ಈ ದಿನದ ವಿಶೇಷ: ಇಂಜಿನಿಯರ್ಸ್ ಡೇ- ಶುಭಾಶಯ, ಸಂದೇಶಗಳು
ಸೆಪ್ಟೆಂಬರ್ 15, ಇಂಜಿನಿಯರ್ಸ್ ಡೇ. ಇಂಜಿನಿಯರ್ಗಳು ಯಾವುದೇ ರಾಷ್ಟ್ರ ನಿರ್ಮಾಣದ ವಾಸ್ತುಶಿಲ್ಪಿಗಳು. ಹೀಗಾಗಿ, ಇಂಜಿನಿಯರಿಂಗ್ ಎಂದರೆ ಅದಕ್ಕಿರುವ ಮಹತ್ವವೇ ಬೇರೆ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನೇ ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತಿದೆ. ಭಾರತದ ಜೊತೆಗೆ ತಾಂಜಾನಿಯಾ ಮತ್ತು ಶ್ರೀಲಂಕಾದಲ್ಲೂ ಇದೇ ದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಗತ್ತಿದೆ.
ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ ಭಾರತೀಯ ನವನಿರ್ಮಾಣದಲ್ಲಿ ಕೊಡುಗೆ ನೀಡಿದ ವಿವಿಧ ಇಂಜಿನಿಯರ್ಗಳ ಕಾರ್ಯವನ್ನು ನೆನಪಿಸಿಕೊಳ್ಳುವ ಮತ್ತು ಪ್ರಶಂಸಿಸುವ ದಿನ ಇದು. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಇಂಜಿನಿಯರಿಂಗ್ ಶಿಕ್ಷಣ ಆಯ್ದುಕೊಳ್ಳಲು ಯುವ ಜನತೆಗೆ ಪ್ರೇರೇಪಣೆ ಕೊಡಲು ಈ ದಿನವನ್ನು ಬಳಸಬಹುದು.
ಇಂದು ದೇಶಾದ್ಯಂತ ಶಾಲಾ ಕಾಲೇಜುಗಳ ಹಂತದಲ್ಲಿ ಹಲವಾರು ಇಂಜಿನಿಯರಿಂಗ್ ಸ್ಪರ್ಧೆಗಳು ನಡೆಯುತ್ತವೆ. ಯುವ ಇಂಜಿನಿಯರ್ಗಳ ಪ್ರತಿಭೆ ಒರೆಗೆ ಹಚ್ಚಲು ಒಳ್ಳೆಯ ವೇದಿಕೆ ಇದಾಗಿದೆ.

ಇಂಜಿನಿಯರ್ಸ್ ಡೇ ಗ್ರೀಟಿಂಗ್ಸ್
ಇಂಜಿನಿಯರ್ಗಳ ಬಗ್ಗೆ ತರಹಾವೇರಿ ಮೀಮ್ಗಳು, ಗ್ರೀಟಿಂಗ್ಗಳು ಇಂಟರ್ನೆಟ್ನಲ್ಲಿ ಸಿಗುತ್ತವೆ. ನೀವು ಎಂಜಿನಿಯರ್ ಆಗಿದ್ದರೆ ಮನಸಿಗೆ ಮುದ ನೀಡಬಹುದು.
* "ನಮಗೆ ಗರ್ಲ್ಫ್ರೆಂಡ್ ಅಗತ್ಯ ಇಲ್ಲ. ಯಾಕೆಂದರೆ ನಮಗಿರುವ ಜವಾಬ್ದಾರಿಗಳೇ ನಮ್ಮ ತಲೆ ತಿನ್ನುತ್ತಿರುತ್ತವೆ. ಇಂಜಿನಿಯರ್ಸ್ ಡೇ ಶುಭಾಶಯಗಳು"
* ವಿಜ್ಞಾನ ಎಂದರೆ ತಿಳಿದುಕೊಳ್ಳುವುದು, ಇಂಜಿನಿಯರಿಂಗ್ ಎಂಬುದು ಮಾಡುವುದು.
* ಎಂಜಿನಿಯರಿಂಗ್ ಎಂಬುದು ಪಾರ್ಕ್ನಲ್ಲಿ ವಾಕಿಂಗ್ ಮಾಡಿದಷ್ಟೇ ಸಲೀಸು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಆ ಪಾರ್ಕು ಜುರಾಸಿಕ್ ಪಾರ್ಕು ಎಂದು ಎಂಜಿನಿಯರ್ಗಳಿಗೆ ಮಾತ್ರ ಗೊತ್ತು.
* ಭಾರತದಲ್ಲಿ ನೀವು ಜನದಟ್ಟನೆಯ ರಸ್ತೆಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದು ನಾಯಿಗೆ ಬಡಿಯುತ್ತದೆ ಇಲ್ಲ ಎಂಜಿನಿಯರ್ಗೆ ಬಡಿಯುತ್ತದೆ.

ಖ್ಯಾತನಾಮರ ಹೇಳಿಕೆಗಳು:
* "ಇಂಜಿನಿಯರ್ಗಳು ಸಮಸ್ಯೆಗೆ ಪರಿಹಾರ ಒದಗಿಸಲು ಬಯಸುತ್ತಾರೆ. ಯಾವುದೇ ಸಮಸ್ಯೆ ಸಿಗದಿದ್ದರೆ ತಾವೇ ಸಮಸ್ಯೆ ಸೃಷ್ಟಿಸುತ್ತಾರೆ." - ಸ್ಕಾಟ್ ಅಡಮ್ಸ್
* "ಇಂಜಿನಿಯರ್ಗಳು ಕನಸು ನನಸು ಮಾಡುತ್ತಾರೆ." - ಹಯಾವೋ ಮಿಯಾಜಾಕಿ
* "ಆರನೇ ದಿನ ದೇವರಿಗೆ ತಾನೊಬ್ಬನೇ ಎಲ್ಲಾ ಮಾಡಲು ಆಗಲ್ಲ ಅಂತ ಅನಿಸಿತು. ಹೀಗಾಗಿ, ಎಂಜಿನಿಯರ್ಗಳನ್ನು ಸೃಷ್ಟಿಸಿದ." - ಲೂಯಿಸ್ ಮೆಕ್ಮಾಸ್ಟರ್ ಬುಜೋಲ್ಡ್.
* "ಒಂದು ವಸ್ತು ಹೇಗೆ ಕೆಲಸ ಮಾಡುತ್ತೆ ಎಂದು ನೀವು ತಿಳಿದುಕೊಳ್ಳಬೇಕೆಂದರೆ, ಆ ವಸ್ತು ಚೂರು ಚೂರಾಗುವಾಗ ಅಧ್ಯಯನ ಮಾಡಿ" - ವಿಲಿಯಮ್ ಗಿಬ್ಸನ್.
(ಒನ್ಇಂಡಿಯಾ ಸುದ್ದಿ)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications