ರಸ್ತೆಯೇ ಇಲ್ಲ, ರೈಲು ಹಳಿಯೇ ಎಲ್ಲ: ನಮಗೆ ದಯಾಮರಣ ನೀಡಿ ಎನ್ನುವ ಜನರು
ಊರೇನೋ ಅಭಿವೃದ್ದಿಯಾಗ್ಬೇಕು. ಹಾಗಂತ ಇರೋ ಮೂಲವ್ಯವಸ್ಥೆಯನ್ನು ಕಿತ್ತು ಕೊಡೋದಾ? ಇಂತಹದೊಂದು ಪರಿಸ್ಥಿತಿ ಮಂಗಳೂರು ಹೊರವಲಯದ ಗ್ರಾಮ ಒಂದಕ್ಕೆ ಎದುರಾಗಿದೆ. ಈ ಗ್ರಾಮದ ಮಂದಿಗೆ ಅಭಿವೃದ್ಧಿಯೇ ಮಾರಕ ಅನ್ನೋ ಹಾಗಾಗಿದೆ. ನೆಟ್ಟಗೆ ಸಂಚರಿಸುವುದಕ್ಕೆ ರಸ್ತೆಯೂ ಇಲ್ಲದೇ ಈ ಭಾಗದ ಮಂದಿ ಕಂಗಾಲಾಗಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳಿಂದ ಪರಿತಪಿಸುತ್ತಿರುವ ಇಲ್ಲಿಯ ಜನ ಒಂದೋ ರಸ್ತೆ ಕೊಡಿ, ಇಲ್ಲದೊದ್ದರೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ. ಈ ಗ್ರಾಮದ ಜನರ ಸಮಸ್ಯೆ ತಿಳಿದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಬಡಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆಯೇ? ರೈಲ್ವೆ ಇಲಾಖೆ ಅಧಿಕಾರಿಗಳ ದರ್ಪಕ್ಕೆ ಸಂಸದರೂ ಮೌನ ವಹಿಸಿದ್ದಾರಾ? ಇಂತಹ ಪ್ರಶ್ನೆ ಉದ್ಭವಿಸೋದು ಸಹಜ.
ಅಭಿವೃದ್ದಿ ಅಂದರೆ ಅದು ಜನಸಾಮಾನ್ಯರನ್ನು ಒಕ್ಕಲೆಬ್ಬಿಸೋದು ಅಂತಾನೇ ಅರ್ಥ. ಕರಾವಳಿಯಲ್ಲಿ ಆಗೋ ಪ್ರತಿಯೊಂದು ಅಭಿವೃದ್ಧಿ ಹಿಂದೆಯೂ ರಾಜಕೀಯ ಹಿತಾಸಕ್ತಿ ಇರುತ್ತದೆ. ಆದರೆ ಜನಸಾಮಾನ್ಯ ಮಾತ್ರ ಬಡಪಾಯಿ ಆಗುತ್ತಾನೆ. ಇಲ್ಲಿ ನಡೆದಿರೋದು ಅಷ್ಟೇ, ಕಳೆದ ಏಳು ವರುಷಗಳಿಂದ ಮಂಗಳೂರು ಹೊರವಲಯದ ಪುಟ್ಟ ಗ್ರಾಮ ಮರವೂರಿನಲ್ಲಿ ಇಂತಹದ್ದೇ ಸಮಸ್ಯೆ ತಲೆದೋರಿದೆ.

ಕಲ್ಲು-ಕಬ್ಬಿಣ ಮೆಟ್ಟಿಕೊಂಡು ನಡೆದಾಡಬೇಕು
ಇಲ್ಲಿ ಅದ್ಯಾವಾಗ ಎರಡನೇ ಹಂತದ ರೈಲ್ವೆ ಹಳಿಯ ವಿಸ್ತರಣೆ ಕಾಮಗಾರಿ ನಡೆಯಲು ಆರಂಭವಾಯಿತೋ ಅಲ್ಲಿಗೆ ಈ ಗ್ರಾಮದ ಮಂದಿ ನಡೆದಾಡುತ್ತಿದ್ದ ರಸ್ತೆಯನ್ನು ನುಂಗಿ ನೀರು ಕುಡಿಯಲಾಯಿತು. ಆರು ವರುಷಗಳಿಂದ ರಸ್ತೆ ಸಂಪರ್ಕವಿಲ್ಲದೆ ಈ ಭಾಗದ ಸುಮಾರು 55 ಮನೆಯ ಮಂದಿ ಕಾಮಗಾರಿ ನಡೆಯುತ್ತಿರುವ ರೈಲ್ವೆ ಹಳಿಯಲ್ಲೇ, ಕಲ್ಲು-ಕಬ್ಬಿಣ ಮೆಟ್ಟಿಕೊಂಡು ನಡೆದಾಡುತ್ತಿದ್ದಾರೆ. ಇಲ್ಲಿಯ ಜನರಿಗೆ ಈ ರೈಲ್ವೆ ಹಳಿಗಳೇ ರಸ್ತೆಯಾಗಿವೆ. ಬೇರೆ ರಸ್ತೆ ಸಂಪರ್ಕ ಈ ಗ್ರಾಮಕ್ಕಿಲ್ಲ. ಇದ್ದ ರಸ್ತೆ ರೈಲ್ವೆ ಇಲಾಖೆ ಕಬಳಿಸಿದೆ.

ಅನಾರೋಗ್ಯ ಕಾಡಿದರೆ ಬಹಳ ಕಷ್ಟ
ಇನ್ನು ಈ ಗ್ರಾಮಕ್ಕೆ ಯಾವುದೇ ವಾಹನ ಬರುವಂತಿಲ್ಲ. ಹಾಗೂ ಬರಬೇಕಾದರೆ ಈ ರೈಲ್ವೆ ಹಳಿ ದಾಟಿಯೇ ಬರಬೇಕು. ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬರಲು ಸಾಧ್ಯವಾಗದ ಪರಿಸ್ಥಿತಿ. ಅನಾರೋಗ್ಯ ಪೀಡಿತರನ್ನು ಹೊತ್ತು ರೈಲ್ವೆ ಹಳಿಗಳನ್ನು ದಾಟಿ ನಂತರ ಆಸ್ಪತ್ರೆಗೆ ಸಾಗಿಸಬೇಕು. ಇನ್ನು ಶಾಲಾ ಮಕ್ಕಳು ಈ ರೈಲ್ವೆ ಹಳಿಗಳ ಮೇಲೆ ಸಾಗಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಶಾಲಾ ಮಕ್ಕಳು ಮನೆಯಿಂದ ಹೊರಟು ಮತ್ತೆ ಮನೆ ಸೇರುವವರೆಗೂ ಮನೆಯಲ್ಲಿ ಪೋಷಕರಿಗೆ ನೆಮ್ಮದಿ ಇರೋದಿಲ್ಲ. ಯಾವಾಗ ಏನಾಗುತ್ತೋ ಎನ್ನುವ ಭಯ ಸದಾ ಕಾಡುತ್ತಿರುತ್ತದೆ.

ಹೊಲ-ಗದ್ದೆಗಳು ಪಾಳು ಬಿದ್ದಿವೆ
ಇನ್ನು ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನ ಸೆಳೆಯಲಾಗಿದೆ. ಆದರೆ ಸಂಸದರು ಎರಡು ಬಾರಿ ಬಂದು ಫೋಟೋಕ್ಕೆ ಪೋಸು ಕೊಟ್ಟಿದ್ದು ಬಿಟ್ರೆ ಯಾವುದೇ ಸ್ಪಂದನೆ ನೀಡಿಲ್ಲ ಅನ್ನೋ ಆರೋಪ ಇಲ್ಲಿಯ ನಿವಾಸಿಗಳದ್ದು. ರೈಲ್ವೆ ಅಧಿಕಾರಿಗಳನ್ನು ಕೇಳಿದರೆ ಒಂದೂವರೆ ಕೋಟಿ ರುಪಾಯಿ ಕೊಡಿ ರಸ್ತೆ ನಿರ್ಮಿಸಿ ಕೊಡ್ತೀವಿ ಅಂತಾರೆ. ಆದರೆ ಈಗಾಗಲೇ ಈ ಭಾಗದ ಹಲವು ಮಂದಿ ಮನೆ ಖಾಲಿ ಮಾಡಿದ್ದಾರೆ. ಒಂದೊಮ್ಮೆ ಎಕರೆಗಟ್ಟಲೆ ಕೃಷಿ ಚಟುವಟಿಕೆ ನಡೆಯುತ್ತಿದ್ದ ಹೊಲ ಗದ್ದೆಗಳು ಪಾಳು ಬಿದ್ದಿವೆ.

ಎಲೆಕ್ಟ್ರಿಕ್ ರೈಲು ಓಡಾಟ ಆರಂಭವಾದರೆ ಇನ್ನಷ್ಟು ಕಷ್ಟ
ಮುಂದಿನ ಫೆಬ್ರವರಿ ವೇಳೆ ಕಾಮಗಾರಿ ನಡೆಯುತ್ತಿರುವ ಹಳಿಯಲ್ಲಿ ಎಲೆಕ್ಟ್ರಿಕ್ ರೈಲು ಓಡಾಟ ಆರಂಭಿಸುತ್ತದೆ. ಸದ್ಯ ಆ ಹಳಿ ಮೇಲೆಯೇ ಓಡಾಡುವ ಶಾಲಾ ಮಕ್ಕಳು, ವೃದ್ಧರು ಅದೆಷ್ಟು ಸುರಕ್ಷಿತ ಅನ್ನೋ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ರೈಲ್ವೆ ಅಧಿಕಾರಿಗಳ ಧೋರಣೆ ಖಂಡಿಸಿ ಹಿಂದೊಮ್ಮೆ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರನ್ನು ಬಂಧಿಸಿ, ಮೂರು ದಿನಗಳ ಕಾಲ ಕೂಡಿ ಹಾಕಿದ್ದೂ ಇದೆ. ಈ ಕಾರಣದಿಂದ ದಿಕ್ಕು ಕಾಣದಾಗಿರುವ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಸಂಸದರ ನಿರ್ಲಕ್ಷ್ಯದಿಂದ ಬೇಸತ್ತು ದಯಾಮರಣ ನೀಡಿ ಎಂದು ರಾಜ್ಯ ಸರಕಾರವನ್ನು ಕೇಳತೊಡಗಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications