ರಸ್ತೆಯೇ ಇಲ್ಲ, ರೈಲು ಹಳಿಯೇ ಎಲ್ಲ: ನಮಗೆ ದಯಾಮರಣ ನೀಡಿ ಎನ್ನುವ ಜನರು
ಊರೇನೋ ಅಭಿವೃದ್ದಿಯಾಗ್ಬೇಕು. ಹಾಗಂತ ಇರೋ ಮೂಲವ್ಯವಸ್ಥೆಯನ್ನು ಕಿತ್ತು ಕೊಡೋದಾ? ಇಂತಹದೊಂದು ಪರಿಸ್ಥಿತಿ ಮಂಗಳೂರು ಹೊರವಲಯದ ಗ್ರಾಮ ಒಂದಕ್ಕೆ ಎದುರಾಗಿದೆ. ಈ ಗ್ರಾಮದ ಮಂದಿಗೆ ಅಭಿವೃದ್ಧಿಯೇ ಮಾರಕ ಅನ್ನೋ ಹಾಗಾಗಿದೆ. ನೆಟ್ಟಗೆ ಸಂಚರಿಸುವುದಕ್ಕೆ ರಸ್ತೆಯೂ ಇಲ್ಲದೇ ಈ ಭಾಗದ ಮಂದಿ ಕಂಗಾಲಾಗಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳಿಂದ ಪರಿತಪಿಸುತ್ತಿರುವ ಇಲ್ಲಿಯ ಜನ ಒಂದೋ ರಸ್ತೆ ಕೊಡಿ, ಇಲ್ಲದೊದ್ದರೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ. ಈ ಗ್ರಾಮದ ಜನರ ಸಮಸ್ಯೆ ತಿಳಿದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಬಡಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆಯೇ? ರೈಲ್ವೆ ಇಲಾಖೆ ಅಧಿಕಾರಿಗಳ ದರ್ಪಕ್ಕೆ ಸಂಸದರೂ ಮೌನ ವಹಿಸಿದ್ದಾರಾ? ಇಂತಹ ಪ್ರಶ್ನೆ ಉದ್ಭವಿಸೋದು ಸಹಜ.
ಅಭಿವೃದ್ದಿ ಅಂದರೆ ಅದು ಜನಸಾಮಾನ್ಯರನ್ನು ಒಕ್ಕಲೆಬ್ಬಿಸೋದು ಅಂತಾನೇ ಅರ್ಥ. ಕರಾವಳಿಯಲ್ಲಿ ಆಗೋ ಪ್ರತಿಯೊಂದು ಅಭಿವೃದ್ಧಿ ಹಿಂದೆಯೂ ರಾಜಕೀಯ ಹಿತಾಸಕ್ತಿ ಇರುತ್ತದೆ. ಆದರೆ ಜನಸಾಮಾನ್ಯ ಮಾತ್ರ ಬಡಪಾಯಿ ಆಗುತ್ತಾನೆ. ಇಲ್ಲಿ ನಡೆದಿರೋದು ಅಷ್ಟೇ, ಕಳೆದ ಏಳು ವರುಷಗಳಿಂದ ಮಂಗಳೂರು ಹೊರವಲಯದ ಪುಟ್ಟ ಗ್ರಾಮ ಮರವೂರಿನಲ್ಲಿ ಇಂತಹದ್ದೇ ಸಮಸ್ಯೆ ತಲೆದೋರಿದೆ.

ಕಲ್ಲು-ಕಬ್ಬಿಣ ಮೆಟ್ಟಿಕೊಂಡು ನಡೆದಾಡಬೇಕು
ಇಲ್ಲಿ ಅದ್ಯಾವಾಗ ಎರಡನೇ ಹಂತದ ರೈಲ್ವೆ ಹಳಿಯ ವಿಸ್ತರಣೆ ಕಾಮಗಾರಿ ನಡೆಯಲು ಆರಂಭವಾಯಿತೋ ಅಲ್ಲಿಗೆ ಈ ಗ್ರಾಮದ ಮಂದಿ ನಡೆದಾಡುತ್ತಿದ್ದ ರಸ್ತೆಯನ್ನು ನುಂಗಿ ನೀರು ಕುಡಿಯಲಾಯಿತು. ಆರು ವರುಷಗಳಿಂದ ರಸ್ತೆ ಸಂಪರ್ಕವಿಲ್ಲದೆ ಈ ಭಾಗದ ಸುಮಾರು 55 ಮನೆಯ ಮಂದಿ ಕಾಮಗಾರಿ ನಡೆಯುತ್ತಿರುವ ರೈಲ್ವೆ ಹಳಿಯಲ್ಲೇ, ಕಲ್ಲು-ಕಬ್ಬಿಣ ಮೆಟ್ಟಿಕೊಂಡು ನಡೆದಾಡುತ್ತಿದ್ದಾರೆ. ಇಲ್ಲಿಯ ಜನರಿಗೆ ಈ ರೈಲ್ವೆ ಹಳಿಗಳೇ ರಸ್ತೆಯಾಗಿವೆ. ಬೇರೆ ರಸ್ತೆ ಸಂಪರ್ಕ ಈ ಗ್ರಾಮಕ್ಕಿಲ್ಲ. ಇದ್ದ ರಸ್ತೆ ರೈಲ್ವೆ ಇಲಾಖೆ ಕಬಳಿಸಿದೆ.

ಅನಾರೋಗ್ಯ ಕಾಡಿದರೆ ಬಹಳ ಕಷ್ಟ
ಇನ್ನು ಈ ಗ್ರಾಮಕ್ಕೆ ಯಾವುದೇ ವಾಹನ ಬರುವಂತಿಲ್ಲ. ಹಾಗೂ ಬರಬೇಕಾದರೆ ಈ ರೈಲ್ವೆ ಹಳಿ ದಾಟಿಯೇ ಬರಬೇಕು. ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬರಲು ಸಾಧ್ಯವಾಗದ ಪರಿಸ್ಥಿತಿ. ಅನಾರೋಗ್ಯ ಪೀಡಿತರನ್ನು ಹೊತ್ತು ರೈಲ್ವೆ ಹಳಿಗಳನ್ನು ದಾಟಿ ನಂತರ ಆಸ್ಪತ್ರೆಗೆ ಸಾಗಿಸಬೇಕು. ಇನ್ನು ಶಾಲಾ ಮಕ್ಕಳು ಈ ರೈಲ್ವೆ ಹಳಿಗಳ ಮೇಲೆ ಸಾಗಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಶಾಲಾ ಮಕ್ಕಳು ಮನೆಯಿಂದ ಹೊರಟು ಮತ್ತೆ ಮನೆ ಸೇರುವವರೆಗೂ ಮನೆಯಲ್ಲಿ ಪೋಷಕರಿಗೆ ನೆಮ್ಮದಿ ಇರೋದಿಲ್ಲ. ಯಾವಾಗ ಏನಾಗುತ್ತೋ ಎನ್ನುವ ಭಯ ಸದಾ ಕಾಡುತ್ತಿರುತ್ತದೆ.

ಹೊಲ-ಗದ್ದೆಗಳು ಪಾಳು ಬಿದ್ದಿವೆ
ಇನ್ನು ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನ ಸೆಳೆಯಲಾಗಿದೆ. ಆದರೆ ಸಂಸದರು ಎರಡು ಬಾರಿ ಬಂದು ಫೋಟೋಕ್ಕೆ ಪೋಸು ಕೊಟ್ಟಿದ್ದು ಬಿಟ್ರೆ ಯಾವುದೇ ಸ್ಪಂದನೆ ನೀಡಿಲ್ಲ ಅನ್ನೋ ಆರೋಪ ಇಲ್ಲಿಯ ನಿವಾಸಿಗಳದ್ದು. ರೈಲ್ವೆ ಅಧಿಕಾರಿಗಳನ್ನು ಕೇಳಿದರೆ ಒಂದೂವರೆ ಕೋಟಿ ರುಪಾಯಿ ಕೊಡಿ ರಸ್ತೆ ನಿರ್ಮಿಸಿ ಕೊಡ್ತೀವಿ ಅಂತಾರೆ. ಆದರೆ ಈಗಾಗಲೇ ಈ ಭಾಗದ ಹಲವು ಮಂದಿ ಮನೆ ಖಾಲಿ ಮಾಡಿದ್ದಾರೆ. ಒಂದೊಮ್ಮೆ ಎಕರೆಗಟ್ಟಲೆ ಕೃಷಿ ಚಟುವಟಿಕೆ ನಡೆಯುತ್ತಿದ್ದ ಹೊಲ ಗದ್ದೆಗಳು ಪಾಳು ಬಿದ್ದಿವೆ.

ಎಲೆಕ್ಟ್ರಿಕ್ ರೈಲು ಓಡಾಟ ಆರಂಭವಾದರೆ ಇನ್ನಷ್ಟು ಕಷ್ಟ
ಮುಂದಿನ ಫೆಬ್ರವರಿ ವೇಳೆ ಕಾಮಗಾರಿ ನಡೆಯುತ್ತಿರುವ ಹಳಿಯಲ್ಲಿ ಎಲೆಕ್ಟ್ರಿಕ್ ರೈಲು ಓಡಾಟ ಆರಂಭಿಸುತ್ತದೆ. ಸದ್ಯ ಆ ಹಳಿ ಮೇಲೆಯೇ ಓಡಾಡುವ ಶಾಲಾ ಮಕ್ಕಳು, ವೃದ್ಧರು ಅದೆಷ್ಟು ಸುರಕ್ಷಿತ ಅನ್ನೋ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ರೈಲ್ವೆ ಅಧಿಕಾರಿಗಳ ಧೋರಣೆ ಖಂಡಿಸಿ ಹಿಂದೊಮ್ಮೆ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರನ್ನು ಬಂಧಿಸಿ, ಮೂರು ದಿನಗಳ ಕಾಲ ಕೂಡಿ ಹಾಕಿದ್ದೂ ಇದೆ. ಈ ಕಾರಣದಿಂದ ದಿಕ್ಕು ಕಾಣದಾಗಿರುವ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಸಂಸದರ ನಿರ್ಲಕ್ಷ್ಯದಿಂದ ಬೇಸತ್ತು ದಯಾಮರಣ ನೀಡಿ ಎಂದು ರಾಜ್ಯ ಸರಕಾರವನ್ನು ಕೇಳತೊಡಗಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications