ಧಗೆಧಗೆ ಬಿಸಿಲು, ಶೆಖೆಯಾ? ಎನ್ಡಿಎಂಎ ಮಾರ್ಗಸೂಚಿ ಏನಿದೆ?
ಬೆಂಗಳೂರು, ಏ. 29: ಬೇಸಿಗೆ ಧಗೆ ಈ ವರ್ಷ ತಾರಕಕ್ಕೇರುವ ಮುನ್ಸೂಚನೆ ಇದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ಶೆಖೆ ವಿಪರೀತವಾಗಿ ಹೆಚ್ಚುತ್ತಿದೆ. ಅನೇಕ ಕಡೆ ಉಷ್ಣಾಂಶ 40 ಡಿಗ್ರಿ ದಾಟಿದೆ. ಮೇ ಜೂನ್ ತಿಂಗಳಲ್ಲಿ ಕೆಲ ಪ್ರದೇಶಗಳಲ್ಲಿ 50 ಡಿಗ್ರಿ ಉಷ್ಣಾಂಶ ದಾಖಲಾದರೂ ಅಚ್ಚರಿ ಇಲ್ಲ. ರಾಜ್ಯದಲ್ಲಿ ಏಳೆಂಟು ಜಿಲ್ಲೆಗಳಲ್ಲಿ ಬಿಸಿಲು 40 ಡಿಗ್ರಿ ದಾಟಿ ಹೋಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 37-38 ಡಿಗ್ರಿ ಉಷ್ಣಾಂಶ ಮುಟ್ಟ ಬಹುದು. ಈಗಾಗಲೇ ಅನೇಕ ಕಡೆ ಹೀಟ್ ವೇವ್ ಆರಂಭವಾಗಿದ್ದು ಜೂನ್ ತಿಂಗಳಲ್ಲಿ ಬಿಸಿಗಾಳಿ ತೀವ್ರಮಟ್ಟಕ್ಕೆ ಹೋಗಲಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಈ ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿರುವುದು ಬಹುತೇಕ ಅಸಾಧ್ಯವೇ ಸರಿ. ನಗರ ಪ್ರದೇಶದಲ್ಲಿ ಎಸಿಯಲ್ಲಿರುವವರು ನಿರುಮ್ಮಳರಾಗಿ ಇರುತ್ತಾರೆ. ಆದರೆ, ಸದಾ ಬಿಸಿಲಿನಲ್ಲಿ ಇರುವ ನಿರ್ವಸತಿಗರು, ಕೂಲಿಕಾರ್ಮಿಕರಿಗೆ ಬಿಸಿಗಾಳಿಯಿಂದ ಅಪಾಯ ಹೆಚ್ಚು. ಹಾಗೆಯೇ, ಹೊರಗೆ ಕೆಲಸ ಮಾಡಬೇಕಾದ ಕನ್ಸ್ಟ್ರಕ್ಷನ್ ಎಂಜಿನಿಯರ್ಸ್, ಕ್ರೀಡಾಭ್ಯಾಸ ನಡೆಸುವ ಕ್ರೀಡಾಪಟುಗಳು ಮೊದಲಾದವರೂ ಹೀಟ್ ವೇವ್ಗೆ ತುತ್ತಾಗುವ ಸಾಧ್ಯತೆ ಇದೆ.
ಬಿಸಿಗಾಳಿಯ ಪರಿಣಾಮ ಎದುರಿಸಲು ಕಳೆದ ಐದಾರು ವರ್ಷದಲ್ಲಿ ಎನ್ಡಿಎಂಎ ಬಹಳಷ್ಟು ಕ್ರಮಗಳನ್ನ ಕೈಗೊಂಡಿದೆ. ಹೀಟ್ ವೇವ್ ಇದ್ದ ಸಂದರ್ಭದಲ್ಲಿ ಜನರು ಏನು ಮಾಡಬೇಕು ಎಂದು ತಿಳಿಸುವ ಮಾರ್ಗಸೂಚಿಯನ್ನು National Disaster Management Authority(ಎನ್ಡಿಎಂಎ) ಪ್ರಕಟಿಸಿದೆ. ಈ ಮಾರ್ಗಸೂಚಿಯ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

* ನಿಮಗೆ ದಣಿವಾಗಲಿ ಇಲ್ಲದಿರಲಿ ಸಾಧ್ಯವಾದಷ್ಟು ನೀರು ಆಗಾಗ ಕುಡಿಯುತ್ತಲೇ ಇರಿ.
* ಪ್ರಯಾಣಿಸುವಾಗಲೂ ನೀರು ಜೊತೆಯಲ್ಲಿರಲಿ.
* ಹೊರಗೆ ಹೋಗುವಾಗ ಹಗುರವಾದ, ಮಂದ ಬಣ್ಣದ, ಸಡಿಲವಾದ ಕಾಟನ್ ಬಟ್ಟೆಗಳನ್ನು ಸಾಧ್ಯವಾದಷ್ಟು ತೊಡಿ.
* ಬಿಸಿಲಿಗೆ ಕಾಲಿಡುವಾಗ ಕಾಲಿಗೆ ಪಾದರಕ್ಷೆ ಇರಲಿ, ಕಣ್ಣಿಗೆ ಕೂಲಿಂಗ್ ಗ್ಲಾಸ್, ಛತ್ರಿ ಅಥವಾ ಟೊಪ್ಪಿ ಹಾಕಿಕೊಳ್ಳಿ.
* ಒದ್ದೆಯಾಗಿರುವ ಬಟ್ಟೆಯನ್ನ ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಗಳನ್ನು ಸವರಿಕೊಳ್ಳುತ್ತಿರಿ.
* ದೇಹದಲ್ಲಿ ಜಲಾಂಶನಷ್ಟ ತಪ್ಪಿಸಲು ಆಗಾಗ ಮಜ್ಜಿಗೆ, ನಿಂಬೆ ಶರಬತ್ತು, ಅಕ್ಕಿ ಗಂಜಿ, ರಾಗಿ ಅಂಬಲಿ, ಒಆರ್ಎಸ್ ಇತ್ಯಾದಿ ಪಾನೀಯವನ್ನು ಕುಡಿಯಿರಿ.
* ಸುಸ್ತಾಗುವುದು, ತಲೆಸುತ್ತುವುದು, ತಲೆನೋವು, ವಾಂತಿ, ಬೆವರು ಮೊದಲಾದವು ಉಷ್ಣಾಘಾತ ಅಥವಾ ಹೀಟ್ ಸ್ಟ್ರೋಕ್ನ ಲಕ್ಷಣಗಳೆಂದು ಗುರುತಿಸಲಾಗಿದೆ. ಹೀಗಾಗಿ, ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ, ಅದರಲ್ಲೂ ಸುಸ್ತಾಗುವುದು, ತಲೆಸುತ್ತುವುದು ಆದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
* ಸಾಕುಪ್ರಾಣಿಗಳನ್ನು ಆದಷ್ಟೂ ನೆರಳಿನಲ್ಲಿರುವಂತೆ ನೋಡಿಕೊಳ್ಳಿ. ಕುಡಿಯುವ ನೀರಿನ ವ್ಯವಸ್ಥೆ ಮಾಡಿ.
* ಮನೆಯೊಳಗೆ ಶೆಖೆ ಕಡಿಮೆ ಮಾಡಲು ಏನಾದರೂ ಕ್ರಮ ತೆಗೆದುಕೊಳ್ಳಿ. ಕಿಟಕಿ, ಬಾಗಿಲುಗಳಿಗೆ ಕರ್ಟನ್ಗಳನ್ನು ಹಾಕಿ. ರಾತ್ರಿ ಹೊತ್ತು ಕಿಟಕಿಗಳನ್ನು ತೆರೆದಿಡಿ.
* ಫ್ಯಾನ್ಗಳಿದ್ದರೆ ಬಳಕೆ ಮಾಡಿ. ಆಗಾಗ ಒದ್ದೆಬಟ್ಟೆಯಿಂದ ಮೈ ಒರೆಸಿಕೊಳ್ಳಿ. ಸಾಧ್ಯವಾದರೆ ಆಗಾಗ ತಣ್ಣೀರಿನಿಂದ ಸ್ನಾನ ಮಾಡಿ.
* ನೀವು ಕೆಲಸ ಮಾಡುವ ಸ್ಥಳದ ಬಳಿಕ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಿ.
* ಬಯಲಿನಲ್ಲಿ ಕೆಲಸ ಮಾಡುವವರು ಸಾಧ್ಯವಾದಷ್ಟು ಸೂರ್ಯ ಬಿಸಿಲು ನೇರವಾಗಿ ತಾಕದಂತೆ ನೋಡಿಕೊಳ್ಳಿ.
* ಬಹಳ ಶ್ರಮ ವಹಿಸಿ ಮಾಡುವ ಕೆಲಸಗಳನ್ನು ಸಾಧ್ಯವಾದರೆ ತಂಪಾದ ಹೊತ್ತನಲ್ಲಿ ಮಾಡಲು ಯತ್ನಿಸಿ.
* ಬಯಲಿನಲ್ಲಿ ಕೆಲಸ ಮಾಡುವುದಿದ್ದರೆ ಸಾಧ್ಯವಾದಷ್ಟು ಹೆಚ್ಚುಬಾರಿ ಒಂದಷ್ಟು ಹೊತ್ತು ವಿಶ್ರಾಂತಿಪಡೆಯುತ್ತಿರಿ.
* ಕಾರ್ಮಿಕರು ಗರ್ಭಿಣಿಯಾಗಿದ್ದರೆ ಅವರ ಬಗ್ಗೆ ಇತರರು ನಿಗಾ ವಹಿಸಬೇಕು.
-
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ












Click it and Unblock the Notifications