಡುತ್ತಿರುವ ಪಿ.ಟಿ.ಉಷಾ
1991 ರಲ್ಲಿ ಉಷಾ ಅವರು ವಿ. ಶ್ರೀನಿವಾಸನ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಉಜ್ವಲ್ ಎನ್ನುವ ಮಗನಿದ್ದಾನೆ.
ತಮ್ಮ ವೃತ್ತಿ ಜೀವನದ ನಂತರ ಯುವ ಅಥ್ಲಿಟ್ಗಳಿಗೆ ತರಬೇತಿ ನೀಡಲು ಮುಂದಾದ ಪಿ.ಟಿ.ಉಷಾ ಕೇರಳದ ಕೊಯಿಲಾಂಡಿಯಲ್ಲಿ ಅಥ್ಲೆಟಿಕ್ ಶಾಲೆಯನ್ನು ಪ್ರಾರಂಭಿಸಿದ್ದಾರೆ. 10-12 ವಯೋಮಾನದ ಮಕ್ಕಳನ್ನು ನೇಮಿಸಿಕೊಳ್ಳುವ ಅವರು ದೇಶಕ್ಕೆ ಅಥ್ಲಿಟ್ಗಳನ್ನು ನೀಡುವ ಕೆಲಸದಲ್ಲಿ ತೊಡಗಿದ್ದಾರೆ.
ಈಗ ಹೊಸದೊಂದು ಜವಾಬ್ದಾರಿ ಅವರನ್ನು ಹುಡುಕಿಕೊಂಡು ಬಂದಿದೆ. 1995ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಹಜವಾಗಿಯೇ ಇದು ಅವರ ಸಾಧನೆಗೆ ಸಂದ ಗೌರವ. ಪಿ.ಟಿ. ಉಷಾ ಎಂದಿಗೂ ಯುವ ಅಥ್ಲಿಟ್ಗಳಿಗೆ ಸ್ಪೂರ್ತಿ ನೀಡಬಲ್ಲರು.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications