ಈ ದಿನದ ವಿಶೇಷ: ಇಂಜಿನಿಯರ್ಸ್ ಡೇ- ಶುಭಾಶಯ, ಸಂದೇಶಗಳು
ಸೆಪ್ಟೆಂಬರ್ 15, ಇಂಜಿನಿಯರ್ಸ್ ಡೇ. ಇಂಜಿನಿಯರ್ಗಳು ಯಾವುದೇ ರಾಷ್ಟ್ರ ನಿರ್ಮಾಣದ ವಾಸ್ತುಶಿಲ್ಪಿಗಳು. ಹೀಗಾಗಿ, ಇಂಜಿನಿಯರಿಂಗ್ ಎಂದರೆ ಅದಕ್ಕಿರುವ ಮಹತ್ವವೇ ಬೇರೆ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನೇ ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತಿದೆ. ಭಾರತದ ಜೊತೆಗೆ ತಾಂಜಾನಿಯಾ ಮತ್ತು ಶ್ರೀಲಂಕಾದಲ್ಲೂ ಇದೇ ದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಗತ್ತಿದೆ.
ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ ಭಾರತೀಯ ನವನಿರ್ಮಾಣದಲ್ಲಿ ಕೊಡುಗೆ ನೀಡಿದ ವಿವಿಧ ಇಂಜಿನಿಯರ್ಗಳ ಕಾರ್ಯವನ್ನು ನೆನಪಿಸಿಕೊಳ್ಳುವ ಮತ್ತು ಪ್ರಶಂಸಿಸುವ ದಿನ ಇದು. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಇಂಜಿನಿಯರಿಂಗ್ ಶಿಕ್ಷಣ ಆಯ್ದುಕೊಳ್ಳಲು ಯುವ ಜನತೆಗೆ ಪ್ರೇರೇಪಣೆ ಕೊಡಲು ಈ ದಿನವನ್ನು ಬಳಸಬಹುದು.
ಇಂದು ದೇಶಾದ್ಯಂತ ಶಾಲಾ ಕಾಲೇಜುಗಳ ಹಂತದಲ್ಲಿ ಹಲವಾರು ಇಂಜಿನಿಯರಿಂಗ್ ಸ್ಪರ್ಧೆಗಳು ನಡೆಯುತ್ತವೆ. ಯುವ ಇಂಜಿನಿಯರ್ಗಳ ಪ್ರತಿಭೆ ಒರೆಗೆ ಹಚ್ಚಲು ಒಳ್ಳೆಯ ವೇದಿಕೆ ಇದಾಗಿದೆ.

ಇಂಜಿನಿಯರ್ಸ್ ಡೇ ಗ್ರೀಟಿಂಗ್ಸ್
ಇಂಜಿನಿಯರ್ಗಳ ಬಗ್ಗೆ ತರಹಾವೇರಿ ಮೀಮ್ಗಳು, ಗ್ರೀಟಿಂಗ್ಗಳು ಇಂಟರ್ನೆಟ್ನಲ್ಲಿ ಸಿಗುತ್ತವೆ. ನೀವು ಎಂಜಿನಿಯರ್ ಆಗಿದ್ದರೆ ಮನಸಿಗೆ ಮುದ ನೀಡಬಹುದು.
* "ನಮಗೆ ಗರ್ಲ್ಫ್ರೆಂಡ್ ಅಗತ್ಯ ಇಲ್ಲ. ಯಾಕೆಂದರೆ ನಮಗಿರುವ ಜವಾಬ್ದಾರಿಗಳೇ ನಮ್ಮ ತಲೆ ತಿನ್ನುತ್ತಿರುತ್ತವೆ. ಇಂಜಿನಿಯರ್ಸ್ ಡೇ ಶುಭಾಶಯಗಳು"
* ವಿಜ್ಞಾನ ಎಂದರೆ ತಿಳಿದುಕೊಳ್ಳುವುದು, ಇಂಜಿನಿಯರಿಂಗ್ ಎಂಬುದು ಮಾಡುವುದು.
* ಎಂಜಿನಿಯರಿಂಗ್ ಎಂಬುದು ಪಾರ್ಕ್ನಲ್ಲಿ ವಾಕಿಂಗ್ ಮಾಡಿದಷ್ಟೇ ಸಲೀಸು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಆ ಪಾರ್ಕು ಜುರಾಸಿಕ್ ಪಾರ್ಕು ಎಂದು ಎಂಜಿನಿಯರ್ಗಳಿಗೆ ಮಾತ್ರ ಗೊತ್ತು.
* ಭಾರತದಲ್ಲಿ ನೀವು ಜನದಟ್ಟನೆಯ ರಸ್ತೆಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದು ನಾಯಿಗೆ ಬಡಿಯುತ್ತದೆ ಇಲ್ಲ ಎಂಜಿನಿಯರ್ಗೆ ಬಡಿಯುತ್ತದೆ.

ಖ್ಯಾತನಾಮರ ಹೇಳಿಕೆಗಳು:
* "ಇಂಜಿನಿಯರ್ಗಳು ಸಮಸ್ಯೆಗೆ ಪರಿಹಾರ ಒದಗಿಸಲು ಬಯಸುತ್ತಾರೆ. ಯಾವುದೇ ಸಮಸ್ಯೆ ಸಿಗದಿದ್ದರೆ ತಾವೇ ಸಮಸ್ಯೆ ಸೃಷ್ಟಿಸುತ್ತಾರೆ." - ಸ್ಕಾಟ್ ಅಡಮ್ಸ್
* "ಇಂಜಿನಿಯರ್ಗಳು ಕನಸು ನನಸು ಮಾಡುತ್ತಾರೆ." - ಹಯಾವೋ ಮಿಯಾಜಾಕಿ
* "ಆರನೇ ದಿನ ದೇವರಿಗೆ ತಾನೊಬ್ಬನೇ ಎಲ್ಲಾ ಮಾಡಲು ಆಗಲ್ಲ ಅಂತ ಅನಿಸಿತು. ಹೀಗಾಗಿ, ಎಂಜಿನಿಯರ್ಗಳನ್ನು ಸೃಷ್ಟಿಸಿದ." - ಲೂಯಿಸ್ ಮೆಕ್ಮಾಸ್ಟರ್ ಬುಜೋಲ್ಡ್.
* "ಒಂದು ವಸ್ತು ಹೇಗೆ ಕೆಲಸ ಮಾಡುತ್ತೆ ಎಂದು ನೀವು ತಿಳಿದುಕೊಳ್ಳಬೇಕೆಂದರೆ, ಆ ವಸ್ತು ಚೂರು ಚೂರಾಗುವಾಗ ಅಧ್ಯಯನ ಮಾಡಿ" - ವಿಲಿಯಮ್ ಗಿಬ್ಸನ್.
(ಒನ್ಇಂಡಿಯಾ ಸುದ್ದಿ)
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications