ರಾಮಾಯಣ ಯಾತ್ರೆಗೆ ಮತ್ತೆ ವಿಶೇಷ ರೈಲು; ಪ್ರಯಾಣ ದರ, ಏಲ್ಲೆಲ್ಲಿ ಓಡುತ್ತೆ ಈ ರೈಲು ತಿಳಿಯಿರಿ
ಜೂನ್ ತಿಂಗಳಲ್ಲಿ ದೇಶದ ಅನೇಕ ಧಾರ್ಮಿಕ ಸ್ಥಳಗಳಿಗೆ ಧಾರ್ಮಿಕ ಪ್ರವಾಸ ಭೇಟಿ ಮಾಡಿಸಿ ಯಶಸ್ವಿ ಕಂಡಿದ್ದ ಶ್ರೀ ರಾಮಾಯಾಣ ಯಾತ್ರೆಯ ಧಾರ್ಮಿಕ ಪ್ರವಾಸಿ ಈ ರೈಲು ಮತ್ತೆ ಸಂಚರಿಸಲಿದೆ. ರಾಮನಿಗೆ ಸಂಬಂಧಿಸಿದ ನಂಬಿಕೆಯ ಕೇಂದ್ರಗಳಿಗೆ ಮತ್ತು ಅನೇಕ ದೇವಾಲಯಗಳಿಗೆ ಪ್ರವಾಸ ಮಾಡುವ ಭಾರತ್ ಗೌರವ್ ಟೂರಿಸ್ಟ್ ರೈಲನ್ನು ಮತ್ತೊಮ್ಮೆ ಪ್ರವಾಸಿಗರಿಗಾಗಿ ಓಡಿಸಲಾಗುತ್ತಿದೆ. ಐಆರ್ಸಿಟಿಸಿಯು ಬರುವ ಆಗಸ್ಟ್ 24, 2022ರಿಂದ ಮತ್ತೆ ಈ ರೈಲು ಓಡಲಿದೆ ಎಂದು ಹೇಳಿದೆ. ದೇಶದಲ್ಲಿ ಇದೆ ಮೊದಲ ಭಾರಿಗೆ ಧಾರ್ಮಿಕ ಯಾತ್ರೆಯು ಶ್ರೀ ರಾಮಾಯಣ ಯಾತ್ರೆಯೂ ದೇಶದ ತುಂಬೆಲ್ಲಾ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಚರಿಸಲಿದೆ.
भारत गौरव टूरिस्ट ट्रेन श्री रामायण यात्रा । 20 दिन एवं 19 रात की यह यात्रा दिल्ली से 24/08/22 को शुरू होगी। आज ही टिकट बुक करें। For details, visit https://t.co/D7cyCzRw63@AmritMahotsav #AzadiKiRail
— IRCTC (@IRCTCofficial) July 25, 2022
ಈ ಬಾರಿ 19 ರಾತ್ರಿಗಳ, 20 ಹಗಲುಗಳ ಟೂರ್ ಪ್ಯಾಕೇಜ್ನ್ನು ಯೋಜಿಸಲಾಗಿದೆ. ಈ ರಾಮಾಯಣ ಯಾತ್ರೆ ರೈಲು ಪ್ರವಾಸಿಗರನ್ನು ಅಯೋಧ್ಯೆ, ವಾರಣಾಸಿ, ಪ್ರಯಾಗ್ರಾಜ್, ಹಂಪಿ, ರಾಮೇಶ್ವರಂ ಮತ್ತು ನೇಪಾಳದ ಜನಕ್ಪುರಕ್ಕೆ ಕರೆದೊಯ್ಯುತ್ತದೆ. ಇದು ಭಾರತೀಯ ರೈಲ್ವೆಯ ಮೊದಲ ಪ್ರವಾಸಿ ರೈಲು, ಇದು ದೇಶದ ಹೊರಗಿನ ಪ್ರವಾಸಿಗರನ್ನು ಸಹ ಕರೆದೊಯ್ಯುತ್ತದೆ.

ಯಾವ-ಯಾವ ಸ್ಥಳಗಳಿಗೆ ಭೇಟಿ
ಈ ರಾಮಾಯಣ ಯಾತ್ರೆಯ ರೈಲಿನಲ್ಲಿ 19 ರಾತ್ರಿ ಮತ್ತು 20 ಹಗಲುಗಳ ಈ ಪ್ರಯಾಣದಲ್ಲಿ, ಪ್ರವಾಸಿಗರು ಭಗವಾನ್ ರಾಮನಿಗೆ ಸಂಬಂಧಿಸಿದ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಅಯೋಧ್ಯೆ, ನಂದಿಗ್ರಾಮ, ಜನಕಪುರ, ಸೀತಾಮರ್ಹಿ, ಬಕ್ಸರ್, ವಾರಣಾಸಿ, ಸೀತಾ ಸಂಹಿತಾ ಸ್ಥಳ, ಸೀತಾಮರ್ಹಿ, ಪ್ರಯಾಗರಾಜ್, ಶೃಂಗಾರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ, ಭದ್ರಾಚಲಂ ಮುಂತಾದ ಸ್ಥಳಗಳನ್ನು ಒಳಗೊಂಡಿದೆ.

ಮತ್ತೆ ಶ್ರೀ ರಾಮಾಯಣ ಯಾತ್ರೆ
ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಶ್ರೀ ರಾಮಾಯಣ ಯಾತ್ರೆ ಎಂದು ಐಆರ್ಸಿಟಿಸಿಯು ಟ್ವೀಟ್ ಮಾಡಿದೆ. 20 ಹಗಲು ಮತ್ತು 19 ರಾತ್ರಿಗಳ ಈ ಪ್ರಯಾಣವು 24/08/22ರಂದು ದೆಹಲಿಯಿಂದ ಪ್ರಾರಂಭವಾಗಲಿದೆ. ಇಂದೇ ಟಿಕೆಟ್ ಬುಕ್ ಮಾಡಿ. ಭಾರತ್ ಗೌರವ್ ಪ್ರವಾಸಿ ರೈಲು ಶ್ರೀ ರಾಮಾಯಣ ಯಾತ್ರೆ. 20 ಹಗಲು ಮತ್ತು 19 ರಾತ್ರಿಗಳ ಈ ಪ್ರಯಾಣವು ಆಗಷ್ಟ್ 24ರಂದು ದೆಹಲಿಯಿಂದ ಪ್ರಾರಂಭವಾಗಲಿದೆ. ನೀವು ಇಂದೇ ಟಿಕೆಟ್ ಬುಕ್ ಮಾಡಬಹುದು ವಿವರಗಳಿಗಾಗಿ ಐಆರ್ಸಿಟಿಸಿ ಅಧೀಕೃತ ವೆಬ್ಸೈಟ್ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಶ್ರೀ ರಾಮಾಯಣ ಯಾತ್ರೆಗೆ ಎಷ್ಟು ಪಾವತಿಸಬೇಕು
ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ಶ್ರೀ ರಾಮಾಯಣ ಯಾತ್ರೆಯಲ್ಲಿ ಪ್ರಯಾಣಿಸಲು ಪ್ರವಾಸಿಗರು 73,500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಮೊದಲ 100 ಪ್ರಯಾಣಿಕರಿಗೆ ಬುಕಿಂಗ್ನಲ್ಲಿ ಶೇಕಡಾ 5 ರಷ್ಟು ರಿಯಾಯಿತಿ ಸಿಗುತ್ತದೆ ಎಂದು IRCTC ಹೇಳಿದೆ.
ಐಆರ್ಸಿಟಿಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡುವ ಮೂಲಕ ಈ ಪ್ರವಾಸದ ಕುರಿತು ಮಾಹಿತಿಯನ್ನು ನೀಡಿದೆ. ತನ್ನ ಟ್ವೀಟ್ನಲ್ಲಿ ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಪ್ರವಾಸದ ಮೂಲಕ ಶ್ರೀ ರಾಮಾಯಣ ಯಾತ್ರೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದೆ. ಪ್ರವಾಸಿಗರು ಈ ಪ್ಯಾಕೇಜ್ಗಾಗಿ ಬುಕ್ ಮಾಡಲು ಬಯಸಿದರೆ, ಐಆರ್ಸಿಟಿಸಿಯ ಅಧಿಕೃತ ವೆಬ್ಸೈಟ್ www.irctctourism.comಗೆ ಭೇಟಿ ನೀಡಬೇಕಾಗುತ್ತದೆ. ಇದರ ಹೊರತಾಗಿ, ನೀವು ನಿಮ್ಮ ಪ್ರಾದೇಶಿಕ ಐಆರ್ಟಿಸಿಯ ಕಚೇರಿಗೆ ಭೇಟಿ ನೀಡಬಹುದು.

ಈ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಅವಕಾಶ
ಅಯೋಧ್ಯೆ-ಶ್ರೀ ರಾಮನ ಜನ್ಮಭೂಮಿ ದೇವಾಲಯ, ಸರಯು ಘಾಟ್
ನಂದಿಗ್ರಾಮ್-ಭಾರತ್ ಮತ್ತು ಹನುಮಾನ್ ದೇವಾಲಯ ಮತ್ತು ಭಾರತ್ ಕುಂಡ್ಜನಕಪುರ-ರಾಮ್-ಜಾನಕಿ ದೇವಸ್ಥಾನಬಕ್ಸರ್-ರಾಮರೇಖಾ ಘಾಟ್, ರಾಮೇಶ್ವರನಾಥ ದೇವಾಲಯವಾರಣಾಸಿ-ತುಳಸಿ ಮಾನಸ ದೇವಸ್ಥಾನ, ಸಂಕತ್ಮೋಚನದೇವಸ್ಥಾನ, ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ
ಸೀತಾಮರ್ಹಿ-ಸೀತಾ ಮಾತಾ ದೇವಾಲಯಪ್ರಯಾಗ್ರಾಜ್-ಗಂಗಾ ಯಮುನಾ ಸಂಗಮ, ಹನುಮಾನ್ ದೇವಸ್ಥಾನಹಂಪಿ-ಆಂಜನೇಯನ ಬೆಟ್ಟ, ವಿರೂಪಾಕ್ಷ ದೇವಸ್ಥಾನ, ವಿಠ್ಠಲ ದೇವಸ್ಥಾನರಾಮೇಶ್ವರಂ-ರಾಮನಾಥ ಸ್ವಾಮಿ ದೇವಸ್ಥಾನ, ಧನುಷ್ಕೋಡಿಕಾಂಚೀಪುರಂ - ವಿಷ್ಣು ಕಂಚಿ, ಶಿವ ಕಂಚಿ ಮತ್ತು ಶ್ರೀ ಕಂಚಿ ಕಾಮಾಕ್ಷಿಯ ಅಮ್ಮನ ದೇವಾಲಯಗಳುಭದ್ರಾಚಲಂ - ಶ್ರೀ ಸೀತಾರಾಮ ಸ್ವಾಮಿ ದೇವಸ್ಥಾನ, ಅನಾಜನ ಸ್ವಾಮಿ ದೇವಸ್ಥಾನ
-
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ












Click it and Unblock the Notifications