Maha Shivratri 2025: ಮಹಾಶಿವರಾತ್ರಿಯಂದು ಭಕ್ತರು ಹೆಚ್ಚು ಭೇಟಿ ನೀಡುವ ಶಿವನ ದೇವಸ್ಥಾನಗಳಿವು
ಕೈಲಾಸವಾಸಿ ಶಿವನಿಗೆ ಅತ್ಯಂತ ಪ್ರಿಯವಾದ ದಿನ ಶಿವರಾತ್ರಿ. ಆ ದಿನ ಭಕ್ತರು ಉಪವಾಸ ವ್ರತ ಕೈಗೊಳ್ಳುವ ಮೂಲಕ ಶಿವನನ್ನ ಆರಾಧಿಸುತ್ತಾರೆ. ಅಂದು ವಿಶೇಷವಾಗಿ ಶಿವಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ದಿನವಿಡೀ ಉಪವಾಸದೊಂದಿಗೆ ಆ ದಿನ ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ಶಿವನನ್ನು ಸ್ಮರಿಸುತ್ತಾರೆ. ಕೆಲವರು ಮಹಾಶಿವರಾತ್ರಿಯಂದು ಶಿವನ ದೇವಾಲಯಗಳಿಗೆ ಭೇಟಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದರಂತೆ ಬೆಂಗಳೂರು ಭಾಗದಲ್ಲೇ ಇರುವ ಶಿವನ ದೇವನಸ್ಥಾನಗಳ ಮಾಹಿತಿ ಇಲ್ಲಿ ತಿಳಿಯಿರಿ.
* ಶಿವಗಂಗೆ ಬೆಟ್ಟ: ಬೆಂಗಳೂರಿನ ಸಮೀಪವೇ ಇರುವ ಈ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಇಲ್ಲಿ ಗಂಗಾಧರೇಶ್ವರ ದೇವಸ್ಥಾನವಿದೆ.

* ಶ್ರೀ ಕಣ್ಣೇಶ್ವರ ದೇವಸ್ಥಾನ: ಕಣ್ಣೇಶ್ವರ ದೇವಸ್ಥಾನವು ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿದೆ. ಹೆಸರೇ ಸೂಚಿಸುವಂತೆ ಇಲ್ಲಿ ಶಿವನ ಕಣ್ಣುಗಳು ಪ್ರತೀತಿ ಪಡೆದಿದೆ.
* ಭೋಗನಂದೀಶ್ವರ ದೇವಾಲಯ: ಇದು ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿದೆ. ಈ ದೇವಾಲಯ ಸುಮಾರು10 ನೇ ಶತಮಾನದಷ್ಟು ಹಳೆಯದು ಎಂದು ನಂಬಲಾಗಿದೆ. ದ್ರಾವಿಡ ವಾಸ್ತುಶಿಲ್ಪ ಹಾಗೂ ನೊಳಂಬವಾದಿ ಶೈಲಿಯಲ್ಲಿದೆ.
* ಹಲಸೂರು ಸೋಮೇಶ್ವರ ದೇವಸ್ಥಾನ: ಇದು ಚೋಳರ ಕಾಲಕ್ಕೆ ಸೇರಿದ್ದು, ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಇದು ವಿಜಯನಗರ ವಾಸ್ತುಶೈಲಿಯಲ್ಲಿದೆ.
* ಕಾಡು ಮಲ್ಲೇಶ್ವರ ದೇವಸ್ಥಾನ: ಮಲ್ಲೇಶ್ವರವನ್ನು ಈ ದೇವಸ್ಥಾನದ ಹೆಸರಿನಿಂದಲೇ ಕರೆಯಲಾಗುತ್ತದೆ. ಇದು ಸುಮಾರು 17 ನೇ ಶತಮಾನದ ಶಿವನ ದೇವಾಲಯವಾಗಿದೆ. ನಂದೀಶ್ವರ ತೀರ್ಥ ಇಲ್ಲಿನ ಪ್ರಮುಖ ಆಕರ್ಷಣೆ. ಇದೇ ವೃಷಭಾವತಿ ನದಿಯ ಮೂಲ ಎಂಬ ನಂಬಿಕೆಯೂ ಇದೆ.
* ಬೇಗೂರು ನಾಗೇಶ್ವರ ದೇವಸ್ಥಾನ: ಇದನ್ನು ಗಂಗ ರಾಜವಂಶಸ್ಥರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಬಳಿಕ ಚೋಳ ರಾಜವಂಶದ ಆಳ್ವಿಕೆಯಲ್ಲೂ ಇದರ ಉಲ್ಲೇಖವಿದೆ. ಬೇಗೂರಿನಲ್ಲಿ ಈ ಶಿವನ ದೇವಾಲಯವಿದೆ.
* ಕೋಟೆ ಜಲಕಂಠೇಶ್ವರ ದೇವಸ್ಥಾನ: ಇದು ಕೂಡ ಚೋಳ ರಾಜವಂಶಕ್ಕೆ ಸೇರಿದ ಬೆಂಗಳೂರಿನ ಮತ್ತೊಂದು ಶಿವನ ದೇವಾಲಯವಾಗಿದ್ದು, ನಗರ ಕೇಂದ್ರ ಭಾಗವಾದ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿಯೇ ಇದೆ.

* ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯ: ಇದು ಬನಶಂಕರಿ ಎರಡನೇ ಹಂತದಲ್ಲಿದೆ. ಶಿವರಾತ್ರಿಯ ಹಬ್ಬದಂದು ಇಲ್ಲಿ ವಿಶೇಷ ಕಾರ್ಯಕ್ರಮ ಇರುತ್ತದೆ. ಹಬ್ಬವನ್ನು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ.
* ಹುಳಿಮಾವು ಗುಹೆ ದೇವಾಲಯ: ಇದು ಹುಳಿಮಾವು ಸಮೀಪದ ಬನ್ನೇರುಘಟ್ಟ ರಸ್ತೆಯ ಬಳಿ ಇದೆ. ಈ ಗುಹೆಯನ್ನು ಸುಮಾರು 2000 ವರ್ಷಗಳಷ್ಟು ಹಳೆಯದಾದ ರಚನೆ ಎಂದು ಗುರುತಿಸಲಾಗಿದ್ದು, ಇದು ಸಂಪೂರ್ಣವಾಗಿ ಒಂದೇ ಬಂಡೆಯಿಂದ ಕೆತ್ತಿರುವುದು ಗಮನ ಸೆಳೆದಿದೆ.
* ಶ್ರೀ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರ: ಇದು ಬೆಂಗಳೂರಿನ ಗಂಗಮ್ಮ ದೇವಸ್ಥಾನದ ಸಮೀಪದಲ್ಲಿ ಹಾಗೂ ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿಯೇ ಇದೆ.
* ಶ್ರೀಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ: ಇದು ಎಲೆಕ್ಟ್ರಾನಿಕ್ ಸಿಟಿಯಲ್ಲಿದೆ. ವಾರಣಾಸಿಯಲ್ಲಿರುವ ಮೂಲ ಕಾಶಿ ವಿಶ್ವನಾಥ ದೇವಾಲಯಕ್ಕೆ ಇದನ್ನು ಹೋಲಿಸಲಾಗಿದೆ. ಶಿವನ ಭಕ್ತರಿಗೆ ಇದು ನೆಚ್ಚಿನ ತಾಣ.
* ಗವಿ ಗಂಗಾಧರೇಶ್ವರ ದೇವಸ್ಥಾನ: ಗವಿಪುರಂನಲ್ಲಿರುವ ಪುರಾತನ ಗುಹಾ ದೇವಾಲಯವಿದು. ಮಕರ ಸಂಕ್ರಾಂತಿಯಂದು ಸೂರ್ಯರಶ್ಮಿ ಸ್ಪರ್ಶಕ್ಕೆ ಈ ದೇವಾಲಯ ಪ್ರಖ್ಯಾತಿ.
* ಕೆಂಪುಕೋಟೆ ಶಿವ ದೇವಾಲಯ: ಇದನ್ನು ಶಿವೋಹಂ ಶಿವ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿ 65 ಅಡಿ ಶಿವನ ಪ್ರತಿಮೆ, ದೊಡ್ಡ ಗಣೇಶನ ವಿಗ್ರಹವಿದ್ದು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications